Saturday, December 27, 2008

ಉಗ್ರತೆಯೋ, ವ್ಯಾಘ್ರತೆಯೋ



ಏಯ್!! ನಿನ್ನಲ್ಲಿನ ಮನುಷ್ಯತ್ವ ಹಾರಿಹೋಯಿತೆ
ನಿನ್ನ ಆತ್ಮಕ್ಕೆ ತಿಳಿಯಲಿಲ್ಲವೇ? ಎನೊ ಅರಿಯದವರ ಮುಗ್ಧತೆ
ನಿನಗೆಲ್ಲಿ ಅರಿವಿದೆ ಮುಗ್ಧತೆ ನೀನೂಬ್ಬ ವ್ಯಾಘ್ರ
ವ್ಯಾಘ್ರದಿ ನರ್ತಿಸಿದಂದು ಪಾಕಿಸ್ತಾನಿ ಉಗ್ರ

ಉಗ್ರನ ಅಟ್ಟಹಾಸ ತಲ್ಲಣಿಸಿದೆ ಭಾರತೀಯರ
ಅವನ ವ್ಯಾಘ್ರತೆ ಹರಿಸಿದೆ ಎಲ್ಲೆಲ್ಲೂ ನೆತ್ತರ
ಉಗ್ರ ಪ್ರತಿಷ್ಠೆ ಬಲಿತೆಗೆದಿದೆಯಲ್ಲಾ ಆಮಾಯಕರ
ಎಲ್ಲೆಲ್ಲೂ ಪಸರಿಸಿದೆ ಭಯಭೀತಿಯ ಹಂದರ
ಉಗ್ರ ನಿನಗರಿಯದೆ ಮುಗ್ಧನ ಆಹಾಕಾರ!!!!!!!!!!!

ಈ ವ್ಯಾಘ್ರಪ್ರತಿಷ್ಠೆಗೆ ಪರಿಹಾರ ಅಘೋಚರ
ಹಾಗೆಂದು ಕೈಕಟ್ಟಿಕುಳಿತರೆ ಎಲ್ಲವೂ ನಿಶಾಚರ....
ನಾವೇ ಎಚ್ಚೆತ್ತಿಕೊಳ್ಳದಿದ್ದರೆ ರಾಜಕೀಯರು ಬಳಸಿಕೂಳ್ಳುವರು ಪ್ರಚಾರ

ಅದು ಉಗ್ರತೆಯೋ, ವ್ಯಾಘ್ರತೆಯೋ ಒಟ್ಟಲ್ಲಿ ತಲ್ಲಣಿಸಿದೆ
ಭಾರತವೆಂಬ ಭವ್ಯ ವೈಭವ ರಾಷ್ಟ್ರವನು ನಲುಗಿಸಿದೆ
ನಮ್ಮೊಳಗಿರುವ ವೈರಿಗಳ ಸಂಚಿಗೆ ಚೆಲ್ಲಿದೆ ರಕ್ತದೋಕುಳಿ
ನಮ್ಮಲಿರೋ ವೈರಿಗಳ ಬಗ್ಗು ಬಡಿಯಲೆಂದು ಆಶಿಸುವೆ

ಯುದ್ದವೊಂದೆ ಎಲ್ಲಕ್ಕೂ ಪರಿಹಾರವಲ್ಲ
ಅಲ್ಲೂ ಅಮಾಯಕ ಸೈನಿಕರು ಬಲಿಯಾಗುವರಲ್ಲ
ವೈಷಮ್ಯದ ಬೀಜಬಿತ್ತೋ ವಿಷಜಂತುವ ಕೊನೆಗಾಣಿಸಿ
ಅದುವೊಂದೆ ಸರಿಯಾದ ಪರಿಹಾರ ಈ ಉಗ್ರತೆಗೆ

ಒಂದು ತಿಂಗಳಾದರು ಮಾಸದ ಗಾಯ.... ವೀರಮರಣಿಗರ ಆತ್ಮಕ್ಕೆ ದೊರಕಿಲ್ಲ ಇನ್ನು ಶಾಂತಿ.... ಅದು ಯುದ್ದ ಮೂಲಕವೋ ಶಾಂತಿಯ ಮೂಲಕವೋ ತಿಳಿಯದು ಒಟ್ಟಲ್ಲಿ ಅಮಾಯಕರ ಜೀವ ಪರದೇಶದ ಉಗ್ರರ ಕೈಯಲ್ಲಿದೆ ....... ಇದಕ್ಕೆ ಪರಿಹಾರ......ತಿಳಿಯದು.... ಅಲ್ಲವೇ ?????

Tuesday, December 23, 2008

ನಮ್ಮನೆಯ ಕರಿ ಹಸು.....

