Tuesday, April 28, 2009

ಬಸವಜಯಂತಿ ಆಚರಣೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ..

ದಟ್ಸ್ ಕನ್ನಡ ಹಾಗು ಕೆಂಡ ಸಂಪಿಗೆಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು .
http://thatskannada.oneindia.in/nri/article/2009/0429-kuwait-kannadigas-celebrate-basava-jayanti.ಹ್ತ್ಮ್ಲ್
http://www.kendasampige.com/article.php?id=1774
ಕಾಯಕದಲ್ಲೇ ಕೈಲಾಸಕಾಣಬೇಕೆಂದು ಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು.ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ... ಅಂತೆಯೇ ನೆನ್ನೆ ಬಸವಜಯಂತಿ ಆದ್ದರಿಂದ ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೆ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು ೭ ಗಂಟೆಗೆ ಪ್ರಾರಂಭವಾಗಿತ್ತು ಗಂಡಸರು ಹಾಗು ಹೆಂಗಸರಿಂದ ಸುಮಾರು ೨೦ ವಚನ ಗಾಯನ ನೆರೆವೇರಿತು..
ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು..ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು..

ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..


ಕೆಲವು ಆಯ್ದ ವಚನಗಳ ಸಾಲುಗಳುಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...

ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...



ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೆ ಆಶೀರ್ವದಿಸಿದರು.
ಈ ಸಮಾರಂಭದ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಸುಂದರ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಸುಸಂಪನವಾಗಿಸಿದ ಎಲ್ಲರಿಗು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತಾ... ಅಣ್ಣನವರ ವಚನದೊಂದಿಗೆ ಕೊನೆಕೊಳ್ಳಿಸುತಲಿದ್ದೇನೆ. ಹಾಗು ಶರಣರ ಬರವೆಮಗೆ ಜೀವಾಳವಯ್ಯ!! ಎಂಬಂತೆ ಈ ಪುಟ್ಟ ಮನೆಗೆ ಬಂದು ಹೋಗುತ್ತಿರುವ ಬ್ಲಾಗ್ ಶರಣ ಶರಣೆಯರೆಲ್ಲರಿಗು ನನ್ನ ಧನ್ಯವಾದಗಳು ಹೀಗೆ ಬರುತ್ತಲಿರಿ.. ಹರಸುತ್ತಲಿರಿ...ತಪ್ಪು ಒಪ್ಪುಗಳನ್ನು ತಿದ್ದುತ್ತಲಿರಿ...
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹದಾನಿ ಕೂಡಲಸಂಗಮ ದೇವನ ಪೊಜಿಸಿ ಬದುಕುವೋ
ಕಾಯವ ನಿಶ್ಚಯಿಸುವೆ!
ಎಲ್ಲರಿಗು ಶುಭವಾಗಲಿ...ಶುಭದಿನ...
ಮನಸು

Sunday, April 12, 2009

ಹೊರಾಂಗಣ ವಿಹಾರ..

