Saturday, October 24, 2009

ಪ್ರೀತಿಯ ಸ್ನೇಹಿತೆಗೊಂದು ಪತ್ರ ಬೇಗ ತಲುಪಿಸಿಬಿಡಿ ಅವಳ ಹತ್ರ....

ಪ್ರೀತಿಯ ಮನಸು....
ಅಂದಿನಿಂದ ಇಂದಿನವರೆಗೆ ನನಗೆ "ಅತಿ ಆತ್ಮೀಯ" ಸ್ನೇಹಿತರು ಎಂದು ಯಾರು ಇರಲ್ಲಿಲ ಸ್ನೇಹಿತರೆಲ್ಲ ಇದ್ದರೋ ಯಾರು ನನ್ನ ಹೃದಯಕ್ಕೆ ಹತ್ತಿರವಾದವರಲ್ಲ ಏಕೋ ಕಾಣೆ ನಾನು ಸ್ನೇಹ ಗುರುತಿಸುವುದರಲ್ಲಿ ಅಥವಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇನೆನಿಸುತ್ತೆ ಆದರೆ ನೀ ಸಿಕ್ಕ ಮೇಲೆ ಆ ಭಾವನೆಯೆಲ್ಲಾ ಮಾಯವಾಗಿದೆ.

ಮನಸು ನನ್ನ ಅತಿ ಆತ್ಮೀಯ ಸ್ನೇಹಿ ನಿನ್ನೊಟ್ಟಿಗಿನ ಸ್ನೇಹ ಎಂದೊ ಬೇಸರ ಮೂಡಿಸಿಲ್ಲ, ಮನಸು ನೀನು ಮಿತ ಭಾಷಿ, ಮೌನ ಗೌರಿ, ಹಸಿರ ಕಾನನವೆಂದರೆ ನಿನಗೇನೋ ಪ್ರೀತಿ ಅಲ್ಲಲ್ಲ ಮೋಹ... ಕಷ್ಟ ಜೀವಿಗೆ ಸಹಾಯ ಹಸ್ತ ಎಂದೆಂದು ನಿನ್ನದಿರುತ್ತೆ, ಇಂತ ಸ್ನೇಹಿ ನನ್ನೊಟ್ಟಿಗುರುವುದು ಖುಷಿ ಅಲ್ಲದೆ ಮತ್ತೇನು... ಮನಸು ನೀ ಹೇಳುತ್ತಿದ್ದೆ ನೀ ನನ್ನ ಮಾತು ನೀ ಯಾವಾಗಲೂ ಮಾತಾಡು ನಿನ್ನ ಮೌನ ನನಗೆ ಬೇಡ ಮಾತಾಡುತ್ತಿದ್ದರೆ ಚೆನ್ನ.. ದಿನವೆಲ್ಲ ಹರಟುತ್ತಲಿದ್ದರು ಯಾವುದೇ ಬೇಸರವಿಲ್ಲದೇ ಮಾತಾಡುತ್ತಿದ್ದೆ... ಒಮ್ಮೆ ಎಲ್ಲೂ ಹೋಗಿದ್ದೆ ನನಗಾಗಿ ಓಡೋಡಿ ಬಂದು ನಿನ್ನೊಟ್ಟಿಗೆ ಮಾತಾಡಲು ಎಲ್ಲ ಕೆಲಸ ಮುಗಿಸಿ ಓಡಿಬಂದೆ ಗೆಳತಿ ಎಂದಾಗ ನನಗಾದ ಆನಂದ ಹೇಳ ತೀರದು. ನೀ ನಿನ್ನೊಳಗಿಲ್ಲದಿದ್ದರೊ ನಿನ್ನ ಮಾತು ಮಿತಿಯಾಗಿದ್ದರೂ ನನಗಾಗಿ ಎಷ್ಟೋ ಸಲ ಮಾತನಾಡಿರುವೇ ಅಲ್ಲವೆ ಗೆಳತಿ.