ಇಂದು ನನ್ನ ಕಛೇರಿಯಲ್ಲಿ ಮಧ್ಯಾಹಃ ಊಟದ ಸಮಯಕ್ಕೆ ಸರಿಯಾಗಿ ನನ್ನ ಜೊತೆ ಕೆಲಸಮಾಡುವವರೊಬ್ಬರು ಬಂದರು ಹೀಗೆ ಮಾತನಾಡುತ್ತ ನೀವು ಊಟಕ್ಕೆ ಏನು ತರುತ್ತೀರಿ ಎಂದರು ನಾನು ಎಷ್ಟೇ ಆಗಲಿ ಸಸ್ಯಹಾರಿ ನಾನು ಚಪ್ಪಾತಿ,ಚಿತ್ರಾನ್ನ ಈ ರೀತಿಯ ಊಟ ತರುತ್ತೇನೆಂದೆ ಅದಕ್ಕೆ ಅವನು ನಗುತ್ತಾ ಅದು ಏನಂತಹ ಊಟವೆಂದು ತಿನ್ನುತ್ತೀರಿ, ಮೀನು,ಹಂದಿ,ಹಸು ಇಂತಹವು ತಿನ್ನುವುದನ್ನು ಬಿಟ್ಟು ಎಂದ ಕ್ಷಣ ನನ್ನಲ್ಲಿ ಎನೋ ಬೇಸರ ಜೋತೆಗೆ ಕೋಪವು ಬಂತು... ನಾನು ಹೇಳಿದೆ ನಾವು ಅವೆಲ್ಲ ತಿನ್ನೊಲ್ಲವೆಂದು ಏಕೆಂಬ ಪ್ರಶ್ನೆ ಮತ್ತೆ ಕೇಳಿದ ಹಿಂದುಗಳು ಏಕೆ ಹಸುವನ್ನು ತಿನ್ನೊಲ್ಲವೆಂದು ನಗುತ್ತಲಿದ್ದ ಅದಕ್ಕೆ ನಾ ಹೇಳಿದೆ ನಮ್ಮ ಧರ್ಮ ನಮಗೆ ಹೆಚ್ಚು ಅದು ಪಾಲಿಸುವವರು ನಾವು ನಿಮ್ಮ ಧರ್ಮ ನಿಮಗೆ ನಾನು ನಿಮ್ಮಲ್ಲಿನ ಕಟ್ಟುಬದ್ದತೆಗೆ ಪ್ರಶ್ನಿಸುವುದಿಲ್ಲ, ನಾವು ಹಸುವನ್ನು ಪೂಜಿಸುತ್ತೇವೆ ಅದರಲ್ಲಿ ನಾವು ದೇವರ ರೂಪ ಕಾಣುತ್ತೇವೆಂದು ಹೇಳಿದ ತಕ್ಷಣ ಹೌದು ನೀವು ಹೇಳುವುದು ಸರಿ ಒಂದೊಂದು ಜಾತಿ ಮತದಲ್ಲಿ ಅವರದೇ ಆದ ರೀತಿಯಲ್ಲಿ ಧರ್ಮವನ್ನು ಪಾಲಿಸಿಕೊಂಡು ಬರುತ್ತಾರೆ. ಕ್ಷಮಿಸಿ ನಿಮಗೆ ಬೇಸರವಾಗಿದ್ದರೆ ಎಂದರು ನಾನು ಪರವಗಿಲ್ಲ ನೀವು ತಿಳಿದುಕೊಂಡದ್ದಕ್ಕೆ ಧನ್ಯವಾದವೆಂದೇಳಿ ಕಳಿಸಿದೆ....
ಅವರುಗಳು ಎಷ್ಟೇ ಆಗಲಿ ಅರಬೀಗಳು ಅವರಿಗೆ ನಮ್ಮಲ್ಲಿನ ಪದ್ದತಿಯಾಗಲಿ ಆಚರಣೆಯಾಗಲಿ ತಿಳಿಯುವುದಿಲ್ಲ, ಅವರಿಗೇನು ಗೊತ್ತು ಹಸು ದೇವರ ಸಮಾನ ಎಂದು ಅಲ್ಲವೆ..? ಇದೆ ರೀತಿ ಹಲವು ಪ್ರಶ್ನೆ ನನ್ನ ಮನದಲ್ಲಿ ಗುನುಗುಡುತಿತ್ತು ಅವರಲ್ಲಿ ಏನೋ ನಾವು ಹಸು ಪೂಜೆ ಪುನಸ್ಕಾರವೆಂದೆಲ್ಲಾ ಹೇಳಿದೆ ಆದರೆ ನನ್ನ ಮನದಲ್ಲಿ ಒಂದು ಕಾಡಿತು ನಾವು ಹಸುವಿಗೆ ನೋಯಿಸುತ್ತಿಲ್ಲವೇ... ಅದರಿಂದ ದುಡಿಸಿಕೊಂಡು ಅದಕ್ಕೆ ನೋವು ಮಾಡುತ್ತಿಲ್ಲವೇ? ಹಸುವನ್ನು ನಮ್ಮಂತ ಪೂಜಿಸೋ ಜನರು ಕೊಲ್ಲುವುದಿಲ್ಲವೇ? ಇನ್ನು ತಿಳಿದಂತ ನಮ್ಮ ಜನರೆ ಹಲವಾರು ತಪ್ಪು ಮಾಡುತ್ತಾರೆ ಅಲ್ಲವೆ? ಹೀಗೆ ಹಲವು ಪ್ರಶ್ನೆ ನನ್ನಲ್ಲೆ ಹುಟ್ಟಿತು...ಈ ಪ್ರಶ್ನೆ ಹುಟ್ಟಲು ಅದಕ್ಕೊಂದು ಉದಾಹರಣೆ ಇಲ್ಲಿದೆ.........ನನ್ನ ಮನೆಯಲ್ಲೇ ನೆಡೆದದ್ದು ....
ನನ್ನ ತಂದೆ ತಾಯಿ ಮದುವೆಯಾದಗ ನನ್ನ ತಾಯಿಗೆ ನನ್ನ ತಾತ ಒಂದು ಹಸುವನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ ಅದು ನನ್ನ ತಾಯಿಯ ಅಚ್ಚು ಮೆಚ್ಚಿನ ಹಸುವು ಕೂಡ, ಮದುವೆಯಾದ ನಂತರ ಹಸುವನ್ನು ಅಮ್ಮ ಅಪ್ಪ ಇರೋ ಸ್ಥಳಕ್ಕೆ ನಮ್ಮ ಮಾವ ಕೊಟ್ಟು ಕಳಿಸಿದ್ದಾರೆ , ನನ್ನ ತಂದೆ ವೃತ್ತಿಯಲ್ಲಿ ಶಿಕ್ಷಕರು ಅವರು ಕೆಲಸದ ನಿಮಿತ್ತ ಹಳ್ಳಿಗಳಲ್ಲಿ ನೆಲೆಸಬೇಕಿತ್ತು ಅವರು ಅಲ್ಲಿ ನೆಲೆಸಿದ್ದು ಒಂದು ರೀತಿ ಒಳ್ಳೆಯದೆ ಆಯಿತು ಹಸುವಿನ ಪಾಲನೆಗೆ ಹೇಳಿ ಮಾಡಿಸಿದ ಜಾಗ.
ಹೀಗೆ ಅವರು ಸ್ವಲ್ಪ ದಿನಗಳು ಪೋಷಿಸಿ ಆನಂತರ ತಾತನ ಮನೆಗೆ ಕಳಿಸಿದ್ದಾರೆ ಏಕೆಂದರೆ ಅಪ್ಪಾಜಿ ಬೇರೆ ಊರಿಗೆ ವಲಸೆ ಹೋಗುವ ಕಾರಣ, ಹೀಗೆ ಹಲವು ವರ್ಷ ಕಳೆದವು ಆ ಹಸು ಒಂದು ಹೆಣ್ಣು ಕರುವಿಗೆ ಜನ್ಮವಿತ್ತು ಅಸುನೀಗಿತ್ತು, ಇನ್ನು ಆ ಪುಟ್ಟ ಕರುವಿನ ಪಾಲನೆ ಪೋಷಣೆ ಚೆನ್ನಾಗೆ ನೆಡೆದಿತ್ತು ಅದು ಬೆಳೆದ ನಂತರ ನಮ್ಮ ಮಾವಂದಿರು ಮತ್ತೆ ನಮ್ಮ ಅಮ್ಮನಿಗೆ ಕಳಿಸಿದರು ನಿನ್ನ ಮಕ್ಕಳು ಚಿಕ್ಕವು ಅವುಗಳಿಗೆ ಒಳ್ಳೆಯ ಹಾಲು ಅಲ್ಲಿ ಸಿಗದು ಎಂದು ಅಷ್ಟು ಒತ್ತಿಗೆ ನಾವು ಬೆಂಗಳೂರುಗೆ ಬಂದಿದ್ದೆವು, ಎಲ್ಲರಿಗು ತಿಳಿದ ಹಾಗೆ ಬೆಂಗಳೂರಿನಲ್ಲಿ ದೊರೆಯುವ ಹಾಲು ಹೆಚ್ಚು ಪಾಲು ನೀರೆ ಇರುತ್ತೆ....... ಅಮ್ಮನು ಕೂಡ ಕಪ್ಪುಬಣ್ಣದ ಲಕ್ಷ್ಮಿಯನ್ನು ಕರೆತಂದರು ನಮಗೊ ಅದು ಮನೆಗೆ ಬಂದ ದಿನ ಕುಶಿಯೋ ಕುಶಿ... ನಮ್ಮ ಮನೆಯ ಹಿಂದೆ ಸ್ವಲ್ಪ ಜಾಗವಿತ್ತು ಅಲ್ಲಿ ಸಣ್ಣದಾಗಿ ಕೊಟ್ಟಿಗೆ ಅದು ಬರುವಷ್ಟರಲ್ಲಿ ನಿರ್ಮಿಸಲಾಗಿತ್ತು ಆ ಲಕ್ಶ್ಮಿಯನ್ನು ನಾವೆಲ್ಲ ಪೂಜಿಸಿ ಬರಮಡಿಕೊಂಡೆವು ........ ದಿನ ಬೆಳಗಾದರೆ ನಾನು ಕೊಟ್ಟಿಗೆಗೆ ಹೋಗಿ ಅದರ ದರುಶನದ ನಂತರವೆ ಬೇರೆ ಕೆಲಸ ಇನ್ನು ಅಮ್ಮ ನಿತ್ಯ ಬೆಳ್ಳಿಗ್ಗೆ ಅದರ ಸೇವೆ ಮುಗಿಸಿ ಹಾಲು ಕರೆದು ತರುತ್ತಿದ್ದರು ಕೆಲವು ಭಾರಿ ಅಕ್ಕ , ಅಣ್ಣ, ನಾನು ಕೊಟ್ಟಿಗೆ ಸ್ವಚ್ಚಗೊಳಿಸೊ ಕೆಲಸ ಮಾಡುತ್ತಿದ್ದೆವು... ಆ ಹಸುವನ್ನು ಮೇಯಿಸಿಕೊಂಡುಬರಲು ಅಮ್ಮ ಆಚೀಚೆ ಹೋಗಿ ಬರುತ್ತಿದ್ದರು ಮತ್ತು ಕೆಲವುಸಾರಿ ಮನೆಯ ಹತ್ತಿರವೇ ಬಿಟ್ಟು ಬಿಡುತ್ತಿದ್ದರು ಅದು ಮೇಯುತ್ತಾ ಎತ್ತಲೋ ಹೊಗಿಬಿಡುತ್ತಿತ್ತು ಅಮ್ಮ ಹುಡುಕಿ ಹುಡಿಕಿ ಸುಸ್ತಾಗಿ ಬೇಸರದಿ ಬರುತ್ತಿದ್ದರು...... ಮನೆಗೆ ಬಂದು ಇದು ಎಲ್ಲೊಯಿತೋ ತಿಳಿಯದು ಹೇಗೋ ಯಾಮಾರಿಸಿ ಹೋಗುತ್ತಲ್ಲಾ ಇದಕ್ಕೇನು ಮಾಡೋದು ಎಂದು ಹೇಳುತ್ತಿದ್ದರು... ನಾನು ಅಮ್ಮ ಅದು ಮನೆಗೆ ಬರದಿದ್ದರೆ ಎನಮ್ಮ ಮಾಡೋದು ಎಂದು ಕೇಳುತ್ತಲೇ ಇದ್ದೆ ನನಗೆ ತುಂಬ ಬೇಸರ ಅಳು ಕೂಡ ಬರುತ್ತಿತು.... ಅಮ್ಮ ಅಳಬೇಡ ಲಕ್ಷ್ಮಿ ಬಂದೆ ಬರುತ್ತಾಳೆ ಅವಳು ಹಾಗೆಲ್ಲ ಬಿಟ್ಟು ಹೋಗೋಳಲ್ಲ ಎಂದು ನನಗೆ ಸಮಾದಾನ ಮಾಡುತ್ತಲಿದ್ದರು.... ಅದು ನಿಜವಾಗಿಯೂ ನಮ್ಮ ಬಿಟ್ಟು ಹೋಗಲಿಲ್ಲ ೨ ದಿನಗಳ ನಂತರ ನಮ್ಮ ಮನೆಯ ಮುಂದೆ ಬಂದು ನಿಂತಿತ್ತು .... ಅಮ್ಮ ಎಲ್ಲೆ ಹೊಗಿದ್ದೆ ಹೀಗೆ ಹೋದರೆ ನಾವೇನು ಅಂದುಕೋ ಬೇಕು ಹೇಳು ನಿನಗೆ ಇಷ್ಟ ಇಲ್ಲವೆಂದರೆ ಹೇಳು ಎಂದು ಏನೆನೋ ಬಡಬಡಿಸುತ್ತಿದ್ದರು ನನಗೋ ಸಧ್ಯ ಬಂತ್ತಲ್ಲ ಎಂದು ಕುಶಿ.....
ಹೀಗಿದ್ದ ನಮ್ಮ ಮನೆಯ ಲಕ್ಷ್ಮಿ ಒಂದು ದಿನ ಗಂಡು ಕರುವಿಗೆ ಜನ್ಮನೀಡಿತು.... ತನ್ನ ಮಗುವಿನೊಂದಿಗೆ ಲಕ್ಷ್ಮಿ ಕೂಡ ಸಂತೋಷದಿಂದ ಇದ್ದಳು ನಮಗೆ ಆ ಸಮಯದಲ್ಲಿ ಹೆಚ್ಚು ಹಾಲು ಸಿಗುತ್ತಿತು ಅದರಿಂದ ಗಿಣ್ಣು ಕೂಡ ತಯಾರಗುತ್ತಿತ್ತು... ಈ ಹಾಲಿಂದ ಹಲವಾರು ಅಕ್ಕಪಕ್ಕದ ಜನ ಕೂಡ ಗಿಣ್ಣು ತಿನ್ನುವಂತಾಯಿತು, ಮತ್ತೆ ಇನ್ನು ಕೆಲವು ಜನ ನಮಗೆ ಈ ಹಸುವಿನ ಹಾಲು ಕೊಡಿ ನಮ್ಮ ಮನೆಯಲ್ಲಿ ಸಣ್ಣ ಮಗುವಿದೆ ಕರಿ ಹಸುವಿನ ಹಾಲು ಮಕ್ಕಳಿಗೆ ಒಳ್ಳೆಯದು ಎಂದೆಲ್ಲಾ ಬರುತ್ತಿದ್ದರು.... ಆದರೆ ನಾವು ಹಾಲು ಯಾರಿಗು ಮಾರುತ್ತಲಿರಲಿಲ್ಲ ನಮ್ಮ ಮನೆ ಮಟ್ಟಿಗೆಂದೆ ಹಾಲು ಬಳಸಿತ್ತಿದ್ದೆವು ಆದರು ಕೆಲವರು ಎನು ಹೇಳಿದರು ಬಿಡದೆ ನನಗೆ ಬೇಕೆ ಬೇಕೆಂದು ಪಟ್ಟು ಹಿಡಿದು ಕೂರುತ್ತಿದ್ದರು ಆಗ ಅಮ್ಮ ಮಕ್ಕಳಿಗಲ್ಲವೆ ಎಂದು ಕೊಟ್ಟು ಕಳುಹಿಸುತ್ತಿದ್ದರು... ನನ್ನ ಆ ಕಪ್ಪುಲಕ್ಷ್ಮಿ ನಮ್ಮ ಮನೆಯ ಅಲ್ಲದೆ ಅಕ್ಕಪಕ್ಕದ ಮನೆಯವರಿಗೆಲ್ಲ ಲಕ್ಷ್ಮಿಯಾಗಿದ್ದಳು ಪ್ರತಿ ಶುಕ್ರವಾರ ಸೋಮವಾರ ಬಂತ್ತೆಂದರೆ ಸಾಕು ಸಾಲು ಸಾಲಗಿ ಪೂಜಿಸಲು ನಿಲ್ಲುತ್ತಿದ್ದರು.....
ಹೀಗೆ ಸುಮಾರು ದಿನಗಳು ನಮ್ಮೊಂದಿಗಿದ್ದ ಲಕ್ಷ್ಮಿ ನಮ್ಮನು ಬಿಟ್ಟು ದೂರ ಹೋಗಬೇಕಾಯಿತು....... ಏಕೆಂದರೆ ನಮ್ಮ ಮನೆಯ ಹಿಂದಿನ ಜಾಗದಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭವಾದ ಕಾರಣ ನಮ್ಮ ಊರಿನಲ್ಲಿದ್ದ ಅಪ್ಪನ ತಮ್ಮಂದಿರಿಗೆ ಕಳಿಸೋಣವೆಂದು ತೀರ್ಮಾನಿಸಿದರು ಚಿಕ್ಕಪ್ಪಂದಿರು ಅಕ್ಕಪಕ್ಕ ಮನೆಯಲ್ಲಿದ್ದ ಕಾರಣ ಕರು ಒಬ್ಬರಿಗೆ ಹಸು ಒಬ್ಬರಿಗೆ ಯಾರಿಗೆ ಯಾವುದು ಬೇಕೋ ಅದು ತೆಗೆದುಕೋಳ್ಳಿ ಎಂದು ಹೇಳಿ ಕಳುಹಿಸಿದ್ದೆವು....ಅದು ಹೋಗುವ ದಿನ ನಮ್ಮ ಅಮ್ಮನಿಗೆ ದುಃಖ ತಡೆಯಲಾಗಲಿಲ್ಲ ಅಳುತ್ತಲೆ ಕಳಿಸಿದರು ನಂತರ ಮೈದುನಂದರಿಗೆ ಹೇಳಿದರು ಅದು ನನ್ನ ಅಪ್ಪನ ಮನೆಯ ಉಡುಗೊರೆ ಅಲ್ಲದೆ ಅದು ನನಗೆ ಪ್ರೀತಿಪಾತ್ರ ದಯವಿಟ್ಟು ಚೆನ್ನಾಗಿ ನೋಡಿಕೋಳ್ಳಿ ಅದರ ಆರೈಕೆಗೆ ಬೇಕಾದ ಹಣ ಕೋಡುತ್ತೇನೆಂದು... ನಾವು ಇನ್ನು ಚಿಕ್ಕವರಾದರು ನಮಗೂ ಆ ಹಸುವಿನೊಂದಿಗೆ ಏನೋ ನಂಟು ಬೆಳೆದಿತ್ತು..... ನನಗೆ ಈ ಕ್ಷಣದಲ್ಲೂ ಅದರ ಚಿತ್ರಣ ಕಣ್ ಮುಂದೆ ಬರುತ್ತದೆ... ಜೊತೆಗೆ ಅಳು ಕೂಡ..........