ದಾಸಜಯಂತಿಯ ನಂತರ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೧೦.೪.೨೦೦೯ ಕುವೈಟ್ ಸಿಟಿಯ ಶರ್ಕ್ ಉದ್ಯಾನವನದಲ್ಲಿ (sharq garden) ವಿಹಾರವನ್ನು ಏರ್ಪಡಿಸಿದ್ದರು... ಕೂಟದ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಕುಣಿದು ನಲಿದು ಆಟವಾಡಿ ತಮ್ಮ ಸಮಯ ಕಳೆಯಲೆಂಬುದೇ ಈ ವಿಹಾರದ ಉದ್ದೇಶ..ಹಾಗೆಯೆ ನಾವೆಲ್ಲ ಅಪ್ಯಾಯಮಾನವಾಗಿ ಆ ಕುಶಿಯನ್ನು ಅನುಭವಿಸಿ ಬಂದೆವು..
ಶುಭಶುಕ್ರವಾರ ಬೆಳ್ಳಗ್ಗೆ ೭.೩೦ಕ್ಕೆ ಎಲ್ಲ ಕೂಟದ ಸದಸ್ಯರಿಗೆ ನೆಡಿಗೆ ಸ್ಪರ್ಧೆ(walkathon) ಏರ್ಪಡಿಸಿದ್ದರು ಈ ಸ್ಪರ್ಧೆಗೆ ಕೊಟದ ಸದಸ್ಯರು ಅತಿ ಹೆಚ್ಚು ಅಲ್ಲದಿದ್ದರು ಸುಮಾರು ಮಂದಿ ಭಾಗವಹಿಸಿದ್ದರು.... ಈ ನೆಡಿಗೆ ಬರಿ ದೊಡ್ದವರಿಗೆ ಅಲ್ಲದೆ ಚಿಕ್ಕ ಮಕ್ಕಳಿಗು ಏರ್ಪಡಿಸಿದ್ದರು ಆ ಮಕ್ಕಳಲ್ಲಿದ್ದ ಉತ್ಸಾಹ ಹೇಳ ತೀರದು ಎಲ್ಲರು ನಾ ಮುಂದು ತಾ ಮುಂದು ಎಂದು ಅತಿ ಸಂತೋಷದಿ ಭಾಗವಹಿಸಿದರು...ಸುಮಾರು ೮.೩೦ಕ್ಕೆ ಮುಕ್ತಾಯವಾಗುವಷ್ಟರಲ್ಲಿ ಎಲ್ಲರು ನೆಡೆದು ತುಂಬಾ ಸುಸ್ತಾಗಿದ್ದರೆಂದು ಎಲ್ಲರಿಗು ಉಪಹಾರದ ಏರ್ಪಾಟು ಮಾಡಿದ್ದರು...ಎಲ್ಲರು ಉಪಹಾರದ ನಂತರ ಇನ್ನೆನು ಆಟೋಟಗಳನ್ನು ಪ್ರಾರಂಭಿಸಬೇಕಲ್ಲ ಅದಕ್ಕೆಂದೆ ನೇಮಿಸಿರುವ ತಂಡಗಳನ್ನು ಎಲ್ಲರು ಹುಡುಕುವ ಯೋಚನೆಯಲ್ಲಿದ್ದರು ನಮ್ಮಲ್ಲಿ ನೇತ್ರಾವತಿ(ಹಳದಿಬಣ್ಣ), ಕಾವೇರಿ(ನೀಲಿ), ಶರಾವತಿ(ಹಸಿರು), ಹೇಮಾವತಿ(ಕೆಂಪು) ಎಂದು ನಾಲ್ಕು ಗುಂಪುಗಳನ್ನಾಗಿ ಅದಕ್ಕೆ ತಕ್ಕಂತೆ ಬಣ್ಣಗಳನ್ನು ಮಾಡಲಾಗಿದೆ ಇಲ್ಲಿ ಎಲ್ಲ ಮಕ್ಕಳು ಹೆಂಗಸರು, ಗಂಡಸರನ್ನು ಒಂದೊಂದು ಗುಂಪಿಗು ಇಷ್ಟು ಜನರೆಂದು ವಿಂಗಡಿಸಲಾಗಿದೆ.. ಈ ಸಮಯಕ್ಕಾಗಲೇ ಉಳಿದೆಲ್ಲಾ ಕುಟುಂಬಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು, ಎಲ್ಲರು ಅವರವರ ಟೀಮ್ ನಲ್ಲಿ ನಿಂತು ಆಟೋಟ ಕಾರ್ಯಕ್ರಮ ಚಾಲನೆಗೆಂದು ಕಾದು ನಿಂತಿದ್ದರು.. ಟೀಮ್ ಕ್ಯಾಪ್ಟನ್ ಎಲ್ಲರು ಪಂಜು ಹಿಡಿದು ನೆಡೆದು ನಂತರ ಕಾರ್ಯಕಾರಿ ಸಮಿತಿಯವರಿಗೆ ವರ್ಗಾಯಿಸಿದರು ಕಾರ್ಯಕಾರಿ ಸಮಿತಿಯವರು ಕುಟುಂಬ ಸಮೇತರಾಗಿ ಆ ಪಂಜನ್ನು ಹಿಡಿದು ಉದ್ಯಾನವನ್ನು ಒಂದು ಸುತ್ತುವರಿದು ಬಂದು ಜ್ಯೋತಿ ಬೆಳಗಿಸಿದರು...