Sunday, June 20, 2010

ಬಿಸಿಗಾಳಿ


ಬಿಸಿಗಾಳಿ ಸುಡು ಬಿಸಿಲಿನ ಗಾಳಿ
ಬೇಸರಿಕೆಯ ಮನಸಿನಲಿ
ತೋಯ್ಯ್ದಿದೆ ಮೈ ಉರಿ ಬಿಸಿಲಿನಲಿ......


ಒಮ್ಮೆ ಓಡಾಡಿ ಬಂದರೆ ಸಾಕು
ದಿನವೆಲ್ಲ ಸುದಾರಿಸಿಕೊಳ್ಳ ಬೇಕು

ಈ ಮರುಭೂಮಿಯ ಬಿಸಿಲ ಧಗೆಗೆ.......


ಬಾನಾಡಿಯ ಆ ನೇಸರ
ಭುವಿಗೆ ಉಗುಳುತಿರುವನು

ಬಿಸಿ ಬಿಸಿಯ ಕೆಂಡದೋಕುಳಿ......


ಕಡಲ ಅಬ್ಬರವೇ ಇದ್ದರೂ
ಅವಳೂ ತಣ್ಣಗಾಗಿಸಲಿಲ್ಲ

ನೇಸರನ ಧಗ ಧಗಿಸೋ ಕೋಪವ.......


ಮರುಭೂಮಿಗೆ ಮರುಳಾಗಿ
ಕ್ರೂರ ನೋಟವನೇ ಬೀರಿ
ಬಿಸಿ ಗಾಳಿಯಾಗಿ ಬೀಸುತಿಹನು ನೋಡಿ........


ಬಿಸಿಗಾಳಿಯೇ ನಾ ಕಾಡಿ ಬೇಡುವೆ
ನಿನ್ನ ದೂಡಿ ಸಿಹಿಗಾಳಿ
ತಂಪೆರಗಿ ತಟ್ಟುವುದೆಂದು ಹೇ
ಳು.....

ಬಿಸಿಗಾಳಿಗೆ ನಲುಕುತಿರುವೆವು
ಈ ಬಿಸಿಲ ಮೂರ್ನಾಲ್ಕು ತಿಂಗಳು

ಕಳೆವುದು ಹೇಗೋ ಏನೋ ಕಾಣೆನು........

------------

ಮರುಭೂಮಿಯಲ್ಲಿ ನೇಸರನೇಕೋ ಬಲು ಮುನಿಸಿಕೊಂಡುಬಿಟ್ಟಿದ್ದಾನೆ. ಅದಕ್ಕೆ ಈ ಬಿಸಿಲ ಧಗೆ ಎಲ್ಲೆ ಮೀರಿ ಸಾಗುತಿದೆ. ಇಲ್ಲಿನ ಬಿಸಿಲು ೫೨-೫೩ ಡಿಗ್ರಿಗೂ ಮೀರಿಬಿಟ್ಟಿದ್ದೆ. ಬಿಸಿಲಿಗೆ ಮೈ ಒಡ್ಡಿ ಕೆಲಸ ಮಾಡುವವರ ಕಂಡರೆ ಮನ ಕಲಕುತ್ತದೆ.... ಆದಷ್ಟು ಈ ಬಿಸಿಲ ಬೇಗೆ ಕಳೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

Thursday, June 10, 2010

ಬಹುಶಃ ಇದೇ ನನ್ನ ಕೊನೆಯ ಪತ್ರ.......

ಎಲ್ಲರಿಗೂ ನಮಸ್ಕಾರ...!!!!

ಮನಸಿಟ್ಟು ಓದಿ, ಮನಸ್ಸಲ್ಲೇ ಅನುಭವಿಸಿ, ಮನಸಲ್ಲೇ ಆಶಿಸಿ, ಮನದಾಳದಿಂದ ಉತ್ತರಿ.........

ನನ್ನ ಹೆಸರು ಕನ್ನಡಾಂಬೆ, ನನ್ನ ಊರು ಕರ್ನಾಟಕ, ನನ್ಗೆ ಸಾವಿರಾರು ಮಕ್ಕಳು, ಹೆತ್ತ ತಾಯಿ ನಿನ್ಗೂ ಗೊತ್ತಿಲ್ವಾ ಅಂತೀರಾ..!!! ಏನು ಮಾಡೋದು ವಯ್ಯಸ್ಸಾಗಿರೋ ತರ ಮಾಡಿದ್ದಾರೆ ನನ್ನ ಮಕ್ಕಳೆಲ್ಲರು.....ಎಷ್ಟು ಮಕ್ಕಳೆಂದು ನೆನಪಿಸಿಕೊಳ್ಳೋಕೆ ಹಾಗೋಲ್ಲ.....