ಆಂದು ನಮ್ಮಿಂದ ತೆರಳಿದ ಲಕ್ಷ್ಮಿಯನ್ನು ನೋಡಲು ಆಗಾಗ ಊರಿಗೆ ಹೋಗುತ್ತಿದ್ದೆವು ಹೋದಾಗ ಅದರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದೆವು,ಅದು ಕೂಡ ಹಾಗೆ ನಮ್ಮನು ಬಲು ಬೇಗ ಗುರುತಿಸುತ್ತಿತು ನೋಡಿದ ಕೂಡಲೆ ಅಂಬಾ ಎಂದು ಕೂಗುತಿತ್ತು.. ಅಲ್ಲಿ ತಂಗಿರೊವರೆಗು ಅದರ ಹಾಲು ಮೊಸರು ಬೆಣ್ಣೆ ಎಂದೆಲ್ಲ ಕೇಳಿ ತಿನ್ನುತಿದ್ದೆವು ಮತ್ತು ಮತ್ತೆ ಮರಳಿ ಬರುವಾಗ ಡಬ್ಬಿಗಳಲ್ಲಿ ತುಂಬಿಸಿಕೊಂಡು ಬರುತ್ತಿದ್ದೆವು.... ಇವೆಲ್ಲ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿ ಹೋಯಿತು ಆ ನಮ್ಮ ಲಕ್ಷ್ಮಿ ಸ್ವಲ್ಪದಿನಗಳ ಮಟ್ಟಿಗೆ ಆರೋಗ್ಯ ತಪ್ಪಿದೆ ಅಲ್ಲದೆ ಅದು ಹಾಲು ಕೋಡುವುದು ನಿಲ್ಲಿಸಿದೆ ಇದೆಲ್ಲ ನಮಗೆ ತಿಳಿದಿತ್ತು ಆದರೆ ನಮ್ಮ ಅಮ್ಮ ಹೇಳುತ್ತಿದ್ದರು ಚಿಕ್ಕಪ್ಪನಿಗೆ ಅದು ಹಾಲು ಕೋಡದಿದ್ದರು ಸರಿ ಹಾಗೆ ಇಟ್ಟುಕೋಳ್ಳಿ ಬೇರೆನು ಮಾಡಬೇಡಿ ಎಂದು.... ಇದೆ ಮಾತು ಬಹಳ ದಿನ ನೆಡೆದಿತ್ತು ಸ್ವಲ್ಪ ಸಮಯ ನಾವು ಊರಿಗೆ ಹೋಗದಿರುವಾಗ ನನ್ನ ಚಿಕ್ಕಪ್ಪ ಹಸುವನ್ನು ಯಾರೋ ಕಟುಕನಿಗೆ ಮಾರಿಬಿಟ್ಟಿದ್ದರು.... ನಾವು ಹೋಗಿ ಕೇಳಿದ್ದಕ್ಕೆ ಅದಕ್ಕೆ ಆರೋಗ್ಯ ಸರಿ ಇರಲಿಲ್ಲ ಅದು ಇದು ಎಂದು ಸಮಜಾಯಿಸಿ ಕೊಟ್ಟರು ಸ್ವಲ್ಪ ದಿನಗಳ ನಂತರ ತಿಳಿಯಿತು ಅದು ಯಾರೋ ಹೇಳಿದ್ದು ದನ ಕಡಿಯೊ ಸಾಬರಿಗೆ ಕೂಟ್ಟಾರೆಂದು...... ಇದು ನಮ್ಮಗೆ ನಂಬಲಾರದ ಅತಿ ಆಘಾತಕಾರಿ ವಿಷಯ ... ಜೊತೆಗೆ ಅಂದು ನಮ್ಮ ಮನೆಯಲ್ಲಿ ನಿಜವಾಗಿಯು ಯಾರು ಊಟಮಾಡಲಿಲ್ಲ ಈ ಘಟನೆ ಎಂದೊ ಮರೆಯಲಾಗದು.......
ಇನ್ನು ಲಕ್ಷ್ಮಿಯ ಕರು ಅದು ಗಟ್ಟಿಮುಟ್ಟಾಗಿ ಇರೋವರೆಗು ಇನ್ನೊಬ್ಬ ಚಿಕ್ಕಪ್ಪ ಅದನ್ನು ಹೊಲ ಊಳಲು, ಬಿತ್ತಲು ಬಳಸಿಕೂಂಡರು ಅದರ ಶಕ್ತಿ ಕುಂದಿದ ತಕ್ಷಣ ಅದನ್ನು ಮಾರಿದರು......ಇದು ಏಕೆ ಹೀಗೆ ಮಾಡಿದರೆಂದು ಕೇಳಿದರೆ ಅಯ್ಯೋ ಅದು ಏನು ಉಪಯೋಗಕ್ಕೆ ಬರೋದಿಲ್ಲ ಇನ್ನು ಅದು ಇದ್ದು ಏನು ಸಾರ್ಥಕ ಅದು ಇದ್ದಷ್ಟು ಖರ್ಚು....ಹೀಗೆ ಉಡಾಫೆ ಮಾತುಗಳು.....ಇನ್ನು ನನ್ನ ಅಪ್ಪ ಹೆಚ್ಚು ಮಾತನಾಡೊಲ್ಲ ತಮ್ಮಂದಿರು ಅಲ್ಲದೆ ಅವರು ಮಾತು ಕಡಿಮೆ ಇನ್ನು ಅಮ್ಮ ಮಾತನಾಡಿದರೆ ಓಹ್ ಅತ್ತಿಗೆಯೋ ಮಾತು ಜಾಸ್ತಿ ಎಂಬ ತೀರ್ಮಾನ ಜೊತೆಗೆ ಇವರು ಕೋಡೋ ದುಡ್ಡಿಗೆ ಅದನ್ನು ಸಾಕಲು ಆಗುತ್ತ ಎಂಬ ಮಾತು.......
ನಾವು ಇದೆಲ್ಲ ನೋಡಿ ಬಲು ಬೇಸರ ಪಟ್ಟು ಬಿಟ್ಟೆವು ನನಗೆ ಆನಂತರ ಅನಿಸಿತು ಓಹ್ ನಾವು ಹಸು ಕಳಿಸದಿದ್ದರೆ ಹೀಗೆ ಆಗುತ್ತಲಿರಲಿಲ್ಲ ನಮ್ಮದೆ ತಪ್ಪು ಎಂದು, ಮತೊಮ್ಮೆ ಅನ್ನಿಸಿತು ಅಂದು ಚಿಕ್ಕಪ್ಪಂದಿರು ನಾವು ನೋಡಿಕೋಳ್ಳಲಾಗುವುದಿಲ್ಲ ನಿಮ್ಮ ಹಸು ನೀವು ತೆಗೆದುಕೊಂಡು ಹೋಗಿ ಇಷ್ಟು ದಿನ ನೋಡಿಕೊಂಡೆವು ಇನ್ನು ಸಾಧ್ಯವಿಲ್ಲ ಎಂದು ಹೇಳಿದ್ದರೆ ಹಸು ತಾನಾಗಿ ಸಾಯೋವರೆಗು ನಮ್ಮೂಂದಿಗೆ ಇರುತ್ತಿತ್ತೇನೋ ಎಂದೆನಿಸಿತ್ತು.........ಇಲ್ಲಿ ಯಾರ ತಪ್ಪು ಗೊತ್ತಿಲ್ಲ......ಒಟ್ಟಲ್ಲಿ ನಮ್ಮ ಜನರಲ್ಲೊ ಮಾನವೀಯತೆ ನಶಿಸುತ್ತಿದೆ.........
ಇಂದು ಈಜಿಪ್ಟ್ ನವರಾದ ಸಹೋದ್ಯೊಗಿಯ ಜೊತೆ ಸ್ವಲ್ಪ ಮಾತು ನೆಡೆದಿದ್ದಕ್ಕೆ ನನ್ನ ಮನದಲ್ಲಿದ್ದ ಹಳೆಯ ಪುಟಗಳು ತಿರುವಿ ನೋಡೂಹಾಗೆ ಆಯ್ತು.......

