
-1-
ಕಡಲು ತಾ ಮಾಡಿದ ತಪ್ಪಿಗೆ
ತೀರದಲಿ ದಿಟ್ಟಿಸುತ್ತ ನಿಂತ ನನ್ನ
ಪಾದ ಸ್ಪರ್ಶಿಸಿ ಕ್ಷಮಿಸೆನ್ನುತಿದೆ....
ಹೇಗೆ ಮನ್ನಿಸಲಿ
ಎಂದೂ ಮಾಸದ ತಬ್ಬಲಿಯ ಗಾಯ
ನನ್ನ ಜೀವನವನ್ನೇ ಹುಣ್ಣು ಮಾಡಿಸಿದೆ..
-----
-2-
ಹೇ ಕಡಲೇ
ನೀ ಆದೆ ಅಂದು ಹೆಬ್ಬುಲಿ
ನೋಡು
ನಾನಿಂದು ತಬ್ಬಲಿ...
-----

-ಹೂ-
ನಾನು ಪೂಜೆಗೆ ಶ್ರೇಷ್ಠವೆಂದು
ನನ್ನ ಚಿವುಟಿ ಕಿತ್ತರು...
ಆದರೆ
ನಾನೂ ಒಂದು
ಉಸಿರಾಡುವ
ಜೀವವೆಂಬುದ ಮರೆತರು...
-----

-ನಾನು-
ಭುವಿಯ ಮಂಚದಲಿ
ಪ್ರಕೃತಿ ಮಡಿಲಿನಲಿ
ಮಲಗುವೆ....
ಸುತ್ತಮುತ್ತಲ ಜನರ ಹಾರೈಕೆ
ಅಕ್ಕಪಕ್ಕದವರ ಅನ್ನ ಬಟ್ಟೆಯಲಿ
ದಿನವ ಕಳೆವೆ...
ಕಾರಣ
ಗೊತ್ತಿಲ್ಲ ನಾನು ಯಾರು
ಯಾವ ಮನೆಯವ
ಯಾರ ಮಗನೆಂದು....