ಇವತ್ತು ನಾನು ನನ್ನ ಮನಸಲ್ಲಿರೋದನ್ನ ಈ ಮೃದುವಾದ ಮನಸಿನಲ್ಲಿ ಹೇಳ್ಕೊಳೋಣ ಅಂತ ಬಂದೆ ನೀವೆಲ್ಲಾ ಓದಿ ಓಡಿಹೋಗದೆ. ಸ್ವಲ್ಪ ನನಗೋಸ್ಕರ ಏನಾದರು ಮಾಡಿ ಆಯ್ತಾ..?

ನನ್ನ ಮಕ್ಕಳು ತುಂಬಾ ಒಳ್ಳೆಯವರು, ಕೆಲವರು ವಿದ್ಯಾವಂತರು, ಕೆಲವರು ದಡ್ಡರು, ಕೆಲವರು ಕೆಲಸಕ್ಕೆಂದು ದೂರ ಹೋಗಿದರೆ, ಕೆಲವರು ನನ್ನ ಭೂಮಿ ತಾಯಿನ ಪೂಜಿಸ್ತಾ ಇದಾರೆ. ಹುಟ್ಟಿದ ಮಕ್ಕಳು ಎಲ್ಲಾ ಅಪ್ಪ ಅಮ್ಮನ್ನ ಚೆನ್ನಾಗಿ ನೋಡುಕೋತಾರಾ ಹೇಳಿ, ಹಾಗೆ ನನ್ನ ಮಕ್ಕಳೂ ಕೂಡ, ಕೆಲವರು ಹಾಗೆ, ಇನ್ನು ಕೆಲವರು ಹೀಗೆ ಎಂಬಂತೆ ಇರ್ತಾರೆ....

ನನ್ನವರು ಯಾರು ನನ್ನ ನೋಡ್ಕೊತಾರೋ ಬಿಡ್ತಾರೋ ಅದು ಬೇರೆ ವಿಷಯ, ಆದರೆ ನನ್ನ ಮನಸಿಗೆ ನೋವಂತು ಮಾಡ್ತಾರೆ. ನನ್ನ ನೋಡಿಕೊಳ್ಳುವುದು ಬೇಡ, ಆದರೆ ನನ್ಗೆ ಅಮ್ಮ ಅನ್ನೋ ಗೌರವ ಕೊಟ್ಟರೆ ಸಾಕು....

ನನ್ನ ಇಷ್ಟು ಮಕ್ಕಳು ಹೇಗೆ ಬೇರೆ ಬೇರೆ ಆಗಿದಾರೆ ಗೊತ್ತೇ..? ಉತ್ತರ ಕನ್ನಡಿಗರು, ದಕ್ಷಿಣ ಕನ್ನಡಿಗರು, ಕರಾವಳಿ ಕನ್ನಡಿಗರು- ಹೀಗೆ ಏನೆಲ್ಲಾ ಆಗೋಗಿದೆ, ಊರು, ಮನೆ ಬದಲಾಗೋದು ಆಯ್ತು ಅವರ ಮಾತು ನೋಡಬೇಕು ಹೇಗೆ ಗೊತ್ತ..? ಈ ಬೆಂಗಳೂರು ಕಡೆಯವರು ಕನ್ನಡಮ್ಮನ ಜೊತೆ ತಮಿಳಮ್ಮನನ್ನು ಬೆರಿಸಿಕೊಂಡು ಮಾತಾಡ್ತಾರೆ, ಇನ್ನು ಉತ್ತರ ಕರ್ನಾಟಕಕ್ಕೆ ಹೋದರೆ ಅಲ್ಲಿ ಮರಾಠಿಯಮ್ಮ ಜೊತೆಗೆ ಹಿಂದಿಯಮ್ಮನ ಸೇರಿಸಿಕೊಂಡಿರ್ತಾರೆ, ಹಂಗೆ ಈ ಬಳ್ಳಾರಿ ಸೀಮೆಗೆ ಬಂದರೆ ಅವರೆಲ್ಲ ಮಾವಾಳ್ಳು-ಮೀವಾಳ್ಳು ಅಂತ ತೆಲುಗಮ್ಮನ್ನ ತುಂಬಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆಯ್ತ ಇನ್ನು ಕರಾವಳಿ ಕಡೆ ಹೋದರೆ ಅದೇನೋ ತುಳು, ಮತ್ತೆ ಕೊಂಕಣಿ ಅಮ್ಮಂದಿರ ಜೊತೆ ಬೆರೆತು ಬಿಟ್ಟಿದ್ದಾರೆ, ಕೆಲವು ಮಕ್ಕಳು ಉರ್ದು, ಇಂಗ್ಲೀಷಿಯಮ್ಮ ಎಂದುಕೊಂಡು ಕನ್ನಡಮ್ಮ ನೀ ಯಾರಮ್ಮ ಅಂತಾರೆ. ನೋಡಿ ಹೀಗೆ ನನ್ನೊಟ್ಟೆನಲ್ಲಿ ಹುಟ್ಟಿದ ಮಕ್ಕಳೇ ಹೀಂಗವ್ರೆ, ನಾ ಯಾರ ಹತ್ರಾ ಅಂತ ಹೋಗಿ ನನ್ನ ಉಳಿಸಿ, ಬೆಳೆಸಿ ಇರೋವಾಗ ಚೆನ್ನಾಗಿ ನೋಡ್ಕೊಳ್ಳಿ ಅಂತ ಬೇಡೋದು. ನಮ್ಮವರೇ ಇಲ್ಲದಾಗ ಬೇರೆಯವರು ಬರ್ತಾರ ನನ್ನ ಗೋಳಿನ ಕಥೆ ಕೇಳೋಕೆ.......

