Sunday, April 18, 2010

ಪ್ರತಿಭಾ ಕಾರಂಜಿ



ಅಂದು ಶುಕ್ರವಾರ (೧೬--೧೦) ಸುಮಾರು ಸಂಜೆ ಗಂಟೆ ಇರಬಹುದು, ವೇದಿಕೆ ಪ್ರತಿಭೆಗಳ ಹುಡುಕಾಟಕ್ಕೆ ಸಜ್ಜಾಗಿತ್ತು.... ಅತ್ತಕಡೆಯಿಂದ ಸಾಲು ಸಾಲಾದ ಇರುವೆಗಳಂತೆ ಜನರು ಬರುತ್ತಲಿದ್ದರು..... ಜನರಾಗಮನ ಕುವೈತ್ ಕನ್ನಡ ಕೂಟದ ಕಾರ್ಯಕಾರಿಸಮಿತಿಯ ಸಹಯೋಗದೊಂದಿಗೆ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯ ವತಿಯಿಂದ ಪುಟ್ಟ ಸಮಾರಂಭವನ್ನು ಏರ್ಪಡಿಸಿದ್ದರು. ವೇದಿಕೆ ಕನ್ನಡ ಕೂಟದ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಂತು ಖಂಡಿತಾ ನಿಜ.......


ಕೂಟದ ಸಾಂಸ್ಕೃತಿಕ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಪ್ರಾರಂಭವಾಗಿ ಕೂಟದ ಗೀತೆಯೊಂದಿಗೆ ಶುಭಕೋರಿ ಅಧ್ಯಕ್ಷದಂಪತಿಗಳೊಂದಿಗೆ ಪ್ರತಿಭಾ ಕಾರಂಜಿಯ ಜ್ಯೋತಿ ಬೆಳಗಿತು. ನಂತರದಿ ಅಧ್ಯಕ್ಷರ ಹಿತನುಡಿಯೊಂದಿಗೆ ಸಾಂಸ್ಕೃತಿಕಕಾರ್ಯದರ್ಶಿಗಳು ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯವರ ಮುಖೇನ ಸಮಾರಂಭದ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆನೀಡಲು ಅನುವು ಮಾಡಿದರು......




ನಂತರದಿ ಸಮಿತಿಯ ಸಂಚಾಲಕರಿಂದ ಕಾರ್ಯಕ್ರಮಗಳ ವಿವರದೊಂದಿಗೆ ಪ್ರಾರಂಭಿಸಿ, ಮರಳ ಮಲ್ಲಿಗೆ ಸಮಿತಿ ಬಳಗದಸದಸ್ಯೆಯಿಂದ ಮುದ್ದು ಕೆ.ಕೆ.ಕೆ ನಿರ್ವಹಣೆಯತ್ತ ಮುನ್ನುಗಿತು.... ಪುಟ್ಟ ಕಂದಮ್ಮಗಳು ಪುಟಾಣಿ ಹೆಜ್ಜೆಯನಿಡುತ್ತಾ ಎಲ್ಲರತ್ತ ಗಮನಸೆಳೆಯುತ್ತ ಅಲ್ಲೇ ಇದ್ದ ಆಟಿಕೆಗಳಲ್ಲಿ ಕುಣಿಯುತ್ತ ವೇದಿಕೆಯನ್ನು ತುಂಬಿ ಬಿಟ್ಟಿದ್ದರು... ಇದನ್ನೆಲ್ಲಾ ವೀಕ್ಷಿಸಿದ ತೀರ್ಪುಗಾರರಂತುತೀರ್ಪುನೀಡಲು ಸ್ವಲ್ಪ ಸಮಯ ಯೋಚಿಸುವಂತಾಯಿತು....ಪುಟ್ಟ ಹೆಜ್ಜೆ ಕಂಡು ಮುಂದೆ ಸಾಗುತ್ತಲಿದ್ದಂತೆ ಕಂಡಿದ್ದು ದಂಪತಿಗಳುಅವರವರ ಗಂಡ ಹೆಂಡತಿಯರ ಹುಡುಕಾಟ ಯಾಕೆ ಜೊತೆನಲ್ಲಿ ಬಂದಿರಲಿಲ್ಲವಾ ಅಂತೀರಾ ಹಾಗಲ್ಲ ಜೊತೆಯಲ್ಲಿ ಬಂದವರು ಅವರಸ್ನೇಹಿತರೊಟ್ಟಿಗೆ ಕೂತುಬಿಟ್ಟಿದ್ದರು....ದಂಪತಿಗಳಿಗೆ ಪರೀಕ್ಷೆ ಇತ್ತು ನೋಡಿ ಕನ್ನಡದಲ್ಲಿ ಬರಿಬೇಕು ಕೆಲವು ಪ್ರಶ್ನೆ ಹೆಂಡತಿಗೆ ಗೊತ್ತಿಲ್ಲ, ಕೆಲವು ಗಂಡಂದಿರಿಗೆ ಗೊತ್ತಿಲ್ಲ ಒಬ್ಬರಿಗೊಬ್ಬರು ಯೋಚಿಸಿ ಬರೆಯಲು ಅಷ್ಟೆ ಪೆನ್ನು ಪೇಪರ್ ತಗೊಂಡು ಸುಮಾರು ೮೨ದಂಪತಿಗಳು ಉತ್ತರಿಸಿದರು........ಎಲ್ಲರಿಗೂ ಸಂತಸ ಕೂಡ...... ಇವೆಲ್ಲ ಮುಗಿದ ನಂತರ ನೋಡಿ ಮಿಕ್ಕುಳಿದ ಆಯಾವಯೋಮಿತಿಗೆ ತಕ್ಕಂತೆ ಕೆಲವು ಮಕ್ಕಳು ಅಪ್ಪ ಅಮ್ಮನೇನಾ ಕನ್ನಡ ಬರೆಯೋದು ನಾವು ಕನ್ನಡ ಪದಜೋಡಿಸ್ತೀನಿ ಅಂತಹೋದರು, ಇನ್ನು ಕೆಲವು ಮಕ್ಕಳು ನಮ್ಮದೇ ಶೈಲಿಯಲ್ಲಿ ಗ್ರೀಟಿಂಗ್ ಕಾರ್ಡ್ ಮಾಡಿ ತೋರುಸ್ತೀವಿ ನೋಡಿ ಅಂತ ಹೊರಟರು.... ಇನ್ನು ಸ್ವಲ್ಪ ದೊಡ್ಡ ಮಕ್ಕಳು ಇದಾರಲ್ಲಾ ಅವರು ಅಯ್ಯೋ ಇವರೆಲ್ಲ ಸುಮಾರಾದ ಸ್ಪರ್ಧೆಯಲ್ಲಿದ್ದಾರೆ ನಾವು ರಸವತ್ತಾಗಿರೋರಸಪ್ರಶ್ನೆಗೆ ಉತ್ತರ ಬರೆದುಕೊಂಡು ಫೈನಲ್ಸ್ ಗೆ ಬರ್ತೀವಿ ಕಾದು ನೋಡಿ ಅಂತ ಆಯಾ ಸ್ಪರ್ಧಾ ಸ್ಥಳಕ್ಕೆ ಹೊರಟೇ ಬಿಟ್ಟರು. ಇನ್ನುಅಮ್ಮಂದಿರು ಮಕ್ಕಳು ಹೊರಗಡೆ ಹೊರಟರೆ ನಾವು ಏನು ಕಡಿಮೆ ಇಲ್ಲ ಅಂತ ರಂಗೋಲಿ ಹಾಕಲಿಕ್ಕೆ ಹೊರಟರು ಅಲ್ಲಿ ಹೋದರೆ ನೀರೆಯರಿಗೆ ಕಾಂಪಿಟ್ ಮಾಡೋಕೆ ರಂಗೋಲಿ ಹಿಡಿದು ಧೀರರೂ ಸಹ ನಿಂತಿದ್ದರು.........









ಅಲ್ಲಿ ಅಪ್ಪ ಅಮ್ಮ ಅಣ್ಣ, ಅಕ್ಕಂದಿರು ಪರೀಕ್ಷೆಗಳಿಗೆ ಹೊರಟರೆ ಇತ್ತ ಗರಿಗೆದರಿ ಹಕ್ಕಿಗಳಂತೆ ಹಾರಾಡುವ ಪುಟ್ಟ ಪುಟಾಣಿಗಳ ತೊದಲು ನುಡಿಯಲ್ಲಿ ಕನ್ನಡದ ಹಾಡುಗಳು ಸರಾಗವಾಗಿ ಹಾಡಿ ಎಲ್ಲರೆದು ನಾಯಿಮರಿ, ಆನೆ, ಚಂದಮಾಮ, ರೊಟ್ಟಿಯ ಕಿಟ್ಟ, ಒಂದು ಎರಡು, ಬಾಳೆ ಎಲೆ ಎಲ್ಲವನ್ನು ವೇದಿಕೆಗೆ ತಂದೇ ಬಿಟ್ಟಿದ್ದರು ನೋಡಿ ನಮ್ಮೆಲ್ಲರಿಗೂ ಕಷ್ಟವಾಗಿತ್ತು ಕೂಡ ಹೇಗೆ ಇವರನ್ನೇಲ್ಲ ಪುಟ್ಟವೇದಿಕೆಯಲ್ಲಿ ಕೂರಿಸೋದಾ ಹೇಳಿ..... ನಮಗೆ ಸ್ವಲ್ಪ ಭಯ ಆಯ್ತು ಏನಪ್ಪಾ ಅಷ್ಟು ದೊಡ್ಡ ಆನೆ ಬಂದರೇಗೆ ಅಂತಾ..........ಬಂದಿದ್ದ ಕಾಡು, ಊರಿನ ಪ್ರಾಣಿ, ಪಕ್ಷಿ ಎಲ್ಲವನ್ನು ಕಳಿಸೋಸ್ಟರಲ್ಲಿ ಹಲವು ಸ್ಪರ್ಧೆ ಮುಗಿಸಿ ಎಲ್ಲರೂ ವೇದಿಕೆ ಸೇರಿದರು.


