Thursday, May 28, 2009

ಪಯಣ

ಮುಸುಕು ಕವಿದ ಬಾಳಿಗೆ
ನೀನಿಲ್ಲದೆ ಪ್ರಯಾಣ ಬೇಸರಿಕೆ
ವಿಷಾದ ಮೂಡಿಸಿದೆ ಮನಸಿಗೆ
ನಿನ್ನನೊ ಕರೆದೊಯ್ಯುವ ಅನಿಸಿಕೆ
ಬರುವೆಯಾ ನಲ್ಲ ನನ್ನೊಂದಿಗೆ..!!?


ಒಂಟಿ ಗಿಣಿಗೆ ಜೊತೆಯಿಲ್ಲದಾಗುವುದು
ರವಿತೇಜನಿಗೆ ಕಳೆ ಕುಂದುವುದು
ಹಾಡೋ ಹಕ್ಕಿಗೆ ಧನಿ ಹೊರಡದಾಗುವುದು
ಹೂವು ತನ್ನ ನಸುಗಂಪು ಸೊಸದಂತಾಗುವುದು


ಮಳೆಗಾಲದ ಜಡಿ ಹಿಡಿದಂತಿದೆ ಕಣ್ಣಿಗೆ
ಬಳಲಿಕೆಯಲಿ ತೊಡಲಾಡುವಳೀ ಮಲ್ಲಿಗೆ
ಪ್ರಿಯಾ!! ಒಮ್ಮೆ ಹೇಳಿಬಿಡು ಮೆಲ್ಲಗೆ
ಬರುವೆ ಚಿನ್ನ ನಿನ್ನೊಂದಿಗೆ!!!


ಬರುವುದಾದರೆ ನಲ್ಲ ಊರಿಗೆ
ನಡೆ ಪಯಣಿಸೋಣ ಜೊತೆ ಜೊತೆಗೆ
ಹೊವಿನ ಹಾದಿ ಸೊರ್ಯ ಚುಂಬನದೆಡೆಗೆ
ನಮ್ಮ ದಾರಿ ನಮ್ಮೂರ ಕರುನಾಡಿಗೆ!!!

Saturday, May 23, 2009

ಮೌನ-ಕಣ್ಣೀರು

ದುಃಖ ಉಮ್ಮಳಿಸಿ ಕಣ್ಣೀರು ಬರಿಸಿದೆ.
ನೋವ ಕರಗಿಸುವುದೇ ಈ ಕಣ್ಣೀರು...?
ಬೇಸರ ಬರ ಸೆಳೆದು ಮಾತಿಗೆ ಕಡಿವಾಣವಾಗಿದೆ.
ಮೌನ ಮರೆಸುವುದೆ ಈ ಬೇಸರ....?

ಹೃದಯದ ಭಾರ ಇಳಿಸುವುದೇ ಈ ಕಣ್ಣೀರು
ಮನದ ಬೇಸರ ನಿಲ್ಲಿಸುವುದೇ ಈ ಮೌನ
ಕಣ್ಣು ಕಣ್ಣು ಕಲೆತು ಕಣ್ಣೀರಿಗೆ ಶರಣು
ಮಾತು ಮಾತಿಗೆ ಬೆರೆತು ಮೌನಕ್ಕೆ ಮರುಳು

ಬೆಳ್ಳಿ ಬಟ್ಟಲಿಗೆ ಕಪ್ಪು ಚುಕ್ಕೆ ಅದಕೊಂದು ರೆಕ್ಕೆ
ದುಃಖದಿ ನೀ ತೊಯ್ಸಿದರೆ ನಿನ್ನಂದಕೆ ಧಕ್ಕೆ
ವಿಶಾಲ ಮನಕೆ ನಗುವ ಸುಂದರ ಮೊಗಕೆ
ಮೌನದಿ ಮಾತು ಮರೆಮಾಚಿಸುವೇಕೆ

ದುಃಖ ದುಮ್ಮಾನ ಎಲ್ಲರ ಜೀವನದ ಕರಿನೆರಳು
ಅದ ನಿಭಾಯಿಸಲು ಕಲಿಯಬೇಕಿದೆ ಜೀವನದ ತಿರುಳು
ನಿನ್ನ ಕಣ್ಣ ರೆಪ್ಪೆಗೆ ಕರಿನೆರಳು ತಾಕದಿರಲಿ
ಮೌನ ಮನಕೆ ಜೀವನದ ತಿರುಳು ಅರಿತಿರಲಿ

ಮನದ ತುಡಿತಕೆ ಕಣ್ಣಿಗೇಕೆ ಕಣ್ಣೀರ ಸೆಳೆತ
ಮನದ ಮಿಡಿತಕೆ ಮಾತಿಗೇಕೆ ಮೌನದ ತುಳಿತ
ಕಣ್ಣ ನೋಟಕೆ ಕಾಣುವುದೆಲ್ಲವೊ ಹಸಿರ ನಿಸರ್ಗ
ಮೌನ ದೂಡಿ ಮುತ್ತಂತ ಮಾತಾನಾಡಿದೊಡೆ ಅಲ್ಲೇ ಸ್ವರ್ಗ....

Tuesday, May 19, 2009

ಓ ಮನಸೇ!!!

