ಅಂದು ನೀ ಬಂದು ನನ್ನ ಜೀವನಕೆ ಹೊಸ ಆಯಾಮವನ್ನೇ ಮೂಡಿಸಿಬಿಟ್ಟೆ ಏನೋ ಪುಳಕ, ತನು ಮನವೆಲ್ಲಾ ಹೊಸ ಅನುಭವದತ್ತ ದಾಪುಗಾಲು ಅಂದೆನಗೆ ಎಲ್ಲವೊ ಹೊಸದು ಹೆಣ್ತನ ಹೀಗೆಲ್ಲ ಭೊರಮಿಸುತ್ತೆನುವ ಭಾವನೆ ನನ್ನಲಿಲ್ಲದ ದಿನ ನೀ ಬಂದು ನನ್ನ ಬಾಳ ಹಸನಾಗಿಸಿಬಿಟ್ಟೆ.
ಮುಸ್ಸಂಜೆಯ ಹೊತ್ತು ನಾನಲ್ಲಿ ನೋವಿಂದ ನಲುಗಿದ್ದೆ ಒಡಲ ಉರಿಗೆ ಬಾಡಿದ ಹೂವಂತಿದ್ದೆ ನೀ ಪುಟಿದು ಬಂದ ಕ್ಷಣ ಎಲ್ಲಾ ನೋವು ಮಾಯವಾಗಿತ್ತು. ನಿನ್ನೊಡನೆ ನನ್ನ ಬಾಲ್ಯ, ಅಮ್ಮನ ಹಾರೈಕೆ ಎಲ್ಲವನು ಅರಿತೆ, ನಿನ್ನ ಪುಟ್ಟ ಪುಟ್ಟ ಹೆಜ್ಜೆ ನನ್ನ ಜೀವನದ ಉನ್ನತಿಯ ಮೆಟ್ಟಿಲಿಗೆ ನಾಂದಿಯಾಡಿತು.. ನಿನ್ನ ತೊದಲ ನುಡಿ, ನಿನ್ನ ತುಂಟತನ, ಮೃದುತ್ವ ಎಲ್ಲವೊ ಮನೆ,ಮನ ಸೂರೆಮಾಡಿತ್ತು. ನಿನ್ನಿಂದ ದೊರವಿದ್ದ ದಿನಗಳಂತು ನರಕಯಾತನೆಯಂತಿತ್ತು ಅಂದಿನ ಒಡಲ ಉರಿ ಇಂದು ನೆನೆದರೆ ಕಣ್ಣೀರ ಧಾರೆ ಹರಿದುಬಿಡುವುದು. ನಿನ್ನಿಂದ ದೂರವಿದ್ದ ಕಹಿಮರೆತು ಮತ್ತೊಮ್ಮೆ ಸೇರಿದಾಗ ನೀ ತೋರಿದ ಮುನಿಸು ಸ್ವಲ್ಪ ಇರಿಸುಮುರಿಸು ಜೊತೆಗೆ ಮತ್ತೆಂದು ನನ್ನ ಸ್ವೀಕರಿಸುವುದಿಲ್ಲವೇನೆಂಬ ಭಯದ ಛಾಯೆ ಹೃದಯಾಂತರಾಳದಲ್ಲಿತ್ತು ಅದನಾರಲ್ಲೊ ತೋರ್ಪಡಿಸದೆ ಭಂಡಳಂತ್ತಿದ್ದೆ. ಆ ಕಹಿದಿನಗಳೆಲ್ಲ ಕಳೆದು ನನ್ನೊಡಲ ಉರಿ ತಣ್ಣಗಾಗಿಸಿ ನೀ ಎನ್ನ ಮಡಿಲು ಸೇರಿದೊಡೆ ನಾನು ನಿರಾಳವಾಗಿಬಿಟ್ಟೆ. ಅಂದಿನಿಂದ ನಾ ನಿನಗಾಸರೆ ನೀ ನನಗಾಸರೆಯಾಗಿಬಿಟ್ಟೆವು.......
