Thursday, February 20, 2014

ನಲ್ಲೆ..ಓರೆನೋಟ..!!

ಇತ್ತೀಚೆಗೆ ಕನ್ನಡ ಸಂಪದದಲ್ಲಿ ಬಂದಿದ್ದ ದ.ರಾ ಬೇಂದ್ರೆಯವರ "ನಾನು ಬಡವಿ ಆತ ಬಡವ" ಸಾಹಿತ್ಯಕ್ಕೆ ಸೂಕ್ತವಾಗಿ ಈ ಚಿತ್ರ ಬಳಸಿದ್ದರು.. ಆ ಮಾಹಿತಿಯನ್ನು ಸ್ನೇಹಿತೆಯೊಬ್ಬರು ಮುಖಪುಟದ ಗೋಡೆಯ ಮೇಲೆ  ಹಂಚಿಕೊಂಡಿದ್ದರು, ಆಗ ನನ್ನನ್ನು ಈ ಜೋಡಿಗಳ ಚಿತ್ರ ಹೆಚ್ಚು ಆಕರ್ಷಿಸಿ ಚಿತ್ರ ಬಿಡಿಸುವಂತಾಯಿತು. ಕೊನೆಗೆ ಚಿತ್ರವೊಂದೇ ಇದ್ದರೆ ಸಾಕೇ ಸಾಲುಗಳನು ಗೀಚಿಬಿಟ್ಟೆ.. ಸೂಕ್ತವಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರು ನನ್ನ ಭಾವಗಳ ಸಾಲು ನಿಮ್ಮೊಂದಿಗೆ


 ಬಿಡಿಸಿದ್ದು-ಗೀಚಿದ್ದು.. ನಾನೇ..!!

ನಲ್ಲೆ, ಮೌನದ ಮುಂಗುರುಳು
ನಿನ್ನ ನಯನಗಳ ತಬ್ಬಿರಲು
ನನ್ನಾಸರೆಯ ಹೆಗಲು ಹುಡುಕುತಿದೆ
ಆ ಮಿಂಚು ಕಣ್ ಗಳ ಹೊಂಬೆಳಕು

ನಲ್ಲೆ, ನಿನ್ನ ಸ್ಪರ್ಶದ ಒನಪು 
ಮಿರ ಮಿರ ಮಿರುಗಿ
ಎನ್ನ ಹೃದಯದೊಳು 
ಮೂಡಿದೆ ಒಲವ ಹೊಳಪು

ಬಾಹು ಬಂಧನದ ಸೆರೆ
ನೀ ಬಯಸಿ ಬಂದರೆ 
ಒಂದು ನವಿರು ಚುಂಬನ
ನನ್ನ ಸೆಳೆವ ಈ  ಕಿರುನೋಟಕೆ

Saturday, February 15, 2014

ಮರುಳು..ಹೂ.. ಮರಳು


ಡೈಸಿ ಬೆಳೆದು ನಿಂತಿಹಳು
ಮರುಧರೆಯ ಒಡಲೊಳು
ಯಾರ ಬಿತ್ತನೆಯಿಲ್ಲ
ನಿಸರ್ಗ ಕೃಪೆಗೆ
ಬೆಳೆದು ನಗುತಿಹಳು
ಬಯಸಿ ತಂದನವನು
ಗುಲಾಬಿಯೊಂದೇ ಪ್ರೇವವಲ್ಲ ಗೆಳತಿ
ಭಾವ ತುಂಬಿ ನೀಡುವ
ಹೂ ಯಾವುದಾದರೂ
ಪ್ರೀತಿ ಉಸಿರು ನನ್ನೊಡತಿ 
ಎಂಬವನ ಒಲುಮೆ
ತುಂಬಿ ನಗುತಿಹುದು
ನನ್ನ ಮನೆ-ಮನದ ಹೂದಾನಿಯಲಿ






ನನ್ನೂರ ರಸ್ತೆ ಬದಿ
ಹಾದು ಹೋದರೆ
ನನ್ನೊಳಗೊಂದು ಆಶ್ಚರ್ಯ
ತನ್ ತಾನೆ ಬೆಳೆವ
ಈ ಹೂಗಳ ನಾಟಿ ಮಾಡಿ
ಕಳೆ ಕಿತ್ತವರಾರು..?

ಮರುಳುಗಾಡಲೂ
ಹಸಿರ ಗರ್ಭಕೆ ಪ್ರಸವವುಂಟೆ..??

ಡೈಸಿ, ಲ್ಯಾವೆಂಡರ್ ಹೆಸರಿನ 
ಕೂಸುಗಳು ಈ ಮಾಸದಲಿ
ಬಂದು ಹೋಗುವವರ
ನೋಡಿ ಮರುಳಾಗದವರುಂಟೆ..??
                           

ಈ ಹೂಗಳು ಮರುಭೂಮಿಯಲ್ಲಿ ಬೆಳೆದು ನಿಂತಿವೆ.. ಕಣ್ಣು ಹಾಯ್ದಡೆಲ್ಲಾ ಈ ಹೂಗಳೇ ಕಾಣುತಿವೆ.