ಆಮೇಲೆ ಬಂದರು ನೋಡಿ ಒಂದು ಪುಟಾಣಿ ಕೃಷ್ಣ ಯಶೋದೆ ಇಬ್ಬರ ಪಾತ್ರ ನಾನೇ ಮಾಡ್ತೀನಿ ಅಂತ, ಮತ್ತೊಂದು ಬಬ್ರುವಾಹನ ಅರ್ಜುನರ ಸಂಭಾಷಣೆ, ಕಿತ್ತೂರು ರಾಣಿ ಇಂಗ್ಲೀಷರ ಜೊತೆ ಮಾತುಕತೆ.... ಅಮ್ಮ ಮಗಳ ನಡುವೆ ಸಂಭಾಷಣೆ........ಟಿವಿ ಧಾರಾವಹಿಯ ಪಾರ್ವತಿ, ಸುಬ್ಬು, ರೇಡಿಯೋ ನಾದದ ವೇದ, ಅಪ್ಪ ಮೊಮ್ಮಗನ ಪಾತ್ರ, ಅಜ್ಜ ತಾತನ ಇಂಗ್ಲೀಷ್ ಮಾತು.....ಹೀಗೆ ಎಷ್ಟೊಂದು ಅಂತೀರಾ (ಕೆಲವು ಮರೆತೆ ಬಿಟ್ಟಿರುವೆ ನೋಡಿ) ಏಕಪಾತ್ರಾಭಿನಯ ಮಾಡಿ ತೋರಿಸಿದ್ರು ಗೊತ್ತಾ........
ಪಾತ್ರಗಳನ್ನ ನೋಡಿದ್ವಾ ಆಮೇಲೆ ಅದೆಲ್ಲಿತ್ತೋ ಗುಂಪುಗಳು ಬಂದರು ನೋಡಿ ಮಾತಿನಚಕಮಕಿಗೆ ಎಲ್ಲಾ ಹೆಣ್ಣು ಕೆಲಸಕ್ಕೆ ಹೋಗಬೇಕು ಗಂಡು ಮನೆನಲ್ಲಿರಬೇಕು ಅಂತ ಕೆಲವರು ಅದಕ್ಕೆ ವಿರುದ್ಧ ಹೀಗೆ ಜಟಾಪಟಿ ನೆಡಿದು ಕೊನೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಹೇಳಿದ್ರು........

ಇವರನ್ನೆಲ್ಲ ನೋಡಿದಮೇಲೆ ಅದೆಲ್ಲಿದ್ದರೋ ಕವಿಗಳು ಸಾಲುಸಾಲಾಗಿ ವೇದಿಕೆಯನ್ನು ಅಲಂಕರಿಸಿಬಿಟ್ಟರು.... ಪುಟ್ಟ ಮಕ್ಕಳಿಂದಿಡಿದುದೊಡ್ಡವರೆಲ್ಲ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ತಮ್ಮ ಕವನವಾಚನ ನೀಡಿ ನೆರೆದಿದ್ದವರೆಲ್ಲರಿಗೂ ಖುಷಿ ನೀಡಿದರು.

ಕವಿಗಳನ್ನು ಕಳಿಸಿ ನಂತರ ಬಂದವರೇ ರಸಪ್ರಶ್ನೆಗೆ ಉತ್ತರಿಸುವ ಚಿಣ್ಣರು ವೇದಿಕೆಯಲ್ಲಿ ನೀರವ ಮೌನ ಎಲ್ಲರೂ ಪ್ರಶ್ನೆಗಳತ್ತ ಗಮನಕೆಲವರಿಗೆ ಪ್ರಶ್ನೆಗಳಿಗೆ ಉತ್ತರ ತಿಳಿದಿರಲಿಲ್ಲ ಕೆಲವರಿಗೆ ತಿಳಿದಿತ್ತು ..........ತಿಳಿದಿಲ್ಲದವರಿಗೆ ಯೋಚಿಸಲೂ ಬಿಡದೆ ನೆರೆದಿದ್ದ ಜನಗಳಲ್ಲಿಯಾರಾದರೊಬ್ಬರು ತಟ್ ಅಂತ ಉತ್ತರ ಹೇಳೋರು ನೋಡಿ.......ಅವರಿಗೂ ಖುಷಿ ಅಲ್ವಾ ನಮ್ಗೆ ಉತ್ತರಗೊತ್ತಿದೆ ಅಂತ ಹೇಳೇಬಿಡೋರು.

ಸೀರಿಯಸ್ ಕ್ವಿಜ್ ಮುಗಿಸಿ ಸತಿ-ಪತಿಗಳು ಮೊದಲೇ ಪರೀಕ್ಷೆ ಬರೆದಿದ್ದರಲ್ಲ ಅವರಲ್ಲಿ ಡಿಸ್ಟಿಂಗ್ಷನ್ ತಗೊಂಡು ಬಂದ ಜೋಡಿಗಳುವೇದಿಕೆಯನ್ನೇರಿದರು. ಸಪ್ತಪದಿ ತುಳಿದ ಜೋಡಿಗಳು ಉತ್ತರಿಸಿ, ಅದೇನೆನೋ ಹಾವಭಾವ ಮಾಡಿ ಗಂಡ ಹೆಂಡತಿಗೆ, ಹೆಂಡತಿಗಂಡನಿಗೆ ಸನ್ನೆಗಳನ್ನು ಮಾಡಿ ಗಾದೆ ಹೇಳಿಸಿ.... ಉತ್ತರಿಸದ ಗಂಡನ ಮೇಲೆ ಸಿಡುಕಿ ಸೆಟೆದು ಹೋಗಿ ಕುಳಿತರು........ಆನಂತರ ಹೆಂಡತಿ ಸಮಾಧಾನ ಮಾಡೋಕ್ಕೆಂತಾ ಒಂದು ಡಾನ್ಸ್ ಝಲಕ್ ಇತ್ತು ನೋಡಿ ಎಂತಾ ಸ್ಟೆಪ್ ಅಂತೀರ ಕೆಲವರನ್ನುಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ನೃತ್ಯ ನಿರ್ದೇಶನಕ್ಕೂ ಕರೆದರು.... ಇನ್ನು ಕೆಲವರು ಅಪ್ಪಾಳೆ ತಿಪ್ಪಾಳೆ ಅಂತಾ ನಾವು ಊರಲ್ಲಿ ಆಡ್ತಾ ಇದ್ದವಲ್ಲಾ ಹಾಗೆ ಕುಣಿದರು ಗೊತ್ತಾ........ಎಲ್ಲರು ನಕ್ಕು ನಕ್ಕು ಹೊಟ್ಟೆ ಹುಣ್ಣು ಮಾಡಿಕೊಂಡರು........ಗೆದ್ದವರುನಾವೇ ಅಪರೂಪದ ಜೋಡಿಗಳು ಎಂದು ಬೀಗಿದರು.......


ವೇದಿಕೆ ಖಾಲಿ ಮಾಡಿಸೋಕೆ ಕಷ್ಟ ಆಯ್ತು ನೋಡಿ ಯಾಕೆ ಅಂತೀರಾ ಮತ್ತೆ ಸಪ್ತಪದಿ ಜೋಡಿಗಳು ಕುಣಿತ ಬಿಟ್ಟು ಬರೋಲ್ಲಾಅಂತಾರೆ ಆದರೆ ಏನು ಮಾಡೋದು ಗಂಟೆಗಳ ಮುಳ್ಳು ಮುಂದೆ ಹೋಗ್ತಾನೆ ಇತ್ತು ಅದಕ್ಕೆ ಅವರನ್ನ ವೇದಿಕೆಯಿಂದಕೆಳಗಿಳಿಸಿದೆವು........ಆನಂತರ ಕೂಟದ ಹಿರಿಯರಿಂದ ವೈಶಾಖ ಮಾಸದ ಸಂಚಿಕೆ ಬಿಡುಗಡೆ, ಮಾಜಿ ಅಧ್ಯಕ್ಷರ ಹಿತನುಡಿ, ನಂತರಅದೇನೋ ಬಾಗಿಲ ಬಹುಮಾನವನ್ನ ವೇದಿಕೆ ಮೇಲೆ ಕೊಟ್ಟರಪ್ಪಾ........ಹಹಹ.....ತದನಂತ ಸ್ಪರ್ಧಾ ವಿಜೇತರಿಗೆಬಹುಮಾನ......ಇದಿಷ್ಟು ನೆಡೆಯುತ್ತಲಿದ್ದಂತೆ ಖಜಾಂಜಿ ಯವರಿಂದ ವಂದನಾರ್ಪಣೆ ಕೇಳೋಕ್ಕೂ ಆಗದೆ ಸುಸ್ತಾಗಿದ್ದ ಜನಹೊಟ್ಟೆಯತ್ತ ಗಮನವರಿಸಿ ಊಟದತ್ತ ನಡೆದರು............


ಇವಿಷ್ಟು ಕಾರ್ಯಕ್ರಮ ಕಂಡ ಕಂಗಳು ಖುಷಿಯಾದವು......... ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿ, ಉಪ ಸಮಿತಿಗಳು, ಮೇಲ್ವಿಚಾರಕರು, ಮಕ್ಕಳು, ಹಿರಿಯರು, ಅತಿಥಿಗಳು, ತೀರ್ಪುಗಾರರು, ಹಲವು ಕಾಣದ ಹಸ್ತಗಳು, ಧ್ವನಿವರ್ಧಕಕ್ಕೆ ಸಹಕಾರಿಸಿದವರು, ಕ್ಯಾಮರಾ ಕಣ್ಣಿಗೂ ಹಾಗೂ ಕ್ಯಾಮಾರಾ ಕ್ಲಿಕ್ಕಿಸಿದವರಿಗೂ, ಸವಿ ಊಟ ನೀಡಿದವರಿಗೂಎಲ್ಲರಿಗೂ ಹಾಗೂ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿ ಬಳಗದ ಸದಸ್ಯರೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು.

ಪೋಟೋಗಳಿಗೆ ಇಲ್ಲಿ ಕ್ಲಿಕ್ಕಿಸಿ : http://picasaweb.google.com/yogee.tumkur/PrathibaKaranji?feat=directlink#

ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಂತೆಯೇ ಮರಳ ಮಲ್ಲಿಗೆ ಮಾಸ ಪತ್ರಿಕೆಗಳನ್ನು ಓದಿ ನಿಮ್ಮ ಅನಿಸಿಕೆ ತಿಳಿಸಿ.
http://www.kuwaitkannadakoota.org/



ವಂದನೆಗಳು
ಮನಸು

Monday, April 12, 2010

ಕುಸುಮ ಕೋಮಲೆ-೫

ಕುಸುಮ ಕೋಮಲೆ- ಸುಕಾಂತ್ಯದೊಂದಿಗೆ

ಸುಮಾರು ವರುಷಗಳೇ ಕಳೆದರೂ ಇಬ್ಬರ ಭೇಟಿ ಆಗಲೇ ಇಲ್ಲ ಇತ್ತ ಕ್ಷಮ ತನ್ನ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಓದುವ ಮನಸಿಗೂ ಹುಚ್ಚು ಹಿಡಿಸೋ ಪ್ರೀತಿ ಆಗಾಗ ಇವಳ ಕಣ್ಣ ಮುಂದೆ ಹಳೆಯ ನೆನಪುಗಳ ಕನ್ನಡಿ ಹಿಡಿದಂತೆ ಬಂದು ಹೋಗುತ್ತಲಿರುತ್ತದೆ..........

