Saturday, February 21, 2009

ದಾಸರ ಆರಾಧನೆ

ಕುವೈಟ್ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೨೦.೨.೨೦೦೯ರಂದು ದಾಸರ ಆರಾಧನೆ ಜರುಗಿದ ವಿಶೇಷತೆಯ ಪರಿ ನಿಮ್ಮೆಲ್ಲರಿಗು ನೀಡೊ ನಮ್ಮ ಸಣ್ಣದೊಂದು ಪ್ರಯತ್ನ ನಿಮ್ಮ ಮುಂದೆ.


ಶುಕ್ರವಾರದ ಪೂಜೆಯವೇಳೆಗೆ ಎಲ್ಲಾ ಕೂಟದ ಸದಸ್ಯರು ತಮ್ಮ ತಮ್ಮ ಕುಟುಂಬ ಸಮೇತರಾಗಿ ಬರುತ್ತಿರುವುದು ಕಂಡರೆ ಎಲ್ಲೋ ಮದುವೆ ಸಮಾರಂಭ ನೆಡೆಯುತ್ತಿರಬೇಕು ಇಷ್ಟು ಚೆಂದವಾದ ಉಡುಗೆ ತೊಡುಗೆ ತೊಟ್ಟು ಸಾಲು ಸಾಲಾಗಿ ಬೆಳ್ಳಂಬೆಳ್ಳಗ್ಗೆ ಅದು ರಜೆಯ ದಿನ ತಮ್ಮ ನಿದ್ರೆ,ತಮ್ಮ್ ತಮ್ಮ ಕೆಲಸ ಎಲ್ಲವನ್ನು ಬದಿಗಿಟ್ಟು, ಹೆಂಗಳೆಯರು ರೇಷ್ಮೆ ಸೀರೆ, ಒಡವೆ, ಕೈಗೆ ಬಳೆಗಳ ಸಿಂಗಾರ, ಗಂಡಸರು ಪಂಚೆ, ಶಲ್ಯದಾರಿಗಳಾಗಿ ಬರುತ್ತಿದ್ದರೆ ಅದು ಮದುವೆ ಸಮಾರಂಭವೇ ಇರಬೇಕೆಂದು ಊಹಿಸುವಷ್ಟು ಬಲವಾಗಿತ್ತು ಈ ಸಮಾರಂಭದ ವಾತಾವರಣ ತವರೊರ ನೆನಪಿನ ದಿಬ್ಬಣವನ್ನೆ ತೇರಿನೊಂದಿಗೆ ಹೊತ್ತು ತಂದಿತ್ತು.

ಅಲ್ಲಿ ನೆರೆದಿದ್ದ ಸಾಲುಗಳು ಯಾವುದೆ ಮದುವೆ ಸಮಾರಂಭಕ್ಕೆ ಬರುತ್ತಿದ್ದವರಲ್ಲ ಅಲ್ಲಿ ನಮ್ಮ ಕನ್ನಡಿಗರೆಲ್ಲ ಸೇರಿ ದಾಸರ ಆರಾಧನೆಯನ್ನು ನೆರೆವೇರಿಸುತ್ತಿದ್ದರು. ನಮ್ಮ ಕನ್ನಡ ಕೂಟದ ಈ ವರ್ಷದ ಮೂದಲ ಸಮಾರಂಭ ಈ ವರ್ಷಕ್ಕೆ ೨೫ರ ಹರಯಕ್ಕೆ ಕಾಲಿಟ್ಟ ಕುವೈಟ್ ಕನ್ನಡ ಕೂಟವೆಂಬ ಕನ್ನಡ ಕನ್ಯೆಗೆ ಬಲು ಅಪರೂಪದ ಅವಿಸ್ಮರಣೀಯ ವರ್ಷ.. ಈ ವರ್ಷ ಎಂದಿಗೊ ಮರಯದ ವರ್ಷವೆಂದು ಮಾಡಲು ಅವಿರತ ಪ್ರಯತ್ನದಲ್ಲಿ ತೊಡಗಿರುವ ಈ ವರ್ಷದ ಸದಸ್ಯ ಸಮಿತಿಗೆ ಹಣದುಬ್ಬರದ ಒಡೆತ ತಾಗಿರುವುದು ಸಹಜ ಕೂಡ ಇದೆಲ್ಲವನ್ನು ಒರಿತು ಪಡಿಸಿ ಇಲ್ಲಿ ನೆಲೆಸಿರುವ ನಮ್ಮ ಭಾರತೀಯರು ಯಾವುದೆ ತೊಂದರೆ ಪಡದೆ ತಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲೆಂದು ಸತ್ಯನಾರಾಯಣ ಪೊಜೆಯೊಂದಿಗೆ ಸಮಾರಂಭವನ್ನು ಪ್ರಾರಂಭಿಸಿದರು .ಈ ಕಾರ್ಯಕ್ರಮಕ್ಕೆ ಸ್ವಾಗತ ವೇದಿಕೆ ಮಾತ್ರ ನಿಜಕ್ಕೊ ಖುಶಿ ಕೊಟ್ಟಿತು ಸಂಪ್ರದಾಯವಾಗಿ ಕುಂಕುಮ ಬಳೆ ಸಿಹಿ ಹಾಗು ಈ ಮರಳಲ್ಲಿ ಮಲ್ಲಿಗೆ ಹೂ ಎಲ್ಲೂ ಕಾಣ ಸಿಗದು ಅದರಲ್ಲೂ ತವರೂರಿಂದ ತರಿಸಿ ಎಲ್ಲರಿಗು ಮಲ್ಲಿಗೆಯ ಹೂ ಮಾಲೆ ನೀಡಿ ಎಲ್ಲರನ್ನು ಆಹ್ವಾನಿಸುತ್ತಿದ್ದ ಪರಿ ಬಲು ಪ್ರೀತಿಯ ಸಿರಿಯೇ ಸರಿ.

