Tuesday, December 29, 2009

-ಸಂಗೀತಗಾರುಡಿಗ-ಸಾಹಸಸಿಂಹ-


ಸಂಗೀತಕೂ ಸಾಹಿತ್ಯಕೂ ಏನೋ ನಂಟು
ರಾಗಸುಧೆಯಿಂದ ಸಾಹಿತ್ಯಕೆ ಕಲಾ ಮೆರುಗುಂಟು
ಸಂಗೀತ-ಸಾಹಿತ್ಯಕೆ ಸಂಬಂಧರೂಢಿಸುವಲಿ
ಈ ಗಾನಗಾರುಡಿಗನ ಪಾತ್ರ ನೂರೆಂಟು

ನೀನಿಲ್ಲದ ಸಂಗೀತ ಸುಧೆ ಕರಾಳ ಮೌನದಿ
ಕನ್ನಡಿಗರ ಮನ-ಮನೆಗಳಲಿ ಕಾರ್ಮೋಡ ಕವಿಸಿದೆ

ಹುಟ್ಟೊಂದು ದಿನ, ಸಾವೊಂದು ದಿನವೆಂದು ಬರೆದನಾ ಬ್ರಹ್ಮ
ನಿನ್ನ ಹುಟ್ಟುಸಾವು ಎರಡೂ ಒಂದೇ ದಿನ ಏನಿದರ ಮರ್ಮ!!!!

ನಿನ್ನ ಅಗಲಿಕೆಯಿಂದ ಸಂಗೀತ ಸರಸ್ವತಿ ಕಳೆಗುಂದಿಹಳು
ಈ ನಿನ್ನ ಸ್ಥಾನವ ತುಂಬಲು ಹಾತೊರೆದು ನಿಂದಿಹಳು
ಓ ದೇವನೆ ಸಂಗೀತ-ಸಾಹಿತ್ಯ ಸರಸ್ವತಿಗೆ
ಎಂದೂ ಬೀಳದಿರಲಿ ದುಃಖದ ಕರಿನೆರಳು

ಓ ಗಾನ ಕೋಗಿಲೆಯೆ ಕೇಳಲೆಲ್ಲರು ಧ್ವನಿಸುರುಳಿಯಲಿ ನಿನ್ನ ಗಾಯನ
ನಿನ್ನ ಆ ಮಾಂತ್ರಿಕ ಧನಿಗೆ ಮನಸೂರೆಗೊಂಡು ಮಾಡಲೆಲ್ಲರು ನಿನ್ನ ಮನನ
ಓ ಸಂಗೀತ ಆರಾಧಕನೆ ನಿನಗಿದೋ ನಮ್ಮೆಲ್ಲರ ಹೃತ್ಪೂರ್ವಕ ನಮನ
ನಮ್ಮನಗಲಿದ ದೇಹ ಮತ್ತೊಮ್ಮೆ ಹುಟ್ಟಿ ಕರುನಾಡಿನಲಿ ಮೂಡಿಸಲಿ ಸಂಚಲನ


ನಾನು ಕಚೇರಿಯಿಂದ ಮನೆಗೆ ಹೋಗುವ ಹೊತ್ತಿಗೆ ಸರಿಯಾಗಿ ಟಿವಿಯಲ್ಲಿ ವಾರ್ತೆಗಳು ಬರುವ ಸಮಯ, ನನ್ನ ಮಗನ ನೆಚ್ಚಿನ ಗಾಯಕ ಸಿ. ಅಶ್ವಥ್ (ತಾತ) ಇವರ ಪಾರ್ಥೀವ ಶರೀರವನ್ನು ಟಿ.ವಿಯಲ್ಲಿ ತೋರಿಸುತ್ತಲಿದ್ದರು ತಕ್ಷಣ ಅಯ್ಯೋ ಆ ತಾತ ಸತ್ತುಹೋಗಿದ್ದಾರೆ ಅಮ್ಮ ಇವರ ಮೇಲೆ ಒಂದು ಕವನ ಬರಿ ಬ್ಲಾಗಿಗೆ ಹಾಕು ಪ್ಲೀಸ್ ಎಂದು ತುಂಬಾ ನೊಂದು ಹೇಳಿದನು. ನನ್ನ ಮಗನ ದುಃಖ ನೀಗಿಸಲು ಈ ಪುಟ್ಟ ಕವನ ಹಾಗೆಯೇ ಸಂಗೀತಗಾರುಡಿಗನಿಗೆ ನಮ್ಮ ಆಶ್ರುತರ್ಪಣ.

ಈಗಷ್ಟೆ ತಿಳಿದ ಆಘಾತಕಾರಿ ಸುದ್ದಿ ಕನ್ನಡ ಚಲಚಿತ್ರ ಕಂಡ ಮೇರು ನಟ ವಿಷ್ಣುವಿನ ಅಕಾಲಿಕ ಮರಣ ಕನ್ನಡ ಸಾಹಿತ್ಯ,ಸಂಗೀತ,ಕಲಾ ಸರಸ್ವತಿಗೆ ಮತ್ತೊಂದು ನಷ್ಟವನ್ನು ತಂದುಕೊಟ್ಟಿದೆ... ೨೦೦೯ರ ಕೊನೆದಿನಗಳು ಕನ್ನಡಿಗರಿಗೆ ದುಃಖದ ಹೊಳೆಯನ್ನರಿಸಿದೆ.

ಕನ್ನಡಿಗರನ್ನಗಲಿದ ಸಾಹಸಸಿಂಹ ವಿಷ್ಣು ಹಾಗು ಸಿ. ಅಶ್ವಥ್ ಅವರಿಗೆ ನಮ್ಮ ನಮನ

Tuesday, December 22, 2009

ಅವಳದೇ ನೆನಪು..!!! ನೈಜ ಕತೆ!!!

ಅವಳ ನೆನಪು ಕಾಡುತಿತ್ತು... ನನಗಲ್ಲ!!?.. ಮತ್ತ್ಯಾರಿಗೆ...? ಎಂದು ಪ್ರಶ್ನಿಸುತ್ತೀರಾ ಈ ಲೇಖನವನ್ನು ಓದಿ ನೀವೇ ಉತ್ತರಿಸಿ ಯಾರಿಗೆ ನೆನಪಿನ ಪುಟ ತೆರೆದಿದ್ದು ಎಂದು.


ಚಂದ್ರು ಮತ್ತು ಚಂದನ ಲಿಂಗನೂರಿ (ಹೆಸರು ಬದಲಿಸಲಾಗಿದೆ) ೧ ರಿಂದ ೭ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದುತ್ತಲಿರುತ್ತಾರೆ ಇಬ್ಬರು ಬಹಳ ಒಳ್ಳೆ ಸ್ನೇಹಿತರು ಇವರಿಬ್ಬರ ಸ್ನೇಹದಿಂದ ಇವರುಗಳ ತಾಯಂದಿರೂ ಸಹ ಒಳ್ಳೆ ಸ್ನೇಹಿತರಾಗುತ್ತಾರೆ. ೮ನೇ ತರಗತಿಗೆ ಇಬ್ಬರು ಬೇರೆ ಶಾಲೆಗೆ ಸೇರಿಕೊಳ್ಳುತ್ತಾರೆ, ಶಾಲಾ ಬದಲಾವಣೆಯಿಂದ ಇಬ್ಬರ ಭೇಟಿ ಕಡಿಮೆ ಆದರೂ ಶಾಲೆಗೆ ಹೋಗುವಾಗ ಬರುವಾಗ ಸಿಗುತ್ತಿದ್ದರು ಇಬ್ಬರು ಪರಸ್ಪರ ಮಾತನಾಡುತ್ತಲಿದ್ದರು, ಸ್ನೇಹಿತರ ಭೇಟಿಗೇನು ಕೊರತೆಯಾಗಲಿಲ್ಲ.

ಹೀಗಿದ್ದ ಸ್ನೇಹ ಇದ್ದಕ್ಕಿದ್ದ ಹಾಗೆ ಚಂದ್ರುಗೆ ಚಂದನಳ ಭೇಟಿ ಕಡಿಮೆಯಾಗುತ್ತ ಬರುತ್ತಲಿತ್ತು, ಹೀಗೆ ದಿನ ಕಳೆದಂತೆ ದೂರವಾದರು, ಚಂದ್ರುವು ತನ್ನ ವಿದ್ಯೆಯೆಡೆ ಗಮನ ಕೊಟ್ಟು ಎಸ್.ಎಸ್.ಎಲ್.ಸಿ ಮುಗಿಸಿ ಕಾಲೇಜಿಗೆ ಸೇರಿದ ನಂತರ ಅಲ್ಲಿ ೧ರಿಂದ ೭ರವರೆಗೆ ಓದುತ್ತಲಿದ್ದ ಮತ್ತೊಬ್ಬ ಸ್ನೇಹಿತ ರಾಜೇಶ್ ಎಂಬವ ಸಿಕ್ಕಿದ್ದೆ ಇವನಿಗೆ ಎಲ್ಲಿಲ್ಲದ ಖುಷಿ ಅವರಿಬ್ಬರೂ ಸಹ ಒಳ್ಳೆ ಸ್ನೇಹಿತರಾಗಿದ್ದರು. ಹೀಗೆ ಕೆಲವುದಿನಗಳು ಕಳೆದ ನಂತರ ಆ ಚಂದನ ಇರುತ್ತಿದ್ದ ಮನೆಯತ್ತಿರ ಹೋಗಿ ಅದೇ ರಸ್ತೆಯಲ್ಲಿ ೩,೪ ಬಾರಿ ಸುತ್ತಾಡಿ ಬರುತ್ತಾನೆ, ಆದರೆ ಆ ಮನೆಯ ಹತ್ತಿರ ಯಾರು ಕಾಣಲಿಲ್ಲ , ಇತ್ತ ಆ ಸ್ನೇಹಿತೆ ಚಂದನಳ ಬಗ್ಗೆ ರಾಜೇಶ್ ಹತ್ತಿರ ವಿಚಾರಿಸಿದ ಆದರೆ ರಾಜೇಶ್ಗ್ ಅವಳ ಬಗ್ಗೆ ಗೊತ್ತಿರಲಿಲ್ಲ ಅವರ ಮನೆ ಹತ್ತಿರ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದ, ಸರಿ ಎಂದು ಚಂದ್ರು ಮತ್ತೆರಡುದಿನ ಬಿಟ್ಟು ಅವಳ ಮನೆ ಹತ್ತಿರ ಹೋಗಿ ಅದೇ ಆ ಚಂದನಳಿದ್ದ ಮನೆಯ ಬಾಗಿಲನ್ನು ತಟ್ಟಿದ ಬಹಳ ಖುಷಿಯಿಂದ ಅಂದು ನಾನೇನೋ ರಸ್ತೆಯಲ್ಲಿ ನೋಡುತ್ತ ಹೋದೆ ಇಂದು ಇವರ ಮನೆಗೆ ಬಂದಿರುವೆ ಅವರ ಅಮ್ಮ ಅಥವಾ ಚಂದನ ಬರಬಹುದು ಎಂದು ಸಂತಸದಿಂದಿರುವಾಗ ಯಾವುದೋ ಒಂದು ವಯಸ್ಸಾದ ಅಜ್ಜಿ ಬಾಗಿಲು ತೆರೆದಾಗ ಬಹಳ ಬೇಸರವಾಯಿತು ಚಂದ್ರುವಿಗೆ, ನಂತರ ಆ ಸ್ನೇಹಿತೆಯ ಮನೆಯವರ ಬಗ್ಗೆ ವಿಚಾರಿಸಿದಾಗ ಅವರು ಇಲ್ಲಿಲ್ಲ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿದ ಕೂಡಲೇ ಈ ಚಂದ್ರುವಿಗೆ ಎಲ್ಲಿಲ್ಲದ ನೋವು ಹೃದಯಭಾರವಾದಂತೆ ಮನೆಯತ್ತ ಮುಖಮಾಡಿದ.

ನೆನಪುಗಳ ಮಾತು ಮಧುರಾ ಎಂಬಂತೆ....ಅವಳ ನೆನಪಲ್ಲೇ ತನ್ನ ಕಾಲೇಜ್ ಮುಗಿಸಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಂಡ ಆಗೊಮ್ಮೆ ಈಗೊಮ್ಮೆ ಚಂದನಳ ನೆನಪು ಮಾಡಿಕೊಳ್ಳುತ್ತಾ ತನ್ನ ವಿದ್ಯಾಭ್ಯಾಸ ಮುಗಿಸಿದ.

ವಿದ್ಯಾಭ್ಯಾಸ ಮುಗಿಸಿ ಕೆಲಸ ಎಲ್ಲವೂ ಸಿಕ್ಕಿತು, ತನ್ನ ಜೀವನ ಸಂಗಾತಿ ಹಾರಿಸಿಕೊಳ್ಳುವ ವೇಳೆ ಮನೆಮಂದಿಯೆಲ್ಲ ಒಪ್ಪಿ ಒಂದು ಮದುವೆ ಮಾಡಿಯೇಬಿಟ್ಟರು, ಮದುವೆಯಾದ ೫ವರ್ಷಗಳ ನಂತರ ವಿದೇಶಕ್ಕೆ ಪ್ರಯಾಣ ಬೆಳೆಸಿದ ಇಷ್ಟೆಲ್ಲಾ ತನ್ನ ಜೀವನದಲ್ಲಿ ನೆಡೆದರೂ ತನ್ನ ಸ್ನೇಹಿತೆಯನ್ನು ಮರೆಯಲಿಲ್ಲ. ಇಷ್ಟು ಜೀವನ ಸಾಗಿಸುವಷ್ಟರಲ್ಲಿ ಆರ್ಕೊಟ್ ಎಂಬ ಸ್ನೇಹ ಜಾಲ ಸಂಪರ್ಕದ ಮಹಾ ಮಾಯೆ ಬಂದುಬಿಟ್ಟಿತ್ತು ಇದೇ ಸಮಯದಲ್ಲಿ ಚಂದ್ರು ಆರ್ಕೂಟ್ ಮಾಯೆಗೆ ಹೆಜ್ಜೆ ಇಟ್ಟಿದ್ದ ಇದೇ ಜಾಲದಿಂದ ತನ್ನ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸೇರಿದನು, ಅಲ್ಲಿ ತನ್ನ ಸ್ನೇಹಿತೆಯ ಹೆಸರಿರಬಹುದೆಂದು ಹುಡುಕಿದ ಹುಡುಕಿದ ಆಗ ದಪ್ಪಗೆ ಒಳ್ಳೆ ಟಮೆಟೋ ಹಣ್ಣಿನಂತಿದ್ದಳು ಈಗ ಹೇಗಿರಬಹುದು ಹಾ!!! ಅವಳ ಅಣೆಯ ಮೇಲೊಂದು ಬಿದ್ದು ಗಾಯಮಾಡಿಕೊಂಡಿದ್ದ ಗುರುತಿತ್ತು ಎಂದು ಆ ಹಳೆ ವಿದ್ಯಾರ್ಥಿಗಳ ಕೂಟದಲ್ಲಿದ್ದ ಹೆಂಗಳೆಯರ ಫೋಟೋ ತಿರುಗಿಸಿ ಮರುಗಿಸಿ ನೋಡಿದ್ದೇ ನೋಡಿದ್ದು ಸಿಗಲೇ ಇಲ್ಲ..... ಆನಂತರ ಆರ್ಕೊಟಿನಲ್ಲಿನ ಹುಡುಕುವ ಪ್ರಪಂಚಕ್ಕೆ ಹೋಗಿ ಅಲ್ಲಿ ಆಕೆಯ ಹೆಸರು ಕೊಟ್ಟು ಹುಡುಕಿದನು ನಂತರ ಕುಟುಂಬದ ಹೆಸರಾದ ಲಿಂಗನೂರಿ ಎಂಬ ಹೆಸರನ್ನು ಕೊಟ್ಟು ಹುಡುಕಿ ಹುಡುಕಿ ಸುಸ್ತಾದನು.... ಇಷ್ಟೆಲ್ಲಾ ನೆಡೆಯಿತು ಪಾಪ ಫಲಕಾರಿಯಾಗಲಿಲ್ಲ....

ಇಷ್ಟುದಿನ ಸುಮ್ಮನಿದ್ದ ಈ ಚಂದ್ರು ನಂತರ ಬ್ಲಾಗ್ ಪ್ರಪಂಚಕ್ಕೆ ಹೆಜ್ಜೆಯಿಟ್ಟಾಗ ಆ ಪ್ರಪಂಚದಲ್ಲಿ ಹತ್ತು ಹಲವು ಜನರು ತಮ್ಮ ಜೀವನದ ಹೊಸ ಹಳೆ ಕಥೆಗಳನ್ನು ಬಿತ್ತರಿಸುವುದ ಕಂಡು, ಈತನಿಗೂ ಪ್ರೇರಣೆಯಾಯಿತೇನೋ ಮೊದಲು ಹೆಂಡತಿಯತ್ತಿರ ಬಂದು ಇಷ್ಟು ದಿನದ ಗುಟ್ಟನ್ನು ರಟ್ಟು ಮಾಡಿಬಿಟ್ಟ. ಇದು ಏಕೆ ರಟ್ಟು ಮಾಡಿದನೆಂದರೆ ಬ್ಲಾಗಿಗೆ ಹಾಕುವ ಮುನ್ನ ಹೆಂಡತಿಗೆ ಗೊತ್ತಿದ್ದರೆ ಚೆನ್ನ ಇಲ್ಲವಾದರೆ ಪ್ರಪಂಚಕ್ಕೆ ಗೊತ್ತಾದಮೇಲೆ ನನಗೇನು ನೀವು ಹೇಳುವುದು ಬೇಡವೆಂದು ಬಿಡುವಳೆಂದೋ ಏನೋ ಮೊದಲೇ ಹೇಳಿ ಸಂಕಷ್ಟದಿಂದ ಪಾರಾದನು ಹಹಹಹ.



ಶುಭದಿನ

Tuesday, December 8, 2009

ಅಮ್ಮನಾದಾಗ ತಬ್ಬಿಬ್ಬಾದೆ!!!!

ರಜೆಯಲ್ಲಿ ಊರಿನಲ್ಲಿದ್ದಾಗ ಎಲ್ಲೋ ಹೋಗಬೇಕಿತ್ತು...ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಅಲ್ಲೇ ನನ್ನ ಪಕ್ಕ ಒಬ್ಬ ಹೆಂಗಸು ಕೈನಲ್ಲೊಂದು ಬ್ಯಾಗ್, ಕಂಕುಳಲ್ಲೊಂದು ಸುಮಾರು ೬ ತಿಂಗಳ ಹಸುಗೂಸು, ಮತ್ತೊಂದು ಅಮ್ಮನನ್ನೇ ತಬ್ಬಿ ನಿಂತ ಸುಮಾರು ೨ ವರ್ಷದ ಕಂದಮ್ಮ ನಾನು ನೋಡಿದೆ ಮನವೇಕೋ ಕರಗಿತು ಎಷ್ಟು ಕಷ್ಟ ನೋಡು ಪಾಪ ಎರಡು ಮಕ್ಕಳು ಜೊತೆಗೆ ಬ್ಯಾಗ್ ಬೇರೆ ಆಟೋದಲ್ಲಾದರೂ ಹೋಗಬಾರದೆ ಎನಿಸಿತು, ಆದರೆ ಆಕೆಯ ಮುಖ ನೋಡಿದರೆ ಅಷ್ಟು ಸ್ಥಿತಿವಂತರೆನಿಸಲಿಲ್ಲ...ಪಾಪ ಅವರವರ ಕಷ್ಟ ಅವರವರಿಗಿರುತ್ತೆ ನಾವು ಎಲ್ಲರನ್ನು ತಾಳೆ ಹಾಕಬಾರದೆನಿಸಿತು...

ಸ್ವಲ್ಪ ಸಮಯದ ನಂತರ ಬಸ್ ಬಂತು ನಾನು ಅಮ್ಮನನ್ನು ತಬ್ಬಿ ನಿಂತ ಕಂದಮ್ಮನನ್ನು ಕರೆದುಕೊಂಡೆ, ಆಕೆ ಇನ್ನೊಂದು ಮಗುವಿನೊಂದಿಗೆ ಬಸ್ ಹತ್ತಿದಳು, ಒಳ ಹೋಗುತ್ತಿದ್ದಂತೆ ಆಕೆ ಕುಳಿತುಕೊಂಡಳು ನಾನು ಆ ಮಗುವನ್ನು ಹೊತ್ತುಕೊಂಡೇ ಸ್ವಲ್ಪ ಸಮಯ ನಿಂತಿದ್ದೆ...ತಕ್ಷಣವೇ ಆಕೆ ಇಲ್ಲಿ ಕೊಡಿ ಎಂದು ಹೇಳಿದಳು ನಾ ಕೊಟ್ಟೆ... ಅಷ್ಟು ಹೊತ್ತು ಸುಮ್ಮನಿದ್ದ ಮಗು ಅಮ್ಮನ ಹತ್ತಿರವೇಕೋ ಅಳಲು ಪ್ರಾರಂಭಿಸಿತು.... ನನಗೆ ಹಿಂದಿನ ಸೀಟು ಸಿಕ್ಕಿತು ನಾನು ಕುಳಿತುಬಿಟ್ಟೆ...ಆದರೆ ಆ ಮಗು ಅಳು ನಿಲ್ಲಿಸಲೇ ಇಲ್ಲ, ತದನಂತರ ಮಗುವಿನ ತಾಯಿ ಪಕ್ಕ ಒಬ್ಬರು ವಯಸ್ಸಾದಾಕೆ ಕುಳಿತಿದ್ದರು ಅವರು ಹಿಂದೆ ತಿರುಗಿ ನಿನಗೆ ಸ್ವಲ್ಪನೂ ಅರ್ಥವಾಗೋಲ್ಲವೇ ನೀನು ಕುಳಿತಿದ್ದೀಯಲ್ಲಮ್ಮಾ, ನಿನ್ನ ಮಗೂನ ಕರೆದುಕೊಳ್ಳೋಕೇನು ಆ ಯಮ್ಮ ಬೇರೆ ಮಗು ಇರೋಳು ನಿನ್ನ್ಗೆ ಅರ್ಥ ಆಗೋಲ್ವೇನಮ್ಮ ಅಂದರು...ನಾನು ತಕ್ಷಣ ತಬ್ಬಿಬ್ಬಾದೆ!!.....ಹಹಹಹ........ಮಕ್ಕಳು ಅಮ್ಮನತ್ತಿರ ಇದ್ದರೆ ಸರಿ ನೀನು ಕೂತಿದ್ದೀಯ ಕರ್ರ್ಕೋ ಎಂದರು, ನಂತರ ಆ ಮಗುವಿನ ತಾಯಿ ಈ ಮಗು ಅವರದಲ್ಲ ನನ್ನದೇ ಎಂದಳು, ಮಗುವಿನ ತಾಯಿ... ಬಸ್ ನಲ್ಲಿದ್ದವರೆಲ್ಲ ಒಮ್ಮೆಲೇ ಚಾಲಕನೂ ಸೇರಿ ನಕ್ಕುಬಿಟ್ಟರು ಈ ನಗು ಕಂಡು ಅಳುತ್ತಿದ್ದ ಕಂದ ನಗಲು ಪ್ರಾರಂಭಿಸಿತು ಅದಕ್ಕೇನು ಅರ್ಥವಾಯಿತೋ ಕಾಣೆ ಒಟ್ಟಲ್ಲಿ ನಗು ಬಂತು ಹಹಹಹ....

ಕೆಲವೂಮ್ಮೆ ನಾವು ತಬ್ಬಿಬ್ಬಾಗುವ ಸಂದರ್ಭಗಳು ಬಂದು ಬಿಡುತ್ತವೇ ಅಲ್ಲವೇ..?

ವಂದನೆಗಳು
ಶುಭದಿನ

Tuesday, December 1, 2009

-ಹೊಸ ಪ್ರಯತ್ನ-


ನೇಸರನು ಇದ್ದಾನೆ...ಪಳಪಳ ಹೊಳೆಯುತ್ತಲೂ ಇದ್ದಾನೆ
ಆದರೆ ಅವನ ಬೆಳಕು ಬೀಳುತ್ತಿಲ್ಲ ಕಾರಣ ನಾನೇ,
ನಾನು...
ಕಗ್ಗತ್ತಲ ಗುಹೆಯಲಿರುವೆ...
-----
ಕಣ್ಣೆದುರು ಊಟವಿದೆ ಹಸಿವಿನ ಹಾಹಾಕಾರವೂ ಇದೆ
ಆದರೆ ತಿನ್ನುಲು ಆಗುತಿಲ್ಲ ಕಾರಣವೇನು
ಗೊತ್ತೆ?
ನನಗೂ ಊಟದ ತಟ್ಟೆಗೂ ಮಧ್ಯೆ
ನುಣುಪಾದ ಗಾಜಿನ ಗೋಡೆ ಅಡ್ಡವಿದೆ..!!!
-----
ಬಾನಂಗಳ ವಿಮಾನದಲ್ಲಿ
ಹಾರಾಡುವಾಸೆ
ಆದರೆ ಕೈಗೆಟುಕದ ಆ ಆಗಸನೇರಲು
ಬಡತನ ಅಡ್ಡವಿದೆ..!!!
------
ಓದುವಾಸೆ ಬಲು ಇದೆ
ಓದಲು ಪುಸ್ತಕವೂ ಇದೆ
ಓದಿಸುವವರು ಇದ್ದಾರೆ
ಆದರೆ....
ಓದಲೋದರೆ ನಿದ್ದೆಗೆ ಜಾರಿ
ಸಮಯ ಕೆಡಿಸುವ ಮನವಿದೆ!!!
-----
ಲೇಖನಿಯಿದೆ
ಬರೆಯುವ ಪ್ರೋತ್ಸಾಹ ಸಿಕ್ಕಿದೆ
ಬರೆದದ್ದು ಓದಲು ಸಾಲುಗಟ್ಟಲೆ
ಜನರಿದ್ದಾರೆ..ಆದರೆ
ಬರೆಯಲು ಮೆದುಳಿಗೇನೂ
ವಿಷಯ ತೋಚದಂತಾಗಿದೆ..
-----
(ನಿರಾಶ್ರಿತ)
ಬತ್ತಿಯುಳ್ಳ ದೀವಿಗೆ ಇದೆ
ಜೊತೆಗೆ ತೈಲವೂ ಇದೆ
ಹೊತ್ತಿಸಲು ಬೆಂಕಿಕಡ್ಡಿಯೂ ಇದೆ
ಆದರೆ
ಮಳೆಯೊಟ್ಟಿಗೆ ಗಾಳಿಯು ಬೀಸುತಿದೆ
ಕಾರಣ
ನನ್ನದು ಸೂರಿಲ್ಲದ ಮನೆ
-----
(ಒಟ್ಟು ಕುಟುಂಬ)
ಮನೆಯೂ ಇದೆ
ಮಕ್ಕಳೂ ಇದ್ದಾರೆ
ಆದರೆ
ಸಂಸಾರವೆಂಬ
ಗೂಡು ಕಟ್ಟುವವರಿಲ್ಲ...
----
ಪ್ರೀತಿಯಿದೆ
ಆಸೆಯಿದೆ
ಆದರೆ
ಪ್ರೀತಿಸಲು
ಯಾರೂ ಇಲ್ಲ..
----
ನಾನು ಹೆಣ್ಣು
ಹೂ ಮುಡಿವಾಸಿಯಿದೆ
ಹೂವಿನ ರಾಶಿ ಎದುರಿದೆ
ಆದರೆ
ರಾಶಿ ಹೂ ಮುಡಿಯಲು
ಜಡೆಯೇ ಇಲ್ಲ..

Sunday, November 22, 2009

ಪ್ರಭಾತ್ ಕಲಾವಿದರು.....


ಪ್ರಭಾತ್ ಕಲಾವಿದರು
'ಪ್ರಭಾತ್' ಎಂಬ ಹೆಸರೇ ಹೇಳುವಂತೆ ಬೆಳಗುವ ಕಲಾವಿದರೇ ಸರಿ....ಕನ್ನಡ ಕಲೆಯನ್ನು ನಾಡಿನಾದ್ಯಂತ ಪಸರಿಸುತ್ತಿರುವ ಕಲಾವೃಂದಕ್ಕೆ ಆತ್ಮೀಯ ಅಭಿನಂದನೆಗಳು. ಇತ್ತೀಚೆಗಷ್ಟೆ ಕುವೈಟಿಗೆ ಆಗಮಿಸಿದ್ದ ಪ್ರಭಾತ್ ಕಲಾವಿದರ ಕಲಾಜೀವನದ ಹಾದಿಯ ಕಿರು ಪರಿಚಯ. ಹಾಗೂ ವಿಶೇಷ ಒಲವುಮೂಡಿಸಿದ ಆ ಕಲಾವೃಂದಕ್ಕೆ ನಮ್ಮ ಪ್ರೀತಿಯ ಕಿರುನುಡಿಯ ಹಣತೆ.
೧೯೩೦ರಲ್ಲಿ ಪ್ರಾರಂಭಗೂಂಡ ಒಂದು ಕಲಾವೃಂದ ಹಲವು ನಾಟಕ, ನೃತ್ಯರೂಪಕಗಳಿಗೆ ಹೆಸರುವಾಸಿಯಾಗಿದ್ದರು. ಈ ಕಲಾವೃಂದವನ್ನು ಗೋಪಿನಾಥ್,ಕರಿಗಿರಿ,ಜೈಸಿಂಹ,ದ್ವಾರಕನಾಥ್ ಎಂಬ ಕಲಾತಪಸ್ವಿಗಳು ತಮ್ಮ ಕಲಾವೃಂದಕ್ಕೆ ಗುರುರಾಜ ವಾದ್ಯವೃಂದ ಮತ್ತು ನಾಟಕ ಮಂಡಳಿ ಎಂಬ ಹೆಸರನ್ನಿಟ್ಟರು. ಇವರು ನಾಟಕ, ನೃತ್ಯ, ಹಾಡುಗಳು ಹಾಗೂ ಹರಿಕಥಾ ವಿಶೇಷತೆಗಳಲ್ಲೂ ಹೆಚ್ಚು ಒಲವಿತ್ತರು. ಮೊದಲು ತುಮಕೂರಿನಲ್ಲಿ ನೆಲೆಗೊಂಡಿದ್ದ ಕಲಾವಿದರು ಹೆಚ್ಚು ಪ್ರೇಕ್ಷಕರನ್ನು ಮನಸೆಳೆಯಲು ಬೆಂಗಳೂರಿಗೆ ಬಂದು ನೆಲೆಸಿದರು ಈ ತಂಡದ ಮೇಲ್ವಿಚಾರಕರಾಗಿ ಗೋಪಿನಾಥ್ ರವರು ತಮ್ಮ ತಂಡವನ್ನು ಮುನ್ನಡೆಸಿದರು. ೧೯೪೨ರಲ್ಲಿ ಪ್ರಭಾತ್ ಕಲಾವಿದರೆಂಬ ಹೆಸರಿಂದ ಮರುನಾಮಕರಣ ಮಾಡಿದರು. ಮೊಟ್ಟ ಮೊದಲು ಭಾರತೀಯ ಸಾಂಸ್ಕೃತಿಕ ನೃತ್ಯವನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿದ ಹೆಗ್ಗಳಿಕೆಯೂ ಈ ಕಲಾವಿದರ ಪಾಲಾಗುತ್ತದೆ.

