Showing posts with label ಮುಖಪುಟ...... Show all posts
Showing posts with label ಮುಖಪುಟ...... Show all posts

Sunday, May 17, 2009

ಮಸುಕಿನಲ್ಲಿದ್ದ ಮುಖ ತೆರೆದ ಮುಖಪುಟ.

ನಾವೆಲ್ಲ ಜೀವನದಲ್ಲಿ ಕೊನೆವರೆಗೊ ಹೀಗೆ ಇರುತ್ತೇವೆ, ಸುಖ ಸಂತೋಷ, ಆಸ್ತಿ ಪಾಸ್ತಿ, ಆರೋಗ್ಯ ಎಲ್ಲವೊ ನಮ್ಮೊಂದಿಗೆ ಈಗ ಇಂದು ಹೇಗಿದೆಯೋ ಕೊನೆವರೆಗು ಇರುತ್ತೆಂದು ಭಾವಿಸುತ್ತೇವೆ ಆದರೆ ಅದು ಅಕ್ಷರ ಸಹ ಸುಳ್ಳು. ಇಂದು ಇದ್ದ ಜೀವ ನಾಳೆಗಿರದು ಇರುವ ಎರಡು ದಿನಕೆ ಎನೆಲ್ಲಾ ಮಾಡುತ್ತೇವೆ ಅಲ್ಲವೆ... ಏಕೀ ಪುರಾಣವೆಂದು ಭಾವಿಸುತ್ತೀರ ಈ ಭಾವನೆ ನನ್ನ ಮನದಾಳದಲ್ಲಿ ಹುಟ್ಟಿದವು ಬರವಣಿಗೆಗೆ ಮೀಸಲಿದ್ದವಹುದಲ್ಲ.

ಇತ್ತೀಚೆಗಷ್ಟೆ ಕುವೈಟ್ ಕನ್ನಡ ಕೂಟದಲ್ಲಿ ಒಂದು ದಿನದ ಕಾರ್ಯಕ್ರಮ ಏರ್ಪಡಿಸಿದ್ದರು ಅಂದು ಸುಮಾರು ೨ ಗಂಟೆಗಳ ಕಾಲ ಒಂದು ಚಿತ್ರವನ್ನು ನೋಡುವ ಭಾಗ್ಯ ನನ್ನದಾಯಿತು. ಮೂದಲ ಹಂತಕ್ಕೆ ಏನಿದು ಚಿತ್ರ ಎಳೆಯುತ್ತಿದ್ದಾರಲ್ಲ ಎಂಬ ಭಾವನೆ ಮೊಡಿದ್ದಂತು ನಿಜ. ಒಂದು ಸಣ್ಣ ಹಳ್ಳಿ ಅಲ್ಲಿ ಒಬ್ಬರು ಶಿಕ್ಷಕರು ಅವರಿಗೆ ಪ್ರೀತಿ ಪಾತ್ರರಳಾದ ಶಿಷ್ಯೆ, ಗುರುವಿಗೆ ತಕ್ಕ ಶಿಷ್ಯೆ ಎಂದೇಳಿದರೆ ತಪ್ಪಾಗಲಾರದು. ಗುರು ಶಿಷ್ಯೆಯ ಜೀವನ ಜೊತೆ ಜೊತೆ ಸಾಗುತ್ತದೆ. ಶಿಷ್ಯೆಯ ಪ್ರತಿ ಹೆಜ್ಜೆಗು ಮಾರ್ಗದರ್ಶಿ ಗುರು, ಈ ಶಿಷ್ಯೆ ಗುರುವಿಗೆ ಪ್ರೇರಣಾತೀತೆ ಇವಳು ನಾಟ್ಯ ಪ್ರವೀಣೆ, ವಿದ್ಯಾ ಸಂಪನ್ನೇ, ವಿದ್ಯೆ ಕಲಿತರೆ ಅದರಿಂದ ತೊಂದರೆ ಇಲ್ಲ ಅದು ನಮ್ಮ ಜೀವನದ ಏಳ್ಗೆಗೆ ಮೆಟ್ಟಿಲು ಎಂಬ ನಿಲುವು ಗುರು ಶಿಷ್ಯೆದು(ಗೌರಿ).......... ಇವರಿಬ್ಬರ ಜೀವನದಲ್ಲಿ ಒಂದು ಅನಾಥ ಮಗುವಿಗೆ ಆಸರೆ ನೀಡೋ ಸ್ಥಿತಿ, ಜೊತೆಗೆ ಸ್ಲಮ್ ಮಗುವಿಗೆ ವಿದ್ಯೆಯ ಅರಿವು ಮೊಡಿಸಿದವರು.