ಸುಮಾರು ೭.೩೦ ಕ್ಕೆ ಪ್ರಾರಂಭವಾದ ಪೂಜಾವಿಧಿಗಳು ಸರಾಗವಾಗಿ ನೆರೆವೇರಿತು. ಸತ್ಯನಾರಯಣ ಪೂಜೆಯನ್ನು ನಮ್ಮ ಊರುಗಳಲ್ಲಿ ಶಾಸ್ತ್ರೋಕ್ತವಾಗಿ ಹೇಗೆ ನೆರೆವೇರಿಸುತ್ತಾರೋ ಅದೇ ತರಹ ಎಲ್ಲಾ ವಿಧಿವಿಧಾನಗಳು ಕಂಡುಬಂದವು. ಈ ಪೂಜೆಯ ನಂತರ ದಾಸರ ಆರಾಧನ ಕಾರ್ಯಕ್ರಮ ಮೊದಲು ಪ್ರಾರಂಭ ಸಂಗೀತದೊಂದಿಗೆ ಆನಂತರ ವಾದ್ಯಗೋಷ್ಠಿ ಕೂಟದ ಮಕ್ಕಳು ಕಲಿತಿರುವ ವಾದ್ಯಗಳ ವೃಂದ ಬಲು ತಂಪನ್ನು ಬೀರಿತ್ತು...ಎಲ್ಲರು ತಲೆದೂಗುವಂತೆ ಮಾಡಿತ್ತು..


ಆನಂತರ ಪುಟ್ಟ ಮಕ್ಕಳ ವೇಷಭೂಷಣ ಸ್ಪರ್ಧೆ ಇಲ್ಲಂತು ಹೇಳ ತೀರದ ನಗೆ, ಕುತೊಹಲ, ಆಶ್ಚರ್ಯ, ಎಲ್ಲವನ್ನು ಒಟ್ಟಿಗೆ ಮೂಡಿಸಿತ್ತು ಆ ಮಕ್ಕಳು ದೇವರಲ್ಲಿ ಮನೆಮಾಡಿದಂತಿತ್ತು... ಅವರ ಆ ಬೆಳವಣಿಗೆ ಹಿಂದೆ ತಂದೆ ತಾಯಿಗಳ ಸಾರ್ಥಕತೆ ಎದ್ದು ಕಾಣುತ್ತಿತ್ತು.. ಹಾಲು ಕುಡಿಯುವ ಕಂದಮ್ಮನಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳ ವಿವಿಧ ದೇವರ ವೇಷ ಧರಿಸಿ ಬಂದ ಆ ಮಕ್ಕಳ ನೋಡಲು ಎರಡು ಕಣ್ಣು ಸಾಲಾದಗಿತ್ತು... ಆ ವೇಷ ಧರಿಸುವುದಲ್ಲಿರಲಿ ಆ ಭೂಷಣಕ್ಕೆ ತಕ್ಕ ಮಾತು ನಡೆ ಎಲ್ಲವು ಬೆರಗು ಮಾಡಿತ್ತು... ಈ ಸ್ಪರ್ಧೆಯ ನಂತರ ಕೃಷ್ಣನ ಬಾಲಲೀಲೆಯನ್ನು ನೃತ್ಯರೂಪದಲ್ಲಿ ಪ್ರದರ್ಶಿಸಿದರು ಆಡಿಸಿದಳೇಶೋಧೆ.......ಗಾನಸುಧೆಗೆ ಯಶೋಧಮಯಿ ಪಾತ್ರಧಾರಿ ಜೊತೆ ಪುಟ್ಟ ಕಂದಮ್ಮಗಳ ನೃತ್ಯ ಬಲು ಸೊಗಸೆನಿಸಿತು.
ಆನಂತರ ಚಿಣ್ಣರಿಗೆ ಮತ್ತೊಂದು ಸ್ಪರ್ಧೆ, ಒಂದೊಂದು ಪಂಥಗಳೆಂದು ವಿಂಗಡಿಸಿ ಆ ಮಕ್ಕಳು ದಾಸರ ಹಾಡುಗಳನ್ನು ಹೇಳುವಾಗೆ ಮಾಡಿದ್ದರು ಆ ಮಕ್ಕಳು ದಾಸರ ಪದ ಹೇಳುತ್ತಿದ್ದರೆ ನಮ್ಮಕ್ಕಳು ಇಷ್ಟು ಸುಲಲಿತವಾಗಿ ದಾಸರಪದಗಳನ್ನು ಬಾಯಿಪಾಠಮಾಡಿದ್ದ ರೀತಿ ನಿಬ್ಬೆರಗಾಗುವಂತೆ ಮಾಡಿತ್ತು. ಹಾಡಿಗೆ ತಕ್ಕ ವೇಶಭೂಷಣ, ತಾಳಮೇಳಗಳು ಕೂಡ ಜೊತೆಗೂಡಿತ್ತು... ಈ ಚಿಣ್ಣರ ಹಾಡಿಗೆ ಪ್ರೋತ್ಸಾಹಕ ನಿರ್ವಹಣೆ ಹೊಣೆ ಹೊತ್ತ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ಅರ್ಪಿಸಲೇಬೇಕು.

ಇವೆಲ್ಲದರ ಮದ್ಯೆ ದಾಸರು ಶರಣರು ಸಂತರು ಸಹ ಬಂದು ಹೋಗಿದ್ದರು ಅಂದರೆ ಎಷ್ಟೊ ಜನರಿಗೆ ದಾಸಶರಣಸಂತರೆಂದರೆ ೧ ಅಥವಾ ೨ ಹೆಸರುಗಳು ಮಾತ್ರ ತಿಳಿದಿತ್ತು ಆದರೆ ಇಲ್ಲಿ ಹೆಚ್ಚು ದಾಸರುಗಳು ಶರಣರುಗಳನ್ನು ಎಲ್ಲರಿಗು ತಿಳಿಸೊ ಒಂದು ನಿರೂಪಣೆ ಕೂಡ ನೆರೆವೇರಿಸಿದ್ದರು ಈ ನಿರೂಪಣೆ ಎಲ್ಲರಿಗು ಹೆಚ್ಚು ಮಾಹಿತಿಯನ್ನು ಒದಗಿಸಿದೆಯೆಂದು ಹೇಳಲು ಬಯಸುತ್ತೇನೆ.
ಇಷ್ಟೆಲ್ಲರ ನಂತರ ಮಹಿಳೆಯರ ಭಜನೆ, ಅಲ್ಲೂ ಸಹ ಸಂಗೀತ ಗಂಧವೇ ಅರಿಯದ ಕೆಲವು ಮಹಿಳೆಯರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಾಡಿನ ತರಬೇತಿ ಪಡೆದು ಆ ಕುವೈಟ್ ಕನ್ನಡ ಕೂಟವೆಂಬ ವೇದಿಕೆಗೆ ಮೆರುಗು ಮೂಡಿಸಿದರು.. ಇಷ್ಟೆಲ್ಲ ನೆಡೆದರು ಸ್ವಲ್ಪವೂ ಬೆಸರವಿಲ್ಲದೆ ಕುಳಿತ ಎಲ್ಲಾ ಕನ್ನಡ ಕೂಟ ಸದಸ್ಯರು ಎಲ್ಲಾ ಕಾರ್ಯಕ್ರಮಕ್ಕೆ ಪೋತ್ಸಾಹ ಪೂರ್ವಕ ಚಪ್ಪಾಳೆ ಪ್ರೇರಣಾಪೂರ್ವಕವಾಗಿತ್ತು.