Sunday, December 21, 2008

ಪ್ರೀತಿ-ಪ್ರೇಮ

ನಾನೊಮ್ಮೆ ಶಪಿಸಿದೆ ಪ್ರೀತಿ-ಪ್ರೇಮ ತಪ್ಪೆಂದು?
ಮತ್ತೊಮ್ಮೆ ಆಶಿಸಿದೆ ಪ್ರೀತಿ-ಪ್ರೇಮ ಸರಿಯೆಂದು.
ಇದು ನನ್ನ ಮನಕೆ ಮೊಡಿಸಿದ ಸರಿತಪ್ಪಿನ ಗೊಂದಲ

ಗೊಂದಲದಿ ಅದು ಬರಿ ಗಂಡು ಹೆಣ್ಣಿಗೆಂದು ಸಮರ್ಥಿಸಿದೆ
ನಂತರ ಅರ್ಥೈಸಿದೆ,ಗಂಡು ಹೆಣ್ಣಿಗೆ ಮಾತ್ರ ಮೀಸಲಿಲ್ಲ

ಜೀವರಾಶಿಗೆಲ್ಲಾ ಮೀಸಲಿಹುದು ಪ್ರೀತಿ-ಪ್ರೇಮದ ಹಾದಿ
ಅದುವೇ ನಮ್ಮೆಲ್ಲರ ಜೀವನಕ್ಕೆ ಭದ್ರ ..ಬುನಾದಿ

ಪ್ರೀತಿ-ಪ್ರೇಮ ಹೊಮ್ಮಲು ಬೇಕಷ್ಟೆ ಹೃದಯ
ಹೊಮ್ಮಿದಾಕ್ಷಣ ಜೀವನವೇ.. ವಿಸ್ಮಯ

ಆ ವಿಸ್ಮಯದೊಂದಿಗೆ ಮತ್ತೊಂದಿದೆ ಕೇಳಿ
ಪ್ರೀತಿಯೊಂದಿಗೆ ಬೇಕು ಹಣ,ವಿಶ್ವಾಸದ ಹಳಿ

ಹಳಿ ತಪ್ಪಿ ನಡೆದರೆ ಜೀವನ ಅದೋಗತಿ
ಆ ಗತಿಗೆ ಬಿಡದೆ ನಮ್ಮಲಿರಬೇಕು ಶಾಂತಿ

ಇದು ಪ್ರೀತಿ-ಪ್ರೇಮದೊಂದಿಗಿನ ಜೀವನ ಪಾಠ
ಎಲ್ಲವು ದೇವರಾಡಿಸೋ ಕಣ್ಣು ಮುಚ್ಚಾಲೆ ಆಟ

ಇವೆಲ್ಲದರ ಪರಿ ನಮಗೆ ಅರಿವಾಗುವುದೊಂದೇ
ಪ್ರಪಂಚ ನಿಲುವಿಗೆ ಪ್ರೀತಿ-ಪ್ರೇಮ ಬೇಡ ಒಂದೇ

ಅದರ ಜೊತೆ ಇರಬೇಕು ಜನ,ಹಣ,ವಿಶ್ವಾಸ,ನಂಬಿಕೆ
ಈ ಮಾತು ಸರಿ ಎಂದು ಒಪ್ಪುತಿದೆ ನನ್ನ ಮನದ ಸಂಚಿಕೆ

ಇನ್ನೊಂದು ಹೇಳಲೇ,ಪ್ರೀತಿ-ಪ್ರೇಮ ನಮ್ಮೊಳಗಿನ ನಾದ ಚಿಲುಮೆ
ಎಲ್ಲರಲ್ಲೂ ತೋರ್ಪಡಿಸಿ ನಿಮ್ಮ ಪ್ರೀತಿ-ಪ್ರೇಮದ ಒಳಿತಿನ ನಲುಮೆ
ನಲುಮೆ ಹೆಚ್ಚಿಸುವುದು ನಿನ್ನಯ ಬಾಳಲ್ಲಿ ಗರಿಗೆದರಿದ ಹಿರಿಮೆ !!!

ಇದುವೇ ನನ್ನ ಪ್ರೀತಿ-ಪ್ರೇಮದ ಬಗೆಗಿನ ಹೊಕ್ಕಣಿ
ನಿಮ್ಮಲಿ ಬೇರಾವ ಅರ್ಥವಿದ್ದರು ಕಳಿಸಿ ಒಂದು ನೊಂದಣಿ .

Monday, December 15, 2008

ಜಗತ್ತು ಒಂದು ಛತ್ರ..

ನಾವಿರುವ ಜಗತ್ತು ಛತ್ರ, ನಾವುಗಳು ಛತ್ರಕ್ಕೆ ಬಂದು ಹೋಗುವ ದಿನ ನಿತ್ಯದ ಅತಿಥಿಗಳು ಅದಕ್ಕೊಂದು ಸಣ್ಣ ಉದಾಹರಣೆ, ನೀವುಗಳು ಸಹ ಜಗತ್ತು ಒಂದು ಛತ್ರವೆಂದು ಒಪ್ಪುವಿರೇನೂ ಒಮ್ಮೆ ಈ ಚುಟುಕು ಬರಹಕ್ಕೆ ಕಣ್ಣಾಡಿಸಿ....
ಒಂದು ದೂಡ್ಡ ರಾಜಧಾನಿಗೆ ಒಬ್ಬ ಸಾಧು ಆಗಮಿಸುತ್ತಾ ರಾಜಧಾನಿಯ ಅರಮನೆ ತಲುಪುತ್ತಾರೆ. ಒಳಗೆ ಪ್ರವೇಶಿಸಿ ವಿಶಾಲವಾದ ಹಜಾರದಲ್ಲಿ ಕುಳಿತುಕೂಂಡು ವಿಶ್ರಾಂತಿ ಪಡೆಯುತ್ತಿದ್ದವರು ಬಹಳ ಸಮಯವಾದರು ಹೂರಡದಿದ್ದಾಗ, ಕಾವಲುಗಾರ ಬಂದು ಏಳುವಂತೆ ತಿಳಿಸಿದರು. ಸಾಧು ಆ ದಿನ ಅಲ್ಲಿಯೇ ಉಳಿದು ಮರುದಿನ ತೆರಳುವುದಾಗಿ ಹೇಳುತ್ತಾರೆ ಆದರೆ ಕಾವಲುಗಾರ ಕೋಪಿಸಿಕೂಂಡು ದಾರಿಹೋಕರೆಲ್ಲ ಬಂದು ತಂಗಲು ಇದೇನು ಛತ್ರವಲ್ಲ ಎಂದು ಹೇಳಿದಾಗ ಸಾಧು ಇದು ಛತ್ರವೆಂದೇ ಸಾಧಿಸುತ್ತಾರೆ ವಾದಗಳು ಮುಂದುವರಿದು ಕೊನೆಗೆ ಕಾವಲುಗಾರನಿಗೆ ಅವನ ರಾಜನನ್ನು ಕರೆತರಲು ಹೇಳುತ್ತಾರೆ. ಬೇರೆ ಉಪಾಯ ಕಾಣದೆ ಕಾವಲುಗಾರ ರಾಜನಲ್ಲಿ ವಿನಂತಿಸಿ ಕರೆತರುತ್ತಾನೆ. ಯೋಗ್ಯನಾದ ರಾಜ ಸಾಧುವಿನ ಬಳಿ ಬಂದು ಶಾಂತರೀತಿಯಲ್ಲಿ ಅರಿಕೆಮಾಡಿಕೂಂಡು ಸಾಧುಗಳೇ ಇದು ಅರಮನಯೇ ಹೊರತು ಛತ್ರವಲ್ಲ ಸ್ವಾಮಿ ಎಂದೇಳಲು . ಇದರ ಪ್ರತಿಯಾಗಿ ಸಾಧು ಕೇಳಿದರು ರಾಜನಿಗೆ ನಿನಗಿಂತ ಮೊದಲು ಈ ಅರಮನೆಯಲ್ಲಿ ಯಾರಿದ್ದರು? ನನ್ನ ತಂದೆ, ಅವರಿಗಿಂತ ಮೊದಲು ಯಾರಿದ್ದರು? ನನ್ನ ತಂದೆಯ ತಂದೆ ನನ್ನ ತಾತ, ಸರಿ ನೀನಾದ ಮೇಲೆ ಇಲ್ಲಿಗೆ ಯಾರು ಬರುತ್ತಾರೆ? ನನ್ನ ಮಗ, ಅವನ ನಂತರ? ನನ್ನ ಮಗನ ಮಗ ಅಂದರೆ ಮೊಮ್ಮಗ, ನೀನು ಹೇಳಿದ ರೀತಿಯಲ್ಲಿ ಇಲ್ಲಿ ಯಾರೂ ಶಾಶ್ವತವಾಗಿ ಇರಲಾರೆಂದರ್ಥವಲ್ಲವೆ? ನೀನೂಕೂಡಾ ತಾನೆ? ಅಂದರೆ ಕೆಲವು ದಿನ ಮಾತ್ರ ಕೆಲವರು ಇದ್ದು ಹೋಗುವ ಸ್ಥಳ ಛತ್ರವಲ್ಲದೆ ಮತ್ತೇನು? ಎಂದು ಸಾಧು ಕೇಳಿದರು.........ರಾಜ ಮೌನದಿಂದಲೇ ಸಮ್ಮತಿಸಿಕೊಂಡರು.

ನಿಜ ಸಾಧುವಿನ ಮಾತಿನಂತೆ ನಾವೆಲ್ಲ ಅರ್ಥೈಸಿಕೊಳ್ಳಬಹುದಾದ ನಮ್ಮ ಜೀವನ,ಇತ್ತೀಚೆಗಷ್ಟೆ ಓದಿದ ಈ ಪುಟ್ಟ ಕಥೆ ನನ್ನ ಮನಮುಟ್ಟಿ ಮನದಾಳ ಒಲೈಸಿದೆ, ನಾವಿರುವ ಈ ಭೂಮಿ ಒಂದು ಛತ್ರ ನಾವೆಲ್ಲ ಬಂದು ಹೋಗುವ ಅತಿಥಿಗಳು ಆದರೆ ಯಾರು ಯಾರು ಎಷ್ಟೆಷ್ಟು ದಿನ ಇದ್ದು ಹೋಗುತ್ತಾರೆ ಎಂಬುದು ಆ ದೇವನೆ ಬಲ್ಲ....ನಾಲ್ಕಾರು ದಿನ ಇದ್ದು ಹೋಗುವುದಕ್ಕೆ ನಾವುಗಳು ಏನೆಲ್ಲಾ ಬಯಸುತ್ತೇವೆ ಆ ಬಯಕೆ ಪೂರೈಸಿಕೊಳ್ಳುವುದರ ಪ್ರಯತ್ನದಲ್ಲೆ ನಮ್ಮ ಕೊನೆಯುಸಿರು ಕಳೆಯುತ್ತೇವೆ. ಇನ್ನು ಕೆಲವು ಸರಿ ಎಂತೆಂತ ಕೆಟ್ಟ ಕೆಲಸಗಳನ್ನು ಮಾಡುತ್ತೇವೆ, ಇರುವ ಎರಡು ದಿನಕ್ಕೆ ನೂರೆಂಟು ನಂಟು, ನಂಟಿಗಾಗಿ ಹಲವು ದಾರಿ ಹಿಡಿದು ಸಂಪಾದಿಸೋದು ಗಂಟು ಅದನ್ನು ಕಾಯುತ್ತಲಿರುವಾಗಲೇ ಈ ಜಗತ್ತೆಂಬ ಛತ್ರದಿಂದ ದೇವರು ಕೊಡುವನೊಮ್ಮೆ ಟಿಕೇಟು ಅಲ್ಲಿಗೆ ಮುಗಿಯಿತು ನಾನು ನನ್ನದು ಎಂಬುದರ ಛತ್ರದ ನಂಟು.

ಈ ಜಗತ್ತೇ ಒಂದು ಛತ್ರ ಇಲ್ಲಿಗೆ ಬಂದು ನಾಲ್ಕುದಿನ ಇದ್ದು ಹೋಗುವ ಎಲ್ಲರೂ ಪಥಿಕರು ಎಂದು ಅರ್ಥವಾಗುತ್ತದೆ. ಈ ಜಗತ್ತೆಂಬ ಛತ್ರದಲ್ಲಿ ಇರುವಷ್ಟು ದಿನ ಸಾರ್ಥಕವಾದ ಬದುಕನ್ನು ಬಾಳುವುದೇ ನಾವು ಮಾಡಬೇಕಾದ ಪೂಜೆ.......

ಅಮ್ಮನಿಂದ ಧೈರ್ಯ



ಅಮ್ಮ ನಿನ್ನದು ನೂರೆಂಟು ನೋವುಂಡ ಒಡಲು
ನಿನ್ನ ನೋವಿಗೆ ಸಂತೈಸಿದ್ದು ಅಪ್ಪನ ಹೆಗಲು
ಅಂದು ಆ ನೋವಿಂದ ನಿನಗಾಗಲಿಲ್ಲವೇ ದಿಗಿಲು ?
ಅದು ಏನೇ ಇರಲಿ ನೀವಿಬ್ಬರು ಜೋಡಿ ಎತ್ತಿನ ನೇಗಿಲು
ನಿನ್ನ ಒಡಲ ಬೇಗೆಗೆ ತೆರೆದಿದೆ ನಮಗಿಂದು ಸುಖದ ಬಾಗಿಲು

ನನಗೆ ಸ್ವಲ್ಪ ನೋವಾದರೂ ಬಲು ಕಷ್ಟ ತಡೆಯಲು
ಅಂದಿನ ನಿನ್ನ ಜೀವನದ ದಾರಿಯನು ನಾನಿಂದು ನೆನೆಯಲು
ನೆನಪಿಗೆನೇ, ಧೈರ್ಯ ನುಸುಳಿ ಸೇರಿದೆಯೆನ್ನ ಮಡಿಲು
ಅಮ್ಮ, ಇನ್ನು ನನಗೇಕೆ ಭಯದ!!!! ಅಹವಾಲು
ಭಯ ದೂಡಿ ಹೊಮ್ಮಿಸಿದೆನಗೆ, ನಗೆಯ ಹೊನಲು
ನಿನ್ನ ಜೀವನ ಶೈಲಿ ಎನಗೆ ಚಿಗುರೊಡೆದ ಹೊಂಬಿಸಿಲು

Thursday, December 11, 2008

ದೇಗುಲದಲ್ಲಿ ದೇವರ ದರ್ಶನ

ಇದು ಒಂದು ಪವಿತ್ರ ಸ್ಥಳ ಬೆಟ್ಟದ ತಪ್ಪಲಿನಲ್ಲಿ ಸಿದ್ದಲಿಂಗೇಶನ ಸನ್ನಿದಿಯಲ್ಲಿ ಜನ ಸೇವೆ ಮಾಡುತ್ತಿರುವ ನೆಡೆದಾಡೋ ದೇವರ ದೇಗುಲ.... ಇದುವೇ ಸಿದ್ದಗಂಗಾ ಮಠ

