Showing posts with label ಕವನ. Show all posts
Showing posts with label ಕವನ. Show all posts

Tuesday, July 12, 2011

-ಉಸಿರು ಉಳಿಸಿ-

@ಚಿತ್ರ ದಿಗ್ವಾಸ್
--------

ಎಲ್ಲ ನವೀಕರಣದ ಹೆಸರು
ಆಡಂಬರದ ಡಾಂಬರೀಕರಣ
ಬೆಳೆವ ಜೀವಿಗಳು ಉಸಿರು
ಬಿಡಲಾಗದಂತ ಶಿಕ್ಷಾಭರಣ...!!!

ಭುವಿಯ ಗರ್ಭದಿಂದ
ಆಗಸನ ನೋಡಲಾರದಂತೆ
ಬಂಧಿಸಿಟ್ಟ ಈ ಮನುಷ್ಯ ಜೀವಕೆ
ಸಡ್ಡೆ ಹೊಡೆದು ನಿಂತಿಹೆವು ನಾವು...!!!

ಬೇರು ಭದ್ರಿಸಿ
ಹಸಿರ ರಕ್ಷಿಸಿ
ನಾನು ನನ್ನೊಡನೆ
ಎಳೆ ಕೂಸು ಬಂದಿಹೆವು ನೋಡಿ....!!!

ಭಾಸ್ಕರನು ಮೆಚ್ಚಿಹನು
ಎಳೆ ಎಳೆಯ ಬೆಳಕ ಚೆಲ್ಲಿಹನು
ಉಸಿರು ಉಳಿಯುವುದು
ದಾರಿ ಹೋಕರು ತುಳಿಯದಿದ್ದರೆ....!!!!

ಭಯವು ಮೂಡುತಿದೆ
ಬೆಂಕಿ ಚೆಂಡಿನಂತ
ವಾಹನಗಳು ಸಾಗುವುದೆಂದು
ಇರುವರೆಗು ನಮ್ಮನ್ನೇ ನಾವು ರಕ್ಷಿಸಿಕೊಳ್ಳಬೇಕಿದೆ...!!!

ಎಳೆ ಉಸಿರು ಚಿಗುರಿದೆ
ಬುಡ ಮೇಲು ಮಾಡದಿರಿ
ಹೇ ಮನುಜ ಮಿತ್ರರೇ
ನಿಮ್ಮಂತೆಹೇ ನಮ್ಮುಸಿರು...!!!