ಹತ್ತು ಹಲವಾರು ಕಾರ್ಯಕ್ರಮಗಳು ಜರುಗಿದ ನಂತರ ಕುವೈಟ್ ನಲ್ಲಿ ಹಿಂದೊ ದೇವರುಗಳು ಬಂದುಬಿಟ್ಟಿದ್ದರು ನಮ್ಮನ್ನೆಲ್ಲಾ ಆಶೀರ್ವದಿಸಲು ಹಾಗೆಂದು ನಿಜವೆಂದುಕೊಳ್ಳಬೇಡಿ ಇಲ್ಲಿ ಆ ದೇವರು ಪ್ರತ್ಯಕ್ಷವಾಗಲು ನಾವೇನು ಅಂತಹ ನಿಷ್ಟಾವಂತ ಭಕ್ತರೇನಲ್ಲ, ನಿಜ ದೇವರನ್ನು ಕರೆಸಿಕೊಳ್ಳೊದು ಕಷ್ಟವೆಂದು ಇಲ್ಲಿ ಕೃಷ್ಣನ ದಶಾವತಾರ ರೂಪವನ್ನು ಹಲವು ಮಕ್ಕಳು ವೇಷಧಾರಿಯಾಗಿ ಬಂದಿದ್ದರು ಅವರೆಲ್ಲರು ಬರುತ್ತಿದ್ದ ಹಾಗೆ ಗಂಡಸರಿಂದ ಭಜನಾ ನೃತ್ಯ ಕೂಡ ಮೂಡಿಬಂತು. ಹಾಡಿಗೆ ತಕ್ಕ ತಾಳ ತಾಳಕ್ಕೆ ತಕ್ಕ ನೃತ್ಯ ಬಲು ಮೋಡಿ ಮಾಡಿತ್ತು.. ಇಷ್ಟೆಲ್ಲಾ ನೃತ್ಯ, ಗಾಯನ,ಭೂಷಣಗಳೊಂದಿಗೆ ನಮ್ಮ ಕೂಟದ ಭಜನ ಮಂಡಳಿಯ ಗಂಡಸರಿಂದ ಸುಮಾರು ೬ ದಾಸರ ಹಾಗು ದೇವರ ಹಾಡುಗಳು ಕೇಳಿಬಂದವು ಈ ಹೊತ್ತಿಗಾಗಲೇ ಊಟದ ಸಮಯಾ ಮೀರಿತ್ತು ಆದರು ಎಲ್ಲ ಕೂಟದ ಸದಸ್ಯರು, ಮಕ್ಕಳು ಸ್ವಲ್ಪವೂ ಬೇಸರ, ತಾತ್ಸರವಾಗಲಿ ತೊರದೆ ಎಲ್ಲವನ್ನು ಮನಪೂರ್ವಕವಾಗಿ ಮನತಣಿಸಿಕೊಂಡಿದ್ದು ಮಾತ್ರ ಬಲು ಸಂತೋಷಕರ, ಇನ್ನು ಮುಕ್ತಾಯ ಸಮಾರಂಭಕ್ಕೆ ಬರುವ ಹೊತ್ತು ಈ ಭಜನ ಕಾರ್ಯಕ್ರಮದೊಂದಿಗೆ ಪೂಜಾವಿಧಿಯು ಕೂಡ ನೆರೆವೇರುತ್ತಿತ್ತು ಕೊನೆಯಲ್ಲಿ ಮಂಗಳಾರತಿಯ ಗಾಯನದೊಂದಿಗೆ ದಾಸರ ಪೂಜೆ ಕೂಡ ನೆರವೇರಿತು ಎಲ್ಲ ಸದಸ್ಯರು ದೇವರ ಕೃಪೆಗೆ ಪಾತ್ರರಾಗಿ ದೇವರಿಗೆ ವಂದಿಸುತ್ತಾ ನಡೆದರು...ಇಷ್ಟು ಸಾಂಘವಾಗಿ ನೆಡೆದ ಸಮಾರಂಭಕ್ಕೆ ಮತ್ತೂಂದು ಭಾರಿ ಭೂಷಣವೆಂದರೆ ಭೂರಿ ಭೋಜನ... ಇದು ಬರಿ ಭೋಜನವಲ್ಲ ಮೃಸ್ಟಾನ್ನ ಭೋಜನ....ಎಲ್ಲರ ಹೊಟ್ಟೆ ಸಂತೃಪ್ತಿ ಪಡಿಸಿದ ಭೋಜನ ಹಬ್ಬದೂಟ ಮಾಡಿಸಿತು ಕನ್ನಡ ಕೂಟ...ಊಟವೆಲ್ಲ ಪೂರೈಸಿ ಎಲೆ ಅಡಿಕೆ (ಬೀಡಾ) ಸವಿದು ಹೊರಡೊ ಹೊತ್ತಿಗೆ ಮತ್ತದೆ ಸ್ವಾಗತ ವೇದಿಕೆ ಬದಲಿಗೆ ಬೀಳ್ಕೊಡಿಗೆ ವೇದಿಕೆಯಾಗಿ ಪರಿವರ್ತನೆಯಾಗಿತ್ತು ಮತ್ತೊಮ್ಮೆ ಅವರ ಪ್ರೀತಿ ಪೂರ್ವಕ ನಗು, ವಂದನೆಗಳು ಎಲ್ಲರೊಟ್ಟಿಗೆ ತಾಂಬೂಲದೊಂದಿಗೆ ಬೀಳ್ಕೊಟ್ಟರು. ಇವೆಲ್ಲಕ್ಕೂ ರುವಾರಿಗಳಾದ ಈ ವರ್ಷದ ಕಾರ್ಯನಿರ್ವಾಹಕ ಸಮಿತಿಗೆ ನಾವೆಲ್ಲ ಆಭಾರಿಗಳು ಇವರ ಜೊತೆ ಕಾರ್ಯನಿರ್ವಹಿಸಿದ ಸಾರ್ವಜನಿಕ ಸಂಪರ್ಕ ಸಮಿತಿಯ ಕೆಲಸಗಳು ಕೂಡ ಚಾಚು ತಪ್ಪದೆ ಎಲ್ಲರಿಗು ಸಮಯ ಸಂದರ್ಭ,ಎಲ್ಲದರ ಮಾಹಿತಿಯನ್ನು ಮನೆಗೆ ಮುಟ್ಟಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರು, ಎಲ್ಲಾ ಪೂಜಾವಿಧಿ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಲು ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡ ಸಾಂಸ್ಕೃತಿಕ ಸಮಿತಿಯ ಶ್ರಮ ಕೂಟದ ಸಮಾರಂಭಕ್ಕೆ ಗರಿ ಮೂಡಿಸಿದ್ದಾರೆ, ಹಾಗು ಮರಳ ಮಲ್ಲಿಗೆಯ ಸ್ವರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಹಾಗು ಈ ಭಾರಿ ಸುಮಾರು ೨೦ ಪುಟಕ್ಕು ಮೀರಿ ದಾಸ ಸಂಚಿಕೆಯ ಬಿಡುಗಡೆಗೆ ಸಾಧ್ಯರಾಗಿ ಮರಳಲ್ಲೇ ಹುದುಗಿದ್ದ ಪ್ರತಿಭೆಗಳಿಗೆ ಬರವಣಿಗೆ ಮೂಲಕ ಹೆಸರು ಸ್ಪೂರ್ತಿ ತರಿಸಿಕೊಟ್ಟ ಮರಳ ಮಲ್ಲಿಗೆಯ ವೃಂದವೊ ಸಹ ಈ ಸಮಾರಂಭದ ಮಿನುಗು ತಾರೆ ಎಂದೇಳಿದರೆ ತಪ್ಪಾಗಲಾರದು ಹಾಗು ವೇದಿಕೆಯನ್ನು ಶೃಂಗಾರದಿ ಬಣ್ಣದ ಚಿತ್ತಾರಗಳು ಮೂಡಿಸಿದ ತಾಂತ್ರಿಕ ಸಮಿತಿಯ ಮೆರುಗು ಕೂಡ ಸೇರಿದೆ. ಇವೆಲ್ಲದರ ಹಿಂದೆ ಹಲವು ಕಾಣದ ಕೈಗಳು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಕೆಲಸ ಕಾರ್ಯಗಳನ್ನೆರವೇರಿಸಿದ ಎಲ್ಲ ಸದಸ್ಯ ಬಳಗವು ಸಹ ಈ ಸಮಾರಂಭಕ್ಕೆ ರುವಾರಿಗಳೆಂದರೆ ತಪ್ಪಾಗಲಾರದು. ಕಾರ್ಯಕಾರಿ ಸಮಿತಿ ಎಲ್ಲಾ ಉಪ ಸಮಿತಿಯ ಸದಸ್ಯರು ಹಾಗು ಕಾಣದ ಹಸ್ತಗಳಿಗು ನಮ್ಮ ಹೃದಯಪೂರ್ವಕ ಧನ್ಯವಾದಗಳು.

Tuesday, February 17, 2009

ಮನದ ಪ್ರಶ್ನೆ?


ಕರುನಾಡ ಬಿಟ್ಟು ಬಂದೆವು ಮರುಭೊಮಿಗೆ
ಅಂದು ಬಂದದ್ದು ಬರಿ ಎರಡು ವರ್ಷದ ದುಡಿಮೆಗೆ
ಈವರೆಗಾದದ್ದು ಐದು ವರ್ಷದ ನೆಡಿಗೆ
ಎಂದು ತಿರುಗಿ ನೋಡುವೆವೊ ನಮ್ಮೂರ ಕಡೆಗೆ
ದಿನದಿನವು ಬದಲಾದ ಜೀವನದ ಘಳಿಗೆ
ಕೆಲವೊಮ್ಮೆ ನೊಂದು ಹೇಳುವುದೆನ್ನ ಮನ ನಡೆ ನಿಮ್ಮೂರಿಗೆ
ಏಕೆ..? ಏನಿದೆಯೆಂದು ಬಂದೆ ಮರಳುಗಾಡಿನ ಧರೆಗೆ
ಐಷಾರಾಮ ಜೀವನಕ್ಕೆ ಕೊಟ್ಟ ನಿನ್ನ ನೀನೆ ಧೇಣಿಗೆ
ಇದುವರೆಗೂ ಉತ್ತರಿಸಲಾಗದೆ ಉಳಿದೆ..! ನನ್ನ ಮನದ ಪ್ರಶ್ನೆಗೆ ....

Saturday, February 14, 2009

ಇಂದಿನ ವಿಶೇಷ ದಿನ ನಮಗೆ ವಿಶೇಷ...

ಅಂದು ಗುರುವಾರ ಮಗನ ಶಾಲೆಯಲ್ಲಿ ಗಿಫ್ಟ್ ಪ್ಯಾಕಿಂಗ್ ಸ್ಪರ್ಧೆ ಇದ್ದ ಕಾರಣ ಎಲ್ಲದರ ತಯಾರಿ ಹಾಗು ಹೇಗೆ ಪ್ಯಾಕ್ ಮಾಡುವುದೆಲ್ಲವನ್ನು ಕಲಿಸಿದ್ದೆ.. ಮಗನಿಗೆ ಬಲು ಕುಶಿ ಅಮ್ಮ ಎನೇನೋ ಆಕೃತಿ ಎಲ್ಲ ಮಾಡಿಕೊಟ್ಟಿದ್ದಾಳೇ ಚೆನ್ನಾಗಿ ಮಾಡಬೇಕೆಂಬ ಆಸೆಯಿಂದ ಇದ್ದ, ಅವ್ನು ಹೊರಡೊ ಮುಂಚೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನೇಲ್ಲಾ ಒಂದು ಬ್ಯಾಗ್ನಲ್ಲಿಟ್ಟು ಬರುವಾಗ ಎಲ್ಲವನ್ನು ಮನೆಗೆ ತರಬೇಕೆಂದು ಹೇಳಿದ್ದೆ ಅವನು ಆಗಲೆಂದು ಒಪ್ಪಿ ಕುಶಿಯಿಂದ ತೆರಳಿದ್ದ.......

ಶಾಲೆಂದ ಬಂದವನು ಅಮ್ಮ ನನ್ನನು ಇವತ್ತು ನಿಜ ಬಯ್ಯುತ್ತೇ, today bad news for you.. ಎಂದು ಅಪ್ಪನೊಂದಿಗೆ ಮಾತನಾಡುತ್ತಲೇ ಒಳಗೆ ಬಂದವನು ಅಮ್ಮ sorry.. ನೀ ಕಳಿಸಿದ್ದಲ್ಲಾ ಅವೆಲ್ಲ ಮರೆತು ಬಂದೆ....ಹೊಗಲಿ ಬಿಡು ಕಂದ ಚೆನ್ನಾಗಿ ಮಾಡಿದ ಹೇಗಿತ್ತು, ಎಲ್ಲ ಸ್ನೇಹಿತರು ಸ್ಪರ್ಧೆಗೆ ಬಂದಿದ್ದರಾ ಎಂದೆ.... ಹೌದು ನನ್ನ gift pack...ನ ಪೋಟೊ ತಗೊಂಡ್ಡರು ಗೊತ್ತ ಎನು ಕುಶಿಯಲಿ ಹೇಳಿದ...ನನಗೂ ಕೂಡ ಕುಶಿ ಇತ್ತು ... ನಂತರ ಕೇಳಿದೆ ಎಷ್ಟು ಮಕ್ಕಳ ಪೋಟೊ ತಗೊಂಡರು ಎಂದು ಕೇಳಿ ಹಿಂದೆಲೇ ಇಬ್ಬರೇ ಎಂದು ಜಾಮೂಲ್ ಜಾಹಿರಾತಿನಲ್ಲಿ ಹೇಳಿದ ಹಾಗೆ ಹೇಳಬೇಡ ಎಂದು ನಕ್ಕೆನು.......ಹುಸಿ ಮುನಿಸಿನಲಿ .... ಇಲ್ಲ ೩೦ರಲ್ಲಿ ಕೇವಲ ೧೧ ಪೋಟೊ ತೆಗೆದರು ಅದರಲ್ಲಿ ನಾನು ಒಬ್ಬ ಎಂದ....ಅದರೆ ಏಕೋ ಅಂದು ಅಷ್ಟು ಸಮಾಧಾನವಾಗಿರಲಿಲ್ಲ... ಆದರು ಅದನ್ನ ಅಲ್ಲೇ ಬಿಟ್ಟು ನಾವು ಸುಮ್ಮನಾದೆವು..

ಇನ್ನು ಶುಕ್ರವಾರ ನಮ್ಮಗಳಿಗಿಲ್ಲಿ ರಜೆ ದಿನ... ಬೆಳ್ಳಿಗೆ ನಿದ್ರೆಯಿಂದ ಎದ್ದವನು ಅಳುತ್ತಲೇ ಬಂದನು.....ಏಕೆ ... ಏನಾಯಿತು ಎಂದು ಕೇಳಿದರೆ......ನೆನ್ನೆ ನಾನು ಗಿಫ್ಟ್ ಪ್ಯಾಕಿಂಗ್ ಮಾಡಿದ್ದೆನಲ್ಲ ಅದನ್ನ ಮನೆಗೆ ತೆಗೆದುಕೂಂಡು ಹೋಗಲು ಹೇಳಿದ್ದರು ನಾನು ಮರೆತುಬಂದೆ ಎಂದ ಹೋಗಲಿ ಬಿಡು ಭಾನುವಾರ ಶಾಲೆಗೆ ಹೋಗುತ್ತೀಯಲ್ಲಾ ತರುವಂತೆ ಎಂದೆವು... ಇಲ್ಲ ನೆನ್ನೆನೆ ತರಬೇಕಿತ್ತು ಎಂದು ಒಂದೇ ಸಮನೇ ಅಳು... ದುಃಖ ಹೇಳತೀರದು.... ಇಲ್ಲ ನಾನು ಶನಿವಾರವೇ ಕೊಡಬೇಕು ಅದನ್ನ... ನಿಮ್ಗೆ, ನಿಮ್ಮಿಬ್ಬರಿಗಾಗಿ ಏನೋ ಮಾಡಿದ್ದೆ ಎಂದೆಲ್ಲ ಪರಿತಪಿಸುತ್ತಿತ್ತು........ನಾನು ಹೋಗಲಿ ಬಿಡು ಏನು ಆಗೋಲ್ಲ....ಭಾನುವಾರ ತಂದು ತೋರಿಸು ಎಂದೇಳಿದೆ.. ಇಲ್ಲ ನನಗೆ ತುಂಬಾ ಬೇಜಾರಗುತಿದೆ ... ಶನಿವಾರ ನಿಮ್ಗೆ ಕೊಡಲೇಬೇಕು ಎಂಬ ಹಟ...ಎನು ಮಾಡಲಿ ನಾನು ಹೇಳು... ಈಗಲೇ ಶಾಲೆಗೆ ಹೋಗಿ ತಗೂಂಡು ಬರೋಣ ಬಾ ಎಂದೆ.. ಆಗ ಇಲ್ಲ ಬೇಡ ಬಿಡು ಶಾಲೆ ರಜೆ ಅಲ್ಲವಾ ಎಂದು ಸುಮ್ಮನಾದ(ಶುಕ್ರವಾರ, ಶನಿವಾರ ರಜೆ ಇಲ್ಲಿನ ಶಾಲೆಗಳಿಗೆ).......ಇದಿಷ್ಟು ನೆಡೆದು ಕೊನೆಯಲ್ಲಿ ಎಲ್ಲವನ್ನು ಮರೆತನೆಂದು ನಾವು ಸುಮ್ಮನಾದೆವು...

ರಾತ್ರಿ ಮಲಗುವಾಗ... ನಾಳೆ ನೀವು ನಾಳೆ ಶುಭಾಶಯ ಹೇಳಬೇಡಿ, ಹೇಳೊದು ಬೇಡ ಎಂದಾ...... ನಾವು ಏಕೆ... ಏನು ವಿಶೇಷ ನಾಳೆ ಎಂದು ಕೇಳಿದೆ...ನಾಳೆ valentines day!!! ಎಂದಾ, ನಾನು ಯಾರಪ್ಪ ನಿನಗೆ ಹೇಳಿದ್ದು ಇದೆಲ್ಲಾ ಅಂದೆ ನಮ್ಮ ಸ್ಕೂಲ್ನಲ್ಲಿ ಆ ಸ್ಪರ್ಧೆ(Gift packing) ಮಾಡಿಸಿದ್ದರಲ್ಲ ಅದನ್ನ ಮನೆಗೆ ತೆಗೆದುಕೂಂಡು ಅಪ್ಪ ಅಮ್ಮನಿಗೆ ಶುಭಾಶಯ ತಿಳಿಸಿ ಕೊಡಲಿಕ್ಕೆ ಹೇಳಿದ್ದರು... ಛೇ.. ನಾನು ಮಿಸ್ ಮಾಡಿ ಬಂದೆ ಎಂದು ಗೊಣಗಿದ.....ಅಪ್ಪ ಯಾವಾಗಲು ಆ ಹಬ್ಬ ಈ ಹಬ್ಬ.. mother's day, children day ಅಂತಾ ಎಲ್ಲ wish ಮಾಡುತ್ತೆ ನಾನು ನಾಳೆ wish ಮಾಡೊಣ ಅಂತಾನೇ ಇದ್ದೆ ಆದರೆ ಹೀಗೆ ಆಗೊಯ್ತು ಎಂದ.. ನಮಗೆ ಎನಪ್ಪ ಇದು ಇನ್ನು ೨ನೆ ತರಗತಿಯಲ್ಲಿ ಓದುವ ಹುಡುಗನಿಗೇ ಏನೇನು ಹೇಳುತ್ತಾರೋ ಇವರಿಗಳಿಗೇನು ಮಾಡಲು ಕೆಲಸವಿಲ್ಲವೇ ಎಂದು ಕೊಂಡೆ... ಸ್ವಲ್ಪ ಸಮಯ ಯೋಚಿಸಿ ಹೇಳಿದೆ ಆ ಆಚರಣೆ ಎಲ್ಲ ಏನು ನಮ್ಮದಲ್ಲ ಕಂದ ನಮಗೆ wish ಮಾಡದಿದ್ದರು ನೆಡೆಯುತ್ತೆ... ಎಂದೆ ನೀನು ದೂಡ್ಡವನು ಆದಮೇಲೆ ನಿನಗೆ ಗೊತ್ತಾಗುತ್ತೆ ಎಂದು ಸುಮ್ಮನಾದೆ..

ಇಂದು ಬೆಳ್ಳಿಗ್ಗೆ ನನ್ನ ಪತಿ ನನಗೆ ಶುಭಾಶಯ ತಿಳಿಸೋ ಗೊಜಿಗೆ ಹೋಗಲೇ ಇಲ್ಲ ಯಾವಾಗಲು ನನ್ನವರು.... ನನ್ನ ನೋಡಿದ್ದ ದಿನದ್ದು,ಮಾತಾಡಿದ್ದ ದಿನ, ಮದುವೆ ದಿನ, ನಿಮ್ಮ ಮನೆಯವರು ಒಪ್ಪಿದ ದಿನ,ಹಬ್ಬ ಅರಿದಿನ. ಅಮ್ಮನ ದಿನ, ಮಹಿಳೆ ದಿನ, ಕುವೈಟ್ ಆಚರಣೆ, ಭಾರತದಲ್ಲಿ ಆ ದಿನ ಈ ದಿನ ಎಂದು ಪರಿಪರಿಯ ದಿನವನ್ನೆಲ್ಲಾ ಶುಭಾಶಯ ತಿಳಿಸೊರು ಹಾಗು ಏನು ವಿಶೇಷವಿಲ್ಲದಿದ್ದರೂ ಸಹ ಸುಮ್ಮ ಸುಮ್ಮನೆ ಶುಭಾಶಯ ಮಾಡೋರು ನಾನು ಏಕೆಂದರೆ ಯಾರಿಗಾದರು ಮದುವೆ ಆಗಿರುತ್ತೆ, ಯಾರಿಗಾದರು ಮಕ್ಕಳಾಗಿರುತ್ತೆ, ಕುವೈಟಿನಲ್ಲಿ ಧೊಳ್.... ಇವತ್ತು ರಜೆ ಅದಕ್ಕೆ ಹೀಗೆಲ್ಲ ತಮಾಷೆಗೆ ಶುಭಾಶಯ ತಿಳಿಸೋರು.. ಇವತ್ತು ಬೆಳ್ಳಿಗ್ಗೆ ಎಂತದು ಇಲ್ಲ... ನನಗು ಪ್ರೇಮಿಗಳ ದಿನದ ಅರಿವೇ ಇರಲ್ಲಿಲ... ಹ ಹ.... ಅದು ಅಲ್ಲದೆ ನೆನ್ನೆ ಮಗರಾಯನ ಆದೇಶವಿತ್ತಲ್ಲ ಆದ್ದರಿಂದ ಶುಭಾಶಯ ವಿನಿಮಯ ಆಗಲೇ ಇಲ್ಲ.... ನಾವು ಕಚೇರಿಗೆ ಹೋರಡೊ ಸಮಯ ಮಗ ಎದ್ದಿದ್ದ ಮಾತಿಲ್ಲ ಕತೆಯಿಲ್ಲ ಹಾಗೆ ಅವನ ತಿಂಡಿ ಊಟದ ವ್ಯವಸ್ಥೆ ಎಲ್ಲ ಮಾಡಿ ಹೊರಟೆವು... ಹೊರಡುವಾಗ ಮಗನಿಗೆ ಬಾಯ್ ಹೇಳಿ ಬೀಗ ಜಡಿದು ಬಂದೆನು.....ಮನೆ ಬಿಟ್ಟು ಕಾರಿನಲ್ಲಿ ಸ್ವಲ್ಪ ದೂರ ಬಂದಮೇಲೆ ನನ್ನ ಪತಿರಾಯರು ನನಗೆ ಈ ವಿಶೇಷ ದಿನದ ಶುಭಾಶಯ ತಿಳಿಸಿ ಮಗ ಇದ್ದ ಎಂದು ಹೇಳಲಿಲ್ಲ ಅವನು ರಾತ್ರಿ ಬೇರೆ ಶುಭಾಶಯ ಹೇಳಕೂಡದು ಎಂದೇಳಿದ್ದನಲ್ಲ ಎಂದು ನಕ್ಕುಬಿಟ್ಟರು..ಹ ಹ ಹಾ..

ಇನ್ನು ಸ್ವಲ್ಪ ದೂರ ಹೋಗಿದ್ದೇವೆ ಫೋನ್ ರಿಂಗ್ ಆಯ್ತು ... ಮನೆ ಎಂದು ತೋರಿಸುತ್ತಿತ್ತು ಓಹ್ ಏನೋ ಮಗರಾಯ ಮಾಡಿದ್ದಾನೆ ನೋಡು ಎಂದು ಹೇಳಿ ಮೊಬೈಲ್ ಕೊಟ್ಟರು ನನ್ನ ಪತಿ.......ನಾನು ಹಲೋ ಎಂದ ಕೂಡಲೇ ಮಗ ಅಮ್ಮ "Happy valentines day!!!" ಎಂದು ಸುಮಧುರ ಧನಿಯಲ್ಲಿ ಬಲು ಪ್ರೀತಿಯಿಂದ ಹೇಳಿದ ನನಗೆ ಗಂಡ ಹೇಳಿದ್ದಕ್ಕಿಂತ ಮಗನ ಶುಭಾಶಯ ಬಹಳ ಕುಶಿ ಕೊಟ್ಟಿತು... ಧನ್ಯವಾದ ಹೇಳಿ... ನಿನಗೂ ಕೂಡ ಕಂದ ಎಂದು ಹೇಳಿದೆ ಅಷ್ಟು ಪ್ರೀತಿಯಿಂದ ಹೇಳಿದ ಮಗನಿಗೆ ನಿರಾಸೆ ಮಾಡಬಾರದಲ್ಲ... ಎಂದು... ಅಪ್ಪನಿಗೂ ಕೂಡು ಎಂದೇಳಿ ಅವರಿಗು ಶುಭಾಶಯ ತಿಳಿಸಿದ... ಆಹಾ...ಹ ಹಹ ... ಇಲ್ಲಿ ನನ್ನ ಮಗನ ಮುಗ್ಧತೆ ಎದ್ದು ಕಾಣುತಿತ್ತು.. ಅವನ ಹೆಸರು ಮೃದುವಚನ್ ...ಹೆಸರಿಗೆ ತಕ್ಕನಾಗಿ ಮೃದುವಾಗಿ ಮುದ ನೀಡಿತು..

ಮಗನಿಗೆ ಈ ದಿನ ಏಕೆ ಆಚರಿಸುತ್ತಾರೆ ಏನು ವಿಶೇಷ ನಾವೆಲ್ಲ ಆಚರಿಸಬೇಕಾ ಏನು ಗೊತ್ತಿಲ್ಲ... ಎಲ್ಲಾ ಟಿವಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಹೆಚ್ಚು ಬಿತ್ತರವಾಗುದನ್ನೆಲ್ಲಾ ನೋಡೊ ಮಕ್ಕಳು ಎಲ್ಲವನ್ನು ತಿಳಿದುಕೊಳ್ಳುತ್ತಾ ಬಂದಿದ್ದಾರೆ ಎಂದು ನನ್ನವರಿಗೆ ಹೇಳಿದಾಗ....ಏನಾದರಾಗಲಿ ಬಿಡು ನಿನ್ನ ಮಗ ಅವರ ಅಪ್ಪ ಅಮ್ಮ ಇನ್ನು ಪ್ರೇಮಿಗಳ ಹಾಗೆ ಇರಲೆಂದು ಆಶಿಸಿದ್ದಾನೆ ಕುಶಿಯಾಗಿರು ಅಂದರು....

Wednesday, February 11, 2009

ಮೃದುಮನಸಿಗೆ ತೊಚಿದ್ದು... ಹಾಗೇ ಸುಮ್ಮನೆ....ಗೀಚಿದ್ದು...

ಮನವೇಕೂ ನಿನ್ನ ಬಯಸಿದೆ
ಬೇಕೆಂದೇನಲ್ಲ ....
ಮನವು ಕಾಲಿಯಿದೆ ಅದಕಾಗಿ ಇದೆಲ್ಲ..

ಕಣ್ಣಲ್ಲಿ ನಿನ್ನದೇ ಪ್ರತಿಬಿಂಬ
ನೆನಪಿಗಾಗಿ ಅಲ್ಲ....
ನೀ ಎದುರು ನಿಂತಿರುವೆಯಲ್ಲ.

ಪುಸ್ತಕ ತೆಗೆದರೆ
ನೀನದೆ ನೆನಪು ಬರುವುದಲ್ಲ...
ಓಹ್ ಹಾಗದರೆ ನಿನಗೆ ನನ್ನ ಮೇಲೆ ಪ್ರೀತಿಯಿದೆ ಎಂದೆಯಲ್ಲ..
ಅದು ಹಾಗಲ್ಲ ಆ ಪುಸ್ತಕದಲಿ ನಿನ್ನ ಬಗ್ಗೆ ಬರೆದಿರುವರೆಲ್ಲ...

ನಾ ಹೋದೆ ಎಂದು ಅಳುವೇಕೆ..
ಅದು ನೀನ್ನ ಬೈಕ್ ರಭಸಕ್ಕೆ
ನನ್ನ ಕಣ್ಣಲ್ಲಿ ಧೊಳ್ ತುಂಬಿ ಕಣ್ಣೀರು ಹರಿದ್ದದ್ದು...

ನೀ ಹಾಡಿದ ಪ್ರೀತಿಯ ಹಾಡು ಕಿವಿಗೆ ತಂಪು
ಹುಚ್ಚೆದ್ದು ಕುಣಿಯೋ ಹಾಗಿಲ್ಲ...
ಅದು ಹಾಡಿದ್ದು ಚಲನಚಿತ್ರಕ್ಕೆಂದು ನನಗಾಗಲ್ಲ...

ಅಂದು ನಾ ಕಾದು ಕಾದು ಸಾಕಾದೆ
ನಿನಗಾಗಿಯಲ್ಲ...
ನಾ ಕಾದಿದ್ದು ಅಂದು ಬಸ್ಸಿಗಾಗಿ...

ನಾನೇಕೊ ಬಿದ್ದು ಬಿಟ್ಟೆ
ನಿನ್ನ ಪ್ರೀತಿಗಾಗಿಯಲ್ಲ...
ದಾರಿಯಲಿ ಕಲ್ಲನು ನೋಡದೆ ಎಡವಿಬಿದ್ದೆನಲ್ಲ...

ನೀನಂದೆ ನನ್ನ ಪ್ರೀತಿಯಲಿ
ನೀ ನೆಂದುಬಿಟ್ಟೆಯೆಂದು....
ನೆಂದಿದ್ದು ಪ್ರೀತಿಗಲ್ಲ ತೊಯ್ ಎಂದು ಬೀಳುತ್ತಿದ್ದ ಮಳೆಗಾಗಿ..

ತಲೆಯೇಕೊ ಭಾರವಾಗಿದೆ
ನಿನ್ನ ನೆನಪಿಗಾಗೇನಲ್ಲ...
ತಲೆಗೆ ಶೀತವಾಗಿದೆಯಲ್ಲ...

ನನಗೇಕೊ ಮಾತೆ ಬಾರದಾಗಿದೆ
ಆಹಾ.. ಅಷ್ಟು ಪ್ರೀತಿಯಿದೆ ಎಂದೆಯಲ್ಲ...
ಅದು ಹಾಗಲ್ಲ ಬಾಯಲ್ಲಿ ತಿಂಡಿ ಇರುವುದಲ್ಲ...

ಮೈ ಭಾರವಾಗಿದೆ..
ನಿನ್ನ ಮೋಹಕಾಗಲ್ಲ...
ಮೈ ತೂಕ ಹೂರಲಾರದೆ..