ನಾನು ಇತೀಚೆಗಸ್ಟೆ ಈ ಪವಿತ್ರ ಸ್ಥಳವನ್ನು ನೋಡಿ ಬಂದೆ, ನನ್ನ ಮನಸಿಗೆ ಏನೋ ಒಂದು ರೀತಿ ಸಂತೋಷ ಏನೂ ತಿಳಿಯದ ಅನುಭವ, ಅಂದು ಬೆಳಗಿನಜಾವ ನಾವೆಲ್ಲ ಶಿವಪೂಜೆಗೆಂದು ಶ್ರೀಗಳ ಮಠಕ್ಕೆ ತೆರಳಿದೆವು ನಾವು ತಲುಪುವಸ್ಟರಲ್ಲಿ ಸ್ವಾಮೀಜಿ ತಮ್ಮ ಬೆಳಗಿನಜಾವದ ಪೂಜೆಗೆ ಅಣಿಯಾಗುತ್ತಲಿದ್ದರು . ಮಠದ ಶಿಷ್ಯರು ನಮ್ಮನು ಆತ್ಮೀಯತೆಯಿಂದ ಬರಮಾಡಿಕೊಂಡು ಸ್ವಲ್ಪ ಸಮಯ ನಿಲ್ಲಲು ಹೇಳಿ ಸ್ವಾಮಿಜಿಯ ಪೂಜಾ ಕೋಣೆಗೆ ತೆರಳಿದರು, ಸ್ವಾಮಿಜಿಯವರು ಪೂಜೆಗೆ ಅಣಿಯಾದಾಗ ನಮ್ಮನು ಒಳ ಹೋಗಲು ಸಮ್ಮತಿಸಿದರು. ನಾನು ಒಳಹೊಕ್ಕ ತಕ್ಷಣ ನೆಡೆದಾಡೊ ದೇವರ ಕಂಡು ನನ್ನ ಜೀವನ ಸಾರ್ಥಕವೆನ್ದು ಭಾವಿಸಿದೆ. ನಾವು ಅವರ ಜೊತೆ ೧೦ ರಿಂದ ೨೦ ನಿಮಿಷಗಳ ಕಾಲ ಪೂಜೆ ಮುಗಿಸಿ ಹೊರ ಬಂದ ತಕ್ಷಣ ನಮ್ಮ ಬಗ್ಗೆ ವಿಚಾರಿಸಿದರು ಸ್ವಾಮಿಜಿ ಯಾರು ಎಲ್ಲಿಂದ ಬಂದಿದರೆಂದು, ಅಲ್ಲಿಯೇ ಇದ್ದ ಶಿಷ್ಯರೊಬ್ಬರು ಮೊದಲೇ ನಮ್ಮ ಬಗ್ಗೆ ವಿಚಾರಿಸಿದ್ದಾರೆ ಅವರು ಕುವೈತ್ನಿಂದ ರಜೆಗಾಗಿ ಬಂದಿದ್ದಾರೆ ಎಂದು ಹೇಳಿದ್ದಾರೆ . ಅವರಿಗೆ ಪ್ರಸಾದದ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ , ಅವರಿಗೆ ಬಂದ ಭಕ್ತರಿಗೆ ಯಾವುದೇ ಕೊರತೆ ಬಾರದಿರಲೆಂದು ಅಷ್ಟು ಬೇಗ ಸೂಚಿಸಿದ್ದಾರೆ, ಇದು ಅವರು ಅಲ್ಲಿಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಸಲ್ಲಿಸೋ ಉಪಚಾರ ( ಇಲ್ಲಿ ನಮ್ಮ ಸಂಸ್ಕೃತಿಯ ಅತಿಥಿ ದೇವೋ ಭವ ಎಂಬ ಮಾತನ್ನು ಇಲ್ಲಿ ರೂಢಿಗೆ ತಂದಿದ್ದಾರೆ) ಇದು ಇಷ್ಟು ನಡೆದಿದ್ದು ಬೆಳಗಿನ ಜಾವಾ ಸುಮಾರು ೫ .೩೦ ಇರಬೇಕು ನಮಗೋ ಅಸ್ಟು ಬೇಗ ಉಪಹಾರ ತಿಂದು ಅಭ್ಯಾಸವಿರಲ್ಲಿಲ ಮಠದಲ್ಲಿದ್ದವರು ಬಿಡಲೇ ಇಲ್ಲ ನಾವು ಆ ಬೆಳಗಿಜಾವ ಅದು ಸ್ವಾಮಿಜಿಗಾಗಿ ಮಾಡಿದ್ದ ಬೆಳಗಿನ ಉಪಹಾರ ತಿನ್ನಲು ಪುಣ್ಯವಂತರೆ ಆಗಿರಬೇಕು, ಇನ್ನು ಬೆಳಗಿನ ಉಪಹಾರ ತಿನ್ನುತ್ತಲೇ ಸ್ವಾಮೀಜಿಗಳು ಮಕ್ಕಳ ಪ್ರಾರ್ಥನೆಗೆ ತೆರಳುತ್ತಿದ್ದಾರೆಂದು ಯಾರೋ ಹೇಳಿದ್ದು ಕೇಳಿ ಬೇಗ ಬೇಗ ನಾವು ತಿಂದು ನನ್ನ ಮಗನಿಗೂ ಬೇಗ ತಿನ್ನಲು ಹೇಳಿ ಹೊರಟೆವು ನೋಡಿದರೆ ಸ್ವಾಮಿಜಿ ಆಗಲೇ ತಾವು ಬೆಳಗಿನ ಉಪಹಾರ ಮುಗಿಸಿ ಕೈಯಲ್ಲಿ ಕೋಲು ಹಿಡಿದು ದಾಪುಗಾಲು ಹಾಕುತ್ತಾ ಹೊರಡುತಲಿದ್ದರು ನಾವು ಅವರನ್ನು ಹಿಂಬಾಲಿಸುತ್ತಾ ಓಡುತ್ತಾ ಪ್ರಾರ್ಥನೆ ನೋಡಲು ನಡೆದೆವು, ಅಲ್ಲಿ ನೋಡಿದರೆ ಇನ್ನೊಂದು ಅಶ್ಚರ್ಯ ಕಾದಿತ್ತು ೧,೦೦೦ ಕ್ಕೊ ಹೆಚ್ಹು ಮಕ್ಕಳು ಅಲ್ಲಿ ಅಷ್ಟುಬೇಗ ನಿತ್ಯಕರ್ಮ, ಜಳಕ (ತಣ್ಣಿರಿನ ಸ್ನಾನ ಮುಗಿಸಿದ್ದರು ಆ ಮಕ್ಕಳು)ಎಲ್ಲವನ್ನು ಮುಗಿಸಿ ಮಯ್ಯಮೇಲೊಂದು ವಸ್ತ್ರ ಜೊತೆಗೆ ಬಿಳಿಯ ಪಂಚೆ ಉಟ್ಟು ಸಾಲಾಗಿ ಕುಳಿತಿದ್ದರು... ಸ್ವಾಮೀಜಿಯವರು ಆಸೀನರಾಗುತ್ತಲಿದ್ದ ಹಾಗೆ ಎಲ್ಲರು ಅವರಿಗೆ ನಮಸ್ಕರಿಸಿ ಬೆಳಗಿನ ಮಂತ್ರಗಳು , ವಚನಗಳು, ದೇವರ ಗೀತೆಗಳ ಗಾಯನ ಸುದೆ ಹರಿಸಿದ ಆ ಪುಟ್ಟ ಮಕ್ಕಳಿಗೆ ನನ್ನ ಹೃದಯ ಪೂರ್ವಕ ವಂದನೆಗಳು, ಏನು ವಿನಯ ಆ ಮಕ್ಕಳಲ್ಲಿ ಎಲ್ಲಿಂದಲೋ ಬಂದು ಜಾತಿ ಮತ ಭೇದವೆನ್ನದೆ ಒಗ್ಗಟ್ಟಿನಿಂದ ಶ್ರಮದಿಂದ ವಿದ್ಯಾಭ್ಯಾಸ ಮಾಡುತ್ತಿರುವ ಆ ಮಕ್ಕಳಿಗೆ ದೇವರು ಸರ್ವ ಸಂಪತ್ತು ಕೊಡಲೆಂದು ಆಶಿಸುತ್ತೇನೆ. ಮಕ್ಕಳು ಬರಿ ಬೆಳಗಿನ ಪ್ರಾರ್ಥನೆ ಮುಗಿಸಿ ಮತ್ತೆ ತಮ್ಮ ಕೊಠಡಿಗೆ ತೆರಳದೆ ನೇರವಾಗಿ ಸಂಸ್ಕೃತ ಪಾಠಕ್ಕೆ ಸಾಲಾಗಿ ತೆರಳುತ್ತಿದ್ದರು , ಆಹಾ!! ಆ ಮಕ್ಕಳ ಸಾಲು ನೋಡಲು ಬಲು ಚೆಂದ ಹಾಗೆ ಸಾಲಾಗಿ ನಿಂತ ಮಕ್ಕಳು ತಮ್ಮ ಶಾಲಾ ಕೊಠಡಿಗೆ ತೆರಳುವ ಮುನ್ನ ಪ್ರಾರ್ಥನೆ ಸಲ್ಲಿಸಿ ಸಂಸ್ಕೃತ ಪಾಠ ಕಲಿಯಲು ತೆರಳಿದರು.
ಇನ್ನು ಸ್ವಾಮೀಜಿಗಳು ಮಕ್ಕಳ ಪ್ರಾರ್ಥನೆ ನಂತರ ಮಠದ ಕಛೇರಿಗೆ ತೆರಳಿದರು ಅಲ್ಲಿ ನೆರೆದಿದ್ದ ಭಕ್ತಾದಿಗಳು ಒಬ್ಬೋರಾಗಿ ಸ್ವಾಮೀಜಿಗಳ ದರುಶನಕ್ಕೆ ಒಳ ನಡೆದರು ನಾವು ಕೂಡ ಅ ಸಾಲಿನಲ್ಲಿದ್ದೆವು ನಮಗೆ ಮೊದಲೇ ದರುಶನವಾಗಿತ್ತು ಆದರು ಅದೇನೋ ಕುತೂಹಲ ಜೊತೆಗೆ ಅವರೊಂದಿಗೆ ಇನ್ನು ಕೆಲವು ಸಮಯ ಕಳೆಯಬೇಕೆಂಬ ಆಸೆ. ಅಲ್ಲಿ ನೆರೆದಿದ್ದ ಎಲ್ಲ ಭಕ್ತರು ನಮಸ್ಕರಿಸಿ ಸ್ವಾಮೀಜಿಯವರಿಂದ ಕೆಲಸ ಅಥವಾ ತಮ್ಮ ಮಕ್ಕಳ ವಿದ್ಯಾಭ್ಯಾಸ ಪ್ರವೇಶಕ್ಕೆ ಕೋರಿಕೆ ಸಲ್ಲಿಸಲು ಬಹಳಷ್ಟು ಜನ ಅಲ್ಲಿ ನೆರೆದಿದ್ದರು ಇದೆ ರೀತಿ ದಿನಕ್ಕೆ ಎಷ್ಟು ಜನ ಬಂದು ಹೋಗುತ್ತಾರೋ ಲೆಕ್ಕವೇ ಇಲ್ಲ, ಎಲ್ಲಾ ಭಕ್ತಾದಿಗಳ ಅಹವಾಲು ಸ್ವಿಕರಿಸಲು ಆ ನೂರರ ಹರಯದ ದೇವರು ಸದಾ ಸನ್ನದ್ದರಾಗಿ ಕುಳಿತಿರುತ್ತಾರೆ. ಇದು ನಮ್ಮಂತ ಸಾಮಾನ್ಯರಿಂದ ಸಾಧ್ಯವಾಗದ ಕೆಲಸ ಇದರ ಮಧ್ಯೆ ಸ್ವಾಮೀಜಿಗಳು ಭಕ್ತರ ಮನೆಗಳಿಗೆ ತೆರಳಿ ಪೂಜಾವಿದಿಗಳನ್ನು ಸಲ್ಲಿಸುತ್ತಾರೆ.
ತನ್ನ ಬಾಗಿದ ಬೆನ್ನು, ಸುಕ್ಕಲುಗಟ್ಟಿದ ಚರ್ಮ, ನಡೆಯಲು ಆಗದೆ ಸೋತಿರುವ ಕಾಲುಗಳು ಇಷ್ಟೆಲ್ಲಾ ಇದ್ದರು ಒಂದನ್ನು ತೋರ್ಪಡಿಸದೆ ಇನ್ನು ಮಠದ ಏಳಿಗೆಗೆ ಶ್ರಮಿಸುತ್ತಲಿದ್ದಾರೆ, ಈ ವಯಸ್ಸಿನಲ್ಲಿ ಇಷ್ಟು ತೆಜೋಮಯಿಯಾಗಿ ಕಾರ್ಯ ನಿರ್ವಹಿಸುತ್ತಲಿರುವ ಈ ನೂರು ತುಂಬಿದ ಶತಾಯುಷಿ ನಿಜಕ್ಕೂ ಕಲಿಯುಗದ ದೇವರು. ಇನ್ನು ಈಗ ಇಷ್ಟು ಚಟುವಟಿಕೆಯಿಂದ ಇರುವ ಇವರು ಆಗ ವಯಸ್ಕರಾಗಿದ್ದಾಗ ಎಷ್ಟರಮಟ್ಟಿಗೆ ಕೆಲಸ ಕಾರ್ಯಗಳು ಸರಾಗವಾಗಿ ನೆಡೆಯುತ್ತಲಿದ್ದವೋ ತಿಳಿಯೆ.... ಇದೆ ಸ್ವಾಮೀಜಿಗಳು ನೂರಾರು ಮಕ್ಕಳಿಗೆ ವಿದ್ಯಾದಾನ ಸಲ್ಲಿಸಿದ್ದಾರೆ, ಹಲವು ಬಡ ಮತ್ತು ಸಾಮಾನ್ಯ ಕುಟುಂಬಕ್ಕೆ ಆಧಾರ ಸ್ತಂಭವು ಆಗಿದ್ದಾರೆ ಹೇಗೆಂದರೆ ಬಡ ಕುಟುಂಬದ ವಿದ್ಯಾವಂತರಿಗೆ ಕೆಲಸಗಳನ್ನು ಕೊಟ್ಟು ಅವರ ಸಂಸಾರಕ್ಕೆ ನೆಲೆ ಒದಗಿಸಿದ್ದಾರೆ.
ನಾನು ಇಷ್ಟೆಲ್ಲಾ ಹೇಳಿದರು ಆ ಸ್ಥಳ ನೋಡದೆ ಇರುವಂತವರು ಯಾರು ಒಪ್ಪಿಕೊಳ್ಳುವುದಿಲ್ಲ ಅಲ್ಲಿ ಒಮ್ಮೆ ಹೋಗಿ ನೋಡಿದರೆ ನಿಜಕ್ಕೂ ನನ್ನ ಮಾತು ಒಪ್ಪುತ್ತಾರೆ.
ಹೀಗೆಯೇ ಎಂದೆಂದೂ ಈ ದೇಗುಲ ಬಡ ಮಕ್ಕಳಿಗೆ ಆಧಾರವಾಗಲ್ಲೆಂದು ಆಶಿಸುತ್ತಾ, ನೆಡೆದಾಡೋ ದೇವರಿಗೆ ಇನ್ನು ಹೆಚ್ಚು ಆಯ್ಯುಷು, ಆರೋಗ್ಯ, ಭಾಗ್ಯ, ಧನ, ಸಂಪತ್ತು ಎಲ್ಲವನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇಂತಹ ವಿರಾಗಿಗಳಿಗೆ ದೇವರು ದಯಪಾಲಿಸಿದರೆ ಊರು ಜನ ದೇಶ ಎಲ್ಲವು ಏಳಿಗೆ ಜೊತೆಗೆ ಉದ್ದಾರವಾಗುತ್ತದೆ ಹಾಗು ಅವರ ಸೇವೆ ದಾರಿದೀಪವಾಗುತ್ತದೆ . ನಮ್ಮಂತ್ತವರಿಗೆ ದೇವರು ಎಲ್ಲವನ್ನು ಕೊಟ್ಟರೆ ನಾನು ನನ್ನ ಸಂಸಾರ ಮಾತ್ರ ಉದ್ದಾರವಾಗುತ್ತದೆ , ನನ್ನ ಮನೆ ಒಂದು ಮುಂದುವರಿಯೋದಕ್ಕಿಂತ ನಮ್ಮ ಊರು ಮುಂದುವರಿಯೋದು ಮುಖ್ಯ. ನಮ್ಮಂತವರಿಗೆ ದೇವರು ಜೀವನ ನಡೆಸಲು ಕೊಟ್ಟಿರುವುದನ್ನು ಉಳಿಸಿ ಬೆಳೆಸಿದರೆ ಸಾಕು.
ಈ ರೀತಿ ಹೊಗಳಿಕೆಯನ್ನು ಅವರು ಎಂದೂ ಸ್ವೀಕರಿಸುವುದಿಲ್ಲ ಆದರು ನನ್ನ ಮನಸ್ಸಿನ ಭಾವನೆ, ಅನಿಸಿಕೆ ಎಲ್ಲವು ಬಿತ್ತರಿಸಿದ್ದೇನೆ.