ಚಲನಚಿತ್ರ ಅಭಿನೇತ್ರಿಗಳಾದ ಸಿ.ಆರ್.ಸಿಂಹ, ಶ್ರೀನಾಥ್, ಮಂಜುಳ, ಲೋಕೇಶ್ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ್ದು ಇದೇ ಕಲಾವಿದರ ತಂಡದಿಂದ, ಇವರೆಲ್ಲ ಚಿತ್ರರಂಗದ ಹಾದಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಪ್ರಭಾತ್ ಕಲಾವಿದರು ತಮ್ಮ ನಾಟಕಗಳಲ್ಲಿ ಸುಮಾರು ೨೦ ನಾಟಕಗಳನ್ನು ಸಾದರಪಡಿಸಿದ್ದಾರೆ ಅವುಗಳಲ್ಲಿ ಕೆಲವು ಮೋಹಿನಿ ಬ್ರಹ್ಮಾಸುರ, ಕರ್ನಾಟಕ ವೈಭವ, ಕಿಂದರಿಜೋಗಿ,ರಾಮ ಪ್ರತಿಕ್ಷಾ,ಪುಣ್ಯಕೋಟಿ, ಧರ್ಮಭೊಮಿ, ದಶಾವತಾರ ಮುಂತಾದವುಗಳು. ಇಂತಹ ನೃತ್ಯರೂಪಕ ನಾಟಕ ಪ್ರಸ್ತುತ ಪಡಿಸುವುದು ಅತಿ ಸುಲಭದ ಮಾತಲ್ಲ ಅದಕ್ಕೆ ತಕ್ಕಂತ ವೇದಿಕೆ, ದೀಪಾಲಂಕಾರಗಳ ಪ್ರಭಾವ, ಹಿನ್ನೆಲೆ ಧ್ವನಿಗೆ ತಮ್ಮ ಮಾತು ಹೊಂದಾಣಿಕೆ, ಇವೆಲ್ಲವೂ ಬಲು ಕಷ್ಟದ ಕೆಲಸ ಅದಕ್ಕೆ ತಕ್ಕಂತ ಕಲಾವಿದರು ತಮ್ಮ ಶ್ರದ್ಧೆ ಒಲವೂ ಎಲ್ಲವನ್ನು ವಹಿಸಬೇಕಾಗುತ್ತದೆ. ಇಂತಹ ನೃತ್ಯರೂಪಕಗಳಿಗೆ ಸಾಹಿತ್ಯ,ಸಂಗೀತ ಜೋಡಣೆಗೆಂದೆ ಸಂಗೀತಸಾಹಿತ್ಯ ನಿರ್ಮಾಣಶಾಲೆಯನ್ನು ಪ್ರಭಾತ್ ಕಲಾವಿದರು ಹೊಂದಿದ್ದಾರೆ.ಇದೇ ಕಲಾವಿದರ ಅತಿ ಪ್ರಸಿದ್ಧ ನಾಟಕ ಸಿಂಡ್ರೆಲಾ ಈ ನಾಟಕವು ಸುಮಾರು ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗೊಂಡಿರುವುದು ಅವರ ಕಲಾ ಪ್ರಬುದ್ಧತೆಯನ್ನು ಹಿಡಿದು ತೋರಿಸುತ್ತದೆ.

ಬರಿ ನಾಟಕ ನೃತ್ಯ ಇಷ್ಟಕ್ಕೆ ಮೀಸಲಿಡದೆ ತಮ್ಮ ವೃತ್ತಿಯನ್ನು ಉಡುಗೆ ತೊಡಿಗೆಗಳ ಬಾಡಿಗೆಗೆ ನೀಡುವಿಕೆ, ಸಂಗೀತ ಸಾಮಾಗ್ರಿಗಳು, ವೇದಿಕೆಗೆ ಬಳಸುವ ಸಾಮಗ್ರಿಗಳನ್ನು ಬಾಡಿಗೆಗೆ ನೀಡುತ್ತಲಿದ್ದಾರೆ, ನೃತ್ಯ ತರಬೇತಿಯನ್ನು ಸಹಾ ಹಲವು ಮಕ್ಕಳಿಗೆ ನೀಡುತ್ತಲಿದ್ದಾರೆ.

ಮತ್ತೊಂದು ವಿಶೇಷತೆ ಈ ಕಲಾಕುಟುಂಬದಲ್ಲಿದೆ ಅದೇನಂದರೆ ಅಮೇರಿಕಾ ಅಮೇರಿಕಾ ಖ್ಯಾತಿಯ ತಾರೆ ಹೇಮ ಪಂಚಮುಖಿ, ಹಾಗು ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿರುವ ಹರೀಶ್ ರವರು ಈ ಸಂಸ್ಥೆ ಸ್ಥಾಪಕರೊಬ್ಬರಾದ ಗೋಪಿನಾಥ್ ಅವರ ಮೊಮ್ಮಕ್ಕಳು ಇವರ ಸಾಧನೆಯೂ ಸಹ ಶ್ಲಾಘನೀಯ, ಹೇಮರವರು ಹಲವು ಮಕ್ಕಳಿಗೆ ನೃತ್ಯ ತರಬೇತಿದಾರರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಲಿದ್ದಾರೆ ಮತ್ತು ಹರೀಶ್ ಹಾಗೂ ಅವರ ಪತ್ನಿ ಕಿರುತೆರೆ ಅತಿ ಮುಗ್ಥ, ಸೌಮ್ಯ ಸ್ವರೂಪಿ ದೀಪಶ್ರೀ ದಂಪತಿಗಳಿಬ್ಬರು ಈ ಪ್ರಭಾತ್ ಕಲಾವಿದರ ಬಳಗಕ್ಕೆ ಹೆಮ್ಮೆಯ ಗರಿಗಳಾಗಿದ್ದಾರೆ.

ಕುಟುಂಬವನ್ನೇ ಕಲಾವಂತಿಕೆಯಲ್ಲಿ ಮುಳುಗಿಸಿಕೊಂಡ ಈ ಮನೋಘ್ನ ಅಭಿನೇತ್ರಿಗಳೂಂದಿಗೆ ನಾವುಗಳು ಕಳೆದ ಸಮಯ ನಮ್ಮ ಜೀವನದ ಅತಿ ಸಂತಸದ ಸಮಯ ಹಾಗು ಅವರ ತರಬೇತಿ ಮೇರೆಗೆ ನಾವು ಕಲಿತ ಕಿಂದರಜೋಗಿ ನಾಟಕದ ಪುಟ್ಟ ಪಾತ್ರ ನಮಗೆ ಖುಷಿಕೊಟ್ಟಿದೆ. ಇನ್ನು ಉತ್ತಮವಾಗಿ ಮಾಡಬೇಕಿತ್ತೆಂಬ ಅಭಿಲಾಷೆಯು ಇದೆ.
ಒಂದು ವಾರ ದೀಪಶ್ರೀ ಹಾಗೂ ಹರೀಶ್ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಸಂತಸ ತರಿಸಿದೆ. ಅವರಿಬ್ಬರ ಶ್ರಮದಿಂದ ನಮ್ಮೆಲ್ಲರ ಪಾತ್ರಕ್ಕೆ ಕಳೆತರಿಸಿದೆಂದೇಳಿದರೆ ತಪ್ಪಾಗಲಾರದು.

ಹರೀಶ್ ಅವರು ನೀಡಿದ ರಾಮ, ವಿಷ್ಣು,ಕಿಂದರಜೋಗಿ ಮುಂತಾದವು..ಎಲ್ಲ ಪಾತ್ರಗಳನ್ನು ನಾವು ಕಣ್ಣಾರೆ ಕಂಡೆವು ಈ ಪಾತ್ರಗಳಿಗೆ ಕಿಂಚಿತ್ತೂ ಕುತ್ತು ಬರದಹಾಗೆ ಆಯಾ ಪಾತ್ರಕ್ಕೆ ಕಳೆತುಂಬಿದ್ದರು.ಇನ್ನು ದೀಪಶ್ರೀರವರು ಸೀತೆಯ ಪಾತ್ರವನ್ನು ಅತಿ ಮುಗ್ಧತೆಯಿಂದ ನಿರ್ವಹಿಸಿದರು ಹಾಗೂ ಪುಣ್ಯಕೋಟಿ ಪಾತ್ರದಲ್ಲಿ ತಾವೇ ಆ ಪುಣ್ಯಕೋಟಿಯೇನೋ ಎಂಬಂತೆ ಆ ಪಾತ್ರದಲ್ಲೇ ಐಕ್ಯರಾಗಿಬಿಟ್ಟಿದ್ದರು...ಅವರು ತಬ್ಬಲಿಕರುವಿನ ತಬ್ಬಿ ಮುದ್ದಾಡಿ ಇತರ ಹಸುಗಳಿಗೆ ಕಂದಮ್ಮನನ್ನು ನೀಡುವಾಗಿನ ದೃಶ್ಯ ಇಂದಿಗೂ ಕಣ್ಣುಕಟ್ಟಿದಂತಿದೆ...ಎಷ್ಟೋ ಮಂದಿ ಪ್ರೇಕ್ಷಕರು ತಾಯಿ ಮಗು ಅಗಲಿಕೆಗಾಗಿ ನೊಂದು ಕಣ್ಣೀರ ಸುರಿಸಿದ್ದು ಉಂಟು ಅಷ್ಟು ಮನೋಘ್ನ ಅಭಿನಯ ದೀಪಶ್ರೀರವರದು.ಇವರಿಬ್ಬರಷ್ಟೆ ಅಲ್ಲ ಅವರೊಂದಿಗೆ ಪಾತ್ರ ನಿರ್ವಹಿಸಿದ್ದ ಕಿಂದರಿಜೋಗಿಯ ಗೌಡ ಹಾಗೂ ಅಲೆಗ್ಸಾಂಡರ್ ಪಾತ್ರಧಾರಿ, ಲಕ್ಷ್ಮಣ,ಜಟಾಯು,ಹುಲಿ, ಕೃಷ್ಣ, ಹಲವು ನೃತ್ಯ ಕಲಾವಿದರೂ ಎಲ್ಲರೂ ಅದೇನು ಅಭಿನಯ ಒಬ್ಬೂಬ್ಬ ಕಲಾವಿದರೂ ೩,೪ ಪಾತ್ರಧಾರಿಗಳಾಗಿ ತಮ್ಮ ತಮ್ಮ ಪಾತ್ರಕ್ಕೆ ಜೀವಕಳೆ ತುಂಬಿದರು.

ಹರೀಶ್, ದೀಪ ಹಾಗೂ ಎಲ್ಲಾ ಪಾತ್ರ ವೃಂದದವರಿಗೆ ನಮ್ಮ ನಮನಗಳು.

ಕೆಲವು ನಾಟಕದ ಚಿತ್ರಗಳು...


















ಎಷ್ಟೋ ಜನರಿಗೆ ನಮ್ಮಲ್ಲೇ ಇರುವ ಪ್ರತಿಬೆಗಳು ಕಾಣುವುದಿಲ್ಲ, ಇಂತಹ ಕಲಾ ಆರಾಧಕರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಜೊತೆಗೆ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವುದು ನಮ್ಮ ನಿಲುವು ಸಹ ಆಗಿರಬೇಕು ಅಲ್ಲವೆ..?




Saturday, November 14, 2009

ಮರುಭೂಮಿಯಲ್ಲಿ ಕನ್ನಡವೈಭವ

ರಜತ ಮಹೋತ್ಸವದ ಸಂಭ್ರಮತೆಯ ಸಭಾಂಗಣಕ್ಕೆ ಹೂಕ್ಕುವ ಮುನ್ನವೇ ಎದ್ದು ಕಾಣುತ್ತಿತ್ತು ಒಳಗಿನ ಅದ್ದೂರಿ ಮುಂಭಾಗಿಲ ರಂಗೋಲಿಯಲಿ, ಗಣಪನ ಮೂರ್ತಿ, ಹೆಂಗಳೆಯರ ನಗು ನಗುವಿನೊಂದಿಗೆ ಸಾಂಪ್ರದಾಯಕ ಆಹ್ವಾನ ಎಲ್ಲವೂ ಎಲ್ಲರ ಮನಸಿಗೆ ಸಂತಸ ನೀಡಿತ್ತು, ಹಾಗೆ ಮುಂದೆ ಸಾಗಿದರೆ ಅಲ್ಲೇ ಮಕ್ಕಳ ಸೈನ್ಯ ಕಾದಿತ್ತು ಏನಿದು ಈ ಮಕ್ಕಳು ಹೀಗೆ ತರತರನಾದ ವೇಷಭೂಷಣಗಳಲ್ಲಿ ಮಿಂಚುತ್ತಿರುವರೆಂದು ನೋಡ ನೋಡುತ್ತಲಿದ್ದಂತೆ ಭಾರತದ ರಾಯಭಾರಿಗಳಾದ ಅಜಯ್ ಮಲ್ಹೋತ್ರರವರನ್ನು ಹಾಗೂ ಹಲವಾರು ಗಣ್ಯರ ಆಗಮನ ಕೋರಲು ಈ ಮುದ್ದು ಮಕ್ಕಳು ಕನ್ನಡನಾಡ ಕಲೆ ಸಂಸ್ಕೃತಿಯನ್ನು ತಮ್ಮ ವೇಷಭೂಷಣದಲ್ಲೇ ಬಿಂಬಿಸುತ್ತ ಎಲ್ಲರನ್ನು ಆಹ್ವಾನಿಸಿದರು ಆ ಮೆರವಣಿಗೆ ದಸರಾ ಮೆರವಣಿಗೆಯಂತೆ ಕಂಡದ್ದು ನಿಜವೇ ಸೈ.

ಮುಖ್ಯ ಅತಿಥಿಗಳೆಲ್ಲ ಆಸೀನರಾಗುತ್ತಲಿದ್ದಂತೆ ಸಮಾರಂಭವು ಕುವೆಂಪುರವರ ನಾಡಗೀತೆ ಭಾರತ ಜನನಿಯ ತನುಜಾತೆ.... ಎಂಬ ಹಾಡಿನಿಂದ ಮೊಳಗುತ್ತಿದ್ದಂತೆ ಎಲ್ಲಿದ್ದರೋ ಬಸವಣ್ಣ, ವಿದ್ಯಾರಣ್ಯ, ರನ್ನ,ಪೊನ್ನ, ಹಿಂದೊ ಕ್ರೈಸ್ತ, ಮುಸಲ್ಮಾನ, ಗೌತಮ, ಹೌಯ್ಸಳ ಎಲ್ಲರೂ ಒಮ್ಮೆಲೆ ಬಂದು ನಮ್ಮಮುಂದೆ ನಿಂತು ಬಿಟ್ಟರು...ಹಾಗೆ ನೆರೆದಿದ್ದ ಸಭಿಕರೆಲ್ಲ ನಾಡಗೀತೆಗೆ ಕೊಟ್ಟ ಗೌರವ ಅಭಿನಂದನಾರ್ಹ... ನಂತರದಿ ಅವಾಹನೆಯನ್ನು (ದೇವರ ಪ್ರಾರ್ಥನೆ) ನೃತ್ಯಗೀತೆಯೊಂದಿಗೆ ಕೂಟದ ಮಕ್ಕಳು ನೆರೆವೇರಿಸಿದರು.ತದನಂತರ ಗಣ್ಯರು ಹಾಗೂ ಕೂಟದ ಕಾರ್ಯಕಾರಿ ಸಮಿತಿಯೂಂದಿಗೆ ಜ್ಯೋತಿಬೆಳಗಿಸಿ ಉಪಕಾರ್ಯಕಾರಿ ಸಮಿತಿ ಸದಸ್ಯ ಸದಸ್ಯೆಯರೆಲ್ಲರೂ ಒಟ್ಟಾಗಿ ಡಿ. ಎಸ್ . ಕರ್ಕಿ ರವರ ಹಚ್ಚೇವು ಕನ್ನಡದ ದೀಪ.... ಹಾಡಿಗೆ ಸೊಡರೊತ್ತುರಜತಮಹೋತ್ಸವದ ವೇದಿಕೆ ಹಾಗೂ ಕನ್ನಡಿಗರ ಮನ-ಮನಗಳಿಗೆ ಒಲವ ಬೆಳಕನು ಹರಿಸಿದರು.
ಇಷ್ಟೆಲ್ಲ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಸುಮಾರು ೧೧ ಗಂಟೆ ಇರಬಹುದು ಕರುನಾಡಿಂದ ಬರಬೇಕಾದಂತ ಕರುನಾಡಿನಿಂದ ಬಂದಂತಹ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದಂತಹ ಶ್ರೀ ಗಣೇಶ್ ಕಾರ್ಣೀಕ್ ರವರು ಸಮಾರಂಭಕ್ಕೆ ಮೆರುಗು ನೀಡಿದರು. ಇವರ ಬರುವಿಕೆಯಲ್ಲೆ ಸೂತ್ರದ ಬೊಂಬೆಯಾಟ ನೆಡೆಯುತ್ತಲಿದ್ದು. ವಶವರ್ತಿ(ಸೂತ್ರದ ಬೊಂಬೆಯಾಟ) ನೆರೆದಿದ್ದ ಎಲ್ಲ ಜನರ ಚಪ್ಪಾಳೆ ಗಿಟ್ಟಿಸಿತು.

ಕನ್ನಡ ಕೂಟ ಕುವೈಟ್ ೨೫ ವರ್ಷಗಳು ಸಾಗಿಬಂದ ಹಾದಿಯನ್ನು ದೃಶ್ಯಮಾಲಿಕೆಯಲ್ಲಿ ನಿರೂಪಿಸಿ ನೆರೆದಿದ್ದವರೆಲ್ಲರಿಗೂ ಮರಳು ಮಲ್ಲಿಗೆಯ ಕಂಪು ಸೂಸಿದರು...ತದನಂತರ ವೇದಿಕೆ ಅಲಂಕರಿಸಿದ ಹಳೆ ಬೇರೆಂಬಂತೆ ಕನ್ನಡಕೂಟ ಆರಂಭಿಸಿದ್ದ ಹಾಗು ಮಾಜಿ ಅಧ್ಯಕರುಗಳು ಮತ್ತು ಹೊಸ ಚಿಗುರು ಎಂಬಂತೆ ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಹಾಗೂ ಕರುನಾಡ ಪ್ರತಿನಿಧಿಗಳಾಗಿ ಬಂದಿದ್ದ ಕ್ಯಾಪ್ಟನ್ ಗಣೇಶ್ ಎಲ್ಲರೊ ವೇದಿಕೆಗೊಂದು ಮೆರುಗು ನೀಡಿದರು. ಹಳೆ ಬೇರುಗಳ ಭಾಷಣ ಅವರ ಅನುಭವ ಅವರ ಅಭಿಪ್ರಾಯ ಎಲ್ಲವೂ ಮನಸೂರೆಕೊಂಡಿತು... ನಂತರದಿ ಕ್ಯಾಪ್ಟನ್ ಗಣೇಶ್ ರವರ ಸರದಿ ನೋಡು ನೋಡುತ್ತಲಿದ್ದಂತೆ ಅವರ ಭಾಷಣ ಅವರ ಧ್ಯೇಯ, ಆಸಕ್ತಿ, ಒಲವೂ ಎಲ್ಲವೂ ಮೆಚ್ಚನಾರ್ಹವೆನಿಸಿತು... ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಲಿಟ್ಟು ೩ ವರ್ಷಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಮಾಡುವೂದಿಲ್ಲವೆಂದು ಖಡಾಖಂಡಿತವಾಗಿ ಸಭೆಯಲ್ಲಿ ಸಾರಿ ಹೇಳಿದರೂ ಅದು ಅಲ್ಲದೆ ಅನಿವಾಸಿ ಭಾರತೀಯರಿಂದಾಗುವ ಅನುಕೂಲ, ಅವರುಗಳ ತೊಂದರೆ, ಅನಿವಾಸಿ ಭಾರತೀಯರಿಂದ ದೊರಕುವ ಅನಿಸಿಕೆ ಅಭಿಪ್ರಾಯ, ಕರುನಾಡ ಏಳ್ಗೆಗೆ ಅನಿವಾಸಿ ಭಾರತೀಯರ ಪಾತ್ರ ಎಲ್ಲಕ್ಕೊ ಸ್ಪಂದಿಸುವುದಾಗಿ ಹೇಳಿದರು. ಇವರ ಭಾಷಣ ಮುಗಿಯುತ್ತಿದ್ದಂತೆ ಸ್ಮರಣ ಸಂಚಿಕೆಯನ್ನು ಸಾಂಸ್ಕೃತಿಕ ರೀತಿಯಲ್ಲಿ ಬಿಡುಗಡೆಮಾಡಲಾಯಿತು. ಈ ಕಾರ್ಯಕ್ರಮಗಳೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯವಾಗಿತ್ತು ಎಲ್ಲರು ತಮ್ಮ ಊಟ ಮುಗಿಸಿ ಮಧ್ಯಾಹ್ನದ ಕಾರ್ಯಕ್ರಮಗಳತ್ತ ಹೊರಡುವತ್ತಲಿದ್ದಂತೆ ಕ್ಯಾ.ಗಣೇಶ್ ಅವರ ಆಶಯದ ಮೇರೆಗೆ ಮತ್ತೊಮ್ಮೆ ನಾಡಗೀತೆ ಹಾಡುವವರಿಗೆ ಆಹ್ವಾನವಿತ್ತರು.

ಬೆಳಗಿನ ಸಮಾರಂಭವೇಕೋ ತುಸು ಮಂದಗತಿಯಲ್ಲಿ ಸಾಗುತ್ತಿದೆಯೆಂದೆನಿಸಿತು ಆದರೆ ಅಪರಾಹ್ನದ ಸಮಾರಂಭ ಕ್ಯಾ.ಗಣೇಶ್ ರವರ ಆಸೆಯಂತೆ ನಾಡಗೀತೆಯೊಂದಿಗೆ ಪ್ರಾರಂಭವಾಯಿತು ಅಲ್ಲದೆ ಅವರೂ ಸಹ ನಮ್ಮೆರಲ್ಲೊಬ್ಬರಾಗಿ ಹಾಡಿದರು ಇವರೊಟ್ಟಿಗೆ ಕುವೈಟ್ ಅತಿಥಿಗಳು ಮಾಜಿ ಹಾಗೂ ಹಾಲಿ ಅಧ್ಯಕ್ಷರು ಕೂಡಿ ನಾಡಗೀತೆ ಸುಸೂತ್ರ ಸುಮಧುರವಾಗಿ ನೆರೆವೇರಿದ ನಂತರ ೨೫ ವರ್ಷಗಳ ಹುಟ್ಟುಹಬ್ಬದ ಸಂಭ್ರವನ್ನು ಸಿಹಿ ಕೇಕ್ ಕತ್ತರಿಸುವ ಮೂಲಕ ಮಧ್ಯಾಹ್ನದ ಮನರಂಜನ ಕಾರ್ಯಕ್ರಮಕ್ಕೆ ಸಿಹಿಸಂತಸದ ಹೊನಲಾಯಿತು. ಇವರೆಲ್ಲರೊಟ್ಟಿಗೆ ಉದಯವಾಣಿ ಪತ್ರಿಕೆಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಅವರ ನುಡಿಮುತ್ತುಗಳು ಸಭೆಗೆ ಕಳೆಯನ್ನು ತರಿಸಿತ್ತು
ಇನ್ನು ಕನ್ನಡಕೂಟದ ಹಿರಿ ಕಿರಿಯರ ಮನರಂಜನಾ ಕಾರ್ಯಕ್ರಮದ ಸಮಯ ಮೂದಲಿಗೆ ಅಷ್ಟಲಕ್ಷ್ಮಿ ರೂಪದ ನೃತ್ಯ
ರೂಪಕವನ್ನು ಕೂಟದ ಹೆಂಗಳೆಯರು ಅತಿ ಉತ್ಸಾಹ, ಮನಪೂರ್ವಕವಾಗಿ ದೇವಿಯನ್ನು ನೆನೆದರೆ ಲಕ್ಷಿ ದಯಪಾಲಿಸದೇ ಇರುತ್ತಾಳೆಯೇ ವೇದಿಕೆಯು ಲಕ್ಷ್ಮಿ ಕಟಾಕ್ಷವಾಗಿ ಮಾರ್ಪಟ್ಟಿತ್ತು, ಲಕ್ಷ್ಮಿ ಬಂದುಹೋಗುತ್ತಲಿದ್ದಂತೆ ಅದೆಲ್ಲಿದ್ದವೋ ಗುಬ್ಬಿಗಳು ನಮ್ಮ ಮುದ್ದು ಚಿಣ್ಣರು ಗುಬ್ಬಿ ಗುಬ್ಬಿ ಎಂದು ಗುಬ್ಬಿಗಳನ್ನೇ ಸಭಾಂಗಣಕ್ಕೆ ಕರೆತಂದುಬಿಟ್ಟಿದ್ದರು ವೇದಿಕೆ ಅಲಂಕರಿಸಿದ ಗುಬ್ಬಿಗಳು ಬಣ್ಣ ಬಣ್ಣದ ದೀಪಗಳು ಜಗಮಗಿಸುವುದ ಕಂಡು ಅಲ್ಲೇ ನಿಂತು ಬಿಟ್ಟಿದ್ದವು ಗುಬ್ಬಿಗಳನ್ನು ಕಂಡ ಹಳ್ಳಿ ಮಕ್ಕಳು ಮತ್ತೊಂದು ಜಾನಪದ ನೃತ್ಯವನ್ನು ಎಲ್ಲರ ಮುಂದಿಟ್ಟು ಹಳ್ಳಿಗೆ ಕರೆದೋಯ್ದರು, ಇನ್ನು ಹಲವು ಮಕ್ಕಳು ನಾವೇನು ಕಮ್ಮಿ ಎಂಬಂತೆ ಕೋಲಾಟದಿ ನೃತ್ಯ ಮಾಡಿ ನಲಿಸಿದರು, ಲಕ್ಷ್ಮಿ, ಗುಬ್ಬಿ, ಹಳ್ಳಿ ಜಾನಪದರು, ಕೋಲಾಟ ಎಲ್ಲವನ್ನು ಕಂಡ ಅದೆಲ್ಲೋ ಇದ್ದ ಎರಡು ನವಿಲುಗಳು ನೃತ್ಯವಾಡುತ್ತ ಬಂದೇ ಬಿಟ್ಟವು ಇನ್ನು ಸ್ವಲ್ಪಹೊತ್ತು ನೃತ್ಯನೋಡೋಣವೆಂದರೆ ತೊಗಲುಗೊಂಬೆಯ ನೃತ್ಯವಾಡಲು ಮಕ್ಕಳ ಹಿಂಡು ಬಂದೇ ಬಿಟ್ಟಿತು...ಇವರನ್ನೆಲ್ಲ ನೋಡಲು ನಾಗರಹೊಳೆಯಲ್ಲಿದ್ದ ಕಾಡುಜನರೂ ಓಡೋಡಿ ಬರುವುದೇ ಅಬ್ಬಾ ಕಾಡುಜನವೆಂದು ಯಾರು ಅವರನ್ನು ಹೇಳುವುದು ಅಷ್ಟು ಮನೋಘ್ನ ನೃತ್ಯವನ್ನು ನೀಡಿ ಕುಣಿದು ಕುಪ್ಪಳಿಸಿದರು.... ಇವರೆಲ್ಲರ ಮಧ್ಯೆ ಕೃಷ್ಣ ಕೊಳನೂದುತ ಸ್ನೇಹ ವೃಂದದೊಂದಿಗೆ ಕುಣಿದುನಲಿದನು, ನಂತರ ಕನ್ನಡದ ಹುಡುಗರೆಲ್ಲ ನಮ್ಮ ಜೀವನ ಕನ್ನಡ ಎಂದು ನೃತ್ಯ ನೀಡಿ ಸಿಳ್ಳೆ ಗಿಟ್ಟಿಸಿದರು, ನಂತರ ನಾದಸ್ವರೂಪದ ಬೆಸುಗೆಯೊಂದಿಗೆ ಹೆಂಗಳೆಯರು ನೃತ್ಯ ನೀಡಿ ಮನತಣಿಸಿದರು, ನೃತ್ಯ ಲೋಕದಿಂದ ಹೊರಬರುತ್ತಿದ್ದ ಹಾಗೇ ಒಂದು ಮುನ್ಸೊಚನೇ ಇಲ್ಲದೆಯೇ ಆಶ್ಚರ್ಯದ ವೇದಿಕೆಯಲ್ಲಿ ಸೃಷ್ಟಿಯಾಗಿತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕೂಟದ ಹಾಲಿ ಅಧ್ಯಕ್ಷರಾದ ಶ್ರೀಮತಿ ಶ್ರೀ ಸತೀಶ್ ಚಂದ್ರ ಶೆಟ್ಟಿ ದಂಪತಿಗಳ ೨೫ ವರ್ಷದ ವಿವಾಹ ಮಹೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ದಂಪತಿಗಳಿಗೆ ಬೆರಗು ಮೂಡಿಸಿದರು. ಕೂಟದ ಕಾರ್ಯಕ್ರಮ ಹೇಗಿತ್ತೆಂದರೆ ತವರೂರಲ್ಲಿ ಮದುವೆ ಸಮಾರಂಭ ನೆಡೆದಂತಿತ್ತು ಹೆಂಗಳೆಯರು ಮದುವೆಮನೆಯಲ್ಲಿ ಶಾಸ್ತ್ರಕ್ಕೊಂದು ಉಡುಗೆ ಮುಹೂರ್ತಕ್ಕೂಂದು ಬೆರಗುಗೊಳಿಸೋ ಉಡುಗೆ ಹೀಗೆ ಸಾಂಪ್ರದಾಯಕ ಉಡುಗೆತೂಡುಗೆಯೂಂದಿಗೆ ಸಭಾಂಗಣವನ್ನು ಹೆಣ್ಣುಮಕ್ಕಳು ಅಲಂಕರಿಸಿಬಿಟ್ಟಿದ್ದರು.
ಇತ್ತ ಸಂಜೆಯ ಸವಿ ಸವಿಯಲೂ ಸಭಿಕರೆಲ್ಲರು ನೆರೆದಿದ್ದರೂ ಇತ್ತ ವೇದಿಕೆಯ ಹಿಂಬದಿ ಪ್ರಭಾತ್ ಕಲಾವಿದರು (ಬೆಂಗಳೂರು) ಇವರೊಟ್ಟಿಗೆ ಕನ್ನಡ ಕೂಟದ ಮಕ್ಕಳು ದೊಡ್ಡವರು ಅತಿ ಉತ್ಸಾಹದಿಂದ ಕಾತುರದಿ ವೇದಿಕೆ ಅಲಂಕರಿಸಲು ಕಾದಿದ್ದರು... ಸಂಜೆಯ ಕಾರ್ಯಕ್ರಮ ಕುವೆಂಪುರವರ ಕಿಂದರ ಜೋಗಿ ನೃತ್ಯರೂಪಕ ನಾಟಕ ಪ್ರಾರಂಭವಾಗಿಯಿತು ಏನು ಆ ಹಳ್ಳಿ ಮಕ್ಕಳು ಅಜ್ಜನೊಂದಿಗೆ ಕಥೆ ಹೇಳುವಂತೆ ಕೇಳುತ್ತಲಿದ್ದಂತೆ ಅಜ್ಜ ಆ ಮಕ್ಕಳಿಗೆಲ್ಲಾ ತುಂಗಾ ತೀರದ ಹಳ್ಳಿಗೆ ಕರೆದೂಯ್ದರು ಆ ಹಳ್ಳಿಯ ಜನ ಆ ಜನರಿಗೊಬ್ಬ ಗೌಡ ಸುಂದರ ಊರಿಗೆ ಇಲಿಗಳ ಕಾಟ, ಕಾಟ ತಾಳಲಾರದೆ ಕಿಂದರಜೋಗಿಗೆ ಮೂರೆ, ಕಿಂದರ ಜೋಗಿ ಇಲಿಗಳ ನಾಶಾನಂತರ ಗೌಡನ ದರ್ಪ, ಜಂಭ ಇದಕ್ಕೆ ಕೆಲವು ಹಳ್ಳಿ ಜನ ಪ್ರೋತ್ಸಾಹ, ಕೆಲವರ ಬೈಗುಳ ಮೋಸ ಮಾಡುವನೆಂದು.. ಭಾವಿಸಿ ಬೈಗುಳ ನೆಡೆದಿತ್ತು... ಗೌಡನಲ್ಲಿ ಮುನಿಸಿ ಊರ ಮಕ್ಕಳನ್ನೆಲ್ಲ ಕರೆದೂಯ್ದ ಕಿಂದರಿಜೋಗಿ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಪ್ರಭಾತ್ ಕಲಾವಿದರು ಹಾಗು ಕೂಟದ ಸದಸ್ಯರು ವೇದಿಕೆಯನ್ನು ತುಂಗಾ ತೀರದ ಹಳ್ಳಿಯನ್ನಾಗಿ ಮೂಡಿಸಿಬಿಟ್ಟಿದ್ದರು. ಈ ನೃತ್ಯ ರೂಪಕ ನಾಟಕ ಮುಗಿಯುವ ಹೂತ್ತಿಗೆ ಕಾಫಿ, ಟೀ ಸಮಯವಾಗಿತ್ತು ಎಲ್ಲರೂ ಕಾಫಿ, ಟೀ ಜೊತೆಗೆ ತಿಂಡಿತಿನಿಸು ತಿಂದು ಮುಗಿಸುವಷ್ಟರಲ್ಲೇ ಸಂಜೆಯ ಸಮಾರಂಭವು ಅತಿ ಅದ್ದೂರಿಯಿಂದ ಸಜ್ಜಾಗಿ ಸಭಿಕರೆಲ್ಲರಿಗಾಗಿ ಕಾದಿತ್ತು.