ಕಣ್ಣು ಮಿಟಿಕಿಸದೇ ನೋಡುವೆ
ಎಂದೆನುವೆಯಲ್ಲಾ
ಅದು ಕಣ್ಣಿನ ದೋಷವಿರಬೇಕಲ್ಲ...

ನೀ ಕನಸಲ್ಲಿ ಬಂದಿದ್ದೆ
ಎಂದೆಯಲ್ಲಾ.......
ಅದು ಕನಸಲ್ಲಿ ಮಾತ್ರ ವಾಸ್ತವತೆಯಲ್ಲ...

ನೀ ಬಾರದೆ ಕುಡುಕನಾದೆ
ಎಂದೇಳಿದೆಯಲ್ಲ...
ನನಗಾಗಿ ಅಲ್ಲ ಕುಡಿತದ ಗೀಳಿಗೆ ಮರುಳಾದೆ ನೀ...

ಎಲ್ಲೆಲ್ಲು ನೀನೆ....ಕಾಣುವೆ...
ನಾ ಚುನಾವಣೆಗೆ ನಿಂತಿದ್ದೆನಲ್ಲಾ
ಅದಕಾಗೆ ಎಲ್ಲೆಲ್ಲು ನನ್ನ ಬಿತ್ತಿಪತ್ರಗಳು..

ನಿನ್ನ ನಾ ಪ್ರೀತಿಯಲೇ
ಕೊಲ್ಲುವೆಯೆಂದೆಯಲ್ಲ..
ಕೊಂದರೆ ಜೈಲೆ ಗತಿಯಲ್ಲ...

ಪ್ರೇಮಪತ್ರ ಬರೆಯಲೇ ಇಲ್ಲ..?ಎಂದೆಯಲ್ಲ..
ಬರೆಯಲು ಕೈ ಬರಲೇ ಇಲ್ಲ..

Saturday, February 7, 2009

ಗಣಪನಿಗೆ ಬಣ್ಣ...........

ಫೆ. ೨೦ ರಂದು ನಡೆಯಲಿರುವ ದಾಸೋತ್ಸವ ಪ್ರಯುಕ್ತ - ಕುವೈತ್ ಕನ್ನಡ ಕೂಟದ ವತಿಯಿಂದ ಸ್ಪರ್ಧಾಕೂಟವನ್ನು ಏರ್ಪಡಿಸಲಾಗಿತ್ತು. ಈ ಪುಟ್ಟ ಮಕ್ಕಳ ಆಸಕ್ತಿ, ಅಭಿಲಾಷೆ, ಮುಗ್ಧತೆ ಜೊತೆಗೆ ಕೆಲವು ಮಕ್ಕಳ ತುಂಟತನ ಎದ್ದು ಕಾಣುತಿತ್ತು.





ಗಣಪನಿಗೆ ಆಂಗ್ಲಭಾಷೆ ತಿಳಿಯದು ಎಂದು ಈ ಮುದ್ದು ಕಂದ ಮುದ್ದುಮುದ್ದಾಗಿ ಬರೆದು ಗಣಪನಿಗೆ ಕಲಿಸುತ್ತಿದ್ದಾನೆ ನೋಡಿ...

ಮಗು ಇನ್ನು ಶಾಲಾಮೆಟ್ಟಿಲೇರದ ಕಂದ, ಬಹಳ ಮುಗ್ದತೆಯಿಂದ ನನ್ನ ಕರೆದು ಆಂಟಿ ನಾನು ಎಲ್ಲ ಬಣ್ಣ ಉಪಯೋಗಿಸಿದ್ದೀನಿ ನೋಡಿ ಎಂದು ತೋರಿಸುತ್ತಿತು.......





ಆಯ್ದ ಕೆಲವೇ ಕೆಲವು ಚಿತ್ರಗಳು ನಿಮ್ಮ ಮುಂದೆ ..........


ಕನ್ನಡಕೂಟದಲ್ಲಿ ಇನ್ನು ಹಲವು ಸ್ಪರ್ಧೆಗಳು ಮಕ್ಕಳಿಗಾಗಿ ಏರ್ಪಡಿಸಿದ್ದರು.. ಹೆಚ್ಚು ಪ್ರಚಾರ, ತಂದೆತಾಯಿಗಳ ಒಲವು, ವಿಭಿನ್ನತೆ ಕಂಡಿದ್ದು ಈ ಪುಟ್ಟ ಕಂದಮ್ಮಗಳ ಸ್ಪರ್ಧಾ ಕೂಟದಲ್ಲಿ..... ಕೆಲವು ಮಕ್ಕಳಿಗೆ ಚಿತ್ರಗಳನ್ನು ಕೊಟ್ಟ ತಕ್ಷಣ.... ಒಹ್ ಇದು ನೃತ್ಯ ಗಣೇಶ ಎಂದು ಆ ಪುಟ್ಟ ಮೊಗದಲ್ಲಿ ... ನಗುವಿನ ಛಾಯೆ ಅರಳಿತ್ತು.. ಗಣೇಶನ ವರ್ಣನೆಗಳು ನೂರೆಂಟು ಕೇಳಿಬಂದವು..ಆ ಪುಟ್ಟ ಕಂದಮ್ಮಗಳಲ್ಲಿ ದೇವರ ಒಲವು ಎದ್ದುಕಾಣುತಿತ್ತು...
ಈ ಸ್ಪರ್ಧೆಗೆ ಒಟ್ಟು ೩೭ ಮಕ್ಕಳು ಭಾಗವಹಿಸಿದ್ದರು. ಈ ಮಕ್ಕಳಿಗೆ ಬಹುಮಾನ ಮುಖ್ಯವಾಗಲಿಲ್ಲ ಗಣಪನಿಗೆ ಬಣ್ಣ ತೋರಿಸುವುದು ಮುಖ್ಯವಾಯಿತು, ಇನ್ನು ಕೆಲವು ಮಕ್ಕಳು ಚಿಪ್ಸ್ ಮತ್ತು ಜೂಸ್ ಅವರ ಗಮನ ಸೆಳೆದು ಗಣಪನಿಗೆ ಬಣ್ಣ ತೋರಿಸೋ ನಿಷ್ಠೆಯಲ್ಲಿ ಎಲ್ಲೋ ಒಂದು ಕಡೆ ಕೊರತೆಯಾಯಿತು ಹ ಹ ಹ .

ಪುಟ್ಟ ಕಂದಮ್ಮಗಳ ನಲಿವುಂಡ ನಾವೇ ಧನ್ಯರು.........