ನನ್ನ ಪಕ್ಕದ ಮನೆನಲ್ಲಿ ತಮಿಳಮ್ಮ ಅಂತಾ ಇದಾರೆ ಅವರ ಮಕ್ಕಳು ನೋಡಬೇಕು ಅಬ್ಬಾ!!! ಆಶ್ಚರ್ಯ ಆಗ್ತದೆ ಅವಳ ಮಕ್ಕಳೇನಾ ಇವೆಲ್ಲ ಅಂತಾ.... ಆ ಮಕ್ಕಳು ತಮ್ಮ ತವರೂರು ಬಿಟ್ಟು ಬೇರೆ ಊರಿಗೆ ಹೋಗವ್ರೆ ಆ ಊರಿನಲ್ಲಿ ಇರೋರಿಗೆಲ್ಲ ತಮಿಳಮ್ಮನ ಪ್ರೀತಿನೂ ತುಂಬವ್ರೆ ಗೊತ್ತಾ.... ಆಮೇಲೆ ಇನ್ನೊಂದು ಈ ಇಂಗ್ಲೀಷಮ್ಮ ಇದಾಳಲ್ಲ ಆಕೆ ಏನು ನಮ್ಮ ಪಕ್ಕದ ಮನೇಯವಳಲ್ಲ ಆದ್ರೂ ಎಷ್ಟೋಂದು ದೂರ ನಮ್ಗೂ ಅವರಿಗೂ ಆದರೆ ನನ್ನ ಮಕ್ಕಳೆಲ್ಲಾ ಮಾರು ಹೋಗಿದಾರೆ. ಆಕೆಯ ಮೈಮಾಟಕ್ಕೋ, ವಯ್ಯಾರಕ್ಕೋ ಗೊತ್ತಿಲ್ಲ. ಈಗ ಹೇಗಾಗಿದೆ ಗೊತ್ತ ನಾನು ಮಲತಾಯಿ, ಅವಳೇ ಹೆತ್ತತಾಯಿ..... ನನ್ನ ಪಾಡು ಯಾರಿಗೂ ಬೇಡ ಮುಂದೊಂದು ದಿನ ಏನು ಮಾಡ್ತಾರೋ ಅನ್ನೋ ಭಯ. ನಾ ಆ ತಮಿಳಮ್ಮನ ಮಕ್ಕಳಂತೆ ನೀವೂ ಆಗ್ರೋ ಅಂತ ಕೇಳೊಲ್ಲ, ಇಂಗ್ಲೀಷಮ್ಮನ ತರ ನಿನ್ನ ತಾಯಿನ ಎಲ್ಲೆಡೆ ಹಬ್ಬಿಸಿ ಅಂತ
ಕೇಳೊಲ್ಲ..........ಏನಾದರೂ ಆಗಲಿ ನಾನು ನಾನು ಅದೇ ನಾನು........ ಹೆತ್ತಮ್ಮ ಅಲ್ಲವಾ ನನ್ನನ್ನ ನಾನಾಗಿ ಸಾಯೋಕೆ ಬಿಡಿ ನಾನಾಗಿ ಸತ್ತರೆ ನನ್ನ ನೆನಪು ನಿರಂತರಾ ಅನ್ನೋ ಹಾಗೆ ಭಾಷೆನೂ ನಿರಂತರವಾಗಿ ಇರುತ್ತೆ......... ಇನ್ನು ಸಾಯುವ ವಯಸ್ಸು ಬಂದೇ ಇಲ್ಲ ಆಗಲೇ ನನ್ನ ಉಸಿರನ್ನ ಚಿವುಟು ಹಾಕಲಿಕ್ಕೆ ನನ್ನ ಹೊಟ್ಟೆನಲ್ಲಿ ಹುಟ್ಟಿದ ಕುಡಿಗಳೇ ಕಾದಿವೆ. ನನಗೆ ಇದಕ್ಕಿಂತಾ ಬೇಸರದ್ದು, ನೋವಿನ ಜೊತೆ ಸಂಕಟ ತರೋ ವಿಷಯ ಬೇರೇನಿದೆ ಹೇಳಿ ನೀವೆ...?