ನೀ ಮೈದಡವಿ ನಿನ್ನ ಪ್ರೀತಿ ನೀಡಿ ನನಗೆ ಸಲಹೆಯಿತ್ತ ದಿನವೆಲ್ಲ ನನಗೆ ಖುಷಿ, ನೀ ಬಲು ಮೃದು ನೀ ಬೇಗ ನೊಂದು ಬಿಡುತ್ತೀಯ ನಿನ್ನ ಮನಕೆ ನೋಯಿಸದಿರು ನಗು ನಗುತ್ತಲಿರು ನಿನ್ನ ನಗುವಲ್ಲೇನೋ ಆಕರ್ಷಣೆ ಇದೆ ನಗುವೇ ಚೆನ್ನ.. ನಿನ್ನ ಈ ಕಣ್ಣು ಎಲ್ಲರನು ಸೆಳೆಯುತ್ತೆ ನಿನ್ನ ಕಂಡೊಡೆ ಕಣ್ಣು, ನಗು ಎರಡು ಎಲ್ಲರನ್ನು ಸ್ನೇಹಜೀವಿಯಾಗಿಸುತ್ತೆ... ಹೀಗೆ ನಗುತ್ತಲಿರು ಎಂದೆಲ್ಲ ನನ್ನ ಹೊಗಳುತ್ತಿದ್ದೆ.... ಜೊತೆಗೆ ನಾ ಅಳುಮುಂಜಿ ಎಂದು ನನ್ನ ಅಳುವನ್ನು ಕಡಿಮೆ ಮಾಡಲು ಹೇಳುತ್ತಿದ್ದೆ ಅಲ್ಲವೇ ಮನಸು....
ನೀ ಎಲ್ಲ ವಿಷಯವನ್ನು ನನೂಟ್ಟಿಗೆ ಹೇಳುತ್ತಿದ್ದೆ ನಾನು ನಿನ್ನೂಟ್ಟಿಗೆ ಎಲ್ಲ ವಿಷಯವನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದೆ.... ನನ್ನ ಸ್ನೇಹಕ್ಕೆ ನೀ ಸೋತಿದ್ದೋ ಎನೋ ಅಂದು ನಿನ್ನ ಕಣ್ಣಾಣೆ ನಿನ್ನ ನಾ ಪ್ರೀತಿಸುವೆ ಸ್ನೇಹಿಯಾಗಿ ಎಂದೇಳಿದ್ದೆ ಇದೆಲ್ಲ ನಿಜವೇ ಎಂದು ನನ್ನ ಕಾಡುತ್ತಿದೆ. ನೀ ನನ್ನ ಪ್ರಾಣ ಸ್ನೇಹಿತೆ, ನೀ ನನ್ನ ಅರಿವು, "ಅರಿವೇ ಗುರು" ಎಂದು ದೊಡ್ಡವರು ಹೇಳಿದ್ದಾರೆ ಅಲ್ಲವೇ ಅಂತೆಯೇ ನೀನು ನನ್ನ ಗುರು ನಿನ್ನ ನಡೆ ನುಡಿ ಎಲ್ಲವೊ ನನಗೆ ಮಾದರಿ...

ಇಷ್ಟು ಕಾಲ ಸ್ನೇಹಿಯಾಗಿದ್ದ ನೀನು ಏಕೆ ಈಗ ನನ್ನೊಡನೆ ಮಾತನಾಡದೆ ಮರೆಯಾಗಿ ಕುಳಿತಿರುವೆ ಮೋಡದ ಮರೆಯ ಚಂದ್ರನಂತೆ ಬೆಳದಿಂಗಳ ಚೆಲ್ಲದೆ ಮುಸುಕು ಮಬ್ಬಿನಲಿ ನನ್ನ ತಳ್ಳಿರುವೆ.. ಮೌನ ದೂಡಿ ಮಂಜು ಮುಸುಕಿದ ಹಾದಿಯಿಂದ ಹೊರಗೊಮ್ಮೆ ಬಾ ಆ ನಿನ್ನ ಮೃದು ಸ್ನೇಹಿತೆ ಬಳಲಿ ಬೆಂಡಾಗಿದ್ದಾಳೆ ಮುದ ನೀಡೋ ಮನಸಿಗೆ ಏಕೀ ಮುಸುಕು ಸ್ನೇಹಿತೆ ನೀ ಬಂದು ಮೃದು ಸ್ನೇಹಿಯನೊಮ್ಮೆ ನಲುಗದಂತೆ ನಲಿವಿನೆಡೆಗೆ ತೆಗೆದುಕೊಂಡೋಗು.