ನಂತರ ಬೆಲೂನ್ ಹಾಗು ಪಾರಿವಾಳಗಳನ್ನು ಆಗಸಕ್ಕೆ ತೇಲಿಬಿಟ್ಟರು.....ಇತ್ತ ಕೂಟದ ಸದಸ್ಯರು ಜೋರಾಗಿ ಚಪ್ಪಾಳೆಯೊಂದಿಗೆ ನಗುವಿನ ಹೊಳೆ ಹರಿಸುತ್ತಾ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು........ ಇಷ್ಟೆಲ್ಲ ನೆಡೆಯುವವರೆಗು ನೇಸರ ಬಲು ಶಾಂತಿಯಿಂದ ಮೋಡದಲ್ಲಿ ಮನೆಮಾಡಿ ಕುಳಿತಿದ್ದ ನಾವೆಲ್ಲ ಕುಣಿದು ಕುಪ್ಪಳಿಸುವವರೆಗು ನೀ ಹಾಗೆ ಇದ್ದುಬಿಡು ಶಾಂತಿಯಿಂದ ಎಂದು ಹೇಳಿಬಿಟ್ಟೆ ಆದರೆ ಅವನು ಕೇಳಬೇಕಲ್ಲ ಅವನಿಗು ಅವನ ಕೆಲಸ ಮಾಡುವಾಸೆ ಬಿಸಿಲ ತಾಪ ಸ್ವಲ್ಪ ಸ್ವಲ್ಪ ಭುವಿಗೆ ಇಳಿಯಲುಬಿಡುತ್ತಿದ್ದ...ಈ ಕಾರ್ಯಕ್ರಮದ ನಂತರ ಮಕ್ಕಳಿಗೆಂದೇ ಆಟಗಳನ್ನು ಏರ್ಪಡಿಸಿದ್ದರು೧. ೫ ವರ್ಷಕ್ಕಿಂತ ಕಡಿಮೆ ಇರುವಂತ ಮಕ್ಕಳಿಗೆ ದೊಡ್ಡ ಶೊ ಧರಿಸಿ ನೆಡೆಯುವುದು.. (Big Shoe Walk), ಮತ್ತೊಂದು ವಕ್ರ ನೆಡಿಗೆ (Zigzag Walk)೨. ೫ ರಿಂದ ೮ ವರ್ಷದ ಮಕ್ಕಳಿಗೆ ಕೋಲಿ(ಕಡ್ಡಿ)ನೊಂದಿಗೆ ಉಂಗುರ (Pole with Rings) ಹಾಗು ಕುಂಟು ಓಟ (One leg Race)೩. ೮ ರಿಂದ ೧೨ ಮತ್ತು ೧೨ರಿಂದ ೧೮ ವರ್ಷದ ಮಕ್ಕಳಿಗೆ ಓಟ (Relay) ಹಾಗು ರಿಂಗ್(ಉಂಗುರ) ಓಟ (Ring Race). ಎಲ್ಲ ಆಟೋಟಗಳಲ್ಲಿ ಎಲ್ಲ ಮಕ್ಕಳು ಮನಸೋ ಇಚ್ಚೆ ಸಂತೋಷದಿಂದ ಭಾಗವಹಿಸಿ ಕೆಲವು ಮಕ್ಕಳು ಪ್ರಶಸ್ತಿಗೆ ಪಾತ್ರರಾದರು ಇನ್ನು ಕೆಲವು ಮಕ್ಕಳು ಬೇಸರಪಟ್ಟರು ಪ್ರಶಸ್ತಿ ಬರಲಿಲ್ಲವೆಂದು ಆದರು ಅವರೆಲ್ಲ ಪಾಲ್ಗೊಂಡಿದ್ದರಲ್ಲ ಅದೇ ಮುಖ್ಯ...ಈ ಎಲ್ಲ ಆಟಗಳು ಮುಗಿಯುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದು ಕುಟುಕುತಲಿದ್ದ....