ಹಳ್ಳಿಗೋಗಿದ್ದ ಸಭಿಕರೆಲ್ಲರೂ ಧರ್ಮಭೂಮಿ ಕಡೆಗೊರಟರು, ಅಬ್ಬಾ!!! ಅದೆಂತಹ ನಾಟಕ ಎಲ್ಲರೂ ಈ ನಾಟಕವನ್ನು ನೋಡಲೇಬೇಕು... ಎಲ್ಲರಿಗು ತಿಳಿದಂತೆ ಗ್ರೀಕ್ ದೊರೆ ಅಲೆಗ್ಸಾಂಡರ್ ಅತಿ ಬಲಿಷ್ಟ ಶೌರ್ಯ ದೊರೆ, ಈ ದೊರೆ ಭಾರತದ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ತನ್ನ ಗುರುಗಳಾದ ಅರಿಸ್ಟಾಟಲ್ ಹಾಗು ಅಲೆಗ್ಸಾಂಡರ್ ನಡುವಿನ ಸಂಭಾಷಣೆ ಹಾಗು ಅರಿಸ್ಟಾಟಲ್ ನಮ್ಮ ಭವ್ಯ ಭಾರತ ಬಗೆಗಿದ್ದ ಅತಿಯಾದ ಗೌರವ, ಪ್ರೀತಿ ಎಲ್ಲವನ್ನು ತಿಳಿಸಿ ಅಲೆಗ್ಸಾಂಡರ ರಾಜನಿಗೆ ದಂಡಯಾತ್ರೆಗೆ ಹೋಗುವ ಬದಲು ಶಾಂತಿಯಾತ್ರೆಗೆ ಹೋಗುವಂತೆ ಸೂಚಿಸಿದ್ದರು ಅಂತೆಯೇ ಭರತ ಭೊಮಿಗೆ ಬಂದ ರಾಜ ಹಿಂತಿರುಗಿ ಹೋಗುವಾಗ ಆರೋಗ್ಯ ಏರುಪೇರಿನಿಂದ ಅಸುನೀಗುತ್ತಾನೆ ತಾನು ಸಾಯುವ ಮುನ್ನ ತನ್ನ ದೇಹವನ್ನು ಪೆಟ್ಟಿಗೆಯಲ್ಲಿಡಿ ಆದರೆ ತನ್ನ ಎರಡು ಕೈಗಳನ್ನು ಹೊರಗಿಡಿ ಏಕೆಂದರೆ ನಾನು ೩೩ ವರ್ಷಕ್ಕೆ ಹತ್ತು ಹಲವು ದೇಶಗಳನ್ನು ಗೆದ್ದು ದಿಗ್ವಿಜಯಿಯಾಗಿದ್ದೆ ಆದರೆ ಸತ್ತ ನಂತರ ನನ್ನ ಕೈ ಏನನ್ನೊ ತೆಗೆದುಕೊಂಡೋಗುತ್ತಿಲ್ಲ, ಬರಿಗೈನಲ್ಲಿ ಹೋಗುತ್ತಿರುವೆ ಎಂದು ಎಲ್ಲರಿಗೂ ಸಂದೇಶವನಿತ್ತು ಅವನು ಅಮರನಾದನು... ಇದೆಲ್ಲದರ ಮಧ್ಯೆ ಅರಿಸ್ಟಾಟಲ್ ಭಾರತ ಭೂಮಿಯ ಗಂಗಾ ಜಲ, ರಾಮಾಯಣ, ಮಹಾಭಾರತ, ಕೃಷ್ಣ ಹಾಗೂ ಅವನ ಕೊಳಲ ಪ್ರಾಮುಖ್ಯತೆ, ಭಗವದ್ಗೀತೆಯ ವಿಶೇಷತೆಯನ್ನು ನಮ್ಮ ಮುಂದಿಟ್ಟರು.. ಅಬ್ಬಾ ಎಂತಹ ವೈಭವೋತೀತ ಭರತಖಂಡ ಪರಿಚಯವನ್ನು ನಾಟಕರೂಪದಲ್ಲಿ ನಮ್ಮ ಮುಂದಿಟ್ಟರು ಎಂದೆನಿಸಿತು.

ತದನಂತರ ದಶಾವತಾರ ನೃತ್ಯರೂಪಕವು ಮನಸೂರೆಗೊಂಡಿತು, ವಿಷ್ಣುವಿನ ದಶ ಅವತಾರಗಳನ್ನು ಪ್ರಭಾತ್ ಕಲಾವಿದರಾದ ಹರೀಶ್ ಸಭಿಕರೆಲ್ಲರಿಗೂ ಅರ್ಥವಾಗುವಂತೆ ಮನಮುಟ್ಟುವಂತೆ ನೃತ್ಯರೂಪಿಸಿದರು. ಕೊನೆಯ ನೃತ್ಯರೂಪಕ ಪುಣ್ಯಕೋಟಿ ಆಹಾ!!! ದಟ್ಟಅಡವಿಯಲ್ಲಿ ಹುಲಿಯ ಬಾಯಿಗೆ ಸಿಕ್ಕಿಕೊಂಡ ಆ ಪುಣ್ಯಕೋಟಿ ಹಸುವಿನ ಮನಕಲಕುವ ದೃಶ್ಯ, ಆ ಕರುವಿನ ತಬ್ಬಲಿತನ ಎದ್ದು ಕಾಣುವಂತೆ ಮನೋಘ್ನ ಅಭಿನಯವನ್ನು ಪ್ರಭಾತ್ ಕಲಾವಿದರಾದ ದೀಪಶ್ರೀಹರೀಶ್ ಹಾಗೂ ಕೂಟದ ಸದಸ್ಯರ ಮಗು ನೀತಾ ತಬ್ಬಲಿಯ ಕರುವಾಗಿ ಬಹಳ ವಿಶೇಷವಾಗಿ ಅಭಿನಯಿಸಿದರು ಪುಣ್ಯಕೋಟಿಯ ನಾಟಕ ನೋಡ ನೋಡುತ್ತಲಿದ್ದ ಹಾಗೆ ಕೆಲವರ ಕಣ್ಣುಗಳು ಒದ್ದೆಯಾದವು....ಪುಣ್ಯಕೋಟಿ ಮರಳಿ ತಾಯಮಡಿಲು ಸೇರುವ ದೃಶ್ಯದೊಂದಿಗೆ ಮನಸು ಹಗುರಾಗಿ ಸಂತಸದಿ ನಾವುಗಳೆಲ್ಲ ಸಭಾಂಗಣ ತೊರೆದು ರಾತ್ರಿ ಊಟಕ್ಕೆ ತೆರೆಳಿದೆವು. ಮೃಷ್ಟಾನ್ನ ಭೋಜನದಿ ಎಲ್ಲರೂ ಊಟ ಸವಿದು ಮನೆಯ ಕಡೆ ಮುಖ ಮಾಡಿದೆವು.

ಪ್ರಭಾತ್ ಕಲಾವಿದರ ನೀಡಿದ ಸುಮಾರು ೨ ಗಂಟೆಯ ಕಾರ್ಯಕ್ರಮಗಳು ಬೆಂಗಳೂರಿನಲ್ಲಾಗಿದ್ದರೆ ಸುಮಾರು ೪೦ ಜನರೂಡಗೂಡಿ ನಿರೂಪಿಸುತ್ತಿದ್ದ ಕಲಾವಿದರು ಇಂದು ಸುಮಾರು ೧೫ ಕಲಾವಿದರೂಂದಿಗೆ ಒಬ್ಬೂಬರು ೩, ೪ ಪಾತ್ರಗಳನ್ನು ಅಭಿನಯಿಸಿ ಅದ್ಭುತ ಅಭಿನೇತ್ರಿಗಳಾಗಿ ನಮ್ಮೆಲ್ಲರಿಗೂ ಮನವನ್ನು ತಣಿಸಿದರು.
ಒಟ್ಟಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ನಮನ, ಮನನ ಎಲ್ಲವೂ ಸರಾಗವಾಗಿ ಯಾವ ಅಡೆತಡೆಯಿಲ್ಲದೆ ನೆರೆವೇರಿತು ಯಾವ ರಾಜಕಾರಿಣಿಗಳಾಗಲಿ, ಚಲನಚಿತ್ರ ತಾರೆಗಳಾಗಲಿ ಯಾರ ಅನುಪಸ್ಥಿತಿಯೂ ಕನ್ನಡಾಂಬೆಯ ವೈಭವೋತೀತ ಹುಟ್ಟುಹಬ್ಬದ ಆಚರಣೆಗೆ ಸ್ವಲ್ಪವೂ ಕುತ್ತುಬರದೆ ಕರುನಾಡ ಸಿರಿ ಮರಳುಗಾಡಿನಲ್ಲಿ ರಾರಾಜಿಸಿತು.
ಈ ಕಾರ್ಯಕ್ರಮಕ್ಕೆ ರುವಾರಿಗಳಾದ ಕಾರ್ಯಕಾರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಹಲವು ಉಪಸಮಿತಿಗಳೆಲ್ಲರಿಗೂ,ಮತ್ತು ಪ್ರಭಾತ್ ಕಲಾವೃಂದದವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

Tuesday, November 10, 2009

ಒಟ್ಟಾಗಿ ಬನ್ನಿ...ಹಚ್ಚೋಣ ಕನ್ನಡದ ದೀಪ....


ಕನ್ನಡಾಂಬೆಯ ನೆನೆವ ಮನಗಳು ಪ್ರಪಂಚದಾದ್ಯಂತ ಹರಡಿಹೋಗಿವೆ ಕೆಲವು ಪ್ರಾಂತ್ಯ, ಊರು ಕೇರಿಗಳಲ್ಲಿ ಕನ್ನಡಮ್ಮನಿಗೆಂದೆ ಹಬ್ಬ ಆಚರಣೆಗಳು ನೆಡೆಯುತ್ತಲೇ ಇರುತ್ತವೆ. ಅಂತೆಯೇ ನಾವು ಸಾಗರದಾಚೆ ಕನ್ನಡಮ್ಮನ ನೆನೆದು ಅವಳ ಪ್ರೀತಿಪಾತ್ರರಾಗುವ ಒಂದು ಪುಟ್ಟ ಪ್ರಯತ್ನ...

ಕುವೈಟ್ ಕನ್ನಡಿಗರೆಲ್ಲರು ಒಗ್ಗೂಡಿ ಇದೇ ನವೆಂಬರ್ ೧೩ರಂದು ಅಮೇರಿಕನ್ ಇಂಟರ್-ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಉತ್ಸವ ನೆರೆವೇರಲಿದೆ ಈ ಸಮಾರಂಭಕ್ಕೆ ಅಭೂತಪೂರ್ವ ರೀತಿಯಲ್ಲಿ ಎಲ್ಲಾ ಮಕ್ಕಳು, ಹಿರಿ-ಕಿರಿಯರೆಲ್ಲರೂ ತಮ್ಮದೇ ಆದಂತಹ ಮನರಂಜನಾ ಕಾರ್ಯಕ್ರಮಕ್ಕೆ ಮೆರುಗು ನೀಡಲು ಸಜ್ಜಾಗಿದ್ದಾರೆ.

ಈ ಬಾರಿ ಅತಿ ಆಸಕ್ತಿದಾಯಕ ಎಂದರೆ ಕುವೈಟ್ ಕನ್ನಡ ಕೂಟಕ್ಕೆ ಬೆಳ್ಳಿಹಬ್ಬದ ವೈಭವ ಇದರ ಸಲುವಾಗಿ ಕನ್ನಡ ಕೂಟದ ವತಿಯಿಂದ ಮನರಂಜನಾ ಕಾರ್ಯಕ್ರಮ ಹಾಗೂ ಬೆಂಗಳೊರಿನಿಂದ ಆಗಮಿಸಿರುವ ಪ್ರಭಾತ್ ಕಲಾವಿದರಿಂದ ವಿವಿಧ ನೃತ್ಯರೂಪಕ ನಾಟಕಗಳು ನೆಡೆಯಲಿವೆ. ಇದಲ್ಲದೆ ಪ್ರಭಾತ್ ಕಲಾವಿದರೊಂದಿಗೆ ಕುವೈಟ್ ಕನ್ನಡಿಗರೂ ಸಹ ಭಾಗವಹಿಸಲಿದ್ದಾರೆ.
ಕಿರುತೆರೆ ಹಾಗು ಚಲನಚಿತ್ರ ತಾರೆಗಳಾದ ಹಾಗೂ ಪ್ರಭಾತ್ ಕಲಾವಿದರಾದ ದೀಪಶ್ರೀ ಮತ್ತು ಹರೀಶ್ ದಂಪತಿಗಳ ಸಾರಥ್ಯದಲ್ಲಿ ನಾವುಗಳು ನಾಟಕಾಭ್ಯಾಸದಲ್ಲಿ ತೊಡಗಿದ್ದೇವೆ. ಪರಿಪೂರ್ಣತೆ ಅಥವಾ ಪಕ್ವತೆ ನಮ್ಮಲ್ಲಿಲ್ಲದಿದ್ದರೂ ನಮ್ಮ ಪಾತ್ರಗಳಿಗೆ ಜೀವತುಂಬುವ ನಿಟ್ಟಿನಲ್ಲಿದ್ದೇವೆ.

ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ, ಸಂತಸ ಭರಿತವಾಗಿ ನೆರವೇರುವುದೆಂದು ನಾವು ಭಾವಿಸುತ್ತ ನಿಮ್ಮೆಲ್ಲರಿಗೂ ಹೃದಯಪೂರ್ವಕ ಆಹ್ವಾನವನ್ನು ನೀಡುತ್ತಲಿದ್ದೇವೆ.


ಆಮಂತ್ರಣ ನಮ್ಮದು .... ಬರುವಿಕೆ ನಿಮ್ಮದು...ನಿಮ್ಮ ನಿರೀಕ್ಷೆಯಲ್ಲಿ ಕಾಯುವುದು ನಮ್ಮೆಲ್ಲರದು.... ಎಲ್ಲರೊಟ್ಟುಗೂಡಿ ಕನ್ನಡದದೀಪ ಬೆಳಗಿಸಿ ಉಳಿಸುವುದು ಕನ್ನಡಿಗರೆಲ್ಲರದು...

ಕಡಲ ಕಿನಾರೆಯಾದ
ಮರಳುಗಾಡ ಸಿರಿಯಲಿ
ಭಾರತಾಂಬೆಯ ಕುವರಿ
ದಿವ್ಯನಗೆಯ ಕನ್ನಡಾಂಬೆ
ವಿಜೃಂಭಿಸಲಿರುವಳು......
ನಿಮ್ಮೆಲ್ಲರ ಜಯಕಾರವಿರಲಿ
ಈ ಭುವನೇಶ್ವರಿ ತಾಯಿಗೆ........

ಶುಭದಿನ.
ವಂದನೆಗಳೊಂದಿಗೆ
ಕುವೈಟಿನ ಬ್ಲಾಗಿಗರಾದ
ಮೃದುಮನಸು,
ಸವಿಗನಸು, ಮತ್ತು
ಜಲನಯನ....

Thursday, November 5, 2009

ಮೊದಲು

ಮಾತನಾಡುವ ಮೊದಲು ಆಲಿಸಿಕೊ
ಕೇಳಿದ ಮಾತು ಮನದಾಳದಲಿರಲಿ
ಮನದಮಾತು ಮುತ್ತ ಪೋಣಿಸಿದಂತಿರಲಿ
ಪೋಣಿಸಿದ ಸರಮಾಲೆ ಮುತ್ತಿನಹಾರದಂತಿರಲಿ!!

ಬರೆಯುವ ಮೊದಲು ಯೋಚಿಸು
ಯೋಚಿಸಿದ ಸಾಲು ಮಿದುಳಲ್ಲಿರಿಸಿ
ಲೇಖನಿ ಜೊತೆಗೆ ಅಕ್ಷರಸಾಲು ಮೂಡಿಸು
ಬರೆದ ಸಾಲುಗಳು ಎಲ್ಲರ ಮನದಲುಳಿಸು!!

ಖರ್ಚು ಮಾಡುವ ಮೊದಲು ಸಂಪಾದಿಸು
ಸಂಪಾದಿಸುವುದ ಕಲಿಯಲು ಶ್ರಮವಹಿಸು
ಶ್ರಮದ ಸಂಪಾದನೆಯ ಇತಿಮಿತಿಯೂಂದಿಗೆ
ಶ್ರಮದ ಫಲ ಜೀವನಪೂರ್ತಿ ಅನುಭವಿಸು!!

ಟೀಕಿಸುವ ಮೊದಲು ತಾಳ್ಮೆಯಿರಲಿ
ತಾಳ್ಮೆ ನಮ್ಮ ಜೀವನಕೆ ಸಹಾನುಭೂತಿ
ಟೀಕಿಸುವುದು ನಮ್ಮ ತರ್ಕಕ್ಕೆ ನಿಲುಕದ್ದು
ನಿಲುಕದ ಜೀವಕ್ಕೆ ಟೀಕಿಸುವುದ ದೂಡಿಬಿಡು!!

ತೊರೆಯುವ ಮೊದಲು ಪ್ರಯತ್ನಿಸು
ಇರುವುದ ತೂರೆಯುವುದು ಸುಲಭವಲ್ಲ
ತೊರೆದರೆ ಮತ್ತೆ ಪಡೆವುದು ಆಶಾಗೋಪುರ
ಎಲ್ಲದರ ಅರಿವು ನಮ್ಮಲಿದ್ದೊಡೆ ಒಳಿತು!!

Saturday, October 24, 2009

ಪ್ರೀತಿಯ ಸ್ನೇಹಿತೆಗೊಂದು ಪತ್ರ ಬೇಗ ತಲುಪಿಸಿಬಿಡಿ ಅವಳ ಹತ್ರ....

ಪ್ರೀತಿಯ ಮನಸು....
ಅಂದಿನಿಂದ ಇಂದಿನವರೆಗೆ ನನಗೆ "ಅತಿ ಆತ್ಮೀಯ" ಸ್ನೇಹಿತರು ಎಂದು ಯಾರು ಇರಲ್ಲಿಲ ಸ್ನೇಹಿತರೆಲ್ಲ ಇದ್ದರೋ ಯಾರು ನನ್ನ ಹೃದಯಕ್ಕೆ ಹತ್ತಿರವಾದವರಲ್ಲ ಏಕೋ ಕಾಣೆ ನಾನು ಸ್ನೇಹ ಗುರುತಿಸುವುದರಲ್ಲಿ ಅಥವಾ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇನೆನಿಸುತ್ತೆ ಆದರೆ ನೀ ಸಿಕ್ಕ ಮೇಲೆ ಆ ಭಾವನೆಯೆಲ್ಲಾ ಮಾಯವಾಗಿದೆ.

ಮನಸು ನನ್ನ ಅತಿ ಆತ್ಮೀಯ ಸ್ನೇಹಿ ನಿನ್ನೊಟ್ಟಿಗಿನ ಸ್ನೇಹ ಎಂದೊ ಬೇಸರ ಮೂಡಿಸಿಲ್ಲ, ಮನಸು ನೀನು ಮಿತ ಭಾಷಿ, ಮೌನ ಗೌರಿ, ಹಸಿರ ಕಾನನವೆಂದರೆ ನಿನಗೇನೋ ಪ್ರೀತಿ ಅಲ್ಲಲ್ಲ ಮೋಹ... ಕಷ್ಟ ಜೀವಿಗೆ ಸಹಾಯ ಹಸ್ತ ಎಂದೆಂದು ನಿನ್ನದಿರುತ್ತೆ, ಇಂತ ಸ್ನೇಹಿ ನನ್ನೊಟ್ಟಿಗುರುವುದು ಖುಷಿ ಅಲ್ಲದೆ ಮತ್ತೇನು... ಮನಸು ನೀ ಹೇಳುತ್ತಿದ್ದೆ ನೀ ನನ್ನ ಮಾತು ನೀ ಯಾವಾಗಲೂ ಮಾತಾಡು ನಿನ್ನ ಮೌನ ನನಗೆ ಬೇಡ ಮಾತಾಡುತ್ತಿದ್ದರೆ ಚೆನ್ನ.. ದಿನವೆಲ್ಲ ಹರಟುತ್ತಲಿದ್ದರು ಯಾವುದೇ ಬೇಸರವಿಲ್ಲದೇ ಮಾತಾಡುತ್ತಿದ್ದೆ... ಒಮ್ಮೆ ಎಲ್ಲೂ ಹೋಗಿದ್ದೆ ನನಗಾಗಿ ಓಡೋಡಿ ಬಂದು ನಿನ್ನೊಟ್ಟಿಗೆ ಮಾತಾಡಲು ಎಲ್ಲ ಕೆಲಸ ಮುಗಿಸಿ ಓಡಿಬಂದೆ ಗೆಳತಿ ಎಂದಾಗ ನನಗಾದ ಆನಂದ ಹೇಳ ತೀರದು. ನೀ ನಿನ್ನೊಳಗಿಲ್ಲದಿದ್ದರೊ ನಿನ್ನ ಮಾತು ಮಿತಿಯಾಗಿದ್ದರೂ ನನಗಾಗಿ ಎಷ್ಟೋ ಸಲ ಮಾತನಾಡಿರುವೇ ಅಲ್ಲವೆ ಗೆಳತಿ.

ನೀ ಮೈದಡವಿ ನಿನ್ನ ಪ್ರೀತಿ ನೀಡಿ ನನಗೆ ಸಲಹೆಯಿತ್ತ ದಿನವೆಲ್ಲ ನನಗೆ ಖುಷಿ, ನೀ ಬಲು ಮೃದು ನೀ ಬೇಗ ನೊಂದು ಬಿಡುತ್ತೀಯ ನಿನ್ನ ಮನಕೆ ನೋಯಿಸದಿರು ನಗು ನಗುತ್ತಲಿರು ನಿನ್ನ ನಗುವಲ್ಲೇನೋ ಆಕರ್ಷಣೆ ಇದೆ ನಗುವೇ ಚೆನ್ನ.. ನಿನ್ನ ಈ ಕಣ್ಣು ಎಲ್ಲರನು ಸೆಳೆಯುತ್ತೆ ನಿನ್ನ ಕಂಡೊಡೆ ಕಣ್ಣು, ನಗು ಎರಡು ಎಲ್ಲರನ್ನು ಸ್ನೇಹಜೀವಿಯಾಗಿಸುತ್ತೆ... ಹೀಗೆ ನಗುತ್ತಲಿರು ಎಂದೆಲ್ಲ ನನ್ನ ಹೊಗಳುತ್ತಿದ್ದೆ.... ಜೊತೆಗೆ ನಾ ಅಳುಮುಂಜಿ ಎಂದು ನನ್ನ ಅಳುವನ್ನು ಕಡಿಮೆ ಮಾಡಲು ಹೇಳುತ್ತಿದ್ದೆ ಅಲ್ಲವೇ ಮನಸು....
ನೀ ಎಲ್ಲ ವಿಷಯವನ್ನು ನನೂಟ್ಟಿಗೆ ಹೇಳುತ್ತಿದ್ದೆ ನಾನು ನಿನ್ನೂಟ್ಟಿಗೆ ಎಲ್ಲ ವಿಷಯವನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದೆ.... ನನ್ನ ಸ್ನೇಹಕ್ಕೆ ನೀ ಸೋತಿದ್ದೋ ಎನೋ ಅಂದು ನಿನ್ನ ಕಣ್ಣಾಣೆ ನಿನ್ನ ನಾ ಪ್ರೀತಿಸುವೆ ಸ್ನೇಹಿಯಾಗಿ ಎಂದೇಳಿದ್ದೆ ಇದೆಲ್ಲ ನಿಜವೇ ಎಂದು ನನ್ನ ಕಾಡುತ್ತಿದೆ. ನೀ ನನ್ನ ಪ್ರಾಣ ಸ್ನೇಹಿತೆ, ನೀ ನನ್ನ ಅರಿವು, "ಅರಿವೇ ಗುರು" ಎಂದು ದೊಡ್ಡವರು ಹೇಳಿದ್ದಾರೆ ಅಲ್ಲವೇ ಅಂತೆಯೇ ನೀನು ನನ್ನ ಗುರು ನಿನ್ನ ನಡೆ ನುಡಿ ಎಲ್ಲವೊ ನನಗೆ ಮಾದರಿ...

ಇಷ್ಟು ಕಾಲ ಸ್ನೇಹಿಯಾಗಿದ್ದ ನೀನು ಏಕೆ ಈಗ ನನ್ನೊಡನೆ ಮಾತನಾಡದೆ ಮರೆಯಾಗಿ ಕುಳಿತಿರುವೆ ಮೋಡದ ಮರೆಯ ಚಂದ್ರನಂತೆ ಬೆಳದಿಂಗಳ ಚೆಲ್ಲದೆ ಮುಸುಕು ಮಬ್ಬಿನಲಿ ನನ್ನ ತಳ್ಳಿರುವೆ.. ಮೌನ ದೂಡಿ ಮಂಜು ಮುಸುಕಿದ ಹಾದಿಯಿಂದ ಹೊರಗೊಮ್ಮೆ ಬಾ ಆ ನಿನ್ನ ಮೃದು ಸ್ನೇಹಿತೆ ಬಳಲಿ ಬೆಂಡಾಗಿದ್ದಾಳೆ ಮುದ ನೀಡೋ ಮನಸಿಗೆ ಏಕೀ ಮುಸುಕು ಸ್ನೇಹಿತೆ ನೀ ಬಂದು ಮೃದು ಸ್ನೇಹಿಯನೊಮ್ಮೆ ನಲುಗದಂತೆ ನಲಿವಿನೆಡೆಗೆ ತೆಗೆದುಕೊಂಡೋಗು.