ಇಷ್ಟೆಲ್ಲ ಸುಖ ಜೀವನದಲ್ಲಿ ಒಂದು ಆಘಾತಕಾರಿ ಎಂದರೆ ಗುರುವಿನ ಮರಣ ಇವಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತೆ...ಇಂತಹ ಸಮಯದಲ್ಲಿ ಪರ ಊರಿನಲ್ಲಿದ್ದ ಗುರುವಿನ ಸಂಸಾರದೊಂದಿಗೆ ಜೀವನ ಸಾಗಲು ತೆರಳುತ್ತಾಳೆ ಅಲ್ಲೂ ಸಹ ಯಾವ ಕೊರತೆಯಿಲ್ಲದೆ..........ಗೌರಿ ಜೊತೆಗೆ ಆ ಪುಟ್ಟ ಮಗುವಿಗೆ ಆನಂದಪೂರ್ವಕ ಸ್ವಾಗತ... ಒಮ್ಮೆ ಇದ್ದಕ್ಕಿದ್ದ ಹಾಗೆ ಆ ಪುಟ್ಟ ಪೋರಿ ಜ್ವರವೆಂದು ಮಲಗಿದಾಗ ಇದು ಸಾಮಾನ್ಯ ಜ್ವರವೆಂದು ಭಾವಿಸಿ ಮನೆಯಲ್ಲೇ ಇದ್ದ ಮಾತ್ರೆಯನ್ನು ನೀಡಿ ಸಾಂತ್ವಾನಿಸಿದ್ದಳು ಗೌರಿ, ಆದರೆ ಅದು ಯಾವುದೇ ಗುಣಕಾಣದಾದಾಗ ಆಸ್ಪತ್ರೆಗೆ ಕೊಂಡೊಯ್ಯುವ ಸ್ಥಿತಿ ಬಂದೊದಗಿತು ಅಲ್ಲಿ ಒಂದು ವಿಚಿತ್ರ ರೋಗದ ಸುಳಿವಿರುವುದು ತಿಳಿದು ಬೇರೆ ಆಸ್ಪತ್ರೆಗೆ ತೆರಳಬೇಕೆಂದು ಸೊಚಿಸಿದರು ಅಲ್ಲಿಂದ ಆ ಮಗುವನ್ನು ಗುರುವಿನ ಮಗ ಹಾಗು ಗೌರಿಯು ಬೆಂಗಳೂರಿಗೆ ಕರೆತಂದಾಗ ಅಲ್ಲಿ ಎಲ್ಲಾ ತಪಾಸಣೆಯ ನಂತರ ತಿಳಿದಿದ್ದು ಅಲ್ಲೊಂದು ಆಘಾತಕಾರಿ ಸಂಗತಿ!!!! ಎಂತವರೊ ದಿಗ್ಭ್ರಮೆಗೊಳ್ಳುವ ಮಾಹಿತಿ ವೈದ್ಯರು ಬಿಚ್ಚಿಟ್ಟಾಗ ಹೃದಯಾಘಾತವಾಗದಿರುವುದು ಹೆಚ್ಚು!!!!!!!!! ಗೌರಿಯ ಮಮತೆಯ ಕೊಸು ಕನರಿಹೋಗುವುದೆಂಬ ಭಯ ಬೆಂಬಿಡದೆ ಅವಳ ಮನದಲ್ಲೇ ಕೊತುಬಿಟ್ಟಿತ್ತು ಆದರೊ ಸ್ಥಾವರಿಸಿ ದಿಟ್ಟ ಹೆಜ್ಜೆ ಇಟ್ಟು ಹೊರ ಬಂದು ಆ ಮಗುವಿಗೆ ಆಸರೆಯಾಗಿ ಕೊನೆವರೆಗಿರುವ ನಿರ್ಧಾರಕ್ಕೆ ಬಂದಳು. ಇವಳಿಗೆ ಜೊತೆಯಾದವನು ಗುರುವಿನ ಮಗ.

ಎಲ್ಲವನ್ನು ಎದುರಿಸುವೆ ಎಂದು ಏಡ್ಸ್ ಎಂಬ ಮಹಾಮಾಯಿಯನ್ನು ಹೊತ್ತು ತಂದ್ದ ಮಗುವಿಗೆ ಇದು ಹೇಗೆ ಅಂಟಿತೆಂದು ತಿಳಿಯುವಲ್ಲಿ ಸಫಲಾದಳು ಆ ಮಗು ಇವಳ ಕೈಸೇರುವ ಮುನ್ನ ಆ ಮಗುವಿನ ಅಪ್ಪ ಅಮ್ಮ ಆತ್ಮಹತ್ಯೆಗೆ ಶರಣಾಗಿದ್ದರು........ನೃತ್ಯಶಾಲೆಗೆ ಬರುತ್ತಿದ್ದ ಈ ಮಗು ಗೌರಿಯನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಅಪ್ಪ ಅಮ್ಮ ಇಲ್ಲದಾಗ ಆಪ್ತಳಾದವಳು ಗೌರಿ ಆ ಮಗುವಿಗೆ ತಾಯಿಯಾಗಿ ನೆಲೆಯಾದವಳು ಈಕೆ.