ಹೀಗೇಕೆ ಅಳುವೇ ಮನಸೇ ತಿಳಿದಿದೆಯೆ ನಿನಗೆ
ತುಸು ಕಷ್ಟ ಸಹಿಸದೆ ನಲುಕಿ ಕೋರಗುವೆಯಲ್ಲೆ
ಜಗದ ನಿಯಮಕೆ ಯಾರು ವಿರುದ್ದ ನಿಲರು
ನೀ ಎಲ್ಲ ಸಾಂತ್ವಾನಿಸಿ ಎದೆಗುಂದದೆ ನಿಲ್ಲು!!ಓ ಮನಸೇ!!

ಬೀಸುವ ಗಾಳಿಯ ತಡೆದವರುಂಟೇನು
ಬಿಸಿಲ ಬೇಗೆಯ ನಿಲ್ಲಿಸಲಾಗುವುದೇನು?
ಓಡುವ ಕಾಲಕೆ..ಬರುವ ಕಷ್ಟಕೆ ತಡೆಯೇನು
ಎಲ್ಲವನು ನೀ ಅರಿತು ಧೈರ್ಯದಿ ನಡೆ ಮುಂದೆ!! ಓ ಮನಸೇ!!

ಎಂದೊ ಬರುವ ಕಷ್ಟಕೆ ಇಂದೇಕೆ ಅಳುವೇ
ಇಂದಿನ ಸುಸವಿಯ ಸವಿದು ಕಾಲ ಕಳೆ
ಕಷ್ಟದಿನಕೆ ದಾರಿ ತೋರಲು ಪರಿಸ್ಥಿತಿಯಿದೆ
ಕಾಲವೇ ಎಲ್ಲದಕು ಉತ್ತರ ನಿಶ್ಚಿಂತೆಯಿಂದಿರು!!ಓ ಮನಸೇ!!

ಮನದ ತುಡಿತಕೆ ಸಂತೋಷವ ಮುಚ್ಚಿಡದಿರು
ಅಳುವ ಮನಕೆ ಬಿಸುಅಪ್ಪುಗೆಯ ನೀಡುತಿರು
ನಿನಗೆ ನೀನೆ ಸಾಟಿ ಅಳು ಮೊಗದಿ ನೀನಿರದಿರು
ಎಲ್ಲವನು ನಿಗ್ರಹಿಸುವ ಗಣಿ ನೀನಾಗಿರು !!ಓ ಮನಸೇ!!

ಮಿನುಗುವ ಆ ಕಣ್ಣಿಗೇಕೆ ನೋವುಣಿಸುವೆ
ಸುಂದರ ಮೂಗಕೆ ಕಣ್ಣೀರಧಾರೆ ಕಪ್ಪುಕಲೆ
ಒಮ್ಮೆಲೆ ತೊಯ್ ಎಂದು ಸುರಿಸಿಬಿಡು ಮಳೆ
ತಿರುಗಿ ಬಾರದಿರಲಿ ಆ ಕಣ್ಣೀರ ಮಳೆ !! ಓ ಮನಸೇ!!

ಪ್ರೇಮಕೆ ಸಿಲುಕಿ ಒಳ ಮನವ ಪ್ರೇಮಿಸು
ಮೋಹದಿ ಮನವ ಚೇಡಿಸಿ ಕಾಮಿಸು
ಮನಕೆ ಪ್ರೇಮಿಯಾಗಿ ಸಂತಸದಿ ನಲಿಸು
ಮೂಗದಿ ನಲಿವ ನಗುವನ್ನು ತರಿಸು !! ಓ ಮನಸೇ!!

Sunday, May 17, 2009

ಮಸುಕಿನಲ್ಲಿದ್ದ ಮುಖ ತೆರೆದ ಮುಖಪುಟ.

ನಾವೆಲ್ಲ ಜೀವನದಲ್ಲಿ ಕೊನೆವರೆಗೊ ಹೀಗೆ ಇರುತ್ತೇವೆ, ಸುಖ ಸಂತೋಷ, ಆಸ್ತಿ ಪಾಸ್ತಿ, ಆರೋಗ್ಯ ಎಲ್ಲವೊ ನಮ್ಮೊಂದಿಗೆ ಈಗ ಇಂದು ಹೇಗಿದೆಯೋ ಕೊನೆವರೆಗು ಇರುತ್ತೆಂದು ಭಾವಿಸುತ್ತೇವೆ ಆದರೆ ಅದು ಅಕ್ಷರ ಸಹ ಸುಳ್ಳು. ಇಂದು ಇದ್ದ ಜೀವ ನಾಳೆಗಿರದು ಇರುವ ಎರಡು ದಿನಕೆ ಎನೆಲ್ಲಾ ಮಾಡುತ್ತೇವೆ ಅಲ್ಲವೆ... ಏಕೀ ಪುರಾಣವೆಂದು ಭಾವಿಸುತ್ತೀರ ಈ ಭಾವನೆ ನನ್ನ ಮನದಾಳದಲ್ಲಿ ಹುಟ್ಟಿದವು ಬರವಣಿಗೆಗೆ ಮೀಸಲಿದ್ದವಹುದಲ್ಲ.