ಮನೆಯಲ್ಲಿ ಯಾವ ಭಾವನೆಗಳನ್ನೂ ತೋರ್ಪಡಿಸದೆ ತನ್ನದೇ ಪ್ರಪಂಚದಲ್ಲಿ ಏಕಾಂಗಿ ಒಡನಾಟದಲ್ಲಿ ಬಿದ್ದುಬಿಟ್ಟಿರುತ್ತಾಳೆ. ಮನಸಿನ ಒಲವಿಗೆ ಮುನಿಸಿದೆ ಆದರೆ ಪ್ರೀತಿಯ ಬೇರು ಒಣಗಿಲ್ಲ ಜೊತೆಗೆ ಪ್ರೀತಿ ಮಾಸಿಲ್ಲ ನಲ್ಲನೊಂದಿಗೆ ಕಳೆದ ಸವಿಸಮಯವನ್ನೇ ಮೆಲುಕು ಹಾಕುತ್ತಾ ತನ್ನ ಪ್ರಸ್ತುತ ದಿನಗಳನ್ನು ಭಾರದ ಮನಸಿಂದ ಕಳೆಯುತ್ತಲಿದ್ದಳು........ ತನ್ನ ಮಾಸ್ಟರ್ ಡಿಗ್ರಿ ಮುಗಿಸಿ ಯಾವುದೋ ಕಾಲೇಜಿನಲ್ಲಿ ಅಧ್ಯಾಪಕಳಾಗಿ ಸೇರಿದ್ದೆ ತಡ ಅಪ್ಪ ಅಮ್ಮನಿಂದ ಮದುವೆಯ ಪ್ರಸ್ತಾಪ ಪ್ರಾರಂಭವಾಯಿತು. ಇದು ಮಾತ್ರ ಕ್ಷಮಳಿಗೆ ಕಿರಿಕಿರಿ ಹಾಗೂ ಒಲ್ಲದ ಸಂಗತಿ ಎಂದೇನಿಸಿಬಿಟ್ಟಿತ್ತು. ಅವರ ಬಲವಂತ ಜೊತೆಗೆ ಬೇಡಿಕೆ ಮದುವೆಯಾಗಲೇ ಬೇಕೆಂದು, ಇದಕ್ಕೆ ವಿರುದ್ಧವೆಂಬಂತೆ ನನ್ಗೆ ಮದುವೆ ಇಷ್ಟವಿಲ್ಲ ಎಂಬ ಹಠಕ್ಕೆ ಬಿದ್ದಳು... ಸ್ನೇಹಿತರು, ಅಪ್ಪ ಅಮ್ಮ, ಅಣ್ಣ ಯಾರ ಒತ್ತಾಯಕ್ಕೂ ಮಣಿಯದ ಇವಳು ಒಪ್ಪಲೇ ಇಲ್ಲ ಮನೆಯಲ್ಲಿ ಒಂದು ದೊಡ್ಡ ನಾಟಕವೇ ನೆಡೆದಿತ್ತು ಅಮ್ಮ ಊಟ ಬಿಟ್ಟು, ಜೊತೆಗೆ ಮುನಿಸು, ಮತ್ತಷ್ಟು ಆಕ್ರೋಶ ಎಲ್ಲವನ್ನು ತೋರಿದರೂ ಏನು ಪ್ರಯೋಜನವಾಗಲಿಲ್ಲ.
ತನ್ನ ಹಠದಂತೆ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುತ್ತಾಳೆ.

ಕೆಲಸದ ಜೊತೆ ನೆನಪಿನ ಪುಟದಲಿ ಬಾಳನ್ನು ಸಾಗಿಸುತ್ತಿರುತ್ತಾಳೆ. ದಿನವೂ ಕೆಲಸಕ್ಕೆಂದು ಹಾದು ಹೋಗುವ ಹಾದಿಯಲ್ಲೇ ಪ್ರಿಯತಮನ ಕಚೇರಿ ಇದ್ದ ಕಾರಣ ಬಸ್ಸಿನಲ್ಲಿ ಕೂರುವಾಗ ಅವನ ಕಚೇರಿ ಇರುವ ಕಡೆಗಿನ ಕಿಟಕಿಯಲ್ಲಿ ಎಂದೂ ಕೂತು ಪ್ರಯಾಣಿಸುತ್ತಲಿರಲಿಲ್ಲ.....ಅದೊಂದು ದಿನ ಆಕಸ್ಮಿಕವಾಗಿ ಬೇಡವೆನ್ನುವ ಕಿಟಕಿ ಜಾಗವೇ ಸಿಕ್ಕಿ ಬಿಟ್ಟಿತ್ತು. ಆದರೂ ಕಡೆ ತಿರುಗಿ ನೋಡಬಾರದೆಂದು ಭಾವಿಸಿ ಕಟುವಾಗೆ ಮನಸಿಗೆ ಶಪಿಸಿ ಕೂತಳು.....ಇನ್ನೇನು ಅವನ ಕಚೇರಿ ಸಮೀಸಬೇಕು ಇವಳಿಗೇ ಅರಿವಿಲ್ಲದೆ ಅವಳ ಕಣ್ಣು ಕಡೆಯೊಮ್ಮೆ ಕಣ್ಣಾಡಿಸಿಯೇ ಬಿಟ್ಟಿತ್ತು........ ಕಣ್ಣುಗಳು ಇವಳ ಒಳ ಮನಸಿಗೆ ವಿಷಯವನ್ನು ಮುಟ್ಟಿಸಿಯೇ ಬಿಟ್ಟಿತು. ಮನದೊಳಗೆ ಒಮ್ಮೆ ಸಂತಸ, ಬೇಸರ, ಕೋಪ, ತಳಮಳ ಎಲ್ಲವೂ ಒಟ್ಟೊಟ್ಟಿಗೆ ಇವಳ ದೇಹ ಹಾಗೂ ಮನಸ್ಸನ್ನು ತಲ್ಲಣಿಸುವಂತೆ ಎರಡು ಕಣ್ಣುಗಳು ಮಾಡಿಯೇ ಬಿಟ್ಟವು......

ಕಣ್ಣುಗಳು ಅವನ ಕಚೇರಿ ಇದ್ದ ಸ್ಥಳವನ್ನೊಂದೇ ತೋರಿಸಲಿಲ್ಲ ಪ್ರಿಯಕರನನ್ನೂ ತೋರಿಸಿಬಿಟ್ಟಿತು..... ಎಲ್ಲೋ ಹುದುಗಿದ್ದ ಪ್ರೇಮ ಒಮ್ಮೆಲೇ ಚಿಗುರೊಡೆಯಲು ಪ್ರಾರಂಭಿಸಿತು.....ಅಂದಿನಿಂದ ದಿನವೆಲ್ಲಾ ಕಿಟಿಯಲಿ ಇಣುಕಿ ನೋಡುವಾಟ ನೆಡೆದಿತ್ತು... ಇದು ಸುಮಾರು ದಿನಗಳೇ ಸಾಗಿದವು ಕೊನೆಗೊಮ್ಮೆ ಸಂಕೇತನ ಕಣ್ಣ ಮರೆಸಿ ನೋಡುವಂತಾಗಲಿಲ್ಲ... ಅವನೂ ಸಹ ಒಮ್ಮೆ ಇವಳ ನೋಡಿದ್ದೇ ಅದೇನೋ ಬಾವ, ಹಳೆ ಪುಟಗಳ ತಿರುವಿ ನೋಡುವ ಸಮಯ ಸಂಯಮ ಪ್ರಾರಂಭವಾಯಿತು, ಕ್ಷಮಾಳಲ್ಲಿ ಕ್ಷಮೆಯಾಚಿಸಲು ಮುಂದಾದನು. ಒಮ್ಮೆ ಮುಖಾಮುಖಿ ಭೇಟಿ.... ಎದುರೆದುರು ಬಂದಾಗ ಹೆದರೆದರಿ ನಿಂದಾಗ ಅಲ್ಲೇ ಆರಂಭ ಹಳೆಯ ಪ್ರೇಮ.... ಇತ್ತ ಮದುವೆಯಾದವನೆಂಬ ಪರಿವೇ ಇಲ್ಲದೆ ಕ್ಷಮಾಳ ಒಲುಮೆಯಲಿ ಮುದುಡಿ ಹೋದನು........ಕ್ಷಮಾ ಹೆಸರಿಗೆ ತಕ್ಕಂತೆ ಕ್ಷಮಯಾಧರಿತ್ರಿಯಾದಳು ಪ್ರೀತಿಯಿದ್ದೆಡೆ ಕೋಪ, ಕ್ರೋದ ಅನ್ನುವುದು ಬಾರದೇ ಹೋಗುತ್ತೇ ನೋಡಿ.......ಮರಳಿದ ಪ್ರಿಯತಮೆ.....ಪ್ರೀತಿಯ ಧಾರೆಯೆರೆಯುತ್ತಾಳೆ ಮನೆ, ಜನ, ಅವನ ಹೆಂಡತಿ ಯಾವುದೇ ಪರಿವಿಲ್ಲದೆ ಲೀಲಾಜಾಲವಾಗಿ ಪ್ರೇಮದಲ್ಲಿ ವಿಸ್ಮಿತರಾಗಿಬಿಡುತ್ತಾರೆ........

ಇವರಿಬ್ಬರ ಭೇಟಿ ಮತ್ತೆ ಚಿಗುರಿದ ಪ್ರೇಮ ಎಲ್ಲವೂ ಮನೆಯವರಿಗೆ ತಿಳಿದು, ಮತ್ತೊಂದು ಫಿಲ್ಮಿ ಸ್ಟೈಲಿನಲ್ಲಿ ಅಣ್ಣ ಒಬ್ಬ ದೊಡ್ಡ ವಿಲನ್ ವೇಷಧರಿಸಿಬಿಟ್ಟಿದ್ದ. ಅಣ್ಣನಿಗೆ ಇವಳ ವರ್ತನೆ ಸಹಿಸಲಾಗದೆ ಮೈ, ಕೈಗೆ ಬಿಸಿ ಬಾಸುಂಡೆಗಳ ವರಸೆ ತೋರಿಸಿಯೇ ಬಿಟ್ಟ...........