ಆ ಮಗುವಿಗೆ ಮಹಾಮಾರಿ ತಗುಲುವುದೇನೋ ತಗುಲಿತು ದೇವರ ಜೊತೆ ತಂದೆತಾಯಿಯು ದೂರ ಸರಿದರು ಇಂತಹ ಸ್ಥಿತಿಯಲ್ಲಿ ಆ ಮಗು ಈ ಸಮಾಜದಲ್ಲಿ ಎದುರಿಸಬೇಕಾದ ಎಲ್ಲಾ ನಿಂದನೆಗಳನ್ನು ಇಂಚಿಂಚು ಅನುಭವಿಸುವಂತಾಯಿತು ಇದನ್ನೆಲ್ಲಾ ಕಂಡ ಗೌರಿ ನೂರಾರು ಜನಸ್ತೊಮ ನೆರೆದಲ್ಲೇ ತನ್ನ ಅಳಲನ್ನು ತೋಡಿಕೊಂಡಳು... ಏನು ಅರಿಯದ ಮಗು ಆ ಮಗುವೇಕೆ ಈ ಶಿಕ್ಷೆ ಅದಕ್ಕೆ ಅದರ ಖಾಯಿಲೆಯ ಅರಿವಿದೆ ನೀವೆಲ್ಲ ಜೊತೆಗೊಡಿ ಆ ಮಗು ಇರುವಷ್ಟು ದಿನ ಸಂತಸದಿ ಬಾಳಲು ಬಿಡಿ ಎಂದು ಭಾರದ ಹೃದಯದಲ್ಲಿ ದುಃಖದ ಮಡುವಿನಲ್ಲಿ ಬೇಡಿದಳು ಅವಳ ಮಾತು ನೆರೆದಿದ್ದವರನೆಲ್ಲಾ ಮಮ್ಮಲ ಮರುಗುವಂತೆ ಮಾಡಿತು........
ಆ ಜನರಿಗಷ್ಟೆ ಅಲ್ಲ ನಮ್ಮಲಿದ್ದ ಮೂಢನಂಬಿಕೆ, ನಾವು ನಮ್ಮಲ್ಲಾಗುವಷ್ಟು ಸಹಕಾರ ನೀಡಬೇಕೆಂಬುದು ನನಗೂ ಅರಿವಾಯಿತು. ಏಡ್ಸ್ ಎಂಬ ರೋಗದಿಂದ ಬಳಲುವ ಹಲವಾರು ಮಕ್ಕಳು ಸಮಾಜದಲ್ಲಿ ತಮ್ಮ ಬೇಕುಬೇಡಗಳನ್ನು ನೀಗಿಸಿಕೊಳ್ಳಲು ಸಂಪ್ರದಾಯ, ಮೂಢನಂಬಿಕೆ, ಅಸಹನೆ, ಮೂಡಿಸಿಕೊಂಡು ಆ ರೋಗವೊಂದು ಅಂಟುರೋಗವೆಂದು ಭಾವಿಸಿ ಏಡ್ಸ್ ರೋಗಿಗಳಿಗೆ ಜೀವನ ಮಾಡಲು ಅವಕಾಶ ನೀಡದೆ ಎಷ್ಟೋ ಮಂದಿ ದೊರ ತಳ್ಳುತ್ತಲಿದ್ದೇವೆ.

ರೂಪ ಐಯ್ಯರ್ ಅವರ ಚಿತ್ರ ನೋಡಿದ ಮೇಲೆ ಹಾಗು ಮುಖಮುಖಿ ಅವರ ಮನದಾಳದ ಮಾತು ಕೇಳಿದ ಮೇಲೆ ನಾವು ನಮ್ಮತನವನ್ನು ನಶಿಸದಂತೆ ನಾವು ನಮ್ಮಲಾಗೋ ಸಹಾಯ ಹಸ್ತ ಚಾಚಬೇಕೆಂಬ ನಿಲುವಿಗೆ ಬಂದೆನು.
ಈ ಚಿತ್ರ ಎಲ್ಲರೊ ನೋಡ ಬೇಕಾದ್ದೆ ಹಾಗೆ ಹೊಸ ಜೀವನದ ಹೊಸ್ತಿಲಲ್ಲಿ ನವ್ಯಪ್ರಜ್ಞೆ ಮೂಡಿಸಬೇಕಾದ್ದದೇ ಹೊರತು ಮೂಢರಂತೆ ವರ್ತಿಸಬೇಕಾದದ್ದು ಅಲ್ಲವೇ ಅಲ್ಲ.

ಧನ್ಯವಾದಗಳು