ಇತ್ತೀಚೆಗಷ್ಟೆ ಕುವೈಟ್ ಕನ್ನಡ ಕೂಟದಲ್ಲಿ ಒಂದು ದಿನದ ಕಾರ್ಯಕ್ರಮ ಏರ್ಪಡಿಸಿದ್ದರು ಅಂದು ಸುಮಾರು ೨ ಗಂಟೆಗಳ ಕಾಲ ಒಂದು ಚಿತ್ರವನ್ನು ನೋಡುವ ಭಾಗ್ಯ ನನ್ನದಾಯಿತು. ಮೂದಲ ಹಂತಕ್ಕೆ ಏನಿದು ಚಿತ್ರ ಎಳೆಯುತ್ತಿದ್ದಾರಲ್ಲ ಎಂಬ ಭಾವನೆ ಮೊಡಿದ್ದಂತು ನಿಜ. ಒಂದು ಸಣ್ಣ ಹಳ್ಳಿ ಅಲ್ಲಿ ಒಬ್ಬರು ಶಿಕ್ಷಕರು ಅವರಿಗೆ ಪ್ರೀತಿ ಪಾತ್ರರಳಾದ ಶಿಷ್ಯೆ, ಗುರುವಿಗೆ ತಕ್ಕ ಶಿಷ್ಯೆ ಎಂದೇಳಿದರೆ ತಪ್ಪಾಗಲಾರದು. ಗುರು ಶಿಷ್ಯೆಯ ಜೀವನ ಜೊತೆ ಜೊತೆ ಸಾಗುತ್ತದೆ. ಶಿಷ್ಯೆಯ ಪ್ರತಿ ಹೆಜ್ಜೆಗು ಮಾರ್ಗದರ್ಶಿ ಗುರು, ಈ ಶಿಷ್ಯೆ ಗುರುವಿಗೆ ಪ್ರೇರಣಾತೀತೆ ಇವಳು ನಾಟ್ಯ ಪ್ರವೀಣೆ, ವಿದ್ಯಾ ಸಂಪನ್ನೇ, ವಿದ್ಯೆ ಕಲಿತರೆ ಅದರಿಂದ ತೊಂದರೆ ಇಲ್ಲ ಅದು ನಮ್ಮ ಜೀವನದ ಏಳ್ಗೆಗೆ ಮೆಟ್ಟಿಲು ಎಂಬ ನಿಲುವು ಗುರು ಶಿಷ್ಯೆದು(ಗೌರಿ).......... ಇವರಿಬ್ಬರ ಜೀವನದಲ್ಲಿ ಒಂದು ಅನಾಥ ಮಗುವಿಗೆ ಆಸರೆ ನೀಡೋ ಸ್ಥಿತಿ, ಜೊತೆಗೆ ಸ್ಲಮ್ ಮಗುವಿಗೆ ವಿದ್ಯೆಯ ಅರಿವು ಮೊಡಿಸಿದವರು.

ಇಷ್ಟೆಲ್ಲ ಸುಖ ಜೀವನದಲ್ಲಿ ಒಂದು ಆಘಾತಕಾರಿ ಎಂದರೆ ಗುರುವಿನ ಮರಣ ಇವಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತೆ...ಇಂತಹ ಸಮಯದಲ್ಲಿ ಪರ ಊರಿನಲ್ಲಿದ್ದ ಗುರುವಿನ ಸಂಸಾರದೊಂದಿಗೆ ಜೀವನ ಸಾಗಲು ತೆರಳುತ್ತಾಳೆ ಅಲ್ಲೂ ಸಹ ಯಾವ ಕೊರತೆಯಿಲ್ಲದೆ..........ಗೌರಿ ಜೊತೆಗೆ ಆ ಪುಟ್ಟ ಮಗುವಿಗೆ ಆನಂದಪೂರ್ವಕ ಸ್ವಾಗತ... ಒಮ್ಮೆ ಇದ್ದಕ್ಕಿದ್ದ ಹಾಗೆ ಆ ಪುಟ್ಟ ಪೋರಿ ಜ್ವರವೆಂದು ಮಲಗಿದಾಗ ಇದು ಸಾಮಾನ್ಯ ಜ್ವರವೆಂದು ಭಾವಿಸಿ ಮನೆಯಲ್ಲೇ ಇದ್ದ ಮಾತ್ರೆಯನ್ನು ನೀಡಿ ಸಾಂತ್ವಾನಿಸಿದ್ದಳು ಗೌರಿ, ಆದರೆ ಅದು ಯಾವುದೇ ಗುಣಕಾಣದಾದಾಗ ಆಸ್ಪತ್ರೆಗೆ ಕೊಂಡೊಯ್ಯುವ ಸ್ಥಿತಿ ಬಂದೊದಗಿತು ಅಲ್ಲಿ ಒಂದು ವಿಚಿತ್ರ ರೋಗದ ಸುಳಿವಿರುವುದು ತಿಳಿದು ಬೇರೆ ಆಸ್ಪತ್ರೆಗೆ ತೆರಳಬೇಕೆಂದು ಸೊಚಿಸಿದರು ಅಲ್ಲಿಂದ ಆ ಮಗುವನ್ನು ಗುರುವಿನ ಮಗ ಹಾಗು ಗೌರಿಯು ಬೆಂಗಳೂರಿಗೆ ಕರೆತಂದಾಗ ಅಲ್ಲಿ ಎಲ್ಲಾ ತಪಾಸಣೆಯ ನಂತರ ತಿಳಿದಿದ್ದು ಅಲ್ಲೊಂದು ಆಘಾತಕಾರಿ ಸಂಗತಿ!!!! ಎಂತವರೊ ದಿಗ್ಭ್ರಮೆಗೊಳ್ಳುವ ಮಾಹಿತಿ ವೈದ್ಯರು ಬಿಚ್ಚಿಟ್ಟಾಗ ಹೃದಯಾಘಾತವಾಗದಿರುವುದು ಹೆಚ್ಚು!!!!!!!!! ಗೌರಿಯ ಮಮತೆಯ ಕೊಸು ಕನರಿಹೋಗುವುದೆಂಬ ಭಯ ಬೆಂಬಿಡದೆ ಅವಳ ಮನದಲ್ಲೇ ಕೊತುಬಿಟ್ಟಿತ್ತು ಆದರೊ ಸ್ಥಾವರಿಸಿ ದಿಟ್ಟ ಹೆಜ್ಜೆ ಇಟ್ಟು ಹೊರ ಬಂದು ಆ ಮಗುವಿಗೆ ಆಸರೆಯಾಗಿ ಕೊನೆವರೆಗಿರುವ ನಿರ್ಧಾರಕ್ಕೆ ಬಂದಳು. ಇವಳಿಗೆ ಜೊತೆಯಾದವನು ಗುರುವಿನ ಮಗ.

