Monday, December 2, 2013

ಕಾವಿನ ಸ್ಪರ್ಶ


ಸಣ್ಣ ಬಿಸಿಯೊಂದು ತಾಕಿ ಒಡಕಾದ ಗಾಜು 
ಮರು ಲೇಪಿಸಲಾಗದೆ ಮೂಡಿತೊಂದು ಗೆರೆಯು 

ಏನೊಂದು ಅರಿಯದ ಬಿಸಿಯು ತನ್ನ ಕಾವ ಮರೆತು
ಬಿರುಕು ಹುಟ್ಟಿಸಿ ಬಳಕೆ ಕಸಿಯಿತು

ತನ್ನೊಳಗಿನ ಶಕ್ತಿ ಟೊಳ್ಳೆಂದು ಬಯಸಿ
ಗಾಜು ಹಿತವಾದ ಶಾಖಕೆ ಪರವಶವಾಯಿತು

ಬಲವಿಲ್ಲದ ಕಾವು ಒಡಕಲ್ಲದ ಗಾಜು
ತನ್ನರಿವು ಅರಿಯದೆ ಒಬ್ಬರಿಗೊಬ್ಬರು ಆಹುತಿ 
ಮುಖಾಮುಖಿ ಭೇಟಿ ಇನ್ನೆಲ್ಲಿ
ಗಾಜಿನ್ನು ಕಸದ ಬುಟ್ಟಿಯಲ್ಲಿ ...!!! 



ಗಾಜಿನ ತಟ್ಟೆ ಆಕಸ್ಮಿಕವಾಗಿ ಕಾವು ತಾಕಿ ಚೂರಾದ ಸಂದರ್ಭದಲ್ಲಿ ಮನಸ್ಸಿಗೆ ಹೊಳೆದ ಸಾಲುಗಳು :) :)

3 comments:

Badarinath Palavalli said...

ಕಾವಿಗೆ ಹೃದಯವಿಲ್ಲ, ಗಾಜು ಬಲಿ ಪಶು. ಬಹು ಅರ್ಥಗಳನ್ನು ಮನಸ್ದಿಗೆ ನಾಟಿಸುವ ಕವನ.

bilimugilu said...

Jeevanada aneka sandarbhagaLu heege Suguna.... gaaju bali pashu aadange, manasu saha! yaava fevi-bond haaki antisoku aagolla...... gud1...

ಸತೀಶ್ ನಾಯ್ಕ್ said...

ಬಹಳ ಚೆಂದದ ಕವಿತೆ ಸುಗುಣ ಮೇಡಂ. ಸಣ್ಣ ಅಪಘಾತಕ್ಕೆ ಒಡೆದು ಉಪಯೋಗವಿಲ್ಲದಂತಾಗುವುದು ಗಾಜು ಮಾತ್ರವಲ್ಲ ಸಂಭಂಧಗಳು ಕೂಡ.