ಪರ ಮಾತೆಯನ್ನು ಪ್ರೀತಿಸಿರಿ, ನನ್ನನ್ನೂ ಸಹ ಉಳಿಸಿ, ನಾ ಎಂದೂ ನನ್ನೊಬ್ಬಳ ಸಂಗಡವೇ ಇರಿ ಎಂದು ನಾನೇಳುವುದಿಲ್ಲ ಇರುವ ಮನೆಯಲ್ಲಿ
ಎಲ್ಲರನ್ನು ಆಹ್ವಾನಿಸು, ಪ್ರೀತಿಸಿ ಹಾರೈಕೆ ಸಲ್ಲಿಸು...ಆದರೆ ನನ್ನ ಇರುವಿಕೆಯಲ್ಲೇ ಎಲ್ಲವನ್ನು ಸ್ವೀಕರಿಸು.....

ನನ್ನ ಉಸಿರು ಕೊನೆವರೆಗೂ, ನಿಮ್ಮ ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರು ಇ
ಗೆ ಈ ಭೂಮಿ ಇರುವವರೆಗೂ ನಾನು ರಾರಜಿಸಬೇಕೆಂದರೆ ನನ್ನ ಉಸಿರಿಗೆ ಹರ್ಷ ಕೊಡಿ ................ ಇಲ್ಲ ನೀ ಹೆತ್ತಮ್ಮ, ನನ್ನಮ್ಮ ನಿನ್ನೊಡಲ ಧಗ ಧಗಿಸಿ ಹುರಿಯುವಂತೆ ಮಾಡೋಲ್ಲವೆಂದರೆ ನಿಮ್ಮ ಪ್ರತಿ ಹೆಜ್ಜೆಯಲ್ಲೂ ನನ್ನೆಸರ ಉಸಿರಾಡಿ.........ಈ ತಾಯ ಪ್ರೀತಿಯನ್ನ ಉಳಿಸಿಕೊಂಡರೆ ನಾ ಕೊನೆವರೆಗೂ ನಿಮ್ಮೊಟ್ಟಿಗೆ......ಇಲ್ಲವೆ ನೀವು ಮಲತಾಯಿಯೊಟ್ಟಿಗೆ ನಿರ್ಧಾರ ನಿಮ್ಮದು ಬದುಕು ನನ್ನದು............

ನಿಮ್ಮ.......
ಕನ್ನಡಾಂಬೆ

Thursday, June 3, 2010

ಕುಡಿತ - ಕಾಂತಿಹೀನ

ಕುಡಿತ

ಸುಂದರ ಬದುಕಿದೆ
ನನ್ನವರೆಲ್ಲರೂ ಇದ್ದಾರೆ
ಯಾವ ಕೊರೆತೆಯೂ ಇಲ್ಲ
ಬಾಳುವಾಸೆ ಅತಿಯಾಗಿದೆ
ಆದರೆ........
ನನ್ನ ಜೀವ ದಿನ ಎಣಿಸುತಿದೆ
ಕಾರಣ.......
ವಯಸ್ಸಲ್ಲಿ ಕುಡಿದು ತೇಗಿದ್ದು....
ಇಂದು ಮರಣಕ್ಕೆ ಹತ್ತಿರವಾದೆ
ಇನ್ನೆಲ್ಲಿ ......
ಬಾಳುವಾಸೆ ನನ್ನವರೊಟ್ಟಿಗೆ.
ಚಟ್ಟವನ್ನೇ ......
ಬಯಸಬೇಕಿದೆ ಈ ಮಧ್ಯವಯಸ್ಸಿಗೆ..?!!!

________________


ಕಾಂತಿಹೀನತೆ


ಬಾಗಿಲಲಿ ಪೂಜೆಗೈದಿದೆ
ತೋರಣ ಹಚ್ಚಹಸಿರಾಗಿದೆ
ಮನೆಯೊಳಗಣ ದೀಪದ ಬೆಳಕಿದೆ
ಒಳಗೋಗುವಾಸೆ
ಹೋದರೆ.......
ಆ ದೀಪದ ಕಾಂತಿಗೆ
ಪ್ರಜ್ವಲತೆಯ ಮಿಂಚಿನ ಶಕ್ತಿಯೇ ಇಲ್ಲ
ಕಾರಣ..........
ಮನೆಯ ನಂದಾದೀಪದ ಕಾಂತಿ
ಕಳೆಗುಂದಿದೆ........