ನಿನ್ನದು ಮುದ್ದು ಮನಸು ನನ್ನದು ಪೆದ್ದು ಮನಸು ಇಂತಹದರಲ್ಲಿ ಇಬ್ಬರು ನಲಿದ ಕ್ಷಣಗಳೆಲ್ಲಾ ಹುಚ್ಚು ತರಿಸಿದವೆಲ್ಲವು..... ಆ ಮುದ್ದು ಮನಸಿಗೆ ಮುದ ನೀಡೋ ಕನಸು ಎಷ್ಟೋ ಇದೆ ನಿನಗದು ಖುಷಿ ನೀಡುತ್ತೋ ಇಲ್ಲವೋ ಎಲ್ಲವನು ಕಾದು ನೋಡಬೇಕಿದೆ.
ನಿನ್ನ ಹಾರೈಕೆ ಮಾಡುವಲ್ಲಿ ಕಡಿಮೆಯೇನೋ ನಾ ತಿಳಿಯೇ ಎಲ್ಲರಂತೆ ನಾನಿಲ್ಲವೇನೋ, ನೀ ಬಯಸಿದಂತೆ ನಿನ್ನ ಹಾರೈಕೆ, ಪ್ರೀತಿ, ವಾತ್ಸಲ್ಯ ನೀಡುತ್ತಿಲ್ಲವೇನೋ ತಿಳಿಯೇ, ಅಂದು ನಿನ್ನೊಬ್ಬನೇ ಬಿಟ್ಟು ಹೋದಾಗ ಕಣ್ಣೀರ ನೀ ತುಂಬಿಕೊಂಡಾಗ ನಿನಗಾದ ದುಃಖದಲಿ ನನ್ನ ಶಪಿಸಿಬಿಟ್ಟೆಯೇನೋ ನಾ ತಿಳಿಯೇ ಆದರೆ ಒಂದಂತೂ ನಿಜ ನಿನ್ನೊಬ್ಬನನ್ನೇ ಬಿಟ್ಟು ನಾ ಹೋದಾಗ ಅನಾಥ ಪ್ರಜ್ಞೆ ನಿನ್ನಲ್ಲಿ ಎಲ್ಲಿ ಮೂಡಿಬಿಡುತ್ತೋ ಎಂಬ ಭಾವ ನನ್ನ ಮನಕೆ ಕಾಡದಿರಲಿಲ್ಲ...ನನ್ನ ಕರುಳ ಸಂಕಟ ಹೇಳಿಕೊಳ್ಳಲು ನೀನ್ನಿನ್ನು ಪುಟ್ಟ ಮಗು...ನನ್ನ ಮಾತನ್ನೆಲ್ಲಾ ಅರಿವ ವಯಸ್ಸು ನಿನ್ನದಲ್ಲ..... ಆದರೊ ಇಷ್ಟು ಪುಟ್ಟ ವಯಸ್ಸಿನಲ್ಲಿ ನಿನ್ನ ನೀ ನಿಭಾಯಿಸಿ ಆತ್ಮಬಲ, ಧೈರ್ಯ,ಶಿಸ್ತು, ನಿಲುವು, ಸ್ವಂತಕಾರ್ಯ ಎಲ್ಲವನು ರೂಢಿಸಿಕೊಂಡು ಬಿಟ್ಟೆಯಲ್ಲಾ ಕಂದ ನಿನಗೆ ನನ್ನ ಸಲಾಮು. ನಿನಗೆ ನಾ ಎಂದೆಂದು ಚಿರಋಣಿ ನೀ ಎಲ್ಲಾ ಮಕ್ಕಳಂತಲ್ಲ ನಿನ್ನಲ್ಲಿನ ವಿಶೇಷತೆ ಹೇಳತೀರದು. ಕಾಣದ ದೇಶದಲ್ಲಿ ನನ್ನವರೆಂಬವರು ಇಲ್ಲದ ಊರಲ್ಲಿ ಶಾಲೆಯಿಂದ ಬಂದೊಡೆ ಅಮ್ಮ ಬಾಗಿಲು ತೆರೆದು ಎನಗೆ ಉಣಬಡಿಸುತ್ತಾಳೆ ಎಂಬ ಭಾವನೆಯಲಿ ಬಾಗಿಲ ಬಳಿ ಬಂದೊಡೆ ಓಹ್!!! ಅಮ್ಮನಿಲ್ಲ ಕೆಲಸಕ್ಕೆ ತೆರೆಳಿದ್ದಾಳೆ ನನ್ಗೆ ನಾನೇ ಎಲ್ಲ ಎಂದು ಭಾವಿಸಿ ಬಾಗಿಲು ತೆರೆದು ಮತ್ತೆ ಬಾಗಿಲು ಭದ್ರಪಡಿಸಿ ನಿನ್ನ ಉಡುಪು ಬದಲಿಸಿ, ಮುಖ ತೊಳೆದು ಟೆಬಲಿನ ಮೇಲಿದ್ದ ಊಟ ತೆಗೆದು ತಿನ್ನುವಾಗ ನೀನೆಸ್ಟು ದಿನ ನೊಂದುಕೊಂಡೆಯೋ ನಾ ಅರಿಯೇ ನನಗೆ ಯಾರಿಲ್ಲ ನನಗಾಗಿ ನಾನೆ ಎಲ್ಲ ಎಂದು ನೊಂದು ತುತ್ತು ತುತ್ತಿಗು ತುತ್ತು ಕೊಡುವವಳ ಶಪಿಸಿದ್ದೆಯೇನೋ ನಾ ತಿಳಿಯೇ ನೀ ಏನೇ ತಿಳಿ ಇದು ನಿನ್ನಮ್ಮ ಎಂದೊ ನಿನ್ನ ಒಳಿತು ಬಯಸೋ ಅಮ್ಮ...........
ನನ್ನ ಉಸಿರ ಒಂದು ಭಾಗ ನೀ..........ನೀ ನನ್ನ ಸ್ನೇಹಿ, ನೀ ನನ್ನ ಪ್ರಾಣ, ನೀನೇ ಎನಗೆ ಎಲ್ಲಾ......ಕಂದ ಈ ನಿನ್ನ ಪೆದ್ದು ಮನಸಿನ ಅಮ್ಮ ಏನೇ ಮಾಡಿದ್ದರೊ ಮನ್ನಿಸಿ ಕ್ಷಮಿಸಿಬಿಡು ಮುಕುಂದ...... ನೀ ಎಲ್ಲವನು ಸಹಿಸಿ, ಎಲ್ಲದಕೊ ಪ್ರೋತ್ಸಾಹಿಸಿ ನನ್ನ ಜೀವನದ ಏಳ್ಗೆಗೆ ಬೆಳಕ ಹಿಡಿದ ಬೆಳಗಿನ ನೇಸರ.....ರಾತ್ರಿಯ ಚಂದ್ರಮ ಎಲ್ಲವೊ ನೀನೇ...ನನ್ನ ಒಡಲ ಚಂದ್ರಮಕೆ ಇಂದು ಎಂಟರ ಮುದ್ದು ಮಯಸ್ಸು...ನನ್ನ ಜೀವನದ ಬೆಳಕಿಗೆ ಹುಟ್ಟು ಹಬ್ಬದ ಸಂತಸದ ಚಂದ್ರಮ........ನನಗೋ ಬೆಳಕನೊಗಳುವ ಸಂಭ್ರಮ.............
ಕಂದ ನಿನಗೆ ನಿನ್ನ ಅಮ್ಮನಿಂದ ಹೃದಾಯಾಂತರಾಳದಿಂದ ಹುಟ್ಟುಹಬ್ಬದ ಶುಭಾಶಯಗಳು....
ಹಾಗು ನಿನ್ನಪ್ಪ ಮೋಟಗೊರಿಲ್ಲಾನಿಂದಲೂ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು....
ನಿನ್ನ ದಿನ ಸುಸವಿದಿನ
ವರುಷಪೂರ್ತಿ.......ಶುಭದಿನ
ಅಂತೆಯೇ ನೆನ್ನೆ ಬಸವಜಯಂತಿ ