
ಮಕರ ಸಂಕ್ರಮಣ ಮುಗಿಸಿ ತದನಂತರದಿ
ಬಂದಿದೆ ರವಿ-ಚಂದ್ರರ ಸಮಾಗಮ
ರವಿ-ಭುವಿಯ ನಡುವೆ ಶಶಿಯು ಹಾದು
ಮೂಡಿಸುವನು ಸೂರ್ಯಗ್ರಹಣ!!!!
ಸೂರ್ಯಗ್ರಹಣವು ಅಮಾವಾಸ್ಯೆಯಂದು
ಚಂದ್ರಗ್ರಹಣವು ಹುಣ್ಣಿಮೆಯಂದು
ನಿಗದಿತ ಸಮಯಕ್ಕೆ ಸರಿಯಾಗಿ
ಗೋಚರಿಸುವವು ನಿರ್ದಿಷ್ಟ ಸ್ಥಳಗಳಲ್ಲಿ
ಇದು ನಿಸರ್ಗ ಸೃಷ್ಟಿಸುವ ಪ್ರಕ್ರಿಯೆಯೇ ಗ್ರಹಣ !!!
ದಕ್ಷಿಣಆಫ್ರಿಕದಿ ಪ್ರಾರಂಭಿಸಿ
ಹಿಂದೂಮಹಸಾಗರ ದಾಟಿ
ಹಲವಾರು ವರುಷಗಳ ನಂತರದಿ
ದಕ್ಷಿಣ ಭಾರತದ ಆಗಸದಿ ಚಿತ್ತಾರ ಬಿಡಿಸಿ
ರವಿಚಂದ್ರರು ತಣಿಸುವರು ಕಣ್-ಮನ!!!!
ಚಂದಿರನ ಗಾತ್ರವು ನೆಸರನಿಗಿಂತ ಕಿರಿದು
ಗ್ರಹಣದಂದು ರವಿಯ ಮೇಲೆ ಶಶಿಯ ನೆರಳು
ಚಿತ್ರಿಸುವುದು ಬಳೆಯಾಕಾರದ ರಂಗೋಲಿ
ನೋಡಲಾನಂದ ಸುತ್ತಲೂ ಕೆಂಬಣ್ಣದ ಕಂಕಣ!!!