ನೋವ ಮೇಲೊಂದು ನೋವು ಅದ ಸಹಿಸಲು ಇವಳ ದೇಹವಿದೆಯೆಂದು ನೋಯಿಸುತ್ತಲೇ ಬಂದಳು ಕ್ಷಮ. ಇದು ಸರಿಯಲ್ಲವೆಂದು ತಿಳಿದರೂ ಅವಳು ಅವನ ಪ್ರೇಮಪಾಶದಲ್ಲಿ ಸಿಲುಕಿಬಿಟ್ಟಿದ್ದಳು. ಅದರಿಂದ ಹೊರಬರಲಾಗಲೇ ಇಲ್ಲ.... ಕೊನೆಗೊಂದು ತೀರ್ಮಾನಕ್ಕೆ ಬಂದು ಬಿಟ್ಟಳು. ಇರುವಿಕೆಯ ನೋವಿಗಿಂತ ಸಾವಿನ ಕಹಿಯನ್ನು ಸ್ವೀಕರಿಸುವುದೇ ಮೇಲೆಂದು, ಸಾವಿಗೆ ಸ್ವಾಗತ ನೀಡೇ ಬಿಟ್ಟಳು.... ನಿದ್ರಾ ಮಾತ್ರೆಗೆ ಶರಣಾಗಿ ಗಾಢ ನಿದ್ರೆಯಲಿ ಮಗುವಾದಳು..... ಅಮ್ಮ ಹೇಗೋ ಮಗಳ ಸ್ಥಿತಿ ಅರಿತಿದ್ದೇ, ಅವಳ ಮೇಲಿದ್ದ ಕೋಪ, ತಾಪ ಎಲ್ಲವೂ ಮಾಯವಾಗಿತ್ತು. ಎಷ್ಟೇ ಆಗಲಿ ಹೆತ್ತ ಕರುಳು ಅವಳಿಗಾಗಿ ಮರುಗಿತು ಒಮ್ಮೆಲೆ ಆಸ್ಪತ್ರೆಗೆ ಕರೆದೊಯ್ದು ಉಪಚಾರ ನೀಡಿ ಮಾನಸಿಕವಾಗಿ ಸಮಾಧಾನ ಮಾಡುವತ್ತ ಅಪ್ಪ ಅಮ್ಮ ಮುಂದಾದರು.......ಅಣ್ಣ ಕೂಡ ತಂಗಿಯ ಸ್ಥಿತಿಗೆ ಮರುಗುವಂತಾದನು...ಇತ್ತ ನನ್ನಿಂದಲೇ ಹೀಗಾಗುತ್ತಿದೆ. ಮೊದಲೇ ಅಕ್ಕನನ್ನು ಕಳೆದುಕೊಂಡೆವು ಇನ್ನು ತಂಗಿಯನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ಬಿಟ್ಟೆವೆಂದು ಕೊನೆಗೊಂದು ತೀರ್ಮಾನಕ್ಕೆ ಬರುತ್ತಾನೆ.

ಆಸ್ಪತ್ರೆಯಿಂದ ನೇರವಾಗಿ ಸಂಕೇತನ ಮನೆಗೆ ತೆರೆಳಿದ ಕ್ಷಮಾಳ ಅಣ್ಣ. ಅಲ್ಲಿ ಸಂಕೇತ್ ಹಾಗೂ ಅವನ ಹೆಂಡತಿ ಇಬ್ಬರೂ ಮನೆಯಲ್ಲಿದ್ದರು, ಇದ್ದ ವಿಷಯವನ್ನೆಲ್ಲಾ ಇಬ್ಬರೆದುರು ಹೇಳಿ ಅವರಿಬ್ಬರ ಕಾಲಿಗೆ ಬಿದ್ದು ನನ್ನ ತಂಗಿ ಉಳಿಸಿಕೊಡಿ. ನಮಗೆ ಅವಳ ಖುಷಿ ಇದ್ದರೆ ಸಾಕು ಮಿಕ್ಕದ್ದು ಏನಾದರಾಗಲೆಂದು ಅಂಗಲಾಚಿ ಬೇಡಿ ನೀವಿಬ್ಬರು ಯಾವುದಾದರೊಂದು ತೀರ್ಮಾನಕ್ಕೆ ಬರಬೇಕೆಂದೇಳಿ ಅಲ್ಲಿಂದ ನೆಡೆದ.