ಇಂತಿ ನಿನ್ನ ಸ್ನೇಹಿತೆ..
ಮೃದು...

Tuesday, October 6, 2009

ಮಳೆರಾಯ

ಬೆಳ್ಳಿ ಮೋಡದಲಿ ಮಳೆರಾಯ ಅಡಗಿರಲು
ಭುವಿಗಿಳಿದು ಬಾ ಎಂದು ಕರೆಯಲು
ಜನ್ಸ್ತೋಮ ಸಲ್ಲಿಸಿದವಂದು ಹೋಮ ಹವನಗಳು

ಒಂದಷ್ಟು ದಿನ ಕೆಂಡಾಮಂಡಲವಾದ ಭುವಿಗೆ
ಎಲ್ಲೆಲ್ಲೊ ಕಾಡಿತ್ತು ಹಸಿರ ಸಿರಿಗೆ ಬಂಜರು ನೆರಿಗೆ

ಮೋಹಕೋ ಮುನಿಸಿಗೋ ಮಳೆರಾಯ
ಇಳೆಯಿಂದ ಧರೆಗಿಳಿದು ಸುರಿಸಿದ್ದಾನೆ ಮಳೆಯ
ಭೀಕರ ಮಳೆಯಲಿ ಕಳೆದುಕೊಂಡಿವೆ ಜೀವರಾಶಿ ತಮ್ಮ ನೆಲೆಯ!!!!

ಭುಗಿಲೆದ್ದ ಆಹಾಕಾರಕೆ ನೀನೆ ಹೊಣೆ
ಮುಗ್ಧ ಜನತೆಗೇಕೆ ಹಿಂಸಿಸುವೆ ನಾ ಕಾಣೆ
ದಯೆನೀಡಿ ನಿನ್ನ ಪ್ರಲಾಪದಲಿರಲಿ ಕರುಣೆ!!!

ಆಗಸದೆಡೆ ಕುಳಿತು ನೋಡುತಿರುವೆಯಲ್ಲ
ಬಲಿಯಾದ ಹಸುಗೂಸುಗಳು ಕಾಣುತಿವೆಯಲ್ಲ
ಒಮ್ಮೆಲೆ ಧಗಧಗಿಸುವ ಆಕ್ರಂದವನು ಒತ್ತಿಸಿಬಿಟ್ಟೆಯಲ್ಲ

ವರುಣನ ಆರ್ಭಟಕೆ ನಲುಗುತಿಹುದು ಬಡಪಾಯಿ ಜೀವ
ಇತ್ತ ಸಮಯ ಸಾಧಿಸೋ ರಾಜಕೀಯರ ಮನೋಭಾವ
ಇದೆಲ್ಲದರಲಿ ಬಡಜೀವಿಯ ದಿನದ ಕೂಳಿಗೂ ಬಂದೊದಗಿದೆ ಅಭಾವ ...!!!

ಕಾಣದ ದೈವವೆ ಭುವಿಗಿಳಿದು ಬಾ ಒಮ್ಮೆ
ನಲುಗುತಿರುವವರ ಕೈಹಿಡಿದು ದಾರಿ ತೋರೊಮ್ಮೆ.....ಓ ದೈವವೆ ದಾರಿ ನೀಡೋಮ್ಮೆ!!!

Monday, September 28, 2009

ಬೆಳ್ಳಂಬೆಳಗಿನ ಕನಸು


ಎಲ್ಲ ನಿದ್ರಿಸುವಾಗ ನಾ ಎಚ್ಚೆತ್ತಂತ್ತಾಯ್ತು
ಬೆಳಗಿನಜಾವದ ಮಸುಕು ಮೊಗ್ಗಿನಲಿ
ಮನದಲ್ಲೆಲ್ಲೋ ಹೂ ಅರಳಿದಂತಾಯ್ತು
ತುಟಿಯ ಮೇಲೆ ಮುಗುಳುನಗೆ ಬೀರುತಿತ್ತು ....

ಹಕ್ಕಿಯ ಚಿಲಿಪಿಲಿ ಗಾನ ಕೇಳಲಿಲ್ಲ
ದನಕರುಗಳು ಅಂಬಾ ಎನುವ ಧನಿಯು ಮೂಡಲಿಲ್ಲ
ಮೈಮರೆತಂತೆ ಭಾಸವಾಗಿತ್ತಿಂದ್ದು
ಮುಂಜಾವಿನ ಕನಸಿನಲಿ ನಿನ್ನದೇ ಚಿತ್ರ ಮೂಡಿತ್ತು ...

ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ಜೊತೆಗೂಡಿ ಸಾಗಲು
ಬೆಳದಿಂಗಳ ಚೆಂದಿರನು ಕಿರುನಗೆಯ ಬೀರಿದಂತಾಯ್ತು
ಸಾಲು ಸಾಲು ಮರಗಳು ತಂಗಾಳಿ ಬೀಸಲು
ನಿನ್ನ ಅಪ್ಪುಗೆಯಡೇ ಬರಸೆಳೆದಂತಾಯ್ತು .....

ಒಲವೆಂಬ ಹಣತೆ ನೀಡಿದೆಯೆನಗೆ
ಸವಿಭಾವ ಪ್ರೀತಿ ಬರಲು ನನ್ನೆಡೆಗೆ
ನಾ ಸೋತು ನಿನಗೆ ಸೆರೆಯಾದ ಭಾವ
ಮೂಡಿತಿಂದು ಬೆಳ್ಳಂಬೆಳಗಿನ ಜಾವ .....

ಮುಂಜಾವ ಸವಿಗನಸು ನಿಜವೆಂದು ತಿಳಿದು
ಕಣ್ಣ್ಬಿಟ್ಟು ನಗಲು ಒಲವುಕ್ಕಿ ಹರಿಯಲು
ಮಂಜು ಮುಸುಕಿನಲಿ ನೀ ಬಂದು ಸೇರಲು
ಕನಸುನನಸಾದಂತೆ ಆಗಸಕೆ ಎರಡೇ ಮೆಟ್ಟಿಲೇರಿ ನಿಂತೆ ...

ಮುಂಜಾವಿನ ಕನಸಿನೊಂದಿಗೆ ಎಲ್ಲರಿಗು ದಸರಾ ಹಬ್ಬದ ಶುಭಾಶಯಗಳು..
ಒಲವೆಂಬ ಹಣತೆ, ಸಹೃದಯತೆಯೆಂಬ ನಂದಾದೀಪ ನಿಮ್ಮನೆಯೂಳಗೆ ಹಾಗು ನಿಮ್ಮೊಳಗೆ ಸದಾ ಬೆಳಗಲಿ.
ವಂದನೆಗಳು
ಶುಭದಿನ

Sunday, September 20, 2009

ಆಗಿದ್ದೇಲ್ಲಾ ಒಳ್ಳೆಯದಕ್ಕ...?


ಆರ್ಟ್ ಆಫ್ ಲೀವಿಂಗ್ ಕ್ಲಾಸ್ ಮೂಲಕ ನಾವೆಲ್ಲ ಸುಮಾರು ೬೦ಜನ ಕನಕಪುರ ಆಶ್ರಮಕ್ಕೆ ಹೋಗಿದ್ದೆವು,ನನ್ನ ಜೊತೆ ನನ್ನ ಅಪ್ಪ ಅಮ್ಮ ಕೂಡ ಆಶ್ರಮ ವೀಕ್ಷಣೆಗೆಂದು ಬಂದಿದ್ದರು.
ಎಲ್ಲರು ನಮ್ಮ ಸ್ನೇಹಿತರು ಹಾಗು ಗುರುಗಳೊಂದಿಗೆ ಆಶ್ರಮವೆಲ್ಲ ಸುತ್ತಾಡಿ ಬರುವಷ್ಟರಲ್ಲಿ ಊಟದ ಸಮಯವಾಗಿತ್ತು ಗುರುಗಳು ಒಮ್ಮೆ ಊಟ ಮುಗಿಸಿ ಬೇರೆಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿ ಎಲ್ಲರೂ ಊಟಕ್ಕೆ ತೆರಳಿದೆವು.

ಚಪ್ಪಲಿಗೂಡಿನಲ್ಲಿ ಚಪ್ಪಲಿ ಬಿಡುವಾಗ ಸುತ್ತಮುತ್ತ ನೋಡಿದೆ ಅಲ್ಲೇ ನನಗೇನೋ ಅನುಮಾನ ಇಷ್ಟು ಚೆನ್ನಾಗಿದೆ ನನ್ನ ಚೆಪ್ಪಲಿ ಏನಾದ್ರು ಆದರೆ ಎಂಬ ಅನುಮಾನದಲ್ಲೇ ಊಟಕ್ಕೆ ಒಳ ನಡೆದೆ ಅಲ್ಲಿನ ಭರ್ಜರಿ ಊಟ ನನ್ನ ಚಪ್ಪಲಿ ಮೇಲಿದ್ದ ಕಾಳಜಿಯನ್ನೆಲ್ಲ ಮರೆಸಿತ್ತು... ಊಟ ಮುಗಿಸಿ ಬಂದೊಡೆ ನಾ ಬಿಟ್ಟಿದ್ದ ಚಪ್ಪಲಿ ಅಲ್ಲಿ ಕಾಣುತ್ತಿಲ್ಲ, ಆಗ ನಾ ತಿಂದ ಊಟವೆಲ್ಲ ಕರಗಿದಹಾಗಾಯಿತು... ಸುತ್ತಮುತ್ತ ಸುಮಾರು ೧೦ ಭಾರಿ ಸುತ್ತಾಡಿದೆ ಸುಸ್ತಾದೆ ಎಲ್ಲೂ ಕಾಣಲಿಲ್ಲ ನನ್ನ ಜೊತೆ ಇದ್ದ ಗುರುಗಳು, ಸ್ನೇಹಿತರು ಎಲ್ಲರೂ ಒಂದೆ ಮಾತು ಒಳ್ಳೆಯದು ಅದು ಆಶ್ರಮದಲ್ಲಿ ಚಪ್ಪಲಿ ಕಳೆದರೆ ಎಂದು ಇನ್ನು ಕೆಲವರು ನಿನ್ನ ಕರ್ಮವೆಲ್ಲ ಕಳೆಯಿತು ಬಿಡು ಎಂದರು, ಇನ್ನು ಕೆಲವರು ಇಲ್ಲೇ ಯಾರೋ ತೆಗೆದುಕೊಂಡಿರುತ್ತಾರೆ ಈ ಮಕ್ಕಳು ಇದ್ದಾರೆ ನೋಡಿ ಯಾರೋ ತೆಗೆದುಕೊಂಡಿರಬೇಕು ಎಂದೆಲ್ಲ ಮಾತಾಡುತ್ತಲಿದ್ದರು ನನ್ನ ಮನಸಿನಲ್ಲೇ ಅಯ್ಯೋ ಹೋಗಿದ್ದು ಹೋಯ್ತು ಮತ್ತೆ ಬರೋಲ್ಲ ಎಂದು ಸುಮ್ಮನಾದೆ.

ಆಶ್ರಮ್ಮದಲ್ಲೇ ಇದ್ದ ಶಾಪಿಂಗ್ ಮಾಲ್ನಲ್ಲಿ ಒಂದುಜೊತೆ ಚಪ್ಪಲಿ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ತೆರಳುವ ಮುನ್ನ ಚಪ್ಪಲಿ ಬಿಡುವಾಗ ಎಲ್ಲರು ಹೇಳಿದರು ಒಂದು ಚಪ್ಪಲಿ ಇಲ್ಲಿರಲಿ ಇನ್ನೊಂದು ಬೇರೆಡೆ ಇಡು ಎಂದು ಸರಿ ಎಂದೆನಿಸಿ ನಾನು ಹಾಗೆ ಇಟ್ಟು ಪ್ರಾರ್ಥನೆಗೆ ತೆರಳಿದೆ ಮತ್ತೆ ತಿರುಗಿ ಬರುವಾಗ ಮತ್ತದೇ ಕಥೆ ಕಾದಿತ್ತು ಯಾರೋ ಆ ಹೊಸ ಚಪ್ಪಲಿಯನ್ನು ತೊಟ್ಟು ಹೋಗಿದ್ದರು... ಇದು ಎಂಥಹ ಕರ್ಮವಪ್ಪ ಎಂದೆನಿಸಿತು ಆದರು ನಗುನಗುತ್ತಲೇ ಸ್ವೀಕರಿಸಿದೆ. ಸರಿ ಮತ್ತೊಮ್ಮೆ ಎಲ್ಲರಿಂದ ಗುಣಗಾನ ನಡೆಯಿತು ನಾನೇ ಹೇಳಿಬಿಟ್ಟೆ ಕೊನೆಗೆ ನೀವೆಲ್ಲ ನನ್ನ ಮರಿಬಾರದು ನೆನಪಿನಲ್ಲಿಟ್ಟು ಕೊಳ್ಳಲೆಂದು ನನ್ನ ಚಪ್ಪಲಿ ಕಳುವಾಗಿದೆ ನೀವಾರು ಮರೆಯದಿರಿ ಎಂದೇಳಿದ ಕೂಡಲೇ ಒಮ್ಮೆಲೇ ಎಲ್ಲರು ನಕ್ಕುಬಿಟ್ಟರು.

ಇಷ್ಟೆಲ್ಲಾ ಮುಗಿದನಂತರ ಮನೆಗೆ ಬರಿಗಾಲಲ್ಲೇ ಹೊರಟೆ ಎಲ್ಲರು ಬಸ್ ನಲ್ಲಿ ವಿಜಯನಗರದವರೆಗೂ ಬಂದೆವು ಅಲ್ಲಿ ಎಲ್ಲರು ಇಳಿಯುತ್ತಲೇ ಗುರುಗಳು ನನ್ನ ಕರೆದು ಚಿಂತಿಸಬೇಡ ನೀನು ಸಿಂಡ್ರೆಲ ತರ ನಿನಗಾಗಿ ಯಾರೋ ಗಾಜಿನ ಚಪ್ಪಲಿ ಹೊತ್ತು ತಂದಂತೆ ನಿನಗೊ ತರುತ್ತಾರೆ ಎಂದರು ಜೊತೆಗೆ ಎಲ್ಲಾ ಒಳ್ಳೆಯದಾಗುತ್ತೆ ಎಂದು ಆಶಿರ್ವಾದವಿಟ್ಟರು ಮತ್ತೊಮ್ಮೆ ತಿರುಗಿ ಹೇಳಿದರು ನಾ ನಿನ್ನ ಮರೆಯುವುದಿಲ್ಲ ಎಂದರು...

ಬರಿಗಾಲಲ್ಲೇ ಸ್ವಲ್ಪ ದೂರ ನೆಡೆದು ಆಟೋ ಹಿಡಿದು ಮನೆಗೆ ಹತ್ತಿರ ಇಳಿದೆವು, ಅಲ್ಲೇ ಇದ್ದ ಬಾಟ ಅಂಗಡಿಗೆ ನನ್ನ ಅಪ್ಪಾಜಿ ಕರೆದುಕೊಂಡು ಹೋಗಿ ಚಪ್ಪಲಿ ಕೊಡಿಸಿದರು ಇಸ್ಟೆಲ್ಲಾ ಆಗಿದ್ದು ಒಳ್ಳೆಯದೇ ಸರಿ ಎನಿಸಿತು ಏಕೆ ಗೊತ್ತೆ ಮೊದಲ ಭಾರಿ ನನ್ನ ಅಪ್ಪ ನನಗೆ ಚಪ್ಪಲಿ ಕೊಡಿಸಲು ಅತಿ ಕಾಳಜಿವಹಿಸಿ ನೀನು ಇದೆ ತರಹದ ಚಪ್ಪಲಿತೆಗೆದುಕೋ ಎಂದು ಅವರೇ ಹಾಯ್ಕೆ ಮಾಡಿ ಚಪ್ಪಲಿ ಕೊಡಿಸಿದರು... ನನಗೇ ಆದ ಆನಂದ ಹೇಳತೀರದು ಎರಡು ಜೊತೆ ಚಪ್ಪಲಿ ಕಳೆದುಕೊಂಡೆಡೆಗೆ ಗಮನ ಇರಲೇ ಇಲ್ಲ. ಇನ್ನು ಮನೆಗೆ ತೆರೆಳಿದರೆ ನೆಡೆದ ಕಥೆ ಹೇಳುತ್ತಲಿದ್ದಂತೆ ನನ್ನ ಅಣ್ಣ ಅಕ್ಕ ಎಲ್ಲರೂ ನೀನು ಅದೃಷ್ಟವಂತೆ ಬಿಡು, ಅದು ಅಪ್ಪ ಬಂದು ನಿನಗೆ ಚಪ್ಪಲಿ ಕೊಡಿಸಿದ್ದಾರೆ ಎಂದು....!!! ನಿಜ ನಾನು ಅದೃಷ್ಟವಂತೆಯೇ ಸರಿ... ಅಪ್ಪ ಎಂದೂ ಅವರಾಗಿ ಬಂದು ಈ ರೀತಿ ಕೊಡಿಸಿರಲಿಲ್ಲ ನನ್ನ ಜೀವನದಲ್ಲೇ ಮೂದಲಬಾರಿ .... ಇದು ನನಗೆ ಸಂತಸದ ಕ್ಷಣ....

ಆಗುವುದೆಲ್ಲ ಒಳ್ಳೆಯದಕ್ಕೆ, ಅಗ್ಗಿದ್ದು,ಆಗುತ್ತಲಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂದು ನನ್ನ ಮನಸಿಗೆ ಅರಿವಾಯಿತು...ನೀವೆಲ್ಲ ಏನೇಳುತ್ತೀರಿ ಆಗಿದ್ದೇಲ್ಲ ಒಳ್ಳೆಯದಕ್ಕ.....?
ವಂದನೆಗಳು

Sunday, September 13, 2009

ಸಮಾಗಮ

ನೀ ಬರುವುದು ಶುಕ್ರವಾರ ಸಂಜೆ ಆದರೆ ನನಗೆ ಗುರುವಾರ ರಾತ್ರಿಯೆಲ್ಲ ನಿದ್ರೆ ಬರಲೇ ಇಲ್ಲ ಬೆಳಗಾಗುವುದನ್ನೇ ಕಾಯುತ್ತಲಿದ್ದೆ... ಮಧ್ಯೆ ಊರಿಗೆ ಮೆಸೇಜ್ ಮಾಡುವುದು, ಕರೆ ಮಾಡುವುದು ಇದೆ ಕಥೆ ಸಾಗಿತ್ತು ರಾತ್ರಿಯೆಲ್ಲ, ಇನ್ನೇನು ಬೆಳಗಾಯಿತು ಇಂದು ನೀ ಬರುವೆ ಎಂದು ನಿನಗೆ ಇಷ್ಟವಾದ ಊಟ ತಯಾರು ಮಾಡುವ ತಾರತುರಿ ಜೊತೆಗೆ ಮದ್ಯೆ ಮದ್ಯೆ ದೇವರ ಕೋಣೆಗೆ ಹೋಗಿ ದೇವರೆ ನನ್ನ ಕಂದ ಈಗ ವಿಮಾನದಲ್ಲಿದ್ದಾನೆ ಅವನು ತಿನ್ನಲು ಎಲ್ಲದರ ವ್ಯವಸ್ಥೆ ಸರಿ ಆಗಲಿ, ಮತ್ತೊಮ್ಮೆ ಈಗ ದುಬೈನಲ್ಲಿ ಇದ್ದಾನೆ ಅವನು ಹೇಗಿದ್ದಾನೊ ನೀನೇ ಅವನ ಹಾರೈಕೆ ಮಾಡು ದೇವರೇ ಎಂದು ಬೇಡುತ್ತಲಿದ್ದೆ. ಸಂಜೆ ಇನ್ನು ಆಗಿರಲಿಲ್ಲ ಊರಿಂದ ಆಗಲೇ ಕರೆಗಳು ಬರುತ್ತಲಿದ್ದವು ಎಲ್ಲರಿಗು ಉತ್ತರ ಹೇಳುವುದೇ ಆಗಿತ್ತು...

ವಿಮಾನವು ೪.೪೫ ಕ್ಕಾಗಲೇ ಬಂದು ಇಳಿದಿತ್ತು ನಾವು ಪ್ರಯಾಣಿಕರು ಹೊರ ಬರುವ ಬಾಗಿಲಿನತ್ತಲೇ ಇಣುಕಿ ಇಣುಕಿ ನೋಡುತ್ತಲಿದ್ದೆವು... ನೋಡ ನೋಡುತ್ತಿದ್ದಂತೆ ೫.೨೦ ಸಮಯ ದಾಟಿತ್ತು ಜೊತೆಗೆ ನನ್ನ ಸಂಯಮವೂ ದಾಟಿತ್ತು... ಇತ್ತ ನನ್ನ ಪತಿರಾಯರು ಮದ್ಯೆ ಮದ್ಯೆ ತಮಾಷೆಯ ಚಟಾಕಿ ಹಾರಿಸುತ್ತಿದ್ದರು ನನ್ನ ಹುಸಿಕೋಪ ಅವರೆಡೆಗೆ ಹಾರಿತ್ತು... ಸದ್ಯ ಮೊದಲು ಮಗ ಬಂದರೆ ಸಾಕು ಅಂದರೆ ನಿಮಗೆ ತಮಾಷೆನ ಸುಮ್ಮನಿರೋಕೆ ಏನು ಕೊಡಬೇಕು ಎಂದು ಮೆಲ್ಲನೆ ಗದರಿ ನಾ ಮತ್ತದೆ ಬಾಗಿಲಿನೆಡೆ ಕಣ್ಣು ಹಾಯಿಸಿದೆ... ಇನ್ನು ಬರಲಿಲ್ಲವಲ್ಲ ಎಷ್ಟೊತ್ತುಬೇಕು ಹೊರಬರಲು ಬೇಗ ಬರಲಿ ಎಂದು ನೂರೆಂಟು ಸಾರಿ ಬಡಬಡಿಸಿದೆ. ಅತ್ತೊಮ್ಮೆ ಇತ್ತೊಮ್ಮೆ ತಿರುಗಾಡುತ್ತಲಿದ್ದೆ ಮನೆಯವರು ಬಂದ ಬಾ ಎಂದು ಕರೆದೊಡೆ ಅತ್ತಕಡೆ ಓಡಿದೆ...
ಆ ಪುಟ್ಟ ಕಣ್ಣುಗಳು ಅತ್ತಲಿತ್ತ ಸುತ್ತುಗಟ್ಟಿ ನೋಡುತ್ತಲಿತ್ತು ಎಲ್ಲಿರುವರು ನಮ್ಮ ಅಪ್ಪ ಅಮ್ಮ ಎಂದು ಕಣ್ಣು ಹುಡುಕುತ್ತಿತ್ತು ಮುಖದಲ್ಲಿ ಮೌನಮನೆಮಾಡಿತ್ತು... ಎರ್ ಲೈನ್ಸ್ ಕಚೇರಿಯವರು ಕರೆತರುವಾಗ ನಿಮ್ಮವರು ಬಂದಿದ್ದಾರೇ ಎಂದು ಕೇಳುವ ಹಾಗಿತ್ತು ಈ ಪುಟ್ಟ ಕಂದ ಸುತ್ತಮುತ್ತ ನೋಡಿ ಕಾಣುತ್ತಲಿಲ್ಲ ಎನ್ನುವಾಗೆ ಭಾಸವಾಯಿತು... ಒಮ್ಮೆ ನಮ್ಮಿಬ್ಬರ ಮುಖಕಂಡ ಕೂಡಲೇ ಮಂದಹಾಸ ಮೂಡಿತ್ತು.... ಮಗನನ್ನು ನಮಗೆ ಒಪ್ಪಿಸಿದರು ಹಾಗೆ ನಮ್ಮ ಸಹಿ ಕೂಡ ತೆಗೆದುಕೊಂಡರು ನಾವು ಅವರಿಗೆ ಧನ್ಯವಾದ ತಿಳಿಸಿ ಹೊರಟೆವು.....

ದಾರಿಯಲ್ಲಿ ಬರುತ್ತಿದ್ದಂತೆ ಕಂದ ನಿನಗೆ ತೊಂದರೆ ಆಯ್ತ... ಭಯ ಆಯ್ತ ಎಂದು ಕೇಳಿದರೆ ಏನು ಇಲ್ಲ ಏನು ತೊಂದರೆನೂ ಆಗಲಿಲ್ಲ, ನಾನು ...ಬೆಂಗಳೂರಿನಲ್ಲಿ ವಿಮಾನ ಹತ್ತಿದ ಕೂಡಲೇ ಗಜನಿ ಹಿಂದಿ ಚಲನಚಿತ್ರ ಬರುತ್ತಿತ್ತು ನೋಡಿ ಮುಗಿಸುವಸ್ಟರಲ್ಲಿ ದುಬೈ ಬಂತು, ಇನ್ನು ದುಬೈನಲ್ಲಿದ್ದಾಗ ವಿಡಿಯೋ ಗೇಮ್ಸ್ ಆಟವಾಡುತ್ತಲಿದ್ದೆ... ಮತ್ತೆ ದುಬೈನಲ್ಲಿ ವಿಮಾನ ಹತ್ತಿದಾಗ ಎಫ್ ಎಂ ಕೇಳುತ್ತಲಿದ್ದೇ ಬೇಗ ಕುವೈಟ್ ಬಂತು ನನಗೇನು ಬೇಜಾರಾಗಲೇ ಇಲ್ಲ.... ಕಂದ ನಾ ಬಹಳ ಭಯ ಪಟ್ಟಿದ್ದೇ ಎಂದಾಗ ನಗು ಅವನಿಗೆ ನಗುತ್ತ ಹೇಳಿದ ತಾತ ಕೂಡ ಹಾಗೆ ರಾತ್ರಿ ಎಲ್ಲ ಅಳುತ್ತ ಕೂತಿತ್ತು ಎಂದು ಜೋರು ನಗು ಪ್ರಾರಂಭಿಸಿದ ಹ ಹ ಹ ಅಹ.. ಇಷ್ಟು ಮಾತಾಡುತ್ತಲಿದ್ದ ಹಾಗೆ ಮನೆ ತಲುಪಿದೆವು..ಅಪ್ಪನಿಗೆ ಕಾಣದಂತೆ ಕಂದ ನಾನು ನಿನ್ನ ಜೊತೆ ಇರಲಿಲ್ಲವೆಂದು ಏನಾದರು ಬೇಸರ ಕೋಪ ಬಂದಿತ್ತೆ ಎಂದು ಕೇಳಿದಕ್ಕೆ ಇಲ್ಲಮ್ಮ ಎಂದಾಗ ನನ್ನ ಮನದಲ್ಲೇನೋ ಸಮಾದಾನದ ನಿಟ್ಟುಸಿರು ಬಿಟ್ಟಂತಾಯಿತು..

ಸ್ವಾಗತ ಬೋರ್ಡ್ ಕಂದಮ್ಮನಿಗೆ ..
ಮನೆಗೆ ಬರುತ್ತಲಿದ್ದಂತೆ ಊರೆಗೆ ಕರೆಮಾಡಿ ಎಲ್ಲರಿಗು ಹೇಳಿ ನಾ ಬಂದು ತಲುಪಿದೆ ಆರಾಮಾಗಿ ಏನು ತೊಂದರೆ ಇಲ್ಲವೆಂದು ಹೇಳಿ ಎಂದು ಎಲ್ಲರೊಟ್ಟಿಗೆ ಮಾತಾಡಿ ಖುಷಿ ಪಟ್ಟನು.... ನಾವು ಅವನ ಕಂಡು ಖುಷಿ ಪಟ್ಟೆವು ಜೊತೆಗೆ ಊರಿಂದ ಬಂದಿದ್ದ ಸಿಹಿಹೋಳಿಗೆ ಕಹಿ ಎಲ್ಲವನ್ನು ಮರೆಸಿತು.

ನನ್ನ ಕಂದಮ್ಮನ ಸುಖ ಪ್ರಯಾಣಕ್ಕೆ ಸಹಕರಿಸಿದ ನನ್ನ ಮನೆ ಮಂದಿ, ವಿಮಾನದಲ್ಲಿ ನನ್ನ ಕಂದ ಊಟ ಮಾಡಲು ಸಹಕರಿಸಿದ ಪಕ್ಕದಲ್ಲೇ ಕುಳಿತಿದ್ದ ಮಹಿಳೆ, ಗಗನ ಸಖಿಯರು, ವಿಮಾನ ಕಚೇರಿಯಾ ನಿರ್ವಾಹಕರು, ಕಾಣದೆ ಸಹರಿಸಿದ ಹಲವು ಕೈಗಳಿಗೂ ಹಾಗು ನಮ್ಮನ್ನು ಸಾಂತ್ವಾನಿಸಿದ ಸ್ನೇಹ ವೃಂದಕ್ಕೆ ನಮ್ಮ ನಮ್ರ ನಮನಗಳು..

ನಿಮ್ಮ,
ಮೃದು ಮನಸು
ಸವಿಗನಸು
ಇವರಿಬ್ಬರ ಜೊತೆಗೆ ನನ್ನ ಕಂದಮ್ಮ ...

Wednesday, September 9, 2009

ಶುಭಪ್ರಯಾಣ

ಪ್ರಿಯ ಬ್ಲಾಗ್ ಸ್ನೇಹಿತರೇ... ನಿಮ್ಮೆಲ್ಲರ ಶುಭಾಶಿರ್ವಾದದಿಂದ ನಮ್ಮ ಮಗ ಇಂದು ಸಂಜೆ ಯಾವುದೇ ತೊಂದರೆ ಇಲ್ಲದೆ ಕುವೈಟ್ ಬಂದು ತಲುಪಿದ!!!!!!

ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ಸದಾ ನಮ್ಮಮೇಲಿರಲಿ

ಬೇಸಿಗೆ ರಜೆ ಎಂದು ನಿನಗೋ ಮೂರು ತಿಂಗಳ ರಜೆ, ಈ ಬೇಸಿಗೆಯ ಬಿಸಿಯಲಿ ನೀ ಏನು ಮಾಡಲು ಸಾಧ್ಯ ಇರುವಷ್ಟು ರಜೆಯನ್ನು ಊರಿನಲ್ಲಿ ಕಳೆಯಲು ಇಬ್ಬರು ಹೊರಟೆವು, ಆದರೆ ನಾ ನಿನ್ನೊಟ್ಟಿಗೆ ೩ ತಿಂಗಳು ರಜೆ ಕಳೆಯಲಾಗದೆ ಕೆಲಸದ ನಿಮಿತ್ತ ಮರಳಿ ಮರುಭೂಮಿಗೆ ಬರಬೇಕಾಯಿತು... ನೀ ಬರಲು ಸ್ನೇಹಿತರೊಟ್ಟಿಗೆ ಬರುವಾಗೆ ತಯಾರಿ ನಡೆಸಿದ್ದೆವು... ನಿನ್ನ ಬರುವಿಕೆಗೆ ಯಾವ ಕೊರತೆಬರದಂತೆ ಎಲ್ಲ ವ್ಯವಸ್ಥೆಯೂ ನೆಡೆದಿತ್ತು...

ಇನ್ನೇನೂ ನನ್ನ ಕಂದಮ್ಮ ತಾಯ ಮಡಿಲ ಸೇರುವ ದಿನ ಬಹಳ ಹತ್ತಿರವಿತ್ತೆನ್ನುವಾಗಲೇ ಕಾರಣಾಂತರದಿಂದ ಸ್ನೇಹಿತರ ಜೊತೆಗೂಡಿ ಬರಲಾಗದೆ ಪ್ರಯಾಣ ರದ್ದಾಯಿತು ಮತ್ತೆ ನಿನ್ನ ಕರೆತರುವುದೆಂತು ಚಿನ್ನ ನನ್ನ ಮುದ್ದು ನೀ ಒಬ್ಬೊಂಟಿಯಾದೆಯಲ್ಲಾ ನಿನ್ನ ಕರೆತರಲು ನಾವೇ ಬರೋಣವೆಂದರೆ ಕೆಲಸಗಳ ಒತ್ತಡದೊಂದಿಗೆ ಹಲವಾರು ಇರುಸುಮುರುಸುಗಳು, ನನ್ನ ಮನದಲ್ಲಿ ನೀ ಬರಲಾಗದೆಂದು ತಿಳಿದೊಡೆ ನನಗೇನೋ ದುಗುಡ, ಆಘಾತ, ದುಃಖ ಎಲ್ಲವೂ ಒಮ್ಮೆಲೆ ಹೊಮ್ಮಿ ಬಂತು... ನಿನ್ನನ್ನು ಕರೆತರಲು ನಾವೇ ಹೋಗುವುದೊ ಬೇರೆ ವ್ಯವಸ್ಥೆ ಮಾಡುವುದೋ ಎಂಬ ದ್ವಂದ್ವ ಮನಸಿನಲಿದ್ದಾಗ ಸ್ನೇಹಿತರಿಂದ ತಿಳಿಯಿತು "ಜೊತೆಯಿಲ್ಲದ ಮಗುವಿನ ಪ್ರಯಾಣ(ಅನ್ಅಕಂಪನೀಡ್ ಚೈಲ್ಡ್ ಟ್ರಾವೆಲ್)" ಎಂದು ಪ್ರಯಾಣದ ಚೀಟಿ ಕಾಯ್ದಿರಿಸಿದ್ದರೆ (ಟಿಕೆಟ್ ಬುಕ್) ಯಾವುದೇ ತೊಂದರೆ ಇಲ್ಲದೆ ಕರೆದುಕೊಂಡು ಬರುತ್ತಾರೆಂದಾಗ ಮತ್ತದೇ ದುಃಖ ಚಿನ್ನ... ನಮ್ಮ ನಿಲುವನ್ನು ನಿನ್ನಪ್ಪ ಕರೆಮಾಡಿ ಹೇಳಿದಾಗ ಕಂದ ನೀನು ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡಬೇಕು, ಗಗನಸಖಿಯರು ನಿನಗೆ ಸಹಾಯ ಮಾಡುತ್ತಾರೆಂದಾಗ ನಿಜವಾಗಿಯೂ ನಾ ನಂಬದಂತಷ್ಟು ಮಟ್ಟಕ್ಕೆ ನಿನ್ನ ಉತ್ತರ ಕೇಳಿತು... "ಓಹೋ!! ಅದಕ್ಕೇನು ಬರುತ್ತೇನೆ, ನನಗೇನು ಭಯವಿಲ್ಲ" ಎಂದು ಧೈರ್ಯವಾಗಿ ನಗುವಿನಲ್ಲೇ ಒಪ್ಪಿದ್ದೇ..!! ಈ ಮಾತು ಕೇಳುತ್ತಿದ್ದಂತೆ ನನಗೆ ಒಮ್ಮೆಲೇ ದುಃಖ ತಡೆಯದೆ ಕಣ್ಣೀರ ಧಾರೆ ಹರಿದುಬಿಟ್ಟಿತ್ತು ಇದ ಕಂಡ ನಿನ್ನಪ್ಪ ನನ್ನೊಮ್ಮೆ ಮೆದುವಾಗಿ ರೇಗಿದರು ನಿನ್ನದು ಭಾವಾತಿರೇಕ. ನೀ ವಿದ್ಯಾವಂತೆ, ಬುದ್ದಿವಂತೆ, ಎಲ್ಲ ತಿಳಿದಿದ್ದು ನೀನೇ ಹೀಗೆ ಮಾಡಿದರೆ ಹೇಗೆ? ನಮ್ಮಲ್ಲಿ ವ್ಯವಸ್ಥೆ ಇದೆ ಅದನ್ನ ಉಪಯೋಗಿಸಿಕೊಳ್ಳಲು ಇದು ಒಂದು ಒಳ್ಳೆ ಸಮಯ ಎಂದೆಲ್ಲಾ ಹಲವು ಸಮಜಾಯಿಷಿ ಕೊಟ್ಟರು ಆದರೇನು ಮಾಡುವುದು ಕಂದ? ನಾ ಎಲ್ಲಿ ಏನೇ ಆಗಿರಲಿ, ಎಷ್ಟೆ ಬುದ್ದಿ ಇದ್ದರೇನು ಮಗುವಿನ ಅಮ್ಮನಲ್ಲವೇ? ನನ್ನ ಕರುಳಬಳ್ಳಿ ಇನ್ನು ಪುಟ್ಟದ್ದು ಅದಕ್ಕಿಗಾಗಲೇ ಜವಾಬ್ದಾರಿ ಕೊಟ್ಟುಬಿಟ್ಟಿರುವೇ. ಅಮ್ಮನಿಲ್ಲದಾಗ ಊಟಮಾಡುವುದು....ತಣ್ಣಗಿದ್ದ ಊಟವನ್ನು ಬಿಸಿಮಾಡುವುದು...ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ಅದನ್ನ ಭದ್ರಪಡಿಸಿ ಮನೆಯನ್ನ ಜೋಪಾನಿಸುವುದು ಇವಲ್ಲದೆ ಹತ್ತು ಹಲವು ನಿನ್ನ ಹೆಗಲೇರಿದೆ ನಿನ್ನ ವಯಸ್ಸಿನ ಮಕ್ಕಳನ್ನು ಇನ್ನು ಪುಟ್ಟ ಕಂದಮ್ಮರಂತೆ ನೋಡಿಕೊಳ್ಳುವ ತಾಯಂದಿರ ಕಂಡರೆ ನನಗೇನೋ ಒಂದು ರೀತಿ ನಾ ತಪ್ಪು ಮಾಡಿದೆ ನನ್ನಿಂದ ನಿನಗೆ ಸಲ್ಲಬೇಕಾದ ಪ್ರೀತಿ ಹಾರೈಕೆ ಸಲ್ಲಲಿಲ್ಲವೇನೋ ಎಂಬ ಭಾವನೆ ಮನದಾಳದಲ್ಲಿ ಆಗಾಗ ಮೂಡುತ್ತೆ, ಅಲ್ಲದೆ ಈ ಮನಸಿನಲ್ಲಿ ಕಾಡುತ್ತೆ ನಾ ಏನು ಮಾಡಲಿ ಕಂದ ನಮ್ಮ ವ್ಯವಸ್ಥೆಗಳು ಬದಲಾಗಿವೆ, ನಿನ್ನ ಭವಿಷ್ಯದ ನೆಲೆ ಹಚ್ಚ ಹಸಿರಾಗಿರಲೆಂಬುದು ನನ್ನ ಇಚ್ಚೆ...

ನೀ ಇನ್ನು ಮರುಭೂಮಿಯ ಮುಟ್ಟುವವರೆಗೂ ನನ್ನ ಹೃದಯಬಡಿತ ಅತಿರಭಸವಾಗಿರುತ್ತೆ. ಮನದ ಮೈದಾನದಲ್ಲಿ ಹಲವಾರು ಯಕ್ಷಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನಿನ್ನ ನೋಡುವವರೆಗೂ ನಿದ್ರಾಹಾರ ಸೇರದು. ಕಣ್ಣಂಚಿನ ಕಂಬನಿ ಅಲ್ಲೇ ಮೂಡಿಬಿಟ್ಟಿದೆ ನೀ ಬರುವವರೆಗೂ ಅದು ಮಾಸುವ ಸೂಚನೆ ಕಾಣುತ್ತಿಲ್ಲ.

ನೀ ಬೆಂಗಳೂರಿಂದ ಕುವೈಟ್ಗೆ ನೇರ ಒಂದೇ ವಿಮಾನದಲ್ಲಿ ಬರುವಂತಿದ್ದರೆ ನನಗಷ್ಟು ಭಯ, ದುಃಖವೇನಿರುತ್ತಿರಲಿಲ್ಲವೇನೋ ಈಗ ದುಬೈ ವಿಮಾನ ನಿಲ್ದಾಣದಲ್ಲಿ ಸುಮಾರು ೩ ಗಂಟೆಗಳ ಕಾಲ ತಂಗಿದ್ದು ಮತ್ತೊಂದು ವಿಮಾನದಲ್ಲಿ ಬರಬೇಕು ನನಗೆ ಇಲ್ಲೇ ಹೆಚ್ಚಿನ ಆಂತಕ ನಿನಗೆಲ್ಲಿ ಬೇಸರವಾಗುತ್ತೊ, ಎಲ್ಲಿ ನೊಂದುಕೊಂಡು ಬೀಡುತ್ತೀಯೋ, ದುಃಖದಿ ನನ್ನ ಶಪಿಸಿಬಿಡುತ್ತೀಯೇನೋ...ನನ್ನಮ್ಮ ನನ್ನ ಜೊತೆಗಿದ್ದರೆ ಈ ರೀತಿ ತೊಂದರೆ ಇರುತ್ತಿತ್ತೆ ಎಂಬ ಭಾವನೆ ಬರುವಾಗೆ ಪರಿಸ್ಥಿತಿ ಎಲ್ಲಿ ಒದಗಿಬರುತ್ತೋ ಎಂಬ ಭೀತಿ ಕಾಡುತ್ತಿದೆ ನನ್ನ ಕಂದಮ್ಮ.... ನಿನಗೆ ಧೈರ್ಯ ತುಂಬುವ ಶಕ್ತಿ ಆ ಕಾಣದ ದೇವರೇ ನೀಡಬೇಕು. ಊರಲ್ಲೂ ಅಜ್ಜಿ, ತಾತ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ, ಎಲ್ಲರಿಗೊ ತಡೆಯಲಾಗದ ಆತಂಕ ಅವರಿಗೊ ನಾನು ಕ್ಷಮೆಯಾಚಿಸುತ್ತೇನೆ.

ನಿನ್ನ ಬರುವಿಕೆಗಾಗಿ ಕಾದು ಕುಳಿತಿರುವೆ... ಮನದ ದುಗುಡ ಸಾವಕಾಶದಿ ತಹಬದಿಗೆ ತರಲು ಪ್ರಯತ್ನಿಸುತ್ತಲಿರುವೆ ಕಂದ.... ಈ ಎಲ್ಲಾ ಪರಿಸ್ಥಿತಿಗೆ ಕಾರಣ ಯಾರೆಂದು ತಿಳಿಯದು? ನೀನೋ, ನಾನೋ, ಅಪ್ಪನೋ, ಸಮಯವೋ, ಅಥವಾ ದಿನವೋ ತಿಳಿಯದು ಏನಾದರು ಸರಿ ನನ್ನ ಕಂದ ನೀ ಬರುವ ಹಾದಿಯಲಿ ಲೋಹದ ಹಕ್ಕಿಯು ನಿನ್ನ ಕರೆತರಲು ಆ ದೇವವೃಂದಗಳು ನಗೆಯ ಹೂವ ಚೆಲ್ಲಲೆಂದು ಆಶಿಸುತ್ತೇನೆ. ನಿನ್ನ ಪ್ರಯಾಣ ಯಾವ ಕೊರತೆಬಾರದೆ ನಿನಗೂ ಸಂತಸವಾಗುವ ಹಾಗೆ ಪ್ರಯಾಣ ಸುಖವಾಗಿ ಸಾಗಲೆಂದು ಹೃದಯಪೂರ್ವಕವಾಗಿ ಹರಸುವೆವು.
ನನ್ನದೇನೇ ತಪ್ಪಿದ್ದರೂ ಕ್ಷಮಿಸಿಬಿಡು ಕಂದ ಪೂರ್ಣಪ್ರಮಾಣದ ತಾಯಾಗಲಿಲ್ಲ.... ನಿನ್ನ ಹಾರೈಕೆ ಮಾಡುವುದರಲಿ ಎಲ್ಲೋ ಸೋತಿರುವೆನು...

ಇಷ್ಟೆಲ್ಲ ಅನುಭವದಿ ಒಂದಂತು ನಿಜ, ನಿನ್ನ ಹಾದಿಯಲಿ ಕಷ್ಟ ಸುಖ ಏನೇ ಬಂದರೂ ಎದುರಿಸಿ ನೀ ಬಾಳುವೆ ಎಂಬ ನಂಬಿಕೆ ನನಗಿದೆ ಅಂತೆಯೇ ಜೀವನಪೂರ್ತಿ ಯಾರನ್ನು ಆಶ್ರಯಿಸದೆ ನಿನ್ನ ಕಾಲಮೇಲೆ ನೀ ನಿಲ್ಲುವೆ... ನೀ ನಮ್ಮ ಹೆಮ್ಮೆಯ ಪುತ್ರನಾಗಿ ಬಾಳು. ನಿನ್ನ ಅಮ್ಮ ಅಪ್ಪನ ಸಾಕಬೇಕೆಂಬ ಬೇಡಿಕೆ ಏನಿಲ್ಲ.... ದೈನೆ ಎಂದು ಬಂದ ಜನರಿಗೆ ನೆಲೆಯಾಗು, ಹತ್ತಾರು ಜನಸಮೂಹಕ್ಕೆ ಮಾದರಿಯಾಗಿ ಬಾಳು ಆಶ್ರಯ ಬೇಡಿ ಬಂದವರಿಗೆ ಆಶ್ರಯನೀಡಿ ಅವರ ದುಃಖ ಮರೆಸುವ ಶಕ್ತಿ ನಿನ್ನಲ್ಲಿ ಮೂಡಲಿ.

ಒಲವಿನ ಕುಡಿಗೆ ಪ್ರಯಾಣದ ಬಿಸಿ ಮುಟ್ಟದಿರಲಿ ಎಂದು ಆಶಿಸುತ್ತ ಶುಭಪ್ರಯಾಣ....ನನ್ನ ಕಂದಮ್ಮಗೆ....


ಪ್ರೀತಿಯಿಂದ
ಮೃದುಮನಸಿನ ಅಮ್ಮ...
ಸವಿಗನಸಿನ ಅಪ್ಪ..



ತಾಯಿ ಮಗನ ಸಮಾಗಮ ಮುಂದಿನ ಭಾಗದಲ್ಲಿ....

Monday, August 31, 2009

ಮುನಿಸು ತರವೇ

ಮುನಿಸು ತರವೇ ಗೆಳತಿ ನಿನಗೆ
ನನ್ನ ಮೇಲೆ ಮುನಿಸು ತರವೇ..?

ಮುಗಿಲ ಮಳೆಯ ಭುವಿಗೆ ನೀಡಿ
ಹಚ್ಚ ಹಸಿರು ಜೊತೆಜೊತೆ ಗೂಡಿ
ಜೀವಿಗೆ ಹುಸಿರ ನೀಡೋ ಜೀವನಾಡಿ
ಅದುವೇ ನಮ್ಮ ನಿಸರ್ಗ...!!!!
ಗೆಳತಿ ನೀ ನನ್ನ ನಿಸರ್ಗ ಅಲ್ಲವೇ ..?

ನಿಸರ್ಗದಂತೆ ನಿನ್ನ ಸ್ನೇಹದ ಕುಡಿ
ಬೆಳಸಿದೆ ಅಂದು ಇಂದು ನನ್ನೊಡಗೂಡಿ
ನಿನ್ನ ಸ್ನೇಹಕೆ ಪ್ರೇಮವೇ ಕನ್ನಡಿ
ಪ್ರೇಮಸುಧೆ ನನ್ನಡೆಗೆ ನೀಡಿ
ಹೊರಟಿರುವೆಯಲ್ಲೇ ..?

ನಿನ್ನ ಸ್ನೇಹದಿ ಯಾವ ಪರಿಧಿ ಇಲ್ಲ
ನಿನ್ನ ತೊರೆಯುವ ಮನಸು ನನಗಿಲ್ಲ
ಏಕೆ ನಿನಗೆ ತೊರೆವ ಮನಸು ಬಂದಿದೆಯಲ್ಲ
ಮೌನ ಮುಸುಕಿ ಮುನಿಸು ಮೂಡಿದೆಯಲ್ಲ
ಇದು ನಿನಗೆ ತರವೇ..?

ಮುನಿವ ಮನಕೆ ನನ್ನದೊಂದು ಬೇಡಿಕೆ
ನನ್ನದೇನೆ ತಪ್ಪಿದ್ದರೂ ಕ್ಷಮಿಸೆಂಬ ಕೋರಿಕೆ
ನಿನ್ನೊಟ್ಟಿಗೆ ನೆಡೆದ ಮಾತಲ್ಲೇ ಹಿತವಿದೆ
ಅದು ಕೊನೆವರೆಗೂ ಇರಲೆಂಬ ಮನಸಿದೆ
ನಿನ್ನ ಬಿಡೋ ಮನಸಿಲ್ಲವೇ..?

ಸ್ನೇಹಿ ನಿಸರ್ಗ!! ನೀ ನೀಡು ಸ್ನೇಹ ಸ್ವರ್ಗ
ನಿನ್ನ ಸ್ನೇಹದಿ ನಾ ಅರಿವೇ ಪ್ರೇಮಮಾರ್ಗ
ಸ್ನೇಹಸುಧೆ ಮುನಿವ ಮನಸು ದೂಡಿ
ನೀ ಬಂದು ಮೀಟು ಸ್ನೇಹ ನಾಡಿ
ನೀ ಸ್ನೇಹಧಾರೆಯಲ್ಲವೇ..?

ಮುನಿಸು ತರವೇ ಗೆಳತಿ ನಿನಗೆ
ನನ್ನ ಮೇಲೆ ಮುನಿಸು ತರವೇ..?

Thursday, August 20, 2009

ತವರೂರ ಹಾದಿ

ತವರೂರ ಹಾದಿಯಲ್ಲಿ ಇರುವವರೆಲ್ಲಾ ನನ್ನವರೆ
ಇದ್ದಸ್ಟು ಕಾಲ ಜೊತೆಗಿದ್ದು ಹಾರೈಸಿದರು
ನನ್ನೊಟ್ಟಿಗೆ ಪ್ರೀತಿಯ ಉಣಬಡಿಸಿದರು
ಅವರೇ ನನ್ನವರೆಂಬ ಸ್ನೇಹ-ಸಂಬಂಧಿಕರು!!!

ದಿನವೆಲ್ಲ ಸುತ್ತಾಡಿ ಧಣಿದ ದೇಹಕೆ
ಆರೈಕೆ ನನ್ನ ಮನೆಯವರೆಲ್ಲರಿಂದ
ನಾ ಒಂಟಿ ನನ್ನ ಜೊತೆ ಯಾರಿಲ್ಲವೆಂದು
ಜೊತೆಗೂಡಿ ನನ್ನ ತಣಿಸಿದರು ಸ್ನೇಹಿತರೆಲ್ಲ!!!

ರಜೆಯ ದಿನದಿ ಬದಿಗಿಟ್ಟೆ ಕೆಲಸದೊರೆಯ
ಎಂತ ಸ್ನೇಹ, ಸಂಬಂಧ ಬೆಸೆದ ಸಮಯ
ಎಲ್ಲಾ ಭಾರ ಮರೆತು ಸವಿದೆ ಆ ಸವಿಯ
ಇದ ಕಂಡು ಕೊರಗಿದನೇನೋ ನನ್ನಿನಿಯ!!!

ನನ್ನದೇ ಕೆಲಸದಲಿ ನಾ ಮಗ್ನಳಾದೆ
ಯಾರನು ಮಾತನಾಡಿಸದವಳಾದೆ
ಏನಿದ್ದರು ಎಲ್ಲರು ಬಂದರು ನನ್ನೆಡೆಗೆ
ನನ್ನ ಒಳಿತಿಗೆ ಹಾರೈಸಿ ಕೊಟ್ಟರು ಬೀಳ್ಕೊಡಿಗೆ!!!

ಮತ್ತದೇ ಮರುಳಾದ ಮರಳು ಜೀವನಕೆ
ತಿರುಗಿ ಬಂದಿರುವೆ ಮರುಭೂಮಿ ತನಕ
ತವರೂರೆ ಚೆಂದವೆನಿಸಿದೆ ನನ್ನ ಮನಕೆ
ಆದರು ಮತ್ತೊಮ್ಮೆ ನನ್ನವರೆಲ್ಲರ ನೋಡೋ ತವಕ !!!

ಏನೇ ಇರಲಿ ಹೆತ್ತಮ್ಮ ಹುಟ್ಟೂರು
ಇವೆರಡು ನಮ್ಮೆಲ್ಲರ ಒಡಲ ಬೇರು
ಎಂದೆಂದೂ ನಮ್ಮೊಲವ ಹಸಿರ ಉಸಿರು
ಅದರ ಋಣ ತೀರಿಸುವವರು ಯಾರು!!!

Wednesday, August 12, 2009

ನೆನಪಿದೆಯಾ

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ
ಅಥವಾ ಮರೆತೇಬಿಟ್ಟೆಯಾ ..?

ನೇಸರ ಉದಯವಾಗೋ ವೇಳೆ
ಪ್ರೀತಿ ಸಂದೇಶ ನಿನ್ನೆಡೆ ಒಯ್ದ
ನಿನ್ನ ಮೊಗದಿ ನಸುನಗೆ ಮೂಡಿಸಿದ
ಆ ಸ್ನೇಹಸಿರಿಯ ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...

ಸೂರ್ಯ ಹುಟ್ಟಿ ಚಂದಿರನಿರುವವರೆಗೆ
ನಿನ್ನ ಮೌನದಿ ಮಾತಿನ ಸಿರಿ ಬೆರೆಸಿ
ಕಾಡಿ-ಬೇಡುತ್ತಲಿದ್ದಳು ದಿನವೆಲ್ಲಾ
ಆ ಮುದ್ದುಮೊಗವ ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...

ಮರುಭೂಮಿಯಾದ ಜೀವಕೆ
ಪ್ರೀತಿಹರಸಿ ನಗೆಯ ಚಲ್ಲಿ
ಬೆಳ್ಳಿಬೆಳಕು ಮೂಡಿಸಿದಾಕೆ
ಆ ಪ್ರೀತಿ ಹೃದಯ ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...

ಭಾವುಕ ಜೀವನದ ಹಾದಿಯಡಿ
ಭಾವನೆಗೆ ಮಿಡಿದು ಸ್ಪಂದಿಸುವ
ಎಲ್ಲರ ತನ್ನತ್ತ ಸೆಳೆವ ಹೆಣ್ಣು
ಆ ಹೆಣ್ಣ ಕಣ್ಣು ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...?

Sunday, June 28, 2009

ಭಾವನೆ

ಭಾವನೆಗೆ ನಿಲುಕದ ದೋಣಿ
ರಭಸದಿ ದಾಟಿದೆ ಕಡಲ ಗಣಿ!!!

ಭಾವನೆ ಮನದ ತೊಳಲಾಟ
ಒಮ್ಮೆ ಸ್ಪಂದಿಸಲಿ ನಿನ್ನ ಒಡನಾಟ!!!

ಭಾವುಕತೆಗಾಗಿ ಆತ್ಮೀಯ ಭಿಕ್ಷೆ
ಮರ್ಕಟ ಮನಕೇಕೆ ನೀಡುವೆ ಶಿಕ್ಷೆ!!!

ಭಾವಿಸುವ ಭಾವ ನಿನ್ನದಾಗಲಿ
ಅದ ಅನುಭವಿಸುವ ಜೀವ ನಾನಾಗಲಿ!!!

ಭಾವನೆ ಕಲ್ಪನೆಯ ಜೇನುಗೊಡು
ಜೇನ ಹೀರಿ ಕಟ್ಟು ಸಿಹಿ ಭಾವನೆಯ ಗೂಡು!!!

ಎಲ್ಲರೊ ಭಾವ ಜೀವಿಗಳೆಂಬುದು ನನ್ನ ನಿಟ್ಟು
ನಿನಗೊ ತಿಳಿದಿರಲಿ ಭಾವುಕತೆಯ ಗುಟ್ಟು..



Tuesday, June 2, 2009

ಮುಸುಕಿನಂಚಿನಲಿ ಸಾಗದಿರಲಿ

ಹುಟ್ಟುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಇರುವ ಮೂರುದಿನಕೆ
ಏಕೀ ಜೀವಕೊಡ್ಡುವೆ ಕತ್ತಲೆ....?

ಇರುವಾಗ ಎಲ್ಲರನು ಪ್ರೀತಿಸು
ಎಲ್ಲರಲಿ ಒಂದಾಗಿ ನೆಲೆಸು
ಇರುವ ಕ್ಷಣಿಕ ಜೀವಕೆ
ಕಲ್ಮಶ ಒಡ್ಡದಿರು ಮನಕೆ...!!!

ನೆನ್ನೆ ಇಂದಿನ ದಿನಗಳ ಅಂತರ ಅಲ್ಪ
ಇಂದು ನಾಳೆಗಳ ಅಂತರ ಸ್ವಲ್ಪ
ಇರುವ ಅಲ್ಪ-ಸ್ವಲ್ಪಗಳಲಿ
ನಗು ನಗುತ ಇರುವುದ ಕಲಿ...!!!

ಮನುಜನ ಸಾವು ನಿಶ್ಚಿತ
ಇದು ಆ ಬ್ರಹ್ಮ ಬರೆದ ಅಂಕಿತ
ನಾವು ಇರುವಷ್ಟು ದಿನ
ತಿಳಿಯ ಬೇಕಿದೆ ಜೀವನದ ಸಂಕೇತ...!!!

ಸಿರಿವಂತನಲಿ ಹಣದ ಆರ್ಭಟ
ಬಡವನಲ್ಲಿ ಕಷ್ಟದ ತೂಗಾಟ
ಇರುವವ ಇಲ್ಲದವನ
ನೋಡಿ ಅಣಕಿಸದೆ ಆಡದಿರಲಿ ಜೂಟಾಟ...!!!

ಜೀವನದ ಬೇಕುಬೇಡಗಳಲಿ
ಇಲ್ಲ ಸಲ್ಲದ ನಿಂದೆಗಳಲಿ
ಮನದಾಳದ ಬಿರುಕಿನಲಿ
ಬಾಳು ಮುಸುಕಿನಂಚಿನಲಿ ಸಾಗದಿರಲಿ...!!!

ವಿ. ಸೂ: ಈ ಪುಟ್ಟ ಕವನದೂಂದಿಗೆ ಅಲ್ಪ ವಿರಾಮವನ್ನು ನನ್ನ ಬ್ಲಾಗಿಗೆ ನೀಡುತ್ತಲಿದ್ದೇನೆ. ನಲ್ಮೆಯ ಬ್ಲಾಗ್ ಸ್ನೇಹಿತರೆಲ್ಲರು ಇದುವರೆಗು ನನ್ನೂಂದಿಗಿದ್ದು ತಮ್ಮೆಲ್ಲ ಅನಿಸಿಕೆಗಳನ್ನು ನೀಡಿ ಪ್ರೋತ್ಸಾಹ ನೀಡಿದ ನಿಮ್ಮೆಲ್ಲರಿಗು ಧನ್ಯವಾದಗಳು. ನಾನು ನಿಮ್ಮೆಲ್ಲರಿಗು ಸದಾ ಚಿರಋಣಿ. ೪೫ ದಿನಗಳ ರಜೆಯ ಮೇಲೆ ಬೆಂಗಳೂರಿಗೆ ತೆರೆಳುವ ಕಾರಣ ನಿಮ್ಮೆಲ್ಲರ ಲೇಖನಗಳನ್ನು ಓದಲಾಗುತ್ತೋ ಇಲ್ಲವೋ ಸಮಯ ಸಿಕ್ಕಾಗ ಖಂಡಿತ ಅನಿಸಿಕೆಗಳನ್ನು ತಿಳಿಸುವೆ. ಸಾಧ್ಯವಾದರೆ ಆಗೊಮ್ಮೆ ಈಗೊಮ್ಮೆ ಬ್ಲಾಗಿಸುವೆ ಇದುವರೆಗೂ ಇದ್ದ ಪ್ರೋತ್ಸಾಹ ಹಸ್ತ ಕೊನೆವರೆಗೂ ಹೀಗೆ ಇರಲೆಂದು ಆಶಿಸುತ್ತೇನೆ.