ಆದರು ನಮಗೆ ಸಮಾಧಾನವಿರಲಿಲ್ಲ ಭಾಸ್ಕರನು ದಿನವೆಲ್ಲ ಬಂದೇ ಬರುತ್ತಾನೆ ಆದರೆ ನಾವು ಈ ವಿಹಾರಕ್ಕೆ ಬಂದಿರುವುದು ಈ ದಿನ ಮಾತ್ರವಲ್ಲವೇ ದೊಡ್ಡವರು ಸ್ವಲ್ಪ ಆಟೋಟಗಳನ್ನು ಆಡಿಬಿಡೋಣವೆಂಬ ಬಯಕೆ ಇತ್ತು ಅದಕ್ಕೆಂದೆ ಕ್ರೀಡಾಸಮಿತಿ ಮಕ್ಕಳಿಗೆ ಆಟೋಟಗಳು ಇದ್ದಮೇಲೆ ದೊಡ್ಡವರು ಏನು ಮಾಡಬೇಕು ಎಂದು ನಮ್ಮೆಲ್ಲರಿಗು ಆಟಗಳನ್ನು ಏರ್ಪಡಿಸಿದ್ದರು ಖೋ-ಖೋ ಮಹಿಳೆಯರಿಗೆ (ಈ ಆಟ ನಮ್ಮ ಹಳೆಯ ಹಾಗು ರಾಜ್ಯಮಟ್ಟದ ಆಟ) ಹಾಗು ವಾಲಿಬಾಲ್ ಗಂಡಸರಿಗೆಂದು ನಿಶ್ಚಯವಾಗಿತ್ತು. ಕ್ರಿಕೆಟ್ ಎಂಬ ಆಟ ಬಂದು ಹಳೆಯ ನಮ್ಮದೇ ಆದ ಆಟಗಳು ನಶಿಸುವಂತೆ ಮಾಡಿದೆ ಕ್ರಿಕೆಟಿಗೆ ಏನು ಹೇಳುವಂತಿಲ್ಲ ಆಡುವವರು ನಾವುಗಳಲ್ಲವೇ ನಾವುಗಳು ನಮ್ಮ ಆಟಗಳನ್ನು ಮರೆತು ಬೇರೆ ಆಟೋಟಗಳನ್ನು ಪ್ರೀತಿಸಲು ಮುಂದಾಗಿ ನಮ್ಮದನ್ನು ನಶಿಸಿಸುವಂತೆ ಮಾಡಿಬಿಡುತ್ತಲಿದ್ದೇವೆ ಅಲ್ಲವೆ?... ಆದರೆ ನಮ್ಮ ಕೂಟದಲ್ಲಿ ಹಳೆಯದನ್ನು ಮೆಲುಕು ಆಕಲಿಕ್ಕೆಂದು ಈ ಎಲ್ಲಾ ಆಟೋಟಗಳನ್ನು ನೆರೆವೇರಿಸಿದರು... ಖೋ-ಖೋವೇನೋ ಎಲ್ಲಾ ಮಹಿಳೆಯರು ಅತಿ ಪ್ರೀತಿಯಿಂದ ಬಿದ್ದು ಎದ್ದು... ಮಣ್ಣಲ್ಲಿ ಮಿಂದು ಬಂದರು ಅತಿ ಆಸೆಯಿಂದ ಬಾಲ್ಯದಿನಗಳಲ್ಲಿ ಆಡುತ್ತಲಿದ್ದ ಖೋವನ್ನು ನೆನೆದು ಅನುಭವಿಸಿ ಆಡಿದರು...ಈ ಸಮಯಕ್ಕಾಗಲೇ ನಾಲ್ಕು ತಂಡಗಳಲ್ಲಿ ಕಾವೇರಿ ಹಾಗು ನೇತ್ರಾವತಿ ತಂಡಕ್ಕೆ ಹಣಹಣಿ ನೆಡೆದು ಅವರು ಅಂತಿಮ ಸುತ್ತಿಗೆ ನೇತ್ರಾವತಿ ಸಚ್ಚಾಗಿತ್ತು ಇನ್ನೋಂದು ತಂಡ ಶರಾವತಿ ಹಾಗು ಹೇಮಾವತಿ ಇವರಲ್ಲಿ ತೀವ್ರ ಪೈಪೋಟಿ ನೆಡೆದು ಹೇಮಾವತಿ ತಂಡ ಅಂತಿಮ ಸುತ್ತಿಗೆ ಬಂದಿದ್ದರು ಆಗ ತಾನೆ ಆಟವಾಡಿದ್ದ ತಂಡಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಗಂಡಸರ ತಂಡಗಳತ್ತ ವಾಲುವ ಮನಸು ಮಾಡಿದರು ಕ್ರೀಡಾ ಸಮಿತಿ...ವಾಲಿಬಾಲ್ ಆಟವನ್ನು ಎಲ್ಲರು ಸಂತಸದಿ ಹಿರಿಯರು ಕಿರಿಯರು ಎನ್ನದೇ ಇಲ್ಲಿಯು ಸಹ ತಂಡಗಳು ಮನಸೋ ಇಚ್ಚೆ ಕುಣಿದು ನಲಿದರು... ಇಲ್ಲಿ ನೇತ್ರಾವತಿ ಹಾಗು ಹೇಮಾವತಿ ತಂಡಗಳ ಹಣಾಹಣಿಯಲ್ಲಿ ನೇತ್ರಾವತಿಯದೆ ಮೇಲುಗೈ ಹಾಗು ಕಾವೇರಿ ಮತ್ತು ಶರಾವತಿಯವರ ತಂಡದಿಂದ ಶರಾವತಿಯವರದೇ ಮೇಲುಗೈ. ಕೊನೆಯ ಹಾಗು ಅಂತಿಮ ಹಣಾಹಣಿಯಲ್ಲಿ ಶರಾವತಿಯವರ ಮೇಲುಗೈ ಸಾಧಿಸಿ ಮೊದಲ ಸ್ಥಾನಕ್ಕೆ ಪಾತ್ರರಾದರು...ನೇತ್ರಾವತಿ ಎರಡನೇ ಸ್ಥಾನಕ್ಕೆ ಪಾತ್ರರಾದರು..