ಇಂತಿ ನಿನ್ನ ಸ್ನೇಹಿತೆ..
ಮೃದು...

Tuesday, October 6, 2009

ಮಳೆರಾಯ

ಬೆಳ್ಳಿ ಮೋಡದಲಿ ಮಳೆರಾಯ ಅಡಗಿರಲು
ಭುವಿಗಿಳಿದು ಬಾ ಎಂದು ಕರೆಯಲು
ಜನ್ಸ್ತೋಮ ಸಲ್ಲಿಸಿದವಂದು ಹೋಮ ಹವನಗಳು

ಒಂದಷ್ಟು ದಿನ ಕೆಂಡಾಮಂಡಲವಾದ ಭುವಿಗೆ
ಎಲ್ಲೆಲ್ಲೊ ಕಾಡಿತ್ತು ಹಸಿರ ಸಿರಿಗೆ ಬಂಜರು ನೆರಿಗೆ

ಮೋಹಕೋ ಮುನಿಸಿಗೋ ಮಳೆರಾಯ
ಇಳೆಯಿಂದ ಧರೆಗಿಳಿದು ಸುರಿಸಿದ್ದಾನೆ ಮಳೆಯ
ಭೀಕರ ಮಳೆಯಲಿ ಕಳೆದುಕೊಂಡಿವೆ ಜೀವರಾಶಿ ತಮ್ಮ ನೆಲೆಯ!!!!

ಭುಗಿಲೆದ್ದ ಆಹಾಕಾರಕೆ ನೀನೆ ಹೊಣೆ
ಮುಗ್ಧ ಜನತೆಗೇಕೆ ಹಿಂಸಿಸುವೆ ನಾ ಕಾಣೆ
ದಯೆನೀಡಿ ನಿನ್ನ ಪ್ರಲಾಪದಲಿರಲಿ ಕರುಣೆ!!!

ಆಗಸದೆಡೆ ಕುಳಿತು ನೋಡುತಿರುವೆಯಲ್ಲ
ಬಲಿಯಾದ ಹಸುಗೂಸುಗಳು ಕಾಣುತಿವೆಯಲ್ಲ
ಒಮ್ಮೆಲೆ ಧಗಧಗಿಸುವ ಆಕ್ರಂದವನು ಒತ್ತಿಸಿಬಿಟ್ಟೆಯಲ್ಲ

ವರುಣನ ಆರ್ಭಟಕೆ ನಲುಗುತಿಹುದು ಬಡಪಾಯಿ ಜೀವ
ಇತ್ತ ಸಮಯ ಸಾಧಿಸೋ ರಾಜಕೀಯರ ಮನೋಭಾವ
ಇದೆಲ್ಲದರಲಿ ಬಡಜೀವಿಯ ದಿನದ ಕೂಳಿಗೂ ಬಂದೊದಗಿದೆ ಅಭಾವ ...!!!

ಕಾಣದ ದೈವವೆ ಭುವಿಗಿಳಿದು ಬಾ ಒಮ್ಮೆ
ನಲುಗುತಿರುವವರ ಕೈಹಿಡಿದು ದಾರಿ ತೋರೊಮ್ಮೆ.....ಓ ದೈವವೆ ದಾರಿ ನೀಡೋಮ್ಮೆ!!!