ಇತ್ತ ಮದುವೆಯಾಗಿ ಸುಮಾರು ವರ್ಷ ಕಳೆದರೂ ತಮ್ಮ ದಾಂಪತ್ಯ ಜೀವನಕ್ಕೆ ಒಂದು ಕೂಸು ಕೊಡಲು ಸಾಧ್ಯವಾಗದೆ ಮನಸ್ಸಲ್ಲೇ ನರಳುತ್ತಿದ್ದ ಸಂಕೇತನ ಪತ್ನಿಗೆ ಇದು ಒಂದು ಒಳ್ಳೆ ಸುಸಂದರ್ಭವೆಂದು ಭಾವಿಸಿ ಕೊನೆಗೊಂದು ತೀರ್ಮಾನಕ್ಕೆ ಸಜ್ಜಾಗಿ ಗಂಡನತ್ತಿರ ವಿಷಯವನ್ನು ಮರೆಮಾಚದೆ ಹೇಳಿದಳು "ನೋಡಿ ನೀವು ಪ್ರೀತಿಸಿದ್ದು, ಪ್ರೀತಿಸುತ್ತಿರುವುದು ಯಾವುದೂ ತಪ್ಪಿಲ್ಲ ಎಲ್ಲರಲ್ಲೂ ಪ್ರೀತಿ ಇದ್ದೇ ಇರುತ್ತೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿ ಬೆಳೆಯುತ್ತ......ಅದಕ್ಕೆ ನಾ ಒಂದು ತೀರ್ಮಾನಕ್ಕೆ ಬಂದಿದ್ದೇನೆ.......... ನೀವು ಕ್ಷಮಳನ್ನು ಮದುವೆಯಾಗಲೇ ಬೇಕು" ತೀರ್ಮಾನದಲ್ಲಿ ಯಾವುದೇ ಒತ್ತಾಯ, ಬೇಸರ, ಕೋಪ, ದ್ವೇಷ ಯಾವುದೂ ಇಲ್ಲ ನನ್ನ ಇಚ್ಚೆಯಂತೆ ನನ್ನ ಒಪ್ಪಿಗೆಯಲ್ಲೇ ನೀವು ಮದುವೆಯಾಗಿ ಎಂದೇಳಿದ ಕೂಡಲೇ ಸಂಕೇತನಿಗೆ ಎಲ್ಲಿಲ್ಲದ ಭಯ, ದುಗುಡ ಬೇಸರ ಎಲ್ಲವೂ ಒಟ್ಟಿಗೆ ಬಂದು ಮನಸ್ಸನ್ನು ಕದಡಿಬಿಟ್ಟಿತು. ಇಂತಾ ಹೆಂಡತಿ ಇದ್ದು ನಾ ಪ್ರೀತಿಯಲ್ಲಿ ಪರವಶನಾದೆನಲ್ಲ ಎಂಬ ಬೇಸರದಿ ಒಪ್ಪಿಗೆ ನೀಡಲೇ ಇಲ್ಲ...........

ಆದರೆ ಸಂಕೇತನ ಹೆಂಡತಿ ಪ್ರಜ್ವಲ ತನ್ನ ನಿಲುವಿನಲ್ಲಿ ಬದಲಾವಣೆ ಮಾಡದೆ ಗಂಡನನ್ನು ಕರೆದುಕೊಂಡು ನೇರವಾಗಿ ಆಸ್ಪತ್ರೆಯತ್ತ ಸಾಗುತ್ತಾ, ಕೈಯಲ್ಲಿ ಎರಡು ಮಲ್ಲಿಗೆ ಹಾರವನ್ನು ಹಿಡಿದು.......ಕ್ಷಮಳತ್ತ ನೆಡೆದರು. ಆಸ್ಪತ್ರೆಯಲ್ಲಿ ಇವರನ್ನು ಕಂಡ ಕ್ಷಮಳಿಗೂ ಅವರ ನಿರ್ಧಾರದಿಂದ ಮನಸ್ಸಲ್ಲಿ ಬೇಸರ ಮೂಡಿತ್ತು. ನನ್ನಿಂದಾಗಿ ಸಂಸಾರಕ್ಕೆ ಕುತ್ತು ತಂದೆನೆಂದು, ಆದರೆ ಕ್ಷಮಳ ಮಾತು ಹೊರ ಬರುವ ಮುನ್ನವೇ ಪ್ರಜ್ವಲ ಎಲ್ಲಕ್ಕೂ ಕಡಿವಾಣವಿಟ್ಟು ಹಾರ ಬದಲಾಯಿಸುವಂತೆ ಬಲವಂತವನ್ನೇರಿದಳು..........

ಕೊನೆಗೆ ಎಲ್ಲರ ಒಪ್ಪಿಗೆಯಿಂದ ಕ್ಷಮ ಹಾಗೂ ಸಂಕೇತನ ಮದುವೆ ಆಸ್ಪತ್ರೆಯಲ್ಲೇ ನೆಡೆಯಿತಾದರೂ ಅದ್ಧೂರಿಯಿಂದ ಹಿಂದೂ ಸಂಪ್ರದಾಯದಂತೆ ಸಂಬಂಧಿಕರೆಲ್ಲರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ನೆರೆವೇರಿಸಿದರು...............

ಇದು ನನ್ನ ಆತ್ಮೀಯ ಸ್ನೇಹಿಯ ಕಥೆ ಕುಟುಂಬ ಈಗ ಸಂತಸದಿಂದ ಎಲ್ಲರೂ ಒಟ್ಟು ಕುಟುಂಬದಲ್ಲಿದೆ, ಕುಸುಮಕೋಮಲೆ ಕ್ಷಮ ಅವಳಿ-ಜವಳಿ ಕುಸುಮ ದಳಗೊಂದಿಗೆ ಸಂಸಾರ ಸಾಗಿಸುತ್ತಲಿದ್ದಾರೆ......

-ಶುಭಮಸ್ತು-