ಇಷ್ಟೆಲ್ಲ ನೆಡೆಯುವಷ್ಟರಲ್ಲಿ ಹೊಟ್ಟೆಯು ಕರೆದಿತ್ತು ಸೂರ್ಯನು ಬಿಸಿಲ ತಾಪವನ್ನು ಚುರುಗುಟ್ಟಿಸುತ್ತಲಿದ್ದನು ಮಧ್ಯೆ ಮಜ್ಜಿಗೆಯನ್ನು ಕುಡಿದು ಮತ್ತೆ ಖೋ-ಖೋ ಅಂತಿಮ ಹಣಾಹಣಿ ನೋಡಲು ಎಲ್ಲರು ಅಲ್ಲಿ ನೆರೆದಿದ್ದರು ಹೇಮಾವತಿ ತಂಡ ಟಾಸ್ ಗೆದ್ದು ನೇತ್ರಾವತಿಯವರು ಕುಳಿತು ಆಡಲು ಬಿಟ್ಟರು ಅವರು ಮೈದಾನವನ್ನು ಆಯ್ಕೆ ಮಾಡಿದರು ಇಬ್ಬರ ಹಣಾಹಣಿ ಬಲು ಜೋರೆ ನೆಡೆದಿತ್ತು ಎಲ್ಲೋ ಒಲಂಪಿಕ್ಸ್ ಗೆ ಆಡುತ್ತಲಿದ್ದಾರೇನೋ ಎನ್ನುವ ಹಾಗೆ ಎರಡು ಟೀಮಿನ ಆಟಗಾರರು ಬಲು ಶ್ರಮದಿಂದ ಮೈದಾನಕ್ಕೆ ಮೈ ಒಡ್ಡಿ ಬಟ್ಟೆಗೆಲ್ಲ ಮಣ್ಣು ಮುಕ್ಕಿಸಿಕೊಂಡು ಆಡಿದರು ಎನೇಆಗಲಿ ಅವಿಸ್ಮರಣೀಯ ಆಟವೇ ಸರಿ.. ದೇಹ ಭಾರವಾದರು ಮೈಕೈ ನೋವಾದರು ಅದ ಲೆಕ್ಕಿಸದೇ ಎಲ್ಲರು ಆಟದಲ್ಲಿ ಮುಳುಗಿಬಿಟ್ಟಿದ್ದರು ಅಂತೆಯೇ ಪ್ರೋತ್ಸಾಹದ ಚಪ್ಪಾಳೆಗಳು ಹುರಿದುಂಬಿಸುವ ಮಾತುಗಳು ಅತ್ತಕಡೆಯಿಂದ ಕೇಳಿಬರುತ್ತಿದ್ದ ಧ್ವನಿಗಳಲ್ಲಿ ಚಿಣ್ಣರು ದೊಡ್ಡವರು ಕರುನಾಡಿಂದ ಬಂದಿದ್ದ ಅಪ್ಪ ಅಮ್ಮಂದಿರು ಎಲ್ಲರು ಸೇರಿದ್ದರು... ಕೊನೆಗೆ ಅತಿ ಹೋರಾಟದಿ ನೇತ್ರಾವತಿ ತಂಡ ಮೊದಲ ಸ್ಥಾನಕ್ಕೆ ಪಾತ್ರರಾದರು ಹಾಗು ಹೇಮಾವತಿ ತಂಡ ಎರಡನೇ ಸ್ಥಾನಕ್ಕೆಪಾತ್ರರಾದರು..
ಇದರ ನಂತರ ಎಲ್ಲರಿಂದ ಹೋಗಳಿಕೆ ನಂತರ ವನಭೋಜನಕ್ಕೆಂದು ಸಾಲು ಸಾಲಗಿ ನಿಂತೆವು ಎಲ್ಲರು ವೃಕ್ಷರಾಶಿಯಲಿ ಅಲ್ಲೊಂದು ಇಲ್ಲೊಂದು ಕಾಣುವ ಪಕ್ಷಿಗಳು,ಜೊತೆಗೆ ಹುಲ್ಲುಹಾಸಿನ ಮೇಲೆ ಕುಳಿತು ಊಟವನ್ನು ಸವಿದೆವು...ಇಷ್ಟರನಂತರ ಕೇಳಬೇಕೆ ಊಟವಾಯಿತು ನಿದ್ದೆ ಜೋಂಪೆತ್ತುವ ಸಮಯ ಆಗಲೇ ಅತ್ತಕಡೆಯಿಂದ ಬಿಂಗೋ ಆಡುವ ಬನ್ನಿ ಎಂದು ಕೋಗುವ ಕರೆಕೇಳಿ ಎಲ್ಲರು ಹುಲ್ಲಿನ ಮೇಲೆ ಆಸೀನರಾಗಿ ನಮ್ಮಲ್ಲಿದ್ದ ಬಿಂಗೋ ಚೀಟಿ ಹಿಡಿದು ಈಗ ನನ್ನ ಅಂಕಿ ಬರಬಹುದು.....ಬರಬಹುದು........