ಎಲ್ಲವನ್ನು ಎದುರಿಸುವೆ ಎಂದು ಏಡ್ಸ್ ಎಂಬ ಮಹಾಮಾಯಿಯನ್ನು ಹೊತ್ತು ತಂದ್ದ ಮಗುವಿಗೆ ಇದು ಹೇಗೆ ಅಂಟಿತೆಂದು ತಿಳಿಯುವಲ್ಲಿ ಸಫಲಾದಳು ಆ ಮಗು ಇವಳ ಕೈಸೇರುವ ಮುನ್ನ ಆ ಮಗುವಿನ ಅಪ್ಪ ಅಮ್ಮ ಆತ್ಮಹತ್ಯೆಗೆ ಶರಣಾಗಿದ್ದರು........ನೃತ್ಯಶಾಲೆಗೆ ಬರುತ್ತಿದ್ದ ಈ ಮಗು ಗೌರಿಯನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಅಪ್ಪ ಅಮ್ಮ ಇಲ್ಲದಾಗ ಆಪ್ತಳಾದವಳು ಗೌರಿ ಆ ಮಗುವಿಗೆ ತಾಯಿಯಾಗಿ ನೆಲೆಯಾದವಳು ಈಕೆ.

ಆ ಮಗುವಿಗೆ ಮಹಾಮಾರಿ ತಗುಲುವುದೇನೋ ತಗುಲಿತು ದೇವರ ಜೊತೆ ತಂದೆತಾಯಿಯು ದೂರ ಸರಿದರು ಇಂತಹ ಸ್ಥಿತಿಯಲ್ಲಿ ಆ ಮಗು ಈ ಸಮಾಜದಲ್ಲಿ ಎದುರಿಸಬೇಕಾದ ಎಲ್ಲಾ ನಿಂದನೆಗಳನ್ನು ಇಂಚಿಂಚು ಅನುಭವಿಸುವಂತಾಯಿತು ಇದನ್ನೆಲ್ಲಾ ಕಂಡ ಗೌರಿ ನೂರಾರು ಜನಸ್ತೊಮ ನೆರೆದಲ್ಲೇ ತನ್ನ ಅಳಲನ್ನು ತೋಡಿಕೊಂಡಳು... ಏನು ಅರಿಯದ ಮಗು ಆ ಮಗುವೇಕೆ ಈ ಶಿಕ್ಷೆ ಅದಕ್ಕೆ ಅದರ ಖಾಯಿಲೆಯ ಅರಿವಿದೆ ನೀವೆಲ್ಲ ಜೊತೆಗೊಡಿ ಆ ಮಗು ಇರುವಷ್ಟು ದಿನ ಸಂತಸದಿ ಬಾಳಲು ಬಿಡಿ ಎಂದು ಭಾರದ ಹೃದಯದಲ್ಲಿ ದುಃಖದ ಮಡುವಿನಲ್ಲಿ ಬೇಡಿದಳು ಅವಳ ಮಾತು ನೆರೆದಿದ್ದವರನೆಲ್ಲಾ ಮಮ್ಮಲ ಮರುಗುವಂತೆ ಮಾಡಿತು........
ಆ ಜನರಿಗಷ್ಟೆ ಅಲ್ಲ ನಮ್ಮಲಿದ್ದ ಮೂಢನಂಬಿಕೆ, ನಾವು ನಮ್ಮಲ್ಲಾಗುವಷ್ಟು ಸಹಕಾರ ನೀಡಬೇಕೆಂಬುದು ನನಗೂ ಅರಿವಾಯಿತು. ಏಡ್ಸ್ ಎಂಬ ರೋಗದಿಂದ ಬಳಲುವ ಹಲವಾರು ಮಕ್ಕಳು ಸಮಾಜದಲ್ಲಿ ತಮ್ಮ ಬೇಕುಬೇಡಗಳನ್ನು ನೀಗಿಸಿಕೊಳ್ಳಲು ಸಂಪ್ರದಾಯ, ಮೂಢನಂಬಿಕೆ, ಅಸಹನೆ, ಮೂಡಿಸಿಕೊಂಡು ಆ ರೋಗವೊಂದು ಅಂಟುರೋಗವೆಂದು ಭಾವಿಸಿ ಏಡ್ಸ್ ರೋಗಿಗಳಿಗೆ ಜೀವನ ಮಾಡಲು ಅವಕಾಶ ನೀಡದೆ ಎಷ್ಟೋ ಮಂದಿ ದೊರ ತಳ್ಳುತ್ತಲಿದ್ದೇವೆ.