ನಿಮ್ಮೆಲ್ಲರಿಗು
ವಂದನೆಗಳು
ಶುಭಮಸ್ತು

Thursday, May 28, 2009

ಪಯಣ

ಮುಸುಕು ಕವಿದ ಬಾಳಿಗೆ
ನೀನಿಲ್ಲದೆ ಪ್ರಯಾಣ ಬೇಸರಿಕೆ
ವಿಷಾದ ಮೂಡಿಸಿದೆ ಮನಸಿಗೆ
ನಿನ್ನನೊ ಕರೆದೊಯ್ಯುವ ಅನಿಸಿಕೆ
ಬರುವೆಯಾ ನಲ್ಲ ನನ್ನೊಂದಿಗೆ..!!?


ಒಂಟಿ ಗಿಣಿಗೆ ಜೊತೆಯಿಲ್ಲದಾಗುವುದು
ರವಿತೇಜನಿಗೆ ಕಳೆ ಕುಂದುವುದು
ಹಾಡೋ ಹಕ್ಕಿಗೆ ಧನಿ ಹೊರಡದಾಗುವುದು
ಹೂವು ತನ್ನ ನಸುಗಂಪು ಸೊಸದಂತಾಗುವುದು


ಮಳೆಗಾಲದ ಜಡಿ ಹಿಡಿದಂತಿದೆ ಕಣ್ಣಿಗೆ
ಬಳಲಿಕೆಯಲಿ ತೊಡಲಾಡುವಳೀ ಮಲ್ಲಿಗೆ
ಪ್ರಿಯಾ!! ಒಮ್ಮೆ ಹೇಳಿಬಿಡು ಮೆಲ್ಲಗೆ
ಬರುವೆ ಚಿನ್ನ ನಿನ್ನೊಂದಿಗೆ!!!


ಬರುವುದಾದರೆ ನಲ್ಲ ಊರಿಗೆ
ನಡೆ ಪಯಣಿಸೋಣ ಜೊತೆ ಜೊತೆಗೆ
ಹೊವಿನ ಹಾದಿ ಸೊರ್ಯ ಚುಂಬನದೆಡೆಗೆ
ನಮ್ಮ ದಾರಿ ನಮ್ಮೂರ ಕರುನಾಡಿಗೆ!!!

Saturday, May 23, 2009

ಮೌನ-ಕಣ್ಣೀರು

ದುಃಖ ಉಮ್ಮಳಿಸಿ ಕಣ್ಣೀರು ಬರಿಸಿದೆ.
ನೋವ ಕರಗಿಸುವುದೇ ಈ ಕಣ್ಣೀರು...?
ಬೇಸರ ಬರ ಸೆಳೆದು ಮಾತಿಗೆ ಕಡಿವಾಣವಾಗಿದೆ.
ಮೌನ ಮರೆಸುವುದೆ ಈ ಬೇಸರ....?

ಹೃದಯದ ಭಾರ ಇಳಿಸುವುದೇ ಈ ಕಣ್ಣೀರು
ಮನದ ಬೇಸರ ನಿಲ್ಲಿಸುವುದೇ ಈ ಮೌನ
ಕಣ್ಣು ಕಣ್ಣು ಕಲೆತು ಕಣ್ಣೀರಿಗೆ ಶರಣು
ಮಾತು ಮಾತಿಗೆ ಬೆರೆತು ಮೌನಕ್ಕೆ ಮರುಳು

ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ
ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ
ವಿಶಾಲ ಮನಕೆ ನಗುವ ಸುಂದರ ಮೊಗಕೆ
ಮೌನದಿ ಮಾತು ಮರೆಮಾಚಿಸುವೇಕೆ

ದುಃಖ ದುಮ್ಮಾನ ಎಲ್ಲರ ಜೀವನದ ಕರಿನೆರಳು
ಅದ ನಿಭಾಯಿಸಲು ಕಲಿಯಬೇಕಿದೆ ಜೀವನದ ತಿರುಳು
ನಿನ್ನ ಕಣ್ಣ ರೆಪ್ಪೆಗೆ ಕರಿನೆರಳು ತಾಕದಿರಲಿ
ಮೌನ ಮನಕೆ ಜೀವನದ ತಿರುಳು ಅರಿತಿರಲಿ

ಮನದ ತುಡಿತಕೆ ಕಣ್ಣಿಗೇಕೆ ಕಣ್ಣೀರ ಸೆಳೆತ
ಮನದ ಮಿಡಿತಕೆ ಮಾತಿಗೇಕೆ ಮೌನದ ತುಳಿತ
ಕಣ್ಣ ನೋಟಕೆ ಕಾಣುವುದೆಲ್ಲವೊ ಹಸಿರ ನಿಸರ್ಗ
ಮೌನ ದೂಡಿ ಮುತ್ತಂತ ಮಾತಾನಾಡಿದೊಡೆ ಅಲ್ಲೇ ಸ್ವರ್ಗ....

Tuesday, May 19, 2009

ಓ ಮನಸೇ!!!

ಹೀಗೇಕೆ ಅಳುವೇ ಮನಸೇ ತಿಳಿದಿದೆಯೆ ನಿನಗೆ
ತುಸು ಕಷ್ಟ ಸಹಿಸದೆ ನಲುಕಿ ಕೋರಗುವೆಯಲ್ಲೆ
ಜಗದ ನಿಯಮಕೆ ಯಾರು ವಿರುದ್ದ ನಿಲರು
ನೀ ಎಲ್ಲ ಸಾಂತ್ವಾನಿಸಿ ಎದೆಗುಂದದೆ ನಿಲ್ಲು!!ಓ ಮನಸೇ!!

ಬೀಸುವ ಗಾಳಿಯ ತಡೆದವರುಂಟೇನು
ಬಿಸಿಲ ಬೇಗೆಯ ನಿಲ್ಲಿಸಲಾಗುವುದೇನು?
ಓಡುವ ಕಾಲಕೆ..ಬರುವ ಕಷ್ಟಕೆ ತಡೆಯೇನು
ಎಲ್ಲವನು ನೀ ಅರಿತು ಧೈರ್ಯದಿ ನಡೆ ಮುಂದೆ!! ಓ ಮನಸೇ!!

ಎಂದೊ ಬರುವ ಕಷ್ಟಕೆ ಇಂದೇಕೆ ಅಳುವೇ
ಇಂದಿನ ಸುಸವಿಯ ಸವಿದು ಕಾಲ ಕಳೆ
ಕಷ್ಟದಿನಕೆ ದಾರಿ ತೋರಲು ಪರಿಸ್ಥಿತಿಯಿದೆ
ಕಾಲವೇ ಎಲ್ಲದಕು ಉತ್ತರ ನಿಶ್ಚಿಂತೆಯಿಂದಿರು!!ಓ ಮನಸೇ!!

ಮನದ ತುಡಿತಕೆ ಸಂತೋಷವ ಮುಚ್ಚಿಡದಿರು
ಅಳುವ ಮನಕೆ ಬಿಸುಅಪ್ಪುಗೆಯ ನೀಡುತಿರು
ನಿನಗೆ ನೀನೆ ಸಾಟಿ ಅಳು ಮೊಗದಿ ನೀನಿರದಿರು
ಎಲ್ಲವನು ನಿಗ್ರಹಿಸುವ ಗಣಿ ನೀನಾಗಿರು !!ಓ ಮನಸೇ!!

ಮಿನುಗುವ ಆ ಕಣ್ಣಿಗೇಕೆ ನೋವುಣಿಸುವೆ
ಸುಂದರ ಮೂಗಕೆ ಕಣ್ಣೀರಧಾರೆ ಕಪ್ಪುಕಲೆ
ಒಮ್ಮೆಲೆ ತೊಯ್ ಎಂದು ಸುರಿಸಿಬಿಡು ಮಳೆ
ತಿರುಗಿ ಬಾರದಿರಲಿ ಆ ಕಣ್ಣೀರ ಮಳೆ !! ಓ ಮನಸೇ!!

ಪ್ರೇಮಕೆ ಸಿಲುಕಿ ಒಳ ಮನವ ಪ್ರೇಮಿಸು
ಮೋಹದಿ ಮನವ ಚೇಡಿಸಿ ಕಾಮಿಸು
ಮನಕೆ ಪ್ರೇಮಿಯಾಗಿ ಸಂತಸದಿ ನಲಿಸು
ಮೂಗದಿ ನಲಿವ ನಗುವನ್ನು ತರಿಸು !! ಓ ಮನಸೇ!!

Sunday, May 17, 2009

ಮಸುಕಿನಲ್ಲಿದ್ದ ಮುಖ ತೆರೆದ ಮುಖಪುಟ.

ನಾವೆಲ್ಲ ಜೀವನದಲ್ಲಿ ಕೊನೆವರೆಗೊ ಹೀಗೆ ಇರುತ್ತೇವೆ, ಸುಖ ಸಂತೋಷ, ಆಸ್ತಿ ಪಾಸ್ತಿ, ಆರೋಗ್ಯ ಎಲ್ಲವೊ ನಮ್ಮೊಂದಿಗೆ ಈಗ ಇಂದು ಹೇಗಿದೆಯೋ ಕೊನೆವರೆಗು ಇರುತ್ತೆಂದು ಭಾವಿಸುತ್ತೇವೆ ಆದರೆ ಅದು ಅಕ್ಷರ ಸಹ ಸುಳ್ಳು. ಇಂದು ಇದ್ದ ಜೀವ ನಾಳೆಗಿರದು ಇರುವ ಎರಡು ದಿನಕೆ ಎನೆಲ್ಲಾ ಮಾಡುತ್ತೇವೆ ಅಲ್ಲವೆ... ಏಕೀ ಪುರಾಣವೆಂದು ಭಾವಿಸುತ್ತೀರ ಈ ಭಾವನೆ ನನ್ನ ಮನದಾಳದಲ್ಲಿ ಹುಟ್ಟಿದವು ಬರವಣಿಗೆಗೆ ಮೀಸಲಿದ್ದವಹುದಲ್ಲ.

ಇತ್ತೀಚೆಗಷ್ಟೆ ಕುವೈಟ್ ಕನ್ನಡ ಕೂಟದಲ್ಲಿ ಒಂದು ದಿನದ ಕಾರ್ಯಕ್ರಮ ಏರ್ಪಡಿಸಿದ್ದರು ಅಂದು ಸುಮಾರು ೨ ಗಂಟೆಗಳ ಕಾಲ ಒಂದು ಚಿತ್ರವನ್ನು ನೋಡುವ ಭಾಗ್ಯ ನನ್ನದಾಯಿತು. ಮೂದಲ ಹಂತಕ್ಕೆ ಏನಿದು ಚಿತ್ರ ಎಳೆಯುತ್ತಿದ್ದಾರಲ್ಲ ಎಂಬ ಭಾವನೆ ಮೊಡಿದ್ದಂತು ನಿಜ. ಒಂದು ಸಣ್ಣ ಹಳ್ಳಿ ಅಲ್ಲಿ ಒಬ್ಬರು ಶಿಕ್ಷಕರು ಅವರಿಗೆ ಪ್ರೀತಿ ಪಾತ್ರರಳಾದ ಶಿಷ್ಯೆ, ಗುರುವಿಗೆ ತಕ್ಕ ಶಿಷ್ಯೆ ಎಂದೇಳಿದರೆ ತಪ್ಪಾಗಲಾರದು. ಗುರು ಶಿಷ್ಯೆಯ ಜೀವನ ಜೊತೆ ಜೊತೆ ಸಾಗುತ್ತದೆ. ಶಿಷ್ಯೆಯ ಪ್ರತಿ ಹೆಜ್ಜೆಗು ಮಾರ್ಗದರ್ಶಿ ಗುರು, ಈ ಶಿಷ್ಯೆ ಗುರುವಿಗೆ ಪ್ರೇರಣಾತೀತೆ ಇವಳು ನಾಟ್ಯ ಪ್ರವೀಣೆ, ವಿದ್ಯಾ ಸಂಪನ್ನೇ, ವಿದ್ಯೆ ಕಲಿತರೆ ಅದರಿಂದ ತೊಂದರೆ ಇಲ್ಲ ಅದು ನಮ್ಮ ಜೀವನದ ಏಳ್ಗೆಗೆ ಮೆಟ್ಟಿಲು ಎಂಬ ನಿಲುವು ಗುರು ಶಿಷ್ಯೆದು(ಗೌರಿ).......... ಇವರಿಬ್ಬರ ಜೀವನದಲ್ಲಿ ಒಂದು ಅನಾಥ ಮಗುವಿಗೆ ಆಸರೆ ನೀಡೋ ಸ್ಥಿತಿ, ಜೊತೆಗೆ ಸ್ಲಮ್ ಮಗುವಿಗೆ ವಿದ್ಯೆಯ ಅರಿವು ಮೊಡಿಸಿದವರು.

ಇಷ್ಟೆಲ್ಲ ಸುಖ ಜೀವನದಲ್ಲಿ ಒಂದು ಆಘಾತಕಾರಿ ಎಂದರೆ ಗುರುವಿನ ಮರಣ ಇವಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತೆ...ಇಂತಹ ಸಮಯದಲ್ಲಿ ಪರ ಊರಿನಲ್ಲಿದ್ದ ಗುರುವಿನ ಸಂಸಾರದೊಂದಿಗೆ ಜೀವನ ಸಾಗಲು ತೆರಳುತ್ತಾಳೆ ಅಲ್ಲೂ ಸಹ ಯಾವ ಕೊರತೆಯಿಲ್ಲದೆ..........ಗೌರಿ ಜೊತೆಗೆ ಆ ಪುಟ್ಟ ಮಗುವಿಗೆ ಆನಂದಪೂರ್ವಕ ಸ್ವಾಗತ... ಒಮ್ಮೆ ಇದ್ದಕ್ಕಿದ್ದ ಹಾಗೆ ಆ ಪುಟ್ಟ ಪೋರಿ ಜ್ವರವೆಂದು ಮಲಗಿದಾಗ ಇದು ಸಾಮಾನ್ಯ ಜ್ವರವೆಂದು ಭಾವಿಸಿ ಮನೆಯಲ್ಲೇ ಇದ್ದ ಮಾತ್ರೆಯನ್ನು ನೀಡಿ ಸಾಂತ್ವಾನಿಸಿದ್ದಳು ಗೌರಿ, ಆದರೆ ಅದು ಯಾವುದೇ ಗುಣಕಾಣದಾದಾಗ ಆಸ್ಪತ್ರೆಗೆ ಕೊಂಡೊಯ್ಯುವ ಸ್ಥಿತಿ ಬಂದೊದಗಿತು ಅಲ್ಲಿ ಒಂದು ವಿಚಿತ್ರ ರೋಗದ ಸುಳಿವಿರುವುದು ತಿಳಿದು ಬೇರೆ ಆಸ್ಪತ್ರೆಗೆ ತೆರಳಬೇಕೆಂದು ಸೊಚಿಸಿದರು ಅಲ್ಲಿಂದ ಆ ಮಗುವನ್ನು ಗುರುವಿನ ಮಗ ಹಾಗು ಗೌರಿಯು ಬೆಂಗಳೂರಿಗೆ ಕರೆತಂದಾಗ ಅಲ್ಲಿ ಎಲ್ಲಾ ತಪಾಸಣೆಯ ನಂತರ ತಿಳಿದಿದ್ದು ಅಲ್ಲೊಂದು ಆಘಾತಕಾರಿ ಸಂಗತಿ!!!! ಎಂತವರೊ ದಿಗ್ಭ್ರಮೆಗೊಳ್ಳುವ ಮಾಹಿತಿ ವೈದ್ಯರು ಬಿಚ್ಚಿಟ್ಟಾಗ ಹೃದಯಾಘಾತವಾಗದಿರುವುದು ಹೆಚ್ಚು!!!!!!!!! ಗೌರಿಯ ಮಮತೆಯ ಕೊಸು ಕನರಿಹೋಗುವುದೆಂಬ ಭಯ ಬೆಂಬಿಡದೆ ಅವಳ ಮನದಲ್ಲೇ ಕೊತುಬಿಟ್ಟಿತ್ತು ಆದರೊ ಸ್ಥಾವರಿಸಿ ದಿಟ್ಟ ಹೆಜ್ಜೆ ಇಟ್ಟು ಹೊರ ಬಂದು ಆ ಮಗುವಿಗೆ ಆಸರೆಯಾಗಿ ಕೊನೆವರೆಗಿರುವ ನಿರ್ಧಾರಕ್ಕೆ ಬಂದಳು. ಇವಳಿಗೆ ಜೊತೆಯಾದವನು ಗುರುವಿನ ಮಗ.

ಎಲ್ಲವನ್ನು ಎದುರಿಸುವೆ ಎಂದು ಏಡ್ಸ್ ಎಂಬ ಮಹಾಮಾಯಿಯನ್ನು ಹೊತ್ತು ತಂದ್ದ ಮಗುವಿಗೆ ಇದು ಹೇಗೆ ಅಂಟಿತೆಂದು ತಿಳಿಯುವಲ್ಲಿ ಸಫಲಾದಳು ಆ ಮಗು ಇವಳ ಕೈಸೇರುವ ಮುನ್ನ ಆ ಮಗುವಿನ ಅಪ್ಪ ಅಮ್ಮ ಆತ್ಮಹತ್ಯೆಗೆ ಶರಣಾಗಿದ್ದರು........ನೃತ್ಯಶಾಲೆಗೆ ಬರುತ್ತಿದ್ದ ಈ ಮಗು ಗೌರಿಯನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಅಪ್ಪ ಅಮ್ಮ ಇಲ್ಲದಾಗ ಆಪ್ತಳಾದವಳು ಗೌರಿ ಆ ಮಗುವಿಗೆ ತಾಯಿಯಾಗಿ ನೆಲೆಯಾದವಳು ಈಕೆ.

ಆ ಮಗುವಿಗೆ ಮಹಾಮಾರಿ ತಗುಲುವುದೇನೋ ತಗುಲಿತು ದೇವರ ಜೊತೆ ತಂದೆತಾಯಿಯು ದೂರ ಸರಿದರು ಇಂತಹ ಸ್ಥಿತಿಯಲ್ಲಿ ಆ ಮಗು ಈ ಸಮಾಜದಲ್ಲಿ ಎದುರಿಸಬೇಕಾದ ಎಲ್ಲಾ ನಿಂದನೆಗಳನ್ನು ಇಂಚಿಂಚು ಅನುಭವಿಸುವಂತಾಯಿತು ಇದನ್ನೆಲ್ಲಾ ಕಂಡ ಗೌರಿ ನೂರಾರು ಜನಸ್ತೊಮ ನೆರೆದಲ್ಲೇ ತನ್ನ ಅಳಲನ್ನು ತೋಡಿಕೊಂಡಳು... ಏನು ಅರಿಯದ ಮಗು ಆ ಮಗುವೇಕೆ ಈ ಶಿಕ್ಷೆ ಅದಕ್ಕೆ ಅದರ ಖಾಯಿಲೆಯ ಅರಿವಿದೆ ನೀವೆಲ್ಲ ಜೊತೆಗೊಡಿ ಆ ಮಗು ಇರುವಷ್ಟು ದಿನ ಸಂತಸದಿ ಬಾಳಲು ಬಿಡಿ ಎಂದು ಭಾರದ ಹೃದಯದಲ್ಲಿ ದುಃಖದ ಮಡುವಿನಲ್ಲಿ ಬೇಡಿದಳು ಅವಳ ಮಾತು ನೆರೆದಿದ್ದವರನೆಲ್ಲಾ ಮಮ್ಮಲ ಮರುಗುವಂತೆ ಮಾಡಿತು........
ಆ ಜನರಿಗಷ್ಟೆ ಅಲ್ಲ ನಮ್ಮಲಿದ್ದ ಮೂಢನಂಬಿಕೆ, ನಾವು ನಮ್ಮಲ್ಲಾಗುವಷ್ಟು ಸಹಕಾರ ನೀಡಬೇಕೆಂಬುದು ನನಗೂ ಅರಿವಾಯಿತು. ಏಡ್ಸ್ ಎಂಬ ರೋಗದಿಂದ ಬಳಲುವ ಹಲವಾರು ಮಕ್ಕಳು ಸಮಾಜದಲ್ಲಿ ತಮ್ಮ ಬೇಕುಬೇಡಗಳನ್ನು ನೀಗಿಸಿಕೊಳ್ಳಲು ಸಂಪ್ರದಾಯ, ಮೂಢನಂಬಿಕೆ, ಅಸಹನೆ, ಮೂಡಿಸಿಕೊಂಡು ಆ ರೋಗವೊಂದು ಅಂಟುರೋಗವೆಂದು ಭಾವಿಸಿ ಏಡ್ಸ್ ರೋಗಿಗಳಿಗೆ ಜೀವನ ಮಾಡಲು ಅವಕಾಶ ನೀಡದೆ ಎಷ್ಟೋ ಮಂದಿ ದೊರ ತಳ್ಳುತ್ತಲಿದ್ದೇವೆ.

ರೂಪ ಐಯ್ಯರ್ ಅವರ ಚಿತ್ರ ನೋಡಿದ ಮೇಲೆ ಹಾಗು ಮುಖಮುಖಿ ಅವರ ಮನದಾಳದ ಮಾತು ಕೇಳಿದ ಮೇಲೆ ನಾವು ನಮ್ಮತನವನ್ನು ನಶಿಸದಂತೆ ನಾವು ನಮ್ಮಲಾಗೋ ಸಹಾಯ ಹಸ್ತ ಚಾಚಬೇಕೆಂಬ ನಿಲುವಿಗೆ ಬಂದೆನು.
ಈ ಚಿತ್ರ ಎಲ್ಲರೊ ನೋಡ ಬೇಕಾದ್ದೆ ಹಾಗೆ ಹೊಸ ಜೀವನದ ಹೊಸ್ತಿಲಲ್ಲಿ ನವ್ಯಪ್ರಜ್ಞೆ ಮೂಡಿಸಬೇಕಾದ್ದದೇ ಹೊರತು ಮೂಢರಂತೆ ವರ್ತಿಸಬೇಕಾದದ್ದು ಅಲ್ಲವೇ ಅಲ್ಲ.

ಧನ್ಯವಾದಗಳು

Sunday, May 10, 2009

ಅಮ್ಮನೇ ದೈವ!!!!

ನಿನ್ನುಸಿರ ತವಕ
ಬಲು ದೂರವಿದೆ.....
ನಿನ್ನ್ ಬಿಸಿ ಉಸಿರು
ತಾಕಲು ಸಮುದ್ರ ಅಡ್ಡವಿದೆ....
ನಿನ್ನ್ ಪ್ರೀತಿ ಪುಳಕ
ನನಗರಿವಿದೆ......
ನಿನ್ನ್ ಪ್ರೀತಿ ಹಾರೈಕೆ
ಹೃದಯಸ್ಪರ್ಶಿಸಿದೆ......
ಅಮ್ಮ ನಾನಿನ್ನ
ಪ್ರೇಮಸುಧೆ .....
ನೀ ಎನ್ನ ದೈವ
ಎಂದು ಮನ ಪೂಜಿಸುತಿದೆ.....
ನಿನ್ನ್ ಪೂಜೆಗೆ ಹೂ,ಗಂಧ
ಕಡ್ಡಿ,ಕರ್ಪೂರ ತರುವಾಸೆ ಎನಗಿಲ್ಲ....
ಹೂವಾಗಿ ಎನ್ನ
ಹೃದಯ ಕಮಲವಿದೆ.....
ಗಂಧವಾಗಿ ಎನ್ನ
ಮುದ ಪ್ರೇಮವಿದೆ....
ಕಡ್ಡಿ,ಕರ್ಪೂರವಾಗಿ ಎನ್ನ
ಕರವು ಕಾದಿದೆ.....
ಎನ್ನ ದೇಹದ ದೇಗುಲಕೆ
ನೀನೇ ದೈವ.....
ಅಂದು ನಿನ್ನ ಮಡಿಲು
ಕೊಟ್ಟ ಜೀವ.....
ಎನ್ನಮ್ಮ ನೀ
ಕರುಣಾಮಯಿ.....
ನಿನ್ನ್ ಒಡಲ
ಹರಸು ತಾಯಿ.....
ನನ್ನ್ ಪ್ರಾಣ ಪಕ್ಷಿ
ಹಾರುವ ಮುನ್ನ....
ನಿನ್ನ ಪಾದಕೆ
ಎರಗುವೆನಮ್ಮ.....
ಕೊನೆಯ ನನ್ನುಸಿರು
ಬಂದು ಸೇರುವುದು ನಿನ್ನೊಂದಿಗೆ....
ಅಲ್ಲಿವರೆಗು ಸಲ್ಲಿಸುವೆ
ಪ್ರೇಮಗುಚ್ಚ ನಿನ್ನ ಪಾದಕೆ.....
ನಿನ್ ಪ್ರೀತಿ ಎನಗೆ ಆಸರೆ
ನಾನು ನಿನ್ನ ಕೈ ಸೆರೆ....
**************
ಅಮ್ಮನಿರೊ ಊರಿಂದ ದೂರವಿದ್ದು ಅಮ್ಮನ ಹಾರೈಕೆ, ಅಮ್ಮನೊಂದಿಗೆ ಬೆರೆಯಲು ಕಾಲ,ಸಮಯ,ಜೀವನ ಎಲ್ಲವೊ ಅಡ್ಡವಿದೆ ನನ್ನಮ್ಮನ ಪ್ರೀತಿಗೆ ಸಣ್ಣದೊಂದು ಕವನ ಶೈಲಿ ಅಷ್ಟೆ...ಅಮ್ಮನ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ ಆದರು ನನ್ನ ಮನದಾಳದ ಮಾತು ನಿಮ್ಮೊಂದಿಗೆ.
ಇಲ್ಲಸಲ್ಲದ ದೇವರ ಹುಡುಕುವದ ಬಿಟ್ಟು...... ಇಷ್ಟು ದೊಡ್ಡ ದೇಹಕೊಟ್ಟ ನನ್ನಮ್ಮನೇ ದೈವ, ನನಗೆ ಅಮ್ಮನೇ ಸರ್ವಸ್ವ, ನಾ ನನ್ನ ಮಗುವಿಗೆ ಅಮ್ಮನಾದರೊ ನನಗೆ ನನ್ನ ಅಮ್ಮನೇ ಎಲ್ಲ...ಇಷ್ಟು ಒಳ್ಳೆ ಜೀವನ ನೆಡೆಸಲು, ನನ್ನ ಬೇಕು ಬೇಡಗಳನ್ನು ನೀಗಿಸಿದ ನನ್ನಮ್ಮನೇ ದೈವ. ಅಂತ ಅಮ್ಮನಿಗೆ ಹೃದಾಯಂತಾರಾಳದಲಿ ಸಲ್ಲಿಸುವೆ ಪೂಜ್ಯಭಾವ...ಅಮ್ಮ ನೊರುಕಾಲ ಬಾಳಲಿ ಅವಳ ಪ್ರೀತಿ ನನ್ನೊಂದಿಗೆ ಸದಾ ಇರಲೆಂದು ಬಯಸುತ್ತೆನೆ.
ವಂದನೆಗಳು
ಶುಭಮಸ್ತು.

Tuesday, May 5, 2009

ಮತ್ತಷ್ಟು ಮನಕೆ ತೋಚಿದ್ದು.....

ನಿನ್ನ ಆಸರೆ ಬೆಚ್ಚಗಿತ್ತು..
ಅಂದು ನಾ ಬೆಚ್ಚನೆ ಉಡುಪು
ಮರೆತುಬಿಟ್ಟಿದ್ದೆನಲ್ಲ ಅದಕೆ ಬೆಚ್ಚಗಿತ್ತು...
**************************
ಕುಂತಲ್ಲಿ ಕೂರಂಗಿಲ್ಲ
ನಿಂತಲ್ಲಿ ನಿಲ್ಲಂಗಿಲ್ಲ...
ಅದೇನೋ ದೊಡ್ಡ ರೋಗವಿರಬೇಕಲ್ಲ
**************************
ನೀ ನಿಲ್ಲದೇ ನನಗೇನಿದೆ...
ನನಗಿಂತ ಮುಂಚೆ....
ಗಾಳಿ, ನೀರು ಎಲ್ಲ ಇದೆ...
ಅವಿಲ್ಲದೆ ನೀನಿಲ್ಲ...
*******************
ಕಣ್ಣ ರೆಪ್ಪೆಯಲಿ ಬಚ್ಚಿಡುವೆ...
ಬಚ್ಚಿಟ್ಟರೆ..
ಕಣ್ಣು ಕಾಣದಾಗುವುದೆ..?
*******************
ಪ್ರೇಮಭಿಕ್ಷೆ ಕೊಡೂ
ಎಂದವನ ಕೇಳಿದೆ...
ಎಷ್ಟು ಜನಕೆಂದು ಕೊಡಲಿ
ಅವರಿಗೆಲ್ಲ ಕೊಟ್ಟುಳಿದರೆ
ನೋಡೋಣ......
***************
ಬಾ ಹೋಟಲಿಗೆ ಹೋಗೂಣ
ಒಂದೇ ಕಪ್ಪಿನಲಿ ಕಾಫಿ ಕುಡಿಯೋಣ...
ಕ್ಷಮಿಸು, ನಾ ಎಂಜಲು ಕುಡಿಯೂಲ್ಲ
ಹಾಗಾದರೆ, ನಿನ್ನದೆಂತ ಪ್ರೇಮ!!!
ನನ್ನದು ಎಂಜಲಲ್ಲದ ಪ್ರೇಮ....
*************** *********

Saturday, May 2, 2009

ಕರುಳ ಕುಡಿಗೆ ಹುಟ್ಟುಹಬ್ಬದ ಸಂಭ್ರಮ...