ಎಂದು ಕಾಯುತ್ತ ಯಾರದೋ ಅಂಕಿಗಳಲ್ಲಿ ಮೊದಲ ಐದು ಅಂಕಿ ಆಯ್ತು(quick five), ಮೊದಲನೇ,ಎರಡನೇ,ಮೂರನೇ ಲೈನ್ ಆಯ್ತು(first,second, third line) ಎಂದು ಅವರಿಗೆ ದೊರೆಯಬೇಕಿದ್ದ ಎಲ್ಲ ಬಳುವಳಿ ಕೊಟ್ಟುಬಿಟ್ಟಿದ್ದರು ಇನ್ನೆನು ಪೂರ್ತಿ ಮನೆಯ ಅಂಕಿಗಳಲ್ಲಾದರು ನನ್ಗೆ ಸಿಗುತ್ತೆಂದು ಕಾಯುವಷ್ಟರಲ್ಲಿ ೩,೪ ಜನ ಮುಗಿಬಿದ್ದು ನನಗೆ ಬಂದಿದೆ ಪೂರ್ತಿ ಮನೆಅಂಕಿ(full house) ಹ ಹ ಹ ಹ...ಇರಲಿ ಇಷ್ಟು ಜನರಲ್ಲಿ ಯಾರು ಅದೃಷ್ಟವಂತರೋ ಅವರಿಗೆ ದೊರಕಿದೆ ಅಲ್ಲವೆ...? ಇನ್ನೇನು ಮುಗಿದುಬಿಟ್ಟಿತು ಎನ್ನುವಷ್ಟರಲ್ಲಿ ಕಾಫಿ,ಟೀ ಬಿಸ್ಕೇಟ್ ಬಂದುಬಿಟ್ಟಿತು ಎಲ್ಲರು ಸಂಜೆಸವಿಯಲ್ಲಿ ಕಾಫಿಟೀ ಸವಿಯುತ್ತಾ ಪ್ರಶಸ್ತಿ ಸಮಾರಂಭಕ್ಕೆ ಅಣಿಯಾಗಿ ಕುಳಿತೆವು ಎಲ್ಲಾ ಮಕ್ಕಳ ಪ್ರಶಸ್ತಿ ದೊಡ್ಡವರಿಗೆ ಎಲವನ್ನು ಇತ್ತು ಎಲ್ಲರ ಮನ ತಣಿಸಿಬಿಟ್ಟರು ಕಾರ್ಯಕಾರಿ ಸಮಿತಿಯವರು...ಆಟ, ಊಟ...ಮುಗಿಯಿತು ಈಗ ಮನೆಕಡೆ ಓಟ....
ಚಾಚು ತಪ್ಪದೇ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿ ಸಾಂಘವಾಗಿ ನೇರವೇರಿಸಿದ ಕ್ರೀಡಾ ಸಮಿತಿಗೆ ಹಾಗು ಅವರಿಗೆ ಕೈ ಜೋಡಿಸಿ ಆಟೋಟಾಗಳನ್ನು ನೇರೆವೇರಿಸಿಕೊಟ್ಟ ಹಲವಾರು ಮಂದಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು...
ಮತ್ತೊಂದು ಕೊನೆಯ ಮಾತು ಖೋ-ಖೋ ಆಟವಾಡಿ ಮೈ ಕೈ ತುಂಬಾ ನೋವಾಗಿತ್ತು ಆದರೊ ಮೈಕೈ ನೋವಿಗೆ ಮಾತ್ರೆ ತೆಗೆದುಕೊಂಡರೆ ೧ ಅಥವಾ ಎರಡು ದಿನದಲ್ಲಿ ಎಲ್ಲವೊ ಮಾಯವಾಗುತ್ತೆ ಆದರೆ ಬಾಲ್ಯದ ದಿನ ಮರುಕಳಿಸಿ ನಮ್ಮ ಆಟವನ್ನು ನೆನಪಿಸಿ ನಮಗೆ ಖುಷಿ ನೀಡಿದ ಆ ರಸಘಳಿಗೆ ಮಾತ್ರ ಶಾಶ್ವತವಾಗಿರುತ್ತೆಂದು ಹೇಳಬಯಸುತ್ತೇನೆ........ಎಲ್ಲಾ ಕ್ರೀಡಾ ಮನೋಲ್ಲಾಸಿಗಳಿಗೆ ಹಾಗು ಕ್ರೀಡಾ ಪ್ರಿಯರಿಗೆ ಮನತಣಿಸಿದ ಕ್ರೀಡಾಸಮಿತಿಗೆ ಮತ್ತೊಮ್ಮೆ ಮಗದೊಮ್ಮೆ ಆತ್ಮೀಯವಾಗಿ ವಂದನೆಗಳನ್ನ ಸಲ್ಲಿಸುತ್ತೇವೆ...
ವಂದನೆಗಳು..
ಶುಭದಿನ..
ವಿಹಾರದಲ್ಲಿ ತಣಿದ ಎಲ್ಲರ ಮನಸು..

