
@ಚಿತ್ರ ದಿಗ್ವಾಸ್
----------
ಬಿಸಿಲ ಕಾವು ರಾಚಿದರೇನು
ಧೂಳು ಮೈಯ್ಯನೆರಗಿದರೇನು
ರಾಶಿ ರಾಗಿ ತುಂಬಿ ತುಳುಕಿದರು
ಸ್ವಚ್ಚಗೊಳಿಸೋ ಕಾರ್ಯ ನಮ್ಮದಲ್ಲವೇನು..?
ದಿನದ ಹಸಿವು ಕಾಡದಿರದು
ಅದಕೆ ನೋಡಿ ನಮ್ಮ ದುಡಿಮೆ
ಏನು ಇರುವುದೋ ಅನ್ನದ ಮಹಿಮೆ
ನಮ್ಮ ಶ್ರಮದ ಹಿಂದೆ ಹಲವು ಭಾವ
ಮನುಜ ಅದನು ನೆನೆದರೆ ನಮ್ಮ ಬದುಕು ಸಾರ್ಥಕ...
ಕಷ್ಟ-ನಷ್ಟಗಳ ಆಗರ ರೈತ ಜೀವನ
ಧೀರ್ಘ ಮಳೆ, ಬರಗಾಲದ ಹೊಳೆ
ಅಧಿಕ ಕಳೆ, ಬೆಳೆದ ಬೆಳೆ
ಎಲ್ಲ ಎಣಿಸಿ ಶೃಂಗರಿಸಬೇಕಿದೆ ಈ ಕಣ...
ಮುಸುಕು ವೇಷ, ಮಸುಕು ನೋಟ
ಧೋ ಎನುವ ಧೂಳಿನ ಆರ್ಭಟ
ಮನೆ-ಹೊಲ ಕೆಲಸ ಸರಿದೂಗಿಸಿ ನಡೆಸುವ
ತೃಪ್ತಿ ಜೀವನ ಬಲ್ಲವನೇ ಬಲ್ಲ.....!!!