ಮೋಸ!! ಮೋಸ

ಮನುಜನ ನಡೆನುಡಿಯಾದರೆ ಸರಳ
ಅಂದು, ಎಲ್ಲಿಯೂ ಇರದು ಜಗಳ
ಸರಳ ಮನುಜ ಸಿಗುವುದು ಬಲು ವಿರಳ

ಜಗತ್ತು ಹೇಗಿದೆಯೆಂದರೆ!! ಮೋಸಬಲ್ಲವಗೆ ಹೆಚ್ಚು ಸಂಬಳ
ಸಂಬಳದ ಜೊತೆಗೆ ಗಳಿಸುವನು ಗಿಂಬಳ
ಮೋಸದ ಮಾತು ಬಲ್ಲವರೇ ಇಂದು ಹೆಚ್ಚಳ

ಯಾರು? ಆ ಮೋಸದ ಬಾಯ್ಗಳಿಗೆ ಹಾಕುವರು ಮುಚ್ಚಳ
ಎಂದು! ಮೋಸ ತೊಲಗುವುದೋ ಅಂದೇ ಜಗತ್ತು ನಿರಾಳ
ಆದರಿಂದು, ನಿರಾಳತೆಯಿಲ್ಲದೆ ಪ್ರಪಂಚವಾಗಿದೆ ಕಪ್ಪು ಕರಾಳ

ಕರಾಳತೆ ಹೊರದೋಡಿಸಲು ಬೀಸಬೇಕೊಂದು ಪರಿಮಳ
ಎಂದು! ಬರುವುದೋ ಪರಿಮಳ ಬೀರೋ ಝೇಂಕಾರದ ಮಂಜುಳ
ಇಂದಲ್ಲಾ ನಾಳೆ.. ಮೋಸದ ಕರಾಳತೆಗೆ ಆಡುವೇಯಾ? ದೇವಾ ಮಂಗಳ.