ಅಂದು ನೀ ಬಂದು ನನ್ನ ಜೀವನಕೆ ಹೊಸ ಆಯಾಮವನ್ನೇ ಮೂಡಿಸಿಬಿಟ್ಟೆ ಏನೋ ಪುಳಕ, ತನು ಮನವೆಲ್ಲಾ ಹೊಸ ಅನುಭವದತ್ತ ದಾಪುಗಾಲು ಅಂದೆನಗೆ ಎಲ್ಲವೊ ಹೊಸದು ಹೆಣ್ತನ ಹೀಗೆಲ್ಲ ಭೊರಮಿಸುತ್ತೆನುವ ಭಾವನೆ ನನ್ನಲಿಲ್ಲದ ದಿನ ನೀ ಬಂದು ನನ್ನ ಬಾಳ ಹಸನಾಗಿಸಿಬಿಟ್ಟೆ.
ಮುಸ್ಸಂಜೆಯ ಹೊತ್ತು ನಾನಲ್ಲಿ ನೋವಿಂದ ನಲುಗಿದ್ದೆ ಒಡಲ ಉರಿಗೆ ಬಾಡಿದ ಹೂವಂತಿದ್ದೆ ನೀ ಪುಟಿದು ಬಂದ ಕ್ಷಣ ಎಲ್ಲಾ ನೋವು ಮಾಯವಾಗಿತ್ತು. ನಿನ್ನೊಡನೆ ನನ್ನ ಬಾಲ್ಯ, ಅಮ್ಮನ ಹಾರೈಕೆ ಎಲ್ಲವನು ಅರಿತೆ, ನಿನ್ನ ಪುಟ್ಟ ಪುಟ್ಟ ಹೆಜ್ಜೆ ನನ್ನ ಜೀವನದ ಉನ್ನತಿಯ ಮೆಟ್ಟಿಲಿಗೆ ನಾಂದಿಯಾಡಿತು.. ನಿನ್ನ ತೊದಲ ನುಡಿ, ನಿನ್ನ ತುಂಟತನ, ಮೃದುತ್ವ ಎಲ್ಲವೊ ಮನೆ,ಮನ ಸೂರೆಮಾಡಿತ್ತು. ನಿನ್ನಿಂದ ದೊರವಿದ್ದ ದಿನಗಳಂತು ನರಕಯಾತನೆಯಂತಿತ್ತು ಅಂದಿನ ಒಡಲ ಉರಿ ಇಂದು ನೆನೆದರೆ ಕಣ್ಣೀರ ಧಾರೆ ಹರಿದುಬಿಡುವುದು. ನಿನ್ನಿಂದ ದೂರವಿದ್ದ ಕಹಿಮರೆತು ಮತ್ತೊಮ್ಮೆ ಸೇರಿದಾಗ ನೀ ತೋರಿದ ಮುನಿಸು ಸ್ವಲ್ಪ ಇರಿಸುಮುರಿಸು ಜೊತೆಗೆ ಮತ್ತೆಂದು ನನ್ನ ಸ್ವೀಕರಿಸುವುದಿಲ್ಲವೇನೆಂಬ ಭಯದ ಛಾಯೆ ಹೃದಯಾಂತರಾಳದಲ್ಲಿತ್ತು ಅದನಾರಲ್ಲೊ ತೋರ್ಪಡಿಸದೆ ಭಂಡಳಂತ್ತಿದ್ದೆ. ಆ ಕಹಿದಿನಗಳೆಲ್ಲ ಕಳೆದು ನನ್ನೊಡಲ ಉರಿ ತಣ್ಣಗಾಗಿಸಿ ನೀ ಎನ್ನ ಮಡಿಲು ಸೇರಿದೊಡೆ ನಾನು ನಿರಾಳವಾಗಿಬಿಟ್ಟೆ. ಅಂದಿನಿಂದ ನಾ ನಿನಗಾಸರೆ ನೀ ನನಗಾಸರೆಯಾಗಿಬಿಟ್ಟೆವು.......
ನಿನ್ನದು ಮುದ್ದು ಮನಸು ನನ್ನದು ಪೆದ್ದು ಮನಸು ಇಂತಹದರಲ್ಲಿ ಇಬ್ಬರು ನಲಿದ ಕ್ಷಣಗಳೆಲ್ಲಾ ಹುಚ್ಚು ತರಿಸಿದವೆಲ್ಲವು..... ಆ ಮುದ್ದು ಮನಸಿಗೆ ಮುದ ನೀಡೋ ಕನಸು ಎಷ್ಟೋ ಇದೆ ನಿನಗದು ಖುಷಿ ನೀಡುತ್ತೋ ಇಲ್ಲವೋ ಎಲ್ಲವನು ಕಾದು ನೋಡಬೇಕಿದೆ.
ನಿನ್ನ ಹಾರೈಕೆ ಮಾಡುವಲ್ಲಿ ಕಡಿಮೆಯೇನೋ ನಾ ತಿಳಿಯೇ ಎಲ್ಲರಂತೆ ನಾನಿಲ್ಲವೇನೋ, ನೀ ಬಯಸಿದಂತೆ ನಿನ್ನ ಹಾರೈಕೆ, ಪ್ರೀತಿ, ವಾತ್ಸಲ್ಯ ನೀಡುತ್ತಿಲ್ಲವೇನೋ ತಿಳಿಯೇ, ಅಂದು ನಿನ್ನೊಬ್ಬನೇ ಬಿಟ್ಟು ಹೋದಾಗ ಕಣ್ಣೀರ ನೀ ತುಂಬಿಕೊಂಡಾಗ ನಿನಗಾದ ದುಃಖದಲಿ ನನ್ನ ಶಪಿಸಿಬಿಟ್ಟೆಯೇನೋ ನಾ ತಿಳಿಯೇ ಆದರೆ ಒಂದಂತೂ ನಿಜ ನಿನ್ನೊಬ್ಬನನ್ನೇ ಬಿಟ್ಟು ನಾ ಹೋದಾಗ ಅನಾಥ ಪ್ರಜ್ಞೆ ನಿನ್ನಲ್ಲಿ ಎಲ್ಲಿ ಮೂಡಿಬಿಡುತ್ತೋ ಎಂಬ ಭಾವ ನನ್ನ ಮನಕೆ ಕಾಡದಿರಲಿಲ್ಲ...ನನ್ನ ಕರುಳ ಸಂಕಟ ಹೇಳಿಕೊಳ್ಳಲು ನೀನ್ನಿನ್ನು ಪುಟ್ಟ ಮಗು...ನನ್ನ ಮಾತನ್ನೆಲ್ಲಾ ಅರಿವ ವಯಸ್ಸು ನಿನ್ನದಲ್ಲ..... ಆದರೊ ಇಷ್ಟು ಪುಟ್ಟ ವಯಸ್ಸಿನಲ್ಲಿ ನಿನ್ನ ನೀ ನಿಭಾಯಿಸಿ ಆತ್ಮಬಲ, ಧೈರ್ಯ,ಶಿಸ್ತು, ನಿಲುವು, ಸ್ವಂತಕಾರ್ಯ ಎಲ್ಲವನು ರೂಢಿಸಿಕೊಂಡು ಬಿಟ್ಟೆಯಲ್ಲಾ ಕಂದ ನಿನಗೆ ನನ್ನ ಸಲಾಮು. ನಿನಗೆ ನಾ ಎಂದೆಂದು ಚಿರಋಣಿ ನೀ ಎಲ್ಲಾ ಮಕ್ಕಳಂತಲ್ಲ ನಿನ್ನಲ್ಲಿನ ವಿಶೇಷತೆ ಹೇಳತೀರದು. ಕಾಣದ ದೇಶದಲ್ಲಿ ನನ್ನವರೆಂಬವರು ಇಲ್ಲದ ಊರಲ್ಲಿ ಶಾಲೆಯಿಂದ ಬಂದೊಡೆ ಅಮ್ಮ ಬಾಗಿಲು ತೆರೆದು ಎನಗೆ ಉಣಬಡಿಸುತ್ತಾಳೆ ಎಂಬ ಭಾವನೆಯಲಿ ಬಾಗಿಲ ಬಳಿ ಬಂದೊಡೆ ಓಹ್!!! ಅಮ್ಮನಿಲ್ಲ ಕೆಲಸಕ್ಕೆ ತೆರೆಳಿದ್ದಾಳೆ ನನ್ಗೆ ನಾನೇ ಎಲ್ಲ ಎಂದು ಭಾವಿಸಿ ಬಾಗಿಲು ತೆರೆದು ಮತ್ತೆ ಬಾಗಿಲು ಭದ್ರಪಡಿಸಿ ನಿನ್ನ ಉಡುಪು ಬದಲಿಸಿ, ಮುಖ ತೊಳೆದು ಟೆಬಲಿನ ಮೇಲಿದ್ದ ಊಟ ತೆಗೆದು ತಿನ್ನುವಾಗ ನೀನೆಸ್ಟು ದಿನ ನೊಂದುಕೊಂಡೆಯೋ ನಾ ಅರಿಯೇ ನನಗೆ ಯಾರಿಲ್ಲ ನನಗಾಗಿ ನಾನೆ ಎಲ್ಲ ಎಂದು ನೊಂದು ತುತ್ತು ತುತ್ತಿಗು ತುತ್ತು ಕೊಡುವವಳ ಶಪಿಸಿದ್ದೆಯೇನೋ ನಾ ತಿಳಿಯೇ ನೀ ಏನೇ ತಿಳಿ ಇದು ನಿನ್ನಮ್ಮ ಎಂದೊ ನಿನ್ನ ಒಳಿತು ಬಯಸೋ ಅಮ್ಮ...........
ನನ್ನ ಉಸಿರ ಒಂದು ಭಾಗ ನೀ..........ನೀ ನನ್ನ ಸ್ನೇಹಿ, ನೀ ನನ್ನ ಪ್ರಾಣ, ನೀನೇ ಎನಗೆ ಎಲ್ಲಾ......ಕಂದ ಈ ನಿನ್ನ ಪೆದ್ದು ಮನಸಿನ ಅಮ್ಮ ಏನೇ ಮಾಡಿದ್ದರೊ ಮನ್ನಿಸಿ ಕ್ಷಮಿಸಿಬಿಡು ಮುಕುಂದ...... ನೀ ಎಲ್ಲವನು ಸಹಿಸಿ, ಎಲ್ಲದಕೊ ಪ್ರೋತ್ಸಾಹಿಸಿ ನನ್ನ ಜೀವನದ ಏಳ್ಗೆಗೆ ಬೆಳಕ ಹಿಡಿದ ಬೆಳಗಿನ ನೇಸರ.....ರಾತ್ರಿಯ ಚಂದ್ರಮ ಎಲ್ಲವೊ ನೀನೇ...ನನ್ನ ಒಡಲ ಚಂದ್ರಮಕೆ ಇಂದು ಎಂಟರ ಮುದ್ದು ಮಯಸ್ಸು...ನನ್ನ ಜೀವನದ ಬೆಳಕಿಗೆ ಹುಟ್ಟು ಹಬ್ಬದ ಸಂತಸದ ಚಂದ್ರಮ........ನನಗೋ ಬೆಳಕನೊಗಳುವ ಸಂಭ್ರಮ.............

ಕಂದ ನಿನಗೆ ನಿನ್ನ ಅಮ್ಮನಿಂದ ಹೃದಾಯಾಂತರಾಳದಿಂದ ಹುಟ್ಟುಹಬ್ಬದ ಶುಭಾಶಯಗಳು....
ಹಾಗು ನಿನ್ನಪ್ಪ ಮೋಟಗೊರಿಲ್ಲಾನಿಂದಲೂ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು....
ನಿನ್ನ ದಿನ ಸುಸವಿದಿನ
ವರುಷಪೂರ್ತಿ.......ಶುಭದಿನ

Tuesday, April 28, 2009

ಬಸವಜಯಂತಿ ಆಚರಣೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ..

ದಟ್ಸ್ ಕನ್ನಡ ಹಾಗು ಕೆಂಡ ಸಂಪಿಗೆಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು .
http://thatskannada.oneindia.in/nri/article/2009/0429-kuwait-kannadigas-celebrate-basava-jayanti.ಹ್ತ್ಮ್ಲ್
http://www.kendasampige.com/article.php?id=1774
ಕಾಯಕದಲ್ಲೇ ಕೈಲಾಸಕಾಣಬೇಕೆಂದು ಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು.ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ... ಅಂತೆಯೇ ನೆನ್ನೆ ಬಸವಜಯಂತಿ ಆದ್ದರಿಂದ ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೆ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು ೭ ಗಂಟೆಗೆ ಪ್ರಾರಂಭವಾಗಿತ್ತು ಗಂಡಸರು ಹಾಗು ಹೆಂಗಸರಿಂದ ಸುಮಾರು ೨೦ ವಚನ ಗಾಯನ ನೆರೆವೇರಿತು..
ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು..ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು..

ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..


ಕೆಲವು ಆಯ್ದ ವಚನಗಳ ಸಾಲುಗಳುಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...

ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...



ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೆ ಆಶೀರ್ವದಿಸಿದರು.
ಈ ಸಮಾರಂಭದ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಸುಂದರ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಸುಸಂಪನವಾಗಿಸಿದ ಎಲ್ಲರಿಗು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತಾ... ಅಣ್ಣನವರ ವಚನದೊಂದಿಗೆ ಕೊನೆಕೊಳ್ಳಿಸುತಲಿದ್ದೇನೆ. ಹಾಗು ಶರಣರ ಬರವೆಮಗೆ ಜೀವಾಳವಯ್ಯ!! ಎಂಬಂತೆ ಈ ಪುಟ್ಟ ಮನೆಗೆ ಬಂದು ಹೋಗುತ್ತಿರುವ ಬ್ಲಾಗ್ ಶರಣ ಶರಣೆಯರೆಲ್ಲರಿಗು ನನ್ನ ಧನ್ಯವಾದಗಳು ಹೀಗೆ ಬರುತ್ತಲಿರಿ.. ಹರಸುತ್ತಲಿರಿ...ತಪ್ಪು ಒಪ್ಪುಗಳನ್ನು ತಿದ್ದುತ್ತಲಿರಿ...
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹದಾನಿ ಕೂಡಲಸಂಗಮ ದೇವನ ಪೊಜಿಸಿ ಬದುಕುವೋ
ಕಾಯವ ನಿಶ್ಚಯಿಸುವೆ!
ಎಲ್ಲರಿಗು ಶುಭವಾಗಲಿ...ಶುಭದಿನ...
ಮನಸು

Sunday, April 12, 2009

ಹೊರಾಂಗಣ ವಿಹಾರ..

ದಾಸಜಯಂತಿಯ ನಂತರ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೧೦.೪.೨೦೦೯ ಕುವೈಟ್ ಸಿಟಿಯ ಶರ್ಕ್ ಉದ್ಯಾನವನದಲ್ಲಿ (sharq garden) ವಿಹಾರವನ್ನು ಏರ್ಪಡಿಸಿದ್ದರು... ಕೂಟದ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಕುಣಿದು ನಲಿದು ಆಟವಾಡಿ ತಮ್ಮ ಸಮಯ ಕಳೆಯಲೆಂಬುದೇ ಈ ವಿಹಾರದ ಉದ್ದೇಶ..ಹಾಗೆಯೆ ನಾವೆಲ್ಲ ಅಪ್ಯಾಯಮಾನವಾಗಿ ಆ ಕುಶಿಯನ್ನು ಅನುಭವಿಸಿ ಬಂದೆವು..
ಶುಭಶುಕ್ರವಾರ ಬೆಳ್ಳಗ್ಗೆ ೭.೩೦ಕ್ಕೆ ಎಲ್ಲ ಕೂಟದ ಸದಸ್ಯರಿಗೆ ನೆಡಿಗೆ ಸ್ಪರ್ಧೆ(walkathon) ಏರ್ಪಡಿಸಿದ್ದರು ಈ ಸ್ಪರ್ಧೆಗೆ ಕೊಟದ ಸದಸ್ಯರು ಅತಿ ಹೆಚ್ಚು ಅಲ್ಲದಿದ್ದರು ಸುಮಾರು ಮಂದಿ ಭಾಗವಹಿಸಿದ್ದರು.... ಈ ನೆಡಿಗೆ ಬರಿ ದೊಡ್ದವರಿಗೆ ಅಲ್ಲದೆ ಚಿಕ್ಕ ಮಕ್ಕಳಿಗು ಏರ್ಪಡಿಸಿದ್ದರು ಆ ಮಕ್ಕಳಲ್ಲಿದ್ದ ಉತ್ಸಾಹ ಹೇಳ ತೀರದು ಎಲ್ಲರು ನಾ ಮುಂದು ತಾ ಮುಂದು ಎಂದು ಅತಿ ಸಂತೋಷದಿ ಭಾಗವಹಿಸಿದರು...ಸುಮಾರು ೮.೩೦ಕ್ಕೆ ಮುಕ್ತಾಯವಾಗುವಷ್ಟರಲ್ಲಿ ಎಲ್ಲರು ನೆಡೆದು ತುಂಬಾ ಸುಸ್ತಾಗಿದ್ದರೆಂದು ಎಲ್ಲರಿಗು ಉಪಹಾರದ ಏರ್ಪಾಟು ಮಾಡಿದ್ದರು...ಎಲ್ಲರು ಉಪಹಾರದ ನಂತರ ಇನ್ನೆನು ಆಟೋಟಗಳನ್ನು ಪ್ರಾರಂಭಿಸಬೇಕಲ್ಲ ಅದಕ್ಕೆಂದೆ ನೇಮಿಸಿರುವ ತಂಡಗಳನ್ನು ಎಲ್ಲರು ಹುಡುಕುವ ಯೋಚನೆಯಲ್ಲಿದ್ದರು ನಮ್ಮಲ್ಲಿ ನೇತ್ರಾವತಿ(ಹಳದಿಬಣ್ಣ), ಕಾವೇರಿ(ನೀಲಿ), ಶರಾವತಿ(ಹಸಿರು), ಹೇಮಾವತಿ(ಕೆಂಪು) ಎಂದು ನಾಲ್ಕು ಗುಂಪುಗಳನ್ನಾಗಿ ಅದಕ್ಕೆ ತಕ್ಕಂತೆ ಬಣ್ಣಗಳನ್ನು ಮಾಡಲಾಗಿದೆ ಇಲ್ಲಿ ಎಲ್ಲ ಮಕ್ಕಳು ಹೆಂಗಸರು, ಗಂಡಸರನ್ನು ಒಂದೊಂದು ಗುಂಪಿಗು ಇಷ್ಟು ಜನರೆಂದು ವಿಂಗಡಿಸಲಾಗಿದೆ.. ಈ ಸಮಯಕ್ಕಾಗಲೇ ಉಳಿದೆಲ್ಲಾ ಕುಟುಂಬಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು, ಎಲ್ಲರು ಅವರವರ ಟೀಮ್ ನಲ್ಲಿ ನಿಂತು ಆಟೋಟ ಕಾರ್ಯಕ್ರಮ ಚಾಲನೆಗೆಂದು ಕಾದು ನಿಂತಿದ್ದರು.. ಟೀಮ್ ಕ್ಯಾಪ್ಟನ್ ಎಲ್ಲರು ಪಂಜು ಹಿಡಿದು ನೆಡೆದು ನಂತರ ಕಾರ್ಯಕಾರಿ ಸಮಿತಿಯವರಿಗೆ ವರ್ಗಾಯಿಸಿದರು ಕಾರ್ಯಕಾರಿ ಸಮಿತಿಯವರು ಕುಟುಂಬ ಸಮೇತರಾಗಿ ಆ ಪಂಜನ್ನು ಹಿಡಿದು ಉದ್ಯಾನವನ್ನು ಒಂದು ಸುತ್ತುವರಿದು ಬಂದು ಜ್ಯೋತಿ ಬೆಳಗಿಸಿದರು...ನಂತರ ಬೆಲೂನ್ ಹಾಗು ಪಾರಿವಾಳಗಳನ್ನು ಆಗಸಕ್ಕೆ ತೇಲಿಬಿಟ್ಟರು.....ಇತ್ತ ಕೂಟದ ಸದಸ್ಯರು ಜೋರಾಗಿ ಚಪ್ಪಾಳೆಯೊಂದಿಗೆ ನಗುವಿನ ಹೊಳೆ ಹರಿಸುತ್ತಾ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು........ ಇಷ್ಟೆಲ್ಲ ನೆಡೆಯುವವರೆಗು ನೇಸರ ಬಲು ಶಾಂತಿಯಿಂದ ಮೋಡದಲ್ಲಿ ಮನೆಮಾಡಿ ಕುಳಿತಿದ್ದ ನಾವೆಲ್ಲ ಕುಣಿದು ಕುಪ್ಪಳಿಸುವವರೆಗು ನೀ ಹಾಗೆ ಇದ್ದುಬಿಡು ಶಾಂತಿಯಿಂದ ಎಂದು ಹೇಳಿಬಿಟ್ಟೆ ಆದರೆ ಅವನು ಕೇಳಬೇಕಲ್ಲ ಅವನಿಗು ಅವನ ಕೆಲಸ ಮಾಡುವಾಸೆ ಬಿಸಿಲ ತಾಪ ಸ್ವಲ್ಪ ಸ್ವಲ್ಪ ಭುವಿಗೆ ಇಳಿಯಲುಬಿಡುತ್ತಿದ್ದ...ಈ ಕಾರ್ಯಕ್ರಮದ ನಂತರ ಮಕ್ಕಳಿಗೆಂದೇ ಆಟಗಳನ್ನು ಏರ್ಪಡಿಸಿದ್ದರು೧. ೫ ವರ್ಷಕ್ಕಿಂತ ಕಡಿಮೆ ಇರುವಂತ ಮಕ್ಕಳಿಗೆ ದೊಡ್ಡ ಶೊ ಧರಿಸಿ ನೆಡೆಯುವುದು.. (Big Shoe Walk), ಮತ್ತೊಂದು ವಕ್ರ ನೆಡಿಗೆ (Zigzag Walk)೨. ೫ ರಿಂದ ೮ ವರ್ಷದ ಮಕ್ಕಳಿಗೆ ಕೋಲಿ(ಕಡ್ಡಿ)ನೊಂದಿಗೆ ಉಂಗುರ (Pole with Rings) ಹಾಗು ಕುಂಟು ಓಟ (One leg Race)೩. ೮ ರಿಂದ ೧೨ ಮತ್ತು ೧೨ರಿಂದ ೧೮ ವರ್ಷದ ಮಕ್ಕಳಿಗೆ ಓಟ (Relay) ಹಾಗು ರಿಂಗ್(ಉಂಗುರ) ಓಟ (Ring Race). ಎಲ್ಲ ಆಟೋಟಗಳಲ್ಲಿ ಎಲ್ಲ ಮಕ್ಕಳು ಮನಸೋ ಇಚ್ಚೆ ಸಂತೋಷದಿಂದ ಭಾಗವಹಿಸಿ ಕೆಲವು ಮಕ್ಕಳು ಪ್ರಶಸ್ತಿಗೆ ಪಾತ್ರರಾದರು ಇನ್ನು ಕೆಲವು ಮಕ್ಕಳು ಬೇಸರಪಟ್ಟರು ಪ್ರಶಸ್ತಿ ಬರಲಿಲ್ಲವೆಂದು ಆದರು ಅವರೆಲ್ಲ ಪಾಲ್ಗೊಂಡಿದ್ದರಲ್ಲ ಅದೇ ಮುಖ್ಯ...ಈ ಎಲ್ಲ ಆಟಗಳು ಮುಗಿಯುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದು ಕುಟುಕುತಲಿದ್ದ....ಆದರು ನಮಗೆ ಸಮಾಧಾನವಿರಲಿಲ್ಲ ಭಾಸ್ಕರನು ದಿನವೆಲ್ಲ ಬಂದೇ ಬರುತ್ತಾನೆ ಆದರೆ ನಾವು ಈ ವಿಹಾರಕ್ಕೆ ಬಂದಿರುವುದು ಈ ದಿನ ಮಾತ್ರವಲ್ಲವೇ ದೊಡ್ಡವರು ಸ್ವಲ್ಪ ಆಟೋಟಗಳನ್ನು ಆಡಿಬಿಡೋಣವೆಂಬ ಬಯಕೆ ಇತ್ತು ಅದಕ್ಕೆಂದೆ ಕ್ರೀಡಾಸಮಿತಿ ಮಕ್ಕಳಿಗೆ ಆಟೋಟಗಳು ಇದ್ದಮೇಲೆ ದೊಡ್ಡವರು ಏನು ಮಾಡಬೇಕು ಎಂದು ನಮ್ಮೆಲ್ಲರಿಗು ಆಟಗಳನ್ನು ಏರ್ಪಡಿಸಿದ್ದರು ಖೋ-ಖೋ ಮಹಿಳೆಯರಿಗೆ (ಈ ಆಟ ನಮ್ಮ ಹಳೆಯ ಹಾಗು ರಾಜ್ಯಮಟ್ಟದ ಆಟ) ಹಾಗು ವಾಲಿಬಾಲ್ ಗಂಡಸರಿಗೆಂದು ನಿಶ್ಚಯವಾಗಿತ್ತು. ಕ್ರಿಕೆಟ್ ಎಂಬ ಆಟ ಬಂದು ಹಳೆಯ ನಮ್ಮದೇ ಆದ ಆಟಗಳು ನಶಿಸುವಂತೆ ಮಾಡಿದೆ ಕ್ರಿಕೆಟಿಗೆ ಏನು ಹೇಳುವಂತಿಲ್ಲ ಆಡುವವರು ನಾವುಗಳಲ್ಲವೇ ನಾವುಗಳು ನಮ್ಮ ಆಟಗಳನ್ನು ಮರೆತು ಬೇರೆ ಆಟೋಟಗಳನ್ನು ಪ್ರೀತಿಸಲು ಮುಂದಾಗಿ ನಮ್ಮದನ್ನು ನಶಿಸಿಸುವಂತೆ ಮಾಡಿಬಿಡುತ್ತಲಿದ್ದೇವೆ ಅಲ್ಲವೆ?... ಆದರೆ ನಮ್ಮ ಕೂಟದಲ್ಲಿ ಹಳೆಯದನ್ನು ಮೆಲುಕು ಆಕಲಿಕ್ಕೆಂದು ಈ ಎಲ್ಲಾ ಆಟೋಟಗಳನ್ನು ನೆರೆವೇರಿಸಿದರು... ಖೋ-ಖೋವೇನೋ ಎಲ್ಲಾ ಮಹಿಳೆಯರು ಅತಿ ಪ್ರೀತಿಯಿಂದ ಬಿದ್ದು ಎದ್ದು... ಮಣ್ಣಲ್ಲಿ ಮಿಂದು ಬಂದರು ಅತಿ ಆಸೆಯಿಂದ ಬಾಲ್ಯದಿನಗಳಲ್ಲಿ ಆಡುತ್ತಲಿದ್ದ ಖೋವನ್ನು ನೆನೆದು ಅನುಭವಿಸಿ ಆಡಿದರು...ಈ ಸಮಯಕ್ಕಾಗಲೇ ನಾಲ್ಕು ತಂಡಗಳಲ್ಲಿ ಕಾವೇರಿ ಹಾಗು ನೇತ್ರಾವತಿ ತಂಡಕ್ಕೆ ಹಣಹಣಿ ನೆಡೆದು ಅವರು ಅಂತಿಮ ಸುತ್ತಿಗೆ ನೇತ್ರಾವತಿ ಸಚ್ಚಾಗಿತ್ತು ಇನ್ನೋಂದು ತಂಡ ಶರಾವತಿ ಹಾಗು ಹೇಮಾವತಿ ಇವರಲ್ಲಿ ತೀವ್ರ ಪೈಪೋಟಿ ನೆಡೆದು ಹೇಮಾವತಿ ತಂಡ ಅಂತಿಮ ಸುತ್ತಿಗೆ ಬಂದಿದ್ದರು ಆಗ ತಾನೆ ಆಟವಾಡಿದ್ದ ತಂಡಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಗಂಡಸರ ತಂಡಗಳತ್ತ ವಾಲುವ ಮನಸು ಮಾಡಿದರು ಕ್ರೀಡಾ ಸಮಿತಿ...ವಾಲಿಬಾಲ್ ಆಟವನ್ನು ಎಲ್ಲರು ಸಂತಸದಿ ಹಿರಿಯರು ಕಿರಿಯರು ಎನ್ನದೇ ಇಲ್ಲಿಯು ಸಹ ತಂಡಗಳು ಮನಸೋ ಇಚ್ಚೆ ಕುಣಿದು ನಲಿದರು... ಇಲ್ಲಿ ನೇತ್ರಾವತಿ ಹಾಗು ಹೇಮಾವತಿ ತಂಡಗಳ ಹಣಾಹಣಿಯಲ್ಲಿ ನೇತ್ರಾವತಿಯದೆ ಮೇಲುಗೈ ಹಾಗು ಕಾವೇರಿ ಮತ್ತು ಶರಾವತಿಯವರ ತಂಡದಿಂದ ಶರಾವತಿಯವರದೇ ಮೇಲುಗೈ. ಕೊನೆಯ ಹಾಗು ಅಂತಿಮ ಹಣಾಹಣಿಯಲ್ಲಿ ಶರಾವತಿಯವರ ಮೇಲುಗೈ ಸಾಧಿಸಿ ಮೊದಲ ಸ್ಥಾನಕ್ಕೆ ಪಾತ್ರರಾದರು...ನೇತ್ರಾವತಿ ಎರಡನೇ ಸ್ಥಾನಕ್ಕೆ ಪಾತ್ರರಾದರು..
ಇಷ್ಟೆಲ್ಲ ನೆಡೆಯುವಷ್ಟರಲ್ಲಿ ಹೊಟ್ಟೆಯು ಕರೆದಿತ್ತು ಸೂರ್ಯನು ಬಿಸಿಲ ತಾಪವನ್ನು ಚುರುಗುಟ್ಟಿಸುತ್ತಲಿದ್ದನು ಮಧ್ಯೆ ಮಜ್ಜಿಗೆಯನ್ನು ಕುಡಿದು ಮತ್ತೆ ಖೋ-ಖೋ ಅಂತಿಮ ಹಣಾಹಣಿ ನೋಡಲು ಎಲ್ಲರು ಅಲ್ಲಿ ನೆರೆದಿದ್ದರು ಹೇಮಾವತಿ ತಂಡ ಟಾಸ್ ಗೆದ್ದು ನೇತ್ರಾವತಿಯವರು ಕುಳಿತು ಆಡಲು ಬಿಟ್ಟರು ಅವರು ಮೈದಾನವನ್ನು ಆಯ್ಕೆ ಮಾಡಿದರು ಇಬ್ಬರ ಹಣಾಹಣಿ ಬಲು ಜೋರೆ ನೆಡೆದಿತ್ತು ಎಲ್ಲೋ ಒಲಂಪಿಕ್ಸ್ ಗೆ ಆಡುತ್ತಲಿದ್ದಾರೇನೋ ಎನ್ನುವ ಹಾಗೆ ಎರಡು ಟೀಮಿನ ಆಟಗಾರರು ಬಲು ಶ್ರಮದಿಂದ ಮೈದಾನಕ್ಕೆ ಮೈ ಒಡ್ಡಿ ಬಟ್ಟೆಗೆಲ್ಲ ಮಣ್ಣು ಮುಕ್ಕಿಸಿಕೊಂಡು ಆಡಿದರು ಎನೇಆಗಲಿ ಅವಿಸ್ಮರಣೀಯ ಆಟವೇ ಸರಿ.. ದೇಹ ಭಾರವಾದರು ಮೈಕೈ ನೋವಾದರು ಅದ ಲೆಕ್ಕಿಸದೇ ಎಲ್ಲರು ಆಟದಲ್ಲಿ ಮುಳುಗಿಬಿಟ್ಟಿದ್ದರು ಅಂತೆಯೇ ಪ್ರೋತ್ಸಾಹದ ಚಪ್ಪಾಳೆಗಳು ಹುರಿದುಂಬಿಸುವ ಮಾತುಗಳು ಅತ್ತಕಡೆಯಿಂದ ಕೇಳಿಬರುತ್ತಿದ್ದ ಧ್ವನಿಗಳಲ್ಲಿ ಚಿಣ್ಣರು ದೊಡ್ಡವರು ಕರುನಾಡಿಂದ ಬಂದಿದ್ದ ಅಪ್ಪ ಅಮ್ಮಂದಿರು ಎಲ್ಲರು ಸೇರಿದ್ದರು... ಕೊನೆಗೆ ಅತಿ ಹೋರಾಟದಿ ನೇತ್ರಾವತಿ ತಂಡ ಮೊದಲ ಸ್ಥಾನಕ್ಕೆ ಪಾತ್ರರಾದರು ಹಾಗು ಹೇಮಾವತಿ ತಂಡ ಎರಡನೇ ಸ್ಥಾನಕ್ಕೆಪಾತ್ರರಾದರು..
ಇದರ ನಂತರ ಎಲ್ಲರಿಂದ ಹೋಗಳಿಕೆ ನಂತರ ವನಭೋಜನಕ್ಕೆಂದು ಸಾಲು ಸಾಲಗಿ ನಿಂತೆವು ಎಲ್ಲರು ವೃಕ್ಷರಾಶಿಯಲಿ ಅಲ್ಲೊಂದು ಇಲ್ಲೊಂದು ಕಾಣುವ ಪಕ್ಷಿಗಳು,ಜೊತೆಗೆ ಹುಲ್ಲುಹಾಸಿನ ಮೇಲೆ ಕುಳಿತು ಊಟವನ್ನು ಸವಿದೆವು...ಇಷ್ಟರನಂತರ ಕೇಳಬೇಕೆ ಊಟವಾಯಿತು ನಿದ್ದೆ ಜೋಂಪೆತ್ತುವ ಸಮಯ ಆಗಲೇ ಅತ್ತಕಡೆಯಿಂದ ಬಿಂಗೋ ಆಡುವ ಬನ್ನಿ ಎಂದು ಕೋಗುವ ಕರೆಕೇಳಿ ಎಲ್ಲರು ಹುಲ್ಲಿನ ಮೇಲೆ ಆಸೀನರಾಗಿ ನಮ್ಮಲ್ಲಿದ್ದ ಬಿಂಗೋ ಚೀಟಿ ಹಿಡಿದು ಈಗ ನನ್ನ ಅಂಕಿ ಬರಬಹುದು.....ಬರಬಹುದು........ಎಂದು ಕಾಯುತ್ತ ಯಾರದೋ ಅಂಕಿಗಳಲ್ಲಿ ಮೊದಲ ಐದು ಅಂಕಿ ಆಯ್ತು(quick five), ಮೊದಲನೇ,ಎರಡನೇ,ಮೂರನೇ ಲೈನ್ ಆಯ್ತು(first,second, third line) ಎಂದು ಅವರಿಗೆ ದೊರೆಯಬೇಕಿದ್ದ ಎಲ್ಲ ಬಳುವಳಿ ಕೊಟ್ಟುಬಿಟ್ಟಿದ್ದರು ಇನ್ನೆನು ಪೂರ್ತಿ ಮನೆಯ ಅಂಕಿಗಳಲ್ಲಾದರು ನನ್ಗೆ ಸಿಗುತ್ತೆಂದು ಕಾಯುವಷ್ಟರಲ್ಲಿ ೩,೪ ಜನ ಮುಗಿಬಿದ್ದು ನನಗೆ ಬಂದಿದೆ ಪೂರ್ತಿ ಮನೆಅಂಕಿ(full house) ಹ ಹ ಹ ಹ...ಇರಲಿ ಇಷ್ಟು ಜನರಲ್ಲಿ ಯಾರು ಅದೃಷ್ಟವಂತರೋ ಅವರಿಗೆ ದೊರಕಿದೆ ಅಲ್ಲವೆ...? ಇನ್ನೇನು ಮುಗಿದುಬಿಟ್ಟಿತು ಎನ್ನುವಷ್ಟರಲ್ಲಿ ಕಾಫಿ,ಟೀ ಬಿಸ್ಕೇಟ್ ಬಂದುಬಿಟ್ಟಿತು ಎಲ್ಲರು ಸಂಜೆಸವಿಯಲ್ಲಿ ಕಾಫಿಟೀ ಸವಿಯುತ್ತಾ ಪ್ರಶಸ್ತಿ ಸಮಾರಂಭಕ್ಕೆ ಅಣಿಯಾಗಿ ಕುಳಿತೆವು ಎಲ್ಲಾ ಮಕ್ಕಳ ಪ್ರಶಸ್ತಿ ದೊಡ್ಡವರಿಗೆ ಎಲವನ್ನು ಇತ್ತು ಎಲ್ಲರ ಮನ ತಣಿಸಿಬಿಟ್ಟರು ಕಾರ್ಯಕಾರಿ ಸಮಿತಿಯವರು...ಆಟ, ಊಟ...ಮುಗಿಯಿತು ಈಗ ಮನೆಕಡೆ ಓಟ....
ಚಾಚು ತಪ್ಪದೇ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿ ಸಾಂಘವಾಗಿ ನೇರವೇರಿಸಿದ ಕ್ರೀಡಾ ಸಮಿತಿಗೆ ಹಾಗು ಅವರಿಗೆ ಕೈ ಜೋಡಿಸಿ ಆಟೋಟಾಗಳನ್ನು ನೇರೆವೇರಿಸಿಕೊಟ್ಟ ಹಲವಾರು ಮಂದಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು...
ಮತ್ತೊಂದು ಕೊನೆಯ ಮಾತು ಖೋ-ಖೋ ಆಟವಾಡಿ ಮೈ ಕೈ ತುಂಬಾ ನೋವಾಗಿತ್ತು ಆದರೊ ಮೈಕೈ ನೋವಿಗೆ ಮಾತ್ರೆ ತೆಗೆದುಕೊಂಡರೆ ೧ ಅಥವಾ ಎರಡು ದಿನದಲ್ಲಿ ಎಲ್ಲವೊ ಮಾಯವಾಗುತ್ತೆ ಆದರೆ ಬಾಲ್ಯದ ದಿನ ಮರುಕಳಿಸಿ ನಮ್ಮ ಆಟವನ್ನು ನೆನಪಿಸಿ ನಮಗೆ ಖುಷಿ ನೀಡಿದ ಆ ರಸಘಳಿಗೆ ಮಾತ್ರ ಶಾಶ್ವತವಾಗಿರುತ್ತೆಂದು ಹೇಳಬಯಸುತ್ತೇನೆ........ಎಲ್ಲಾ ಕ್ರೀಡಾ ಮನೋಲ್ಲಾಸಿಗಳಿಗೆ ಹಾಗು ಕ್ರೀಡಾ ಪ್ರಿಯರಿಗೆ ಮನತಣಿಸಿದ ಕ್ರೀಡಾಸಮಿತಿಗೆ ಮತ್ತೊಮ್ಮೆ ಮಗದೊಮ್ಮೆ ಆತ್ಮೀಯವಾಗಿ ವಂದನೆಗಳನ್ನ ಸಲ್ಲಿಸುತ್ತೇವೆ...
ವಂದನೆಗಳು..
ಶುಭದಿನ..
ವಿಹಾರದಲ್ಲಿ ತಣಿದ ಎಲ್ಲರ ಮನಸು..

Wednesday, April 8, 2009

ನಿನ್ನ-ಸ್ನೇಹ

ಸ್ನೇಹದ ಹೆಸರಲ್ಲಿ ನೀ ಒಲಿದು ಬಂದೆ
ನಿನ್ನ ಸ್ನೇಹಕೆ ನಾ ಸೋತು ನಿಂದೆ
ಕೆಲವೇ ದಿನವಾದರು ಸ್ನೇಹ
ಅದು ಭದ್ರಬುನಾದಿಯಾಗಿದೆ

ಅದೇಕೊ ಇಷ್ಟುಕಾಲ ಜೊತೆಗಿದ್ದು
ಇಂದು ದೂರ ಸರಿವ ಮಾತಾಡಿದೆ
ನನ್ನ ಮನಕೆ ಚೂರಿ ಚುಚ್ಚಂತಾಯಿತು
ಹೃದಯ ಒಮ್ಮೆಲೆ ಮಮ್ಮಲ ಮರುಗಿತು...

ನಾನೆಲ್ಲೊ ಸೋತೆ ಸ್ನೇಹದ ಆಯ್ಕೆಯಲಿ
ಎಂದು ಭಾವಿಸಿ ಮೂಕಳಾದೆ
ಕಡಲ ಅಲೆಯ ಅಬ್ಬರಕೆ
ಕೊಚ್ಚುಹೋದಂತೆ ಭಾಸವಾಯ್ತು..

ಹೋದ ರಭಸಕೆ ಕಣ್ಣೀರ ಧಾರೆ
ಧರೆಗಿಳಿಸಿ ಭುವಿಯ ತೊಯಿಸಿಬಿಟ್ಟೆ
ಮತ್ತದೆ ಕಡಲ ಅಲೆಯು ನಿನ್ನ
ಭಾಚಿ ತಬ್ಬಿ ನಾನಿರುವ ದಡಕೆ
ತಂದೆಸೆಯಿತು.....

ನೀ ಬಂದಿದ ಕಂಡು ಮನಹಗುರಾಯಿತು
ನೀ ಸಿಗುವುದಿಲ್ಲದ ಮಾತು ಮರೆಮಾಚಿಸಿತು
ಮತ್ತೊಮ್ಮೆ ಹೇಳಿದೆ ಮನವೇಕೋ ಭಾರ
ಕೆಲವರ ಮಾತು ಕೇಳಿ ನಿಂತಿದೆ ಸ್ವರ...

ನೀ ಮಾಡಿದು ತಪ್ಪಲ್ಲವೇ ಸ್ನೇಹಿ
ಗೌಡನ ಮೇಲ್ಲಿದ್ದ ಸಿಟ್ಟನು...
ಗೋಡೆಗೆ ತಟ್ಟಿಬಿಟ್ಟೆಯಲ್ಲಾ...
ಸ್ನೇಹದ ಮನ ಕ್ಷಣದಲೇ ನೋಯಿಸಿಬಿಟ್ಟೆಯಲ್ಲಾ...

ನಿನ್ನ ನೋವೆನಿತಿದ್ದರು ತಿಳಿಸಿಬಿಡು
ನಿನ್ನ ಮನವ ಹಗುರಾಗಲು ಬಿಡು
ನೀನು, ನಾನು ಶಾಶ್ವತವಲ್ಲ ಅಲ್ಲವೆ ...?
ಸ್ನೇಹ ಮಾತ್ರ ಚಿರಾಯು.. ಅದ ಅರಿತುಬಿಡು

ಮತ್ತೆಂದು ದೂರಸರಿವ ಮಾತಾಡದಿರು
ಹೃದಯ ವಿದ್ರಾವಕೆ ಸ್ನೇಹಿಯ ತಳ್ಳದಿರು
ಸ್ನೇಹ ಸಿಂಚನದ ಸಿಹಿ ನೀ ಅರಿತಿರು
ನೀ ಎಂದಿದ್ದರು ಸ್ನೇಹ ಜೀವಿ.. ಅದ ಮರೆಯದಿರು
ಸ್ನೇಹದ ಹೆಸರಲ್ಲಿ ಕೆಲವು ಏರುಪೇರು ನೆಡೆಯುತ್ತವೆ ಸ್ನೇಹ ಕೈಜಾರಿ ಹೋಗಲು ಬಿಡದೆ ಕಾಪಡಿಕೊಳ್ಳಬೇಕು...ಸ್ನೇಹಕ್ಕೆ ಸ್ನೇಹವೇ ಸರಿಸಾಟಿ.....ಮನವೆಂಬ ಮಂಟಪದಿ ಮನುವೆಂಬ ಜೀವಿಯಿರಲು ಅದೇ ನಮಗೆ ಸ್ನೇಹಿ ಆ ಸ್ನೇಹಿಗೆ ಕೈಜೋಡಿಸುವ ಸ್ನೇಹಿ ಸಿಕ್ಕರೆ ಅವರು ಧನ್ಯರು. ಸ್ನೇಹ ಮಾಡುವುದು ನಿಮಿಷದಲ್ಲಿ ಅದ ನಿಭಾಯಿಸುವುದು ಜೀವನಪರ್ಯಂತದಲ್ಲಿ....ಯಾರು ಎಷ್ಟು ನಿಭಾಯಿಸುತ್ತೆವೊ ತಿಳಿಯದು.... ಒಳ್ಳೆ ಸ್ನೇಹಿ ಎಂದು ತಿಳಿದರೆ ಅವರು ನಿಮ್ಮಿಂದ ದೂರಾಗಲು ಬಿಡದಿರಿ....
ಶುಭದಿನ
ಮನಸು...

Wednesday, April 1, 2009

ನಡೆದಾಡುವ ದೇವರಿಗೆ ನಮ್ಮ ಶುಭಾಶಯಗಳು..

ಇಂದು ಶ್ರಿ ಶಿವಕುಮಾರ ಸ್ವಾಮಿಗಳಾ ಜನ್ಮದಿನ ಅವರನ್ನು ನೆನೆಯುತ್ತ ಸಾಧನಾ ಶೀಲರಾದ, ಯಾವುದೆ ಹೆಸರು, ಬಿರುದು ಬಯಸದ ಶ್ರಿಗಳಿ ನಮ್ಮ ಹೃತ್ಪೂರ್ವಕ ನಮನಗಳು..
ಅವರ ಜನನ ಏಪ್ರಿಲ್ ೧ ೧೯೦೭, ಹುಟ್ಟೂರು ವೀರಾಪುರ.
ನಮ್ಮ ಮನೆಯಲ್ಲಿ ಪೂಜಿಸೊ ಶ್ರಿಗಳ ಪಾದುಕೆ


ಶ್ರಿಗಳ ಆಸನ ಅವರು ಮಲಗೊ ಕೊಠಡಿ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೊ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೊ ಸಲ್ಲರಯ್ಯ
ಕೂಡಲಸಂಗಮದೇವ.... ಬಸವಣ್ಣನವರ ವಚನದಂತೆ ಶ್ರಿಗಳು ಎಲ್ಲೆಲ್ಲಿಯು ಸಲ್ಲುವರು ಎಲ್ಲರಿಗು ಸಲ್ಲುವರು
ಅವರ ಜೀವನದ ಸಾಧನೆ ಅವರ ಧ್ಯೇಯ ಎಲ್ಲವೊ ಒಳಿತಿನೆಡೆಗೆ ಸಮಾಜದ ಉದ್ದಾರಕ್ಕಾಗೇ ಮೀಸಲು..ಇಂತಹ ಮಹಾನ್ ಚೇತನರನ್ನು ನಾನು ಮನಸಾರೆ ನೆನೆದು ಅವರ ಸಾಧನೆ ನಮಗೆ ದಾರಿದೀಪವಾಗಲೆಂದು ಬಯಸುತ್ತಾ ಅವರ ಪಾದಾರವಿಂದಕ್ಕೆ ಮನದಲ್ಲೇ ಎರಗುತ್ತಾ ನಮಿಸುತ್ತೆನೆ...
ಗುರುಗಳಿಗೆ ನಮಿಸುತ್ತಾ
ನಿಮ್ಮೆಲ್ಲರಿಗು ವಂದನೆಗಳು
ಶುಭದಿನ..

Thursday, March 26, 2009

ಯುಗಾದಿ


ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು....

ಚೈತ್ರ ರಥವೇರಿ ಬರುವಾಗ
ಹೊಸಬಾಳ ಹೊಸ್ತಿಲಲಿ ನಿಂತಾಗ
ಹಳೆಯದನೆಲ್ಲ ಹಿಂದಿಕ್ಕಿ.....
ನಿಸರ್ಗದ ಹೊಸತನ್ನು ಸ್ವೀಕರಿಸು
ಎಂದೇಳುವ.. ಈ ದಿನವೇ...ಯುಗಾದಿ

ಮೈಗೆ ಎಣ್ಣೆ ಹಚ್ಚಿ, ಬೇವಿನನೀರಿಂದ
ಮೈಯ ಕಲ್ಮಶ ತೊಳೆದು
ಬೇವು-ಬೆಲ್ಲ ಸಿಹಿ-ಕಹಿಯನು
ಸಮನಾಗಿ ಎಲ್ಲರಿಗೆ ಹಂಚುತ್ತ
ಸುಖ-ದುಃಖದ ಸಂಕೇತವಾಗಿರುವುದೇ ಯುಗಾದಿ...

ಬಾಗಿಲಿಗೆ ತೋರಣವ ಕಟ್ಟಿ
ನೆಲಕೆ ರಂಗೋಲಿಯ ಮೂಡಿಸಿ
ಹೊಸಬಟ್ಟೆ, ಸಿಹಿ ಊಟ
ಎಲ್ಲರ ಮನೆ ಮನೆಯಲಿ
ಹೊಸತು ಹರುಷ ತುಂಬಿಬರಲು...ಅದುವೇ ಯುಗಾದಿ

ವಸಂತಕಾಲದ ಹಸಿರ ಚಿಗುರು ಸವಿದ
ಕೋಗಿಲೆಯು ಸೊಸುವ ಹಿಂಪಾದ ಕಂಠನಾದ...
ಮೊಗ್ಗು ಹೂವಾಗಲು ದುಂಬಿಗೆ ಝೇಂಕಾರ
ನಿಸರ್ಗ ಸೃಷ್ಟಿಯೇ ಪ್ರಾಯತುಂಬಿ
ಮಿರಿಮಿರಿ ಬೆಳಕ ಸೂಸುವ ಈ ದಿನವೇ ಯುಗಾದಿ....

ದೇಗುಲಗಳಲಿ ಮುಂಜಾವಿನ ಪೂಜೆ
ಸುಗಂಧದ್ರವ್ಯಗಳೊಂದಿಗೆ ಘಂಟಾನಾದ
ರೈತ ತನ್ನ ಹಸು-ಕರುಗಳ ಸಿಂಗರಿಸಿ
ಮಿರಿ ಮಿರಿ ಮಿಂಚಿಸಿ ಪೂಜೆಗೈವನು..
ಮನುಕುಲಕೆ ಹೊಸ ಆಯಾಮ ನೀಡುವದಿನವೇ..ಈ ಯುಗಾದಿ...



ಹೊಸ ವರ್ಷದ ಹೊಸ್ತಿಲಿಗೆ ಕಾಲಿಡುತ್ತಲಿರುವ ತಮ್ಮೆಲ್ಲರಿಗು ನಮ್ಮ ಶುಭಾಶಯಗಳು... ನಗು ನಗುತ ಬಾಳೋಣ ದ್ವೇಷ ಅಸೊಯೆ ಎಲ್ಲವನು ಮರೆತು ಬೇವು-ಬೆಲ್ಲದಿ ಸುಖ ದುಃಖವ ಸಮನಾಗಿ ಭಾವಿಸಿ.... ಎಲ್ಲರಲಿ ಸಹೃದಯಿಗಳಾಗಿ ಬಾಳೋಣ..



ನಿಮ್ಮವರೆ ಆದ...
ಮನಸು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು...
ವಂದನೆಗಳು..ಶುಭದಿನ....

Tuesday, March 24, 2009

ಕನ್ನಡಿಗರಿಗೊಂದು ಮಾಹಿತಿ...

ಪ್ರಿಯ ಸ್ನೇಹಿತರೆ..
ನಾವು ಕನ್ನಡಿಗರು ನಮ್ಮ ಕನ್ನಡ ನಾಡು, ನುಡಿ ಸಂಸ್ಕೃತಿಯ ನಾವೆಲ್ಲ ತಿಳಿಯಬೇಕು,ನಮ್ಮ ಸಂಸ್ಕೃತಿಯನ್ನು ಬೆಳಗಿದ ಬೆಳಗುತ್ತಿರುವ ನಮ್ಮ ಕವಿವರ್ಯರ ಬಗ್ಗೆ ನಮ್ಮಲ್ಲಿ ಎಷ್ಟು ಮಂದಿಗೆ ತಿಳಿದಿದೆ ಹೇಳಿ...ಹುಡುಕಿದರೆ ಕೇವಲ ಬೆರಳೆಣಿಕೆಯಷ್ಟು ಜನ ಸಿಗಬಹುದೇನೋ... ನಮಗೆ ತಿಳಿಯದಿರುವುದು ಎಷ್ಟೊ ಈ ಜಗತ್ತಿನಲ್ಲಿದೆ...

ಕೆಲವು ದಿನಗಳ ಹಿಂದೆಯಷ್ಟೆ ಅಂತರ್ಜಾಲದಲ್ಲಿ ಕನ್ನಡ ಕವಿ ಎಂಬ ವೆಬ್ ಸೈಟ್ ನೋಡಿದೆ..ಅಲ್ಲಿನ ಮಾಹಿತಿ ಎಲ್ಲವೊ ಮನಸೂರೆ ಮಾಡಿತು.. ಈ ತಾಣದಲ್ಲಿ ನಮ್ಮ ಕನ್ನಡ ನಾಡ ಕವಿಗಳಲ್ಲಿ, ಜಾನಪದ ಸಾಹಿತಿಗಳು,ಹಳೆಗನ್ನಡ ಕವಿಗಳು, ಕಾದಂಬರಿಕಾರರು, ಹಾಸ್ಯ ಸಾಹಿತಿಗಳು ಇನ್ನು ಹತ್ತು ಹಲವು ವಿಚಾರ ವೇದಿಕೆ ಅಲ್ಲಿ ಬಿಂಬಿತವಾಗಿದೆ... ನಾವೆಲ್ಲರು ಆ ಸಾಹಸ ಪಥಕ್ಕೆ ಕಣ್ಣಾಡಿಸಿ ನಮ್ಮಿಂದಾಗೋ ಸೇವೆಯನ್ನು ಮೀಸಲಿಡುವ ಬನ್ನಿ....ನೀವು ಈ ತಾಣ ಕಂಡಕೂಡಲೆ ಮನಸೋಲಬಹುದು...

ಕನ್ನಡ ಸಂಸ್ಕೃತಿ,ನಾಡ ಹಿರಿಮೆ ಗರಿಮೆ ಎಲ್ಲದರ ಪರಿ ನಮಗೆ ಉಣಬಡಿಸಿದ ನಮ್ಮ ಈ ಮಹಾನ್ ಕವಿಶ್ರೇಷ್ಠರ ಸಾರ್ಥಕ ಬಾವವನ್ನೆಲ್ಲಾ ಸೂಸುವ ಈ ಅಂತರ್ಚಾಲ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಕನ್ನಡಿಗರೆಲ್ಲರು ಕೈ ಜೋಡಿಸೋಣ ಬನ್ನಿ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ
www.kannadakavi.com

ವಂದನೆಗಳು..

Tuesday, March 17, 2009

ಎಲ್ಲರು ಒಮ್ಮೆ ಸ್ಮರಿಸೋಣ ಬನ್ನಿ..

ಕನ್ನಡದ ಹಿರಿಮೆಗೆ ಮಹಾನ್ ಚೇತನರಾದವರನೊಮ್ಮೆ ನೆನೆದು ಪಾವನರಾಗುವ ಬನ್ನಿ..
ಸಾಹಿತ್ಯದ ಮೂಲಕ ನಮ್ಮ ಸಂಸ್ಕೃತಿ ಬೆಳೆಸಿದ ಇಂದಿಗೂ ಬೇಳೆಸುತ್ತಿರುವ ನಮ್ಮ ಮಹಾನ್ ಕವಿಗಳಿಗೆ ನಮ್ಮ ಹೃದಯಪೂರ್ವಕ ನಮನಗಳು. ಮಹಾನ್ ಚೇತನಗಳಲ್ಲಿ ಪು.ತಿ.ನ ಹಾಗು ಡಿ.ವಿ.ಜಿ ಎಂದೇ ಹೆಸರುವಾಸಿಯಾಗಿರುವ ಕನ್ನಡದ ಶ್ರೇಷ್ಠಕವಿಗಳಲ್ಲಿ ಇವರೂ ಸಹ ಅತ್ಯುತ್ತಮರು. ಇವರುಗಳ ಜನುಮದಿನದ ನೆನಪು ಇಂದು, ಅವರ ಸಾಹಿತ್ಯಗಳಿಂದ ಅವರು ಎಂದೆಂದಿಗೊ ಜೀವಂತರಾಗೇ ಇರುತ್ತಾರೆ......ಮತ್ತೊಮ್ಮೆ ಹುಟ್ಟಿಬರಲಿ ಈ ದಿಗ್ಗಜರು....ಕರುನಾಡ ಸಿರಿ ಬೆಳಗಲು..
ಪು.ತಿ.ನ- ಪುರೋಹಿತ ತಿರುನಾರಾಯಣ ನರಸಿಂಹಾಚಾರ್
ಊರು-ಮೇಲುಕೋಟೆ
ಜನನ-ಮಾರ್ಚ್ ೧೭ ೧೯೦೫
ಅವರ ನೆನಪಿನಲಿ ಇಲ್ಲೊಂದು ಅವರೇ ಬರೆದ ಪುಟ್ಟ ಕವನ
ಲಘುವಾಗೆಲೆ ಮನ
ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು

ನನಗಂಟಲು ನೀನಾಗುವೆ ಕಶ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಶ್ಕಳ
ಹರಿಯು ನನ್ನ ಬಿಟ್ಟು
ಮುಂಬರಿದು ಹರಿಯ ಮುಟ್ಟು
ಲಘುವಾಗೆಲೆ ಮನ

ನೀಲದಾಗಸದ ಅರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಷಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ
ಹಾರಿ ಹರಿಯ ಮುಟ್ಟು
ಹಾರಿ ಹರಿಯ ಮುಟ್ಟು
ಲಘುವಾಗೆಲೆ ಮನ

ಬೆಳಕಿಗೊಲಿದು ಬಿರಿದಲರಿ ನೆಲರುಬರೆ
ಪೋಗುಸಂಗಡೆಲೆ ನೀ ಮನವೆ
ಮುಗ್ಧರುಲಿವ ನಗೆ ಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೆ
ಲಘುವಾಗೆಲೆ ಮನ
***********************
ಮತ್ತೊಬ್ಬ ಮಹಾನ್ ಚೇತನ ಡಾ. ಡಿ.ವಿ.ಜಿ
ಡಿ.ವಿ.ಜಿ-ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಊರು-ದೇವನಹಳ್ಳಿ ಹತ್ತಿರದ ಸೋಮತ್ತನಹಳ್ಳಿ
ಜನನ-ಮಾರ್ಚ್ ೧೭,೧೮೮೭
ಕವನದೊಂದಿಗೆ ಅವರ ಮನನ
ಏನೀ ಭಯಭ್ರಾಂತಿಯೇ ನೀಲಾಂಬರೇ
ಏನಂಗವಿಭ್ರಾಂತಿಯೇ ಅಶಾಂತಿಯೇ
ನೀಲಾಂಬರದ ನಿರಿಯಾಲಯತನಗೆಂದು
ಚಳಿಗಾರರುಹಿದರೆ ಮನೋಹರೆ

ಹೇಮಾಂಬರಾಗಕೆ ಶಾಮಾಂಬರಚ್ಚನಿ
ರಮಣೀಯಕವೆಂದು ಭಾಮಿನಿಯಿಂಬಗೆದು
ಕ್ಷೌಮವ ಕೊಳ್ಳಲಿ ಭೀಮೋತ್ಪಾತವಿದೇನೆ
ಸೌಮ್ಯನಾಯಕಿ ವರಸ್ವಾಮಿಯೆ ಗತಿಯಲ್ತೆ

ಬೆಚ್ಚಿಸಿ ನಿನ್ನನು ನಿಶ್ಚೇಲಗೈದು
ತನ್ನಕ್ಷಿಗೆ ನಿನ್ನ ಸಿಂಗಾರದೂಟವನುಣಿಸೆ
ವ್ರುಶ್ಚಿಕಮಂತ್ರವನುಚ್ಚರಿಸಿದನೇನೆ
ಅಚ್ಚುಮೆಚ್ಚಿನ ನಿನ್ನ ಮಾಯಾವಿ ಕೇಶವ