ರೂಪ ಐಯ್ಯರ್ ಅವರ ಚಿತ್ರ ನೋಡಿದ ಮೇಲೆ ಹಾಗು ಮುಖಮುಖಿ ಅವರ ಮನದಾಳದ ಮಾತು ಕೇಳಿದ ಮೇಲೆ ನಾವು ನಮ್ಮತನವನ್ನು ನಶಿಸದಂತೆ ನಾವು ನಮ್ಮಲಾಗೋ ಸಹಾಯ ಹಸ್ತ ಚಾಚಬೇಕೆಂಬ ನಿಲುವಿಗೆ ಬಂದೆನು.
ಈ ಚಿತ್ರ ಎಲ್ಲರೊ ನೋಡ ಬೇಕಾದ್ದೆ ಹಾಗೆ ಹೊಸ ಜೀವನದ ಹೊಸ್ತಿಲಲ್ಲಿ ನವ್ಯಪ್ರಜ್ಞೆ ಮೂಡಿಸಬೇಕಾದ್ದದೇ ಹೊರತು ಮೂಢರಂತೆ ವರ್ತಿಸಬೇಕಾದದ್ದು ಅಲ್ಲವೇ ಅಲ್ಲ.

ಧನ್ಯವಾದಗಳು

Sunday, May 10, 2009

ಅಮ್ಮನೇ ದೈವ!!!!

ನಿನ್ನುಸಿರ ತವಕ
ಬಲು ದೂರವಿದೆ.....
ನಿನ್ನ್ ಬಿಸಿ ಉಸಿರು
ತಾಕಲು ಸಮುದ್ರ ಅಡ್ಡವಿದೆ....
ನಿನ್ನ್ ಪ್ರೀತಿ ಪುಳಕ
ನನಗರಿವಿದೆ......
ನಿನ್ನ್ ಪ್ರೀತಿ ಹಾರೈಕೆ
ಹೃದಯಸ್ಪರ್ಶಿಸಿದೆ......
ಅಮ್ಮ ನಾನಿನ್ನ
ಪ್ರೇಮಸುಧೆ .....
ನೀ ಎನ್ನ ದೈವ
ಎಂದು ಮನ ಪೂಜಿಸುತಿದೆ.....
ನಿನ್ನ್ ಪೂಜೆಗೆ ಹೂ,ಗಂಧ
ಕಡ್ಡಿ,ಕರ್ಪೂರ ತರುವಾಸೆ ಎನಗಿಲ್ಲ....
ಹೂವಾಗಿ ಎನ್ನ
ಹೃದಯ ಕಮಲವಿದೆ.....
ಗಂಧವಾಗಿ ಎನ್ನ
ಮುದ ಪ್ರೇಮವಿದೆ....
ಕಡ್ಡಿ,ಕರ್ಪೂರವಾಗಿ ಎನ್ನ
ಕರವು ಕಾದಿದೆ.....
ಎನ್ನ ದೇಹದ ದೇಗುಲಕೆ
ನೀನೇ ದೈವ.....
ಅಂದು ನಿನ್ನ ಮಡಿಲು
ಕೊಟ್ಟ ಜೀವ.....
ಎನ್ನಮ್ಮ ನೀ
ಕರುಣಾಮಯಿ.....
ನಿನ್ನ್ ಒಡಲ
ಹರಸು ತಾಯಿ.....
ನನ್ನ್ ಪ್ರಾಣ ಪಕ್ಷಿ
ಹಾರುವ ಮುನ್ನ....
ನಿನ್ನ ಪಾದಕೆ
ಎರಗುವೆನಮ್ಮ.....
ಕೊನೆಯ ನನ್ನುಸಿರು
ಬಂದು ಸೇರುವುದು ನಿನ್ನೊಂದಿಗೆ....
ಅಲ್ಲಿವರೆಗು ಸಲ್ಲಿಸುವೆ
ಪ್ರೇಮಗುಚ್ಚ ನಿನ್ನ ಪಾದಕೆ.....
ನಿನ್ ಪ್ರೀತಿ ಎನಗೆ ಆಸರೆ
ನಾನು ನಿನ್ನ ಕೈ ಸೆರೆ....
**************
ಅಮ್ಮನಿರೊ ಊರಿಂದ ದೂರವಿದ್ದು ಅಮ್ಮನ ಹಾರೈಕೆ, ಅಮ್ಮನೊಂದಿಗೆ ಬೆರೆಯಲು ಕಾಲ,ಸಮಯ,ಜೀವನ ಎಲ್ಲವೊ ಅಡ್ಡವಿದೆ ನನ್ನಮ್ಮನ ಪ್ರೀತಿಗೆ ಸಣ್ಣದೊಂದು ಕವನ ಶೈಲಿ ಅಷ್ಟೆ...ಅಮ್ಮನ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ ಆದರು ನನ್ನ ಮನದಾಳದ ಮಾತು ನಿಮ್ಮೊಂದಿಗೆ.
ಇಲ್ಲಸಲ್ಲದ ದೇವರ ಹುಡುಕುವದ ಬಿಟ್ಟು...... ಇಷ್ಟು ದೊಡ್ಡ ದೇಹಕೊಟ್ಟ ನನ್ನಮ್ಮನೇ ದೈವ, ನನಗೆ ಅಮ್ಮನೇ ಸರ್ವಸ್ವ, ನಾ ನನ್ನ ಮಗುವಿಗೆ ಅಮ್ಮನಾದರೊ ನನಗೆ ನನ್ನ ಅಮ್ಮನೇ ಎಲ್ಲ...ಇಷ್ಟು ಒಳ್ಳೆ ಜೀವನ ನೆಡೆಸಲು, ನನ್ನ ಬೇಕು ಬೇಡಗಳನ್ನು ನೀಗಿಸಿದ ನನ್ನಮ್ಮನೇ ದೈವ. ಅಂತ ಅಮ್ಮನಿಗೆ ಹೃದಾಯಂತಾರಾಳದಲಿ ಸಲ್ಲಿಸುವೆ ಪೂಜ್ಯಭಾವ...ಅಮ್ಮ ನೊರುಕಾಲ ಬಾಳಲಿ ಅವಳ ಪ್ರೀತಿ ನನ್ನೊಂದಿಗೆ ಸದಾ ಇರಲೆಂದು ಬಯಸುತ್ತೆನೆ.
ವಂದನೆಗಳು
ಶುಭಮಸ್ತು.

Tuesday, May 5, 2009

ಮತ್ತಷ್ಟು ಮನಕೆ ತೋಚಿದ್ದು.....

ನಿನ್ನ ಆಸರೆ ಬೆಚ್ಚಗಿತ್ತು..
ಅಂದು ನಾ ಬೆಚ್ಚನೆ ಉಡುಪು
ಮರೆತುಬಿಟ್ಟಿದ್ದೆನಲ್ಲ ಅದಕೆ ಬೆಚ್ಚಗಿತ್ತು...
**************************
ಕುಂತಲ್ಲಿ ಕೂರಂಗಿಲ್ಲ
ನಿಂತಲ್ಲಿ ನಿಲ್ಲಂಗಿಲ್ಲ...
ಅದೇನೋ ದೊಡ್ಡ ರೋಗವಿರಬೇಕಲ್ಲ
**************************
ನೀ ನಿಲ್ಲದೇ ನನಗೇನಿದೆ...
ನನಗಿಂತ ಮುಂಚೆ....
ಗಾಳಿ, ನೀರು ಎಲ್ಲ ಇದೆ...
ಅವಿಲ್ಲದೆ ನೀನಿಲ್ಲ...
*******************
ಕಣ್ಣ ರೆಪ್ಪೆಯಲಿ ಬಚ್ಚಿಡುವೆ...
ಬಚ್ಚಿಟ್ಟರೆ..
ಕಣ್ಣು ಕಾಣದಾಗುವುದೆ..?
*******************
ಪ್ರೇಮಭಿಕ್ಷೆ ಕೊಡೂ
ಎಂದವನ ಕೇಳಿದೆ...
ಎಷ್ಟು ಜನಕೆಂದು ಕೊಡಲಿ
ಅವರಿಗೆಲ್ಲ ಕೊಟ್ಟುಳಿದರೆ
ನೋಡೋಣ......
***************
ಬಾ ಹೋಟಲಿಗೆ ಹೋಗೂಣ
ಒಂದೇ ಕಪ್ಪಿನಲಿ ಕಾಫಿ ಕುಡಿಯೋಣ...
ಕ್ಷಮಿಸು, ನಾ ಎಂಜಲು ಕುಡಿಯೂಲ್ಲ
ಹಾಗಾದರೆ, ನಿನ್ನದೆಂತ ಪ್ರೇಮ!!!
ನನ್ನದು ಎಂಜಲಲ್ಲದ ಪ್ರೇಮ....
*************** *********

Saturday, May 2, 2009

ಕರುಳ ಕುಡಿಗೆ ಹುಟ್ಟುಹಬ್ಬದ ಸಂಭ್ರಮ...

ಅಂದು ನೀ ಬಂದು ನನ್ನ ಜೀವನಕೆ ಹೊಸ ಆಯಾಮವನ್ನೇ ಮೂಡಿಸಿಬಿಟ್ಟೆ ಏನೋ ಪುಳಕ, ತನು ಮನವೆಲ್ಲಾ ಹೊಸ ಅನುಭವದತ್ತ ದಾಪುಗಾಲು ಅಂದೆನಗೆ ಎಲ್ಲವೊ ಹೊಸದು ಹೆಣ್ತನ ಹೀಗೆಲ್ಲ ಭೊರಮಿಸುತ್ತೆನುವ ಭಾವನೆ ನನ್ನಲಿಲ್ಲದ ದಿನ ನೀ ಬಂದು ನನ್ನ ಬಾಳ ಹಸನಾಗಿಸಿಬಿಟ್ಟೆ.
ಮುಸ್ಸಂಜೆಯ ಹೊತ್ತು ನಾನಲ್ಲಿ ನೋವಿಂದ ನಲುಗಿದ್ದೆ ಒಡಲ ಉರಿಗೆ ಬಾಡಿದ ಹೂವಂತಿದ್ದೆ ನೀ ಪುಟಿದು ಬಂದ ಕ್ಷಣ ಎಲ್ಲಾ ನೋವು ಮಾಯವಾಗಿತ್ತು. ನಿನ್ನೊಡನೆ ನನ್ನ ಬಾಲ್ಯ, ಅಮ್ಮನ ಹಾರೈಕೆ ಎಲ್ಲವನು ಅರಿತೆ, ನಿನ್ನ ಪುಟ್ಟ ಪುಟ್ಟ ಹೆಜ್ಜೆ ನನ್ನ ಜೀವನದ ಉನ್ನತಿಯ ಮೆಟ್ಟಿಲಿಗೆ ನಾಂದಿಯಾಡಿತು.. ನಿನ್ನ ತೊದಲ ನುಡಿ, ನಿನ್ನ ತುಂಟತನ, ಮೃದುತ್ವ ಎಲ್ಲವೊ ಮನೆ,ಮನ ಸೂರೆಮಾಡಿತ್ತು. ನಿನ್ನಿಂದ ದೊರವಿದ್ದ ದಿನಗಳಂತು ನರಕಯಾತನೆಯಂತಿತ್ತು ಅಂದಿನ ಒಡಲ ಉರಿ ಇಂದು ನೆನೆದರೆ ಕಣ್ಣೀರ ಧಾರೆ ಹರಿದುಬಿಡುವುದು. ನಿನ್ನಿಂದ ದೂರವಿದ್ದ ಕಹಿಮರೆತು ಮತ್ತೊಮ್ಮೆ ಸೇರಿದಾಗ ನೀ ತೋರಿದ ಮುನಿಸು ಸ್ವಲ್ಪ ಇರಿಸುಮುರಿಸು ಜೊತೆಗೆ ಮತ್ತೆಂದು ನನ್ನ ಸ್ವೀಕರಿಸುವುದಿಲ್ಲವೇನೆಂಬ ಭಯದ ಛಾಯೆ ಹೃದಯಾಂತರಾಳದಲ್ಲಿತ್ತು ಅದನಾರಲ್ಲೊ ತೋರ್ಪಡಿಸದೆ ಭಂಡಳಂತ್ತಿದ್ದೆ. ಆ ಕಹಿದಿನಗಳೆಲ್ಲ ಕಳೆದು ನನ್ನೊಡಲ ಉರಿ ತಣ್ಣಗಾಗಿಸಿ ನೀ ಎನ್ನ ಮಡಿಲು ಸೇರಿದೊಡೆ ನಾನು ನಿರಾಳವಾಗಿಬಿಟ್ಟೆ. ಅಂದಿನಿಂದ ನಾ ನಿನಗಾಸರೆ ನೀ ನನಗಾಸರೆಯಾಗಿಬಿಟ್ಟೆವು.......
ನಿನ್ನದು ಮುದ್ದು ಮನಸು ನನ್ನದು ಪೆದ್ದು ಮನಸು ಇಂತಹದರಲ್ಲಿ ಇಬ್ಬರು ನಲಿದ ಕ್ಷಣಗಳೆಲ್ಲಾ ಹುಚ್ಚು ತರಿಸಿದವೆಲ್ಲವು..... ಆ ಮುದ್ದು ಮನಸಿಗೆ ಮುದ ನೀಡೋ ಕನಸು ಎಷ್ಟೋ ಇದೆ ನಿನಗದು ಖುಷಿ ನೀಡುತ್ತೋ ಇಲ್ಲವೋ ಎಲ್ಲವನು ಕಾದು ನೋಡಬೇಕಿದೆ.
ನಿನ್ನ ಹಾರೈಕೆ ಮಾಡುವಲ್ಲಿ ಕಡಿಮೆಯೇನೋ ನಾ ತಿಳಿಯೇ ಎಲ್ಲರಂತೆ ನಾನಿಲ್ಲವೇನೋ, ನೀ ಬಯಸಿದಂತೆ ನಿನ್ನ ಹಾರೈಕೆ, ಪ್ರೀತಿ, ವಾತ್ಸಲ್ಯ ನೀಡುತ್ತಿಲ್ಲವೇನೋ ತಿಳಿಯೇ, ಅಂದು ನಿನ್ನೊಬ್ಬನೇ ಬಿಟ್ಟು ಹೋದಾಗ ಕಣ್ಣೀರ ನೀ ತುಂಬಿಕೊಂಡಾಗ ನಿನಗಾದ ದುಃಖದಲಿ ನನ್ನ ಶಪಿಸಿಬಿಟ್ಟೆಯೇನೋ ನಾ ತಿಳಿಯೇ ಆದರೆ ಒಂದಂತೂ ನಿಜ ನಿನ್ನೊಬ್ಬನನ್ನೇ ಬಿಟ್ಟು ನಾ ಹೋದಾಗ ಅನಾಥ ಪ್ರಜ್ಞೆ ನಿನ್ನಲ್ಲಿ ಎಲ್ಲಿ ಮೂಡಿಬಿಡುತ್ತೋ ಎಂಬ ಭಾವ ನನ್ನ ಮನಕೆ ಕಾಡದಿರಲಿಲ್ಲ...ನನ್ನ ಕರುಳ ಸಂಕಟ ಹೇಳಿಕೊಳ್ಳಲು ನೀನ್ನಿನ್ನು ಪುಟ್ಟ ಮಗು...ನನ್ನ ಮಾತನ್ನೆಲ್ಲಾ ಅರಿವ ವಯಸ್ಸು ನಿನ್ನದಲ್ಲ..... ಆದರೊ ಇಷ್ಟು ಪುಟ್ಟ ವಯಸ್ಸಿನಲ್ಲಿ ನಿನ್ನ ನೀ ನಿಭಾಯಿಸಿ ಆತ್ಮಬಲ, ಧೈರ್ಯ,ಶಿಸ್ತು, ನಿಲುವು, ಸ್ವಂತಕಾರ್ಯ ಎಲ್ಲವನು ರೂಢಿಸಿಕೊಂಡು ಬಿಟ್ಟೆಯಲ್ಲಾ ಕಂದ ನಿನಗೆ ನನ್ನ ಸಲಾಮು. ನಿನಗೆ ನಾ ಎಂದೆಂದು ಚಿರಋಣಿ ನೀ ಎಲ್ಲಾ ಮಕ್ಕಳಂತಲ್ಲ ನಿನ್ನಲ್ಲಿನ ವಿಶೇಷತೆ ಹೇಳತೀರದು. ಕಾಣದ ದೇಶದಲ್ಲಿ ನನ್ನವರೆಂಬವರು ಇಲ್ಲದ ಊರಲ್ಲಿ ಶಾಲೆಯಿಂದ ಬಂದೊಡೆ ಅಮ್ಮ ಬಾಗಿಲು ತೆರೆದು ಎನಗೆ ಉಣಬಡಿಸುತ್ತಾಳೆ ಎಂಬ ಭಾವನೆಯಲಿ ಬಾಗಿಲ ಬಳಿ ಬಂದೊಡೆ ಓಹ್!!! ಅಮ್ಮನಿಲ್ಲ ಕೆಲಸಕ್ಕೆ ತೆರೆಳಿದ್ದಾಳೆ ನನ್ಗೆ ನಾನೇ ಎಲ್ಲ ಎಂದು ಭಾವಿಸಿ ಬಾಗಿಲು ತೆರೆದು ಮತ್ತೆ ಬಾಗಿಲು ಭದ್ರಪಡಿಸಿ ನಿನ್ನ ಉಡುಪು ಬದಲಿಸಿ, ಮುಖ ತೊಳೆದು ಟೆಬಲಿನ ಮೇಲಿದ್ದ ಊಟ ತೆಗೆದು ತಿನ್ನುವಾಗ ನೀನೆಸ್ಟು ದಿನ ನೊಂದುಕೊಂಡೆಯೋ ನಾ ಅರಿಯೇ ನನಗೆ ಯಾರಿಲ್ಲ ನನಗಾಗಿ ನಾನೆ ಎಲ್ಲ ಎಂದು ನೊಂದು ತುತ್ತು ತುತ್ತಿಗು ತುತ್ತು ಕೊಡುವವಳ ಶಪಿಸಿದ್ದೆಯೇನೋ ನಾ ತಿಳಿಯೇ ನೀ ಏನೇ ತಿಳಿ ಇದು ನಿನ್ನಮ್ಮ ಎಂದೊ ನಿನ್ನ ಒಳಿತು ಬಯಸೋ ಅಮ್ಮ...........
ನನ್ನ ಉಸಿರ ಒಂದು ಭಾಗ ನೀ..........ನೀ ನನ್ನ ಸ್ನೇಹಿ, ನೀ ನನ್ನ ಪ್ರಾಣ, ನೀನೇ ಎನಗೆ ಎಲ್ಲಾ......ಕಂದ ಈ ನಿನ್ನ ಪೆದ್ದು ಮನಸಿನ ಅಮ್ಮ ಏನೇ ಮಾಡಿದ್ದರೊ ಮನ್ನಿಸಿ ಕ್ಷಮಿಸಿಬಿಡು ಮುಕುಂದ...... ನೀ ಎಲ್ಲವನು ಸಹಿಸಿ, ಎಲ್ಲದಕೊ ಪ್ರೋತ್ಸಾಹಿಸಿ ನನ್ನ ಜೀವನದ ಏಳ್ಗೆಗೆ ಬೆಳಕ ಹಿಡಿದ ಬೆಳಗಿನ ನೇಸರ.....ರಾತ್ರಿಯ ಚಂದ್ರಮ ಎಲ್ಲವೊ ನೀನೇ...ನನ್ನ ಒಡಲ ಚಂದ್ರಮಕೆ ಇಂದು ಎಂಟರ ಮುದ್ದು ಮಯಸ್ಸು...ನನ್ನ ಜೀವನದ ಬೆಳಕಿಗೆ ಹುಟ್ಟು ಹಬ್ಬದ ಸಂತಸದ ಚಂದ್ರಮ........ನನಗೋ ಬೆಳಕನೊಗಳುವ ಸಂಭ್ರಮ.............

ಕಂದ ನಿನಗೆ ನಿನ್ನ ಅಮ್ಮನಿಂದ ಹೃದಾಯಾಂತರಾಳದಿಂದ ಹುಟ್ಟುಹಬ್ಬದ ಶುಭಾಶಯಗಳು....
ಹಾಗು ನಿನ್ನಪ್ಪ ಮೋಟಗೊರಿಲ್ಲಾನಿಂದಲೂ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು....
ನಿನ್ನ ದಿನ ಸುಸವಿದಿನ
ವರುಷಪೂರ್ತಿ.......ಶುಭದಿನ