
ಯುದ್ಧದ ಸದ್ದಿಗೆ ಇಂದೇ ರಣರಂಗದಂತಾ ಮನಸು ನಿಶಬ್ಧಿಸಿದೆ...
ಎರಡು ದೇಶಗಳ ವೈಮನಸ್ಯ ಗಗನದೆತ್ತರಕ್ಕೆ ಬೆಳೆದರೂ
ಆಟವೆಂಬ ಯುದ್ಧಕೆ ದೇಶ ವಿದೇಶಗಳಲಿ ಎಲ್ಲರ ಮನದಲಿ
ಒಂದೆಡೆ ಗೆಲುವ ಕಾತುರ, ಮತ್ತೊಂದೆಡೆ ಏನಾಗುವುದೆಂಬ
ಭಯದ ಛಾಯೆ ಎಲ್ಲರ ಮನೆ ಮನದಲ್ಲಿ ನರ್ತನ ಮಾಡುತ್ತಲಿದೆ.
ನನ್ನವರೇ ಗೆಲ್ಲಲಿ ಎಂಬ ಭಾವನೆ ಎರಡೂ ದೇಶದವರಲ್ಲಿದೆ
ಅವರ ಗೆಲುವಿನಿಂದ ಯಾರಿಗೇನೂ ಸಿಗದಿದ್ದರೂ
ಜಿದ್ದಾಜಿದ್ದಿನ ಕದನದ ಕಹಳೆಯಂತೂ ಮೊಳಗಿದೆ
ರಾಜಕೀಯದ ಲಾಭವೋ ದೇಶಪ್ರೇಮದ ಪರಿಯೋ ತಿಳಿದಿಲ್ಲ.....
ಎರಡು ದೇಶದ ಪ್ರಧಾನಿ, ಬಣ್ಣದ ಲೋಕದ ದಿಗ್ಗಜರು
ರಾಜಕೀಯ ದುರೀಣರು, ಪ್ರಸಿದ್ಧವೆನಿಸುವ ಜನರ ಆಗಮ
ಪಾಕಿಸ್ತಾನ-ಭಾರತದ ಜೊತೆಯಾಟಕೆ ಹೊಸ ಕಳೆ ಸೃಷ್ಟಿಸಿದೆ
ಆದರೂ ಎಲ್ಲೋ ಮನದಲಿ ದ್ವಂದ್ವ ಪ್ರಶ್ನೆ-ಉತ್ತರಳ ಹುಡುಕುತಿದೆ
ಅಪ್ಪ ಅಮ್ಮನ ಜಗಳದಲಿ ಕೂಸು ಬಡವಾಯಿತು ಎಂಬಂತೆ
ಇಂಡೋ-ಪಾಕ್ ಕದನದಲ್ಲಿ ಸಾಮಾನ್ಯರು ಬಲಿಯಾಗದಿರಲಿ
ಮೋಹಲಿಯ ಕ್ರೀಡಾ ರಣರಂಗ ಕೇವಲ ಆಟಗಳ ಸಮರವಾಗಿ
ಗೆಲುವು ಭರತ ಭೂಮಿಗೆ ಮೀಸಲಿರಲಿ ಎಂದು ಆಶಿಸುವ ಬನ್ನಿ...