Saturday, May 28, 2011

ಕೊಳದ ಹನಿ ದಾಹ ನೀಗಿಸಿ ....

@ಚಿತ್ರ ಪ್ರಕಾಶಣ್ಣ

-೧-
ನನ್ನ ದಾಹ
ತೀರಿಸಿ
ದಣಿವಾರಿಸುವ
ಹನಿ ಹನಿಯ ಮುತ್ತು ನೀನು. .
---
ಬಿಸಿಲ ತಾಪ
ಸರಿಸಿ
ಬಾಯಾರಿಕೆಯ
ಮರೆಸಿ
ನಗುವ ತರಿಸಿದ
ಪ್ರಾಣ ನೀನು. .
--------
ದಣಿದ ದೇಹಕೆ
ಬಾಡಿದ ಮೊಗಕೆ
ಒಣಗಿದ ಗಂಟಲಿಗೆ
ತೃಪ್ತಿ ತರಿಸಿದ
ತಂಪು ನೀನು. .
-----------------

-೨-
ಕೊಳವು ನಾನು
ಮಲೀನ ನೀನು
ಸ್ತಬ್ಧ ಸ್ಥಿತಿಗೆ
ಅಲೆಯ ಎಳೆ
ತಂದವಳು ನೀನು. .
-----

ಪ್ರಶಾಂತ ಕೊಳದಿ
ಗುಟುಕೇರಿಸುವುದೇನೋ ಸರಿ. .
ಆದರೆ
ನನ್ನ ಒಡಲಲಿರುವ
ಮೀನುಗಳ
ನುಂಗದಿದ್ದರೆ ಸಾಕು. .
--------
ದಣಿದು ಬಂದವಗೆ
ನೀರನುಣಿಸಿ
ಆತಿಥ್ಯ ನೀಡೋ
ಒಡಲು ನಾನು. .

Monday, May 9, 2011

ಆಸರೆ


-1-

ಒಂಟಿ ಚಕ್ರಕೆ
ಊರುಗೋಲು...

ಹಸಿದ ಹೊಟ್ಟೆಗೆ
ಕಡಲ ನೀರು...

ಬೆಂದ ಹೊಟ್ಟೆಗೆ
ಎಳೆ ಬಿಸಿಲು..

ನೊಂದ ಮನಸಿಗೆ
ಸಾಂತ್ವಾನಿಸುವ ತಂಗಾಳಿ....

ಇದೇ ತೃಪ್ತಿಯಲಿ
ನನ್ನ ಬದುಕು.......

----------------------------------------------------

-2-

ಕಾಲು ಇಲ್ಲ ಕವಳವಿಲ್ಲ ನಾನು ಬಡವ
ಅರೆಹೊಟ್ಟೆಯಲ್ಲೇ ಕಳೆಯಬೇಕಿದೆ ದಿನವ
ಒಂಟಿ ಕಾಲಿಗೆ ಊರುಗೋಲು ಆಸರೆ
ಬಡತನಕೆ ನನ್ನ ಜೀವನ ಕೈಸೆರೆ
ಬವಣೆ ಬದುಕಲಿ ಜೀವ ಕುಂದಿದೆ
ಬೊಗಸೆ ನೀರಿನಷ್ಟು ಶಕ್ತಿಯನಾದರೂ ನೀಡಬಾರದೆ ಭಾಸ್ಕರ....

ಕಡಲ ರಥವನೇರಿದ ರವಿತೇಜನೆ
ಹಸುಗೂಸಿಗೂ ನಿನ್ನ ಎಳೆಬಿಸಿಲು
ಹಸಿರ ಪೈರಿಗೂ ನಿನ್ನ ಎಳೆ ತಾಪ
ಎಲ್ಲ ಜೀವರಾಶಿಗೆ ಕಳೆಯ ನೀಡಿ
ಭುವಿಗೆ ಬೆಳಕ ಚೆಲ್ಲುವುದ ತಿಳಿದವ
ಅಂದು ಕುಂತಿಗೆ ಕೂಸ ನೀಡಿದವ
ಎಲ್ಲ ಜೀವಿಗೆ ಬೇಕಾದವ ನೀನಾಗಿರುವಾಗ
ನಿಶಕ್ತಿ ಬಂದೆರಗಿದ ನನ್ನ ಕಾಲಿಗೆ ಪುಷ್ಠಿ ನೀಡಬಾರದೆ ಹೇಳೋ ಭಾಸ್ಕರ...


ಚಿತ್ರ: ದಿಗ್ವಾಸ್


Tuesday, May 3, 2011

ಸಾಲುಗಳು

-1-
ಕಡಲು ತಾ ಮಾಡಿದ ತಪ್ಪಿಗೆ
ತೀರದಲಿ ದಿಟ್ಟಿಸುತ್ತ ನಿಂತ ನನ್ನ
ಪಾದ ಸ್ಪರ್ಶಿಸಿ ಕ್ಷಮಿಸೆನ್ನುತಿದೆ....

ಹೇಗೆ ಮನ್ನಿಸಲಿ
ಎಂದೂ ಮಾಸದ ತಬ್ಬಲಿಯ ಗಾಯ
ನನ್ನ ಜೀವನವನ್ನೇ ಹುಣ್ಣು ಮಾಡಿಸಿದೆ..

-----
-2-

ಹೇ ಕಡಲೇ
ನೀ ಆದೆ ಅಂದು ಹೆಬ್ಬುಲಿ
ನೋಡು
ನಾನಿಂದು ತಬ್ಬಲಿ...

-----

-ಹೂ-

ನಾನು ಪೂಜೆಗೆ ಶ್ರೇಷ್ಠವೆಂದು
ನನ್ನ ಚಿವುಟಿ ಕಿತ್ತರು...

ಆದರೆ

ನಾನೂ ಒಂದು
ಉಸಿರಾಡುವ
ಜೀವವೆಂಬುದ ಮರೆತರು...
-----

-ನಾನು-

ಭುವಿಯ ಮಂಚದಲಿ
ಪ್ರಕೃತಿ ಮಡಿಲಿನಲಿ
ಮಲಗುವೆ....

ಸುತ್ತಮುತ್ತಲ ಜನರ ಹಾರೈಕೆ
ಅಕ್ಕಪಕ್ಕದವರ ಅನ್ನ ಬಟ್ಟೆಯಲಿ
ದಿನವ ಕಳೆವೆ...

ಕಾರಣ

ಗೊತ್ತಿಲ್ಲ ನಾನು ಯಾರು
ಯಾವ ಮನೆಯವ
ಯಾರ ಮಗನೆಂದು....

-----

ಚಿತ್ರಗಳು @ ಅಂತರ್ಜಾಲ