
ಮನುಷ್ಯರ ಕಥೆ ಇಷ್ಟೆ ಅಲ್ಲವೇನು
ಯೋಚನೆ ಮಾಡಿ ಲಾಭಾ ಏನಿದೆ..!!??
ನೋಟಿಗೊಂದು ಓಟು ಗಿಟ್ಟಿಸಿ
ಜನರ ಆಯ್ಕೆಯಲ್ಲಿ ಸೀಟು ಪಡೆದು
ದೇವರೆಸರಲಿ ಪ್ರಮಾಣ ಮಾಡಿ
ಮಣ್ಣು ಮುಕ್ಕಿಸಲೊರಟ ಜನರ ಕಥೆ ಎಲ್ಲಿಗೆ ನಿಲ್ಲಿತು..!!
ಕೋಟಿಗಟ್ಟಳೆ ಹಣವ ದೋಚಿ
ಐಶಾರಾಮಿ ಜೀವನ ನಡೆಸಿ
ರಾಜ ಠೀವಿಯಲ್ಲಿ ಮೆರೆದ
ರಾಜಕೀಯ ಕೀಚಕರ ಕಥೆ ಎಲ್ಲಿಗೆ ಬಂದಿದೆ.!!
ಪೂಜೆಗೈವ ದೇವಗೂ ಸಿಡಿಮದ್ದು ಸಿಡಿಸಿ
ಬಡಪಾಯಿ ಜನರ ಕಣ್ಣುಬಾಯಿಗೆ ಮಣ್ಣ ಎರಚಿ
ವಜ್ರಕಚಿತ ಸಿಂಹಾಸನದಿ ದರ್ಬಾರು ನೆಡೆಸಿದರು
ಆದರಿಂದು ಎಲ್ಲ ಇದ್ದು ಕಲ್ಲ ಮಂಚದಿ ಮಲಗುವವನ ಜೀವನ ಎಲ್ಲಿದೆಯೋ.!!!
ಜೈಲ ಬಾಗಿಲು ತೆರೆದಿದೆ
ಹೊರಗೆ ತಿಂದು ತೇಗುತಿರುವ
ರಾಜಕೀಯ ಖೈದಿಗಳ ಒಳಗೆ ತಳ್ಳಲು
ಸದ್ಯಕಿರುವ ಕೋಣೆಗಳು ಸಾಲದಾಗಿದೆಯೇನೋ...!!
ಇಲ್ಲೇ ಇದ್ದು ಬಿಡುವರಂತೆ ಸಂಪಾದಿಸಿದರು
ಆಯುಷ್ಯ ಎಷ್ಟೋ ಏನೋ ತಿಳಿಯದವರು
ಸಾವಿನ ಬಾಗಿಲು ತಟ್ಟೋ ಮುನ್ನ ಜೈಲ ಬಾಗಿಲು ತೆರೆಯಿತು
ಏನಾದರೇನು ನಾ ಮಾಡಿದ ಕರ್ಮ ಕಾಡದೇ ಬಿಡುವುದೇನು..!!!
ಈ ಮನುಷ್ಯನ ಕಥೆ ಇಷ್ಟೆ ಎನಿಸಿದೆ
ಆಮಿಷಕೆ ಬಲಿಯಾದವನ ವ್ಯಥೆ ಕೇಳುವವ ಇಲ್ಲವೆನಿಸಿದೆ...