Wednesday, April 8, 2009

ನಿನ್ನ-ಸ್ನೇಹ

ಸ್ನೇಹದ ಹೆಸರಲ್ಲಿ ನೀ ಒಲಿದು ಬಂದೆ
ನಿನ್ನ ಸ್ನೇಹಕೆ ನಾ ಸೋತು ನಿಂದೆ
ಕೆಲವೇ ದಿನವಾದರು ಸ್ನೇಹ
ಅದು ಭದ್ರಬುನಾದಿಯಾಗಿದೆ

ಅದೇಕೊ ಇಷ್ಟುಕಾಲ ಜೊತೆಗಿದ್ದು
ಇಂದು ದೂರ ಸರಿವ ಮಾತಾಡಿದೆ
ನನ್ನ ಮನಕೆ ಚೂರಿ ಚುಚ್ಚಂತಾಯಿತು
ಹೃದಯ ಒಮ್ಮೆಲೆ ಮಮ್ಮಲ ಮರುಗಿತು...

ನಾನೆಲ್ಲೊ ಸೋತೆ ಸ್ನೇಹದ ಆಯ್ಕೆಯಲಿ
ಎಂದು ಭಾವಿಸಿ ಮೂಕಳಾದೆ
ಕಡಲ ಅಲೆಯ ಅಬ್ಬರಕೆ
ಕೊಚ್ಚುಹೋದಂತೆ ಭಾಸವಾಯ್ತು..

ಹೋದ ರಭಸಕೆ ಕಣ್ಣೀರ ಧಾರೆ
ಧರೆಗಿಳಿಸಿ ಭುವಿಯ ತೊಯಿಸಿಬಿಟ್ಟೆ
ಮತ್ತದೆ ಕಡಲ ಅಲೆಯು ನಿನ್ನ
ಭಾಚಿ ತಬ್ಬಿ ನಾನಿರುವ ದಡಕೆ
ತಂದೆಸೆಯಿತು.....

ನೀ ಬಂದಿದ ಕಂಡು ಮನಹಗುರಾಯಿತು
ನೀ ಸಿಗುವುದಿಲ್ಲದ ಮಾತು ಮರೆಮಾಚಿಸಿತು
ಮತ್ತೊಮ್ಮೆ ಹೇಳಿದೆ ಮನವೇಕೋ ಭಾರ
ಕೆಲವರ ಮಾತು ಕೇಳಿ ನಿಂತಿದೆ ಸ್ವರ...

ನೀ ಮಾಡಿದು ತಪ್ಪಲ್ಲವೇ ಸ್ನೇಹಿ
ಗೌಡನ ಮೇಲ್ಲಿದ್ದ ಸಿಟ್ಟನು...
ಗೋಡೆಗೆ ತಟ್ಟಿಬಿಟ್ಟೆಯಲ್ಲಾ...
ಸ್ನೇಹದ ಮನ ಕ್ಷಣದಲೇ ನೋಯಿಸಿಬಿಟ್ಟೆಯಲ್ಲಾ...

ನಿನ್ನ ನೋವೆನಿತಿದ್ದರು ತಿಳಿಸಿಬಿಡು
ನಿನ್ನ ಮನವ ಹಗುರಾಗಲು ಬಿಡು
ನೀನು, ನಾನು ಶಾಶ್ವತವಲ್ಲ ಅಲ್ಲವೆ ...?
ಸ್ನೇಹ ಮಾತ್ರ ಚಿರಾಯು.. ಅದ ಅರಿತುಬಿಡು

ಮತ್ತೆಂದು ದೂರಸರಿವ ಮಾತಾಡದಿರು
ಹೃದಯ ವಿದ್ರಾವಕೆ ಸ್ನೇಹಿಯ ತಳ್ಳದಿರು
ಸ್ನೇಹ ಸಿಂಚನದ ಸಿಹಿ ನೀ ಅರಿತಿರು
ನೀ ಎಂದಿದ್ದರು ಸ್ನೇಹ ಜೀವಿ.. ಅದ ಮರೆಯದಿರು
ಸ್ನೇಹದ ಹೆಸರಲ್ಲಿ ಕೆಲವು ಏರುಪೇರು ನೆಡೆಯುತ್ತವೆ ಸ್ನೇಹ ಕೈಜಾರಿ ಹೋಗಲು ಬಿಡದೆ ಕಾಪಡಿಕೊಳ್ಳಬೇಕು...ಸ್ನೇಹಕ್ಕೆ ಸ್ನೇಹವೇ ಸರಿಸಾಟಿ.....ಮನವೆಂಬ ಮಂಟಪದಿ ಮನುವೆಂಬ ಜೀವಿಯಿರಲು ಅದೇ ನಮಗೆ ಸ್ನೇಹಿ ಆ ಸ್ನೇಹಿಗೆ ಕೈಜೋಡಿಸುವ ಸ್ನೇಹಿ ಸಿಕ್ಕರೆ ಅವರು ಧನ್ಯರು. ಸ್ನೇಹ ಮಾಡುವುದು ನಿಮಿಷದಲ್ಲಿ ಅದ ನಿಭಾಯಿಸುವುದು ಜೀವನಪರ್ಯಂತದಲ್ಲಿ....ಯಾರು ಎಷ್ಟು ನಿಭಾಯಿಸುತ್ತೆವೊ ತಿಳಿಯದು.... ಒಳ್ಳೆ ಸ್ನೇಹಿ ಎಂದು ತಿಳಿದರೆ ಅವರು ನಿಮ್ಮಿಂದ ದೂರಾಗಲು ಬಿಡದಿರಿ....
ಶುಭದಿನ
ಮನಸು...

Wednesday, April 1, 2009

ನಡೆದಾಡುವ ದೇವರಿಗೆ ನಮ್ಮ ಶುಭಾಶಯಗಳು..

ಇಂದು ಶ್ರಿ ಶಿವಕುಮಾರ ಸ್ವಾಮಿಗಳಾ ಜನ್ಮದಿನ ಅವರನ್ನು ನೆನೆಯುತ್ತ ಸಾಧನಾ ಶೀಲರಾದ, ಯಾವುದೆ ಹೆಸರು, ಬಿರುದು ಬಯಸದ ಶ್ರಿಗಳಿ ನಮ್ಮ ಹೃತ್ಪೂರ್ವಕ ನಮನಗಳು..
ಅವರ ಜನನ ಏಪ್ರಿಲ್ ೧ ೧೯೦೭, ಹುಟ್ಟೂರು ವೀರಾಪುರ.
ನಮ್ಮ ಮನೆಯಲ್ಲಿ ಪೂಜಿಸೊ ಶ್ರಿಗಳ ಪಾದುಕೆ


ಶ್ರಿಗಳ ಆಸನ ಅವರು ಮಲಗೊ ಕೊಠಡಿ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೊ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೊ ಸಲ್ಲರಯ್ಯ
ಕೂಡಲಸಂಗಮದೇವ.... ಬಸವಣ್ಣನವರ ವಚನದಂತೆ ಶ್ರಿಗಳು ಎಲ್ಲೆಲ್ಲಿಯು ಸಲ್ಲುವರು ಎಲ್ಲರಿಗು ಸಲ್ಲುವರು
ಅವರ ಜೀವನದ ಸಾಧನೆ ಅವರ ಧ್ಯೇಯ ಎಲ್ಲವೊ ಒಳಿತಿನೆಡೆಗೆ ಸಮಾಜದ ಉದ್ದಾರಕ್ಕಾಗೇ ಮೀಸಲು..ಇಂತಹ ಮಹಾನ್ ಚೇತನರನ್ನು ನಾನು ಮನಸಾರೆ ನೆನೆದು ಅವರ ಸಾಧನೆ ನಮಗೆ ದಾರಿದೀಪವಾಗಲೆಂದು ಬಯಸುತ್ತಾ ಅವರ ಪಾದಾರವಿಂದಕ್ಕೆ ಮನದಲ್ಲೇ ಎರಗುತ್ತಾ ನಮಿಸುತ್ತೆನೆ...
ಗುರುಗಳಿಗೆ ನಮಿಸುತ್ತಾ
ನಿಮ್ಮೆಲ್ಲರಿಗು ವಂದನೆಗಳು
ಶುಭದಿನ..