ಕನ್ನಡಾಂಬೆಯ ನೆನೆವ ಮನಗಳು ಪ್ರಪಂಚದಾದ್ಯಂತ ಹರಡಿಹೋಗಿವೆ ಕೆಲವು ಪ್ರಾಂತ್ಯ, ಊರು ಕೇರಿಗಳಲ್ಲಿ ಕನ್ನಡಮ್ಮನಿಗೆಂದೆ ಹಬ್ಬ ಆಚರಣೆಗಳು ನೆಡೆಯುತ್ತಲೇ ಇರುತ್ತವೆ. ಅಂತೆಯೇ ನಾವು ಸಾಗರದಾಚೆ ಕನ್ನಡಮ್ಮನ ನೆನೆದು ಅವಳ ಪ್ರೀತಿಪಾತ್ರರಾಗುವ ಒಂದು ಪುಟ್ಟ ಪ್ರಯತ್ನ...
ಕುವೈಟ್ ಕನ್ನಡಿಗರೆಲ್ಲರು ಒಗ್ಗೂಡಿ ಇದೇ ನವೆಂಬರ್ ೧೩ರಂದು ಅಮೇರಿಕನ್ ಇಂಟರ್-ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಉತ್ಸವ ನೆರೆವೇರಲಿದೆ ಈ ಸಮಾರಂಭಕ್ಕೆ ಅಭೂತಪೂರ್ವ ರೀತಿಯಲ್ಲಿ ಎಲ್ಲಾ ಮಕ್ಕಳು, ಹಿರಿ-ಕಿರಿಯರೆಲ್ಲರೂ ತಮ್ಮದೇ ಆದಂತಹ ಮನರಂಜನಾ ಕಾರ್ಯಕ್ರಮಕ್ಕೆ ಮೆರುಗು ನೀಡಲು ಸಜ್ಜಾಗಿದ್ದಾರೆ.
ಈ ಬಾರಿ ಅತಿ ಆಸಕ್ತಿದಾಯಕ ಎಂದರೆ ಕುವೈಟ್ ಕನ್ನಡ ಕೂಟಕ್ಕೆ ಬೆಳ್ಳಿಹಬ್ಬದ ವೈಭವ ಇದರ ಸಲುವಾಗಿ ಕನ್ನಡ ಕೂಟದ ವತಿಯಿಂದ ಮನರಂಜನಾ ಕಾರ್ಯಕ್ರಮ ಹಾಗೂ ಬೆಂಗಳೊರಿನಿಂದ ಆಗಮಿಸಿರುವ ಪ್ರಭಾತ್ ಕಲಾವಿದರಿಂದ ವಿವಿಧ ನೃತ್ಯರೂಪಕ ನಾಟಕಗಳು ನೆಡೆಯಲಿವೆ. ಇದಲ್ಲದೆ ಪ್ರಭಾತ್ ಕಲಾವಿದರೊಂದಿಗೆ ಕುವೈಟ್ ಕನ್ನಡಿಗರೂ ಸಹ ಭಾಗವಹಿಸಲಿದ್ದಾರೆ.
ಕಿರುತೆರೆ ಹಾಗು ಚಲನಚಿತ್ರ ತಾರೆಗಳಾದ ಹಾಗೂ ಪ್ರಭಾತ್ ಕಲಾವಿದರಾದ ದೀಪಶ್ರೀ ಮತ್ತು ಹರೀಶ್ ದಂಪತಿಗಳ ಸಾರಥ್ಯದಲ್ಲಿ ನಾವುಗಳು ನಾಟಕಾಭ್ಯಾಸದಲ್ಲಿ ತೊಡಗಿದ್ದೇವೆ. ಪರಿಪೂರ್ಣತೆ ಅಥವಾ ಪಕ್ವತೆ ನಮ್ಮಲ್ಲಿಲ್ಲದಿದ್ದರೂ ನಮ್ಮ ಪಾತ್ರಗಳಿಗೆ ಜೀವತುಂಬುವ ನಿಟ್ಟಿನಲ್ಲಿದ್ದೇವೆ.
ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ, ಸಂತಸ ಭರಿತವಾಗಿ ನೆರವೇರುವುದೆಂದು ನಾವು ಭಾವಿಸುತ್ತ ನಿಮ್ಮೆಲ್ಲರಿಗೂ ಹೃದಯಪೂರ್ವಕ ಆಹ್ವಾನವನ್ನು ನೀಡುತ್ತಲಿದ್ದೇವೆ.

ಆಮಂತ್ರಣ ನಮ್ಮದು .... ಬರುವಿಕೆ ನಿಮ್ಮದು...ನಿಮ್ಮ ನಿರೀಕ್ಷೆಯಲ್ಲಿ ಕಾಯುವುದು ನಮ್ಮೆಲ್ಲರದು.... ಎಲ್ಲರೊಟ್ಟುಗೂಡಿ ಕನ್ನಡದದೀಪ ಬೆಳಗಿಸಿ ಉಳಿಸುವುದು ಕನ್ನಡಿಗರೆಲ್ಲರದು...
ಕಡಲ ಕಿನಾರೆಯಾದ
ಮರಳುಗಾಡ ಸಿರಿಯಲಿ
ಭಾರತಾಂಬೆಯ ಕುವರಿ
ದಿವ್ಯನಗೆಯ ಕನ್ನಡಾಂಬೆ
ವಿಜೃಂಭಿಸಲಿರುವಳು......
ನಿಮ್ಮೆಲ್ಲರ ಜಯಕಾರವಿರಲಿ
ಈ ಭುವನೇಶ್ವರಿ ತಾಯಿಗೆ........
ಶುಭದಿನ.
ವಂದನೆಗಳೊಂದಿಗೆ
ಕುವೈಟಿನ ಬ್ಲಾಗಿಗರಾದ
ಮೃದುಮನಸು,
ಸವಿಗನಸು, ಮತ್ತು
ಜಲನಯನ....


.jpg)

