Sunday, June 28, 2009

ಭಾವನೆ

ಭಾವನೆಗೆ ನಿಲುಕದ ದೋಣಿ
ರಭಸದಿ ದಾಟಿದೆ ಕಡಲ ಗಣಿ!!!

ಭಾವನೆ ಮನದ ತೊಳಲಾಟ
ಒಮ್ಮೆ ಸ್ಪಂದಿಸಲಿ ನಿನ್ನ ಒಡನಾಟ!!!

ಭಾವುಕತೆಗಾಗಿ ಆತ್ಮೀಯ ಭಿಕ್ಷೆ
ಮರ್ಕಟ ಮನಕೇಕೆ ನೀಡುವೆ ಶಿಕ್ಷೆ!!!

ಭಾವಿಸುವ ಭಾವ ನಿನ್ನದಾಗಲಿ
ಅದ ಅನುಭವಿಸುವ ಜೀವ ನಾನಾಗಲಿ!!!

ಭಾವನೆ ಕಲ್ಪನೆಯ ಜೇನುಗೊಡು
ಜೇನ ಹೀರಿ ಕಟ್ಟು ಸಿಹಿ ಭಾವನೆಯ ಗೂಡು!!!

ಎಲ್ಲರೊ ಭಾವ ಜೀವಿಗಳೆಂಬುದು ನನ್ನ ನಿಟ್ಟು
ನಿನಗೊ ತಿಳಿದಿರಲಿ ಭಾವುಕತೆಯ ಗುಟ್ಟು..



Tuesday, June 2, 2009

ಮುಸುಕಿನಂಚಿನಲಿ ಸಾಗದಿರಲಿ

ಹುಟ್ಟುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಇರುವ ಮೂರುದಿನಕೆ
ಏಕೀ ಜೀವಕೊಡ್ಡುವೆ ಕತ್ತಲೆ....?

ಇರುವಾಗ ಎಲ್ಲರನು ಪ್ರೀತಿಸು
ಎಲ್ಲರಲಿ ಒಂದಾಗಿ ನೆಲೆಸು
ಇರುವ ಕ್ಷಣಿಕ ಜೀವಕೆ
ಕಲ್ಮಶ ಒಡ್ಡದಿರು ಮನಕೆ...!!!

ನೆನ್ನೆ ಇಂದಿನ ದಿನಗಳ ಅಂತರ ಅಲ್ಪ
ಇಂದು ನಾಳೆಗಳ ಅಂತರ ಸ್ವಲ್ಪ
ಇರುವ ಅಲ್ಪ-ಸ್ವಲ್ಪಗಳಲಿ
ನಗು ನಗುತ ಇರುವುದ ಕಲಿ...!!!

ಮನುಜನ ಸಾವು ನಿಶ್ಚಿತ
ಇದು ಆ ಬ್ರಹ್ಮ ಬರೆದ ಅಂಕಿತ
ನಾವು ಇರುವಷ್ಟು ದಿನ
ತಿಳಿಯ ಬೇಕಿದೆ ಜೀವನದ ಸಂಕೇತ...!!!

ಸಿರಿವಂತನಲಿ ಹಣದ ಆರ್ಭಟ
ಬಡವನಲ್ಲಿ ಕಷ್ಟದ ತೂಗಾಟ
ಇರುವವ ಇಲ್ಲದವನ
ನೋಡಿ ಅಣಕಿಸದೆ ಆಡದಿರಲಿ ಜೂಟಾಟ...!!!

ಜೀವನದ ಬೇಕುಬೇಡಗಳಲಿ
ಇಲ್ಲ ಸಲ್ಲದ ನಿಂದೆಗಳಲಿ
ಮನದಾಳದ ಬಿರುಕಿನಲಿ
ಬಾಳು ಮುಸುಕಿನಂಚಿನಲಿ ಸಾಗದಿರಲಿ...!!!

ವಿ. ಸೂ: ಈ ಪುಟ್ಟ ಕವನದೂಂದಿಗೆ ಅಲ್ಪ ವಿರಾಮವನ್ನು ನನ್ನ ಬ್ಲಾಗಿಗೆ ನೀಡುತ್ತಲಿದ್ದೇನೆ. ನಲ್ಮೆಯ ಬ್ಲಾಗ್ ಸ್ನೇಹಿತರೆಲ್ಲರು ಇದುವರೆಗು ನನ್ನೂಂದಿಗಿದ್ದು ತಮ್ಮೆಲ್ಲ ಅನಿಸಿಕೆಗಳನ್ನು ನೀಡಿ ಪ್ರೋತ್ಸಾಹ ನೀಡಿದ ನಿಮ್ಮೆಲ್ಲರಿಗು ಧನ್ಯವಾದಗಳು. ನಾನು ನಿಮ್ಮೆಲ್ಲರಿಗು ಸದಾ ಚಿರಋಣಿ. ೪೫ ದಿನಗಳ ರಜೆಯ ಮೇಲೆ ಬೆಂಗಳೂರಿಗೆ ತೆರೆಳುವ ಕಾರಣ ನಿಮ್ಮೆಲ್ಲರ ಲೇಖನಗಳನ್ನು ಓದಲಾಗುತ್ತೋ ಇಲ್ಲವೋ ಸಮಯ ಸಿಕ್ಕಾಗ ಖಂಡಿತ ಅನಿಸಿಕೆಗಳನ್ನು ತಿಳಿಸುವೆ. ಸಾಧ್ಯವಾದರೆ ಆಗೊಮ್ಮೆ ಈಗೊಮ್ಮೆ ಬ್ಲಾಗಿಸುವೆ ಇದುವರೆಗೂ ಇದ್ದ ಪ್ರೋತ್ಸಾಹ ಹಸ್ತ ಕೊನೆವರೆಗೂ ಹೀಗೆ ಇರಲೆಂದು ಆಶಿಸುತ್ತೇನೆ.

ನಿಮ್ಮೆಲ್ಲರಿಗು
ವಂದನೆಗಳು
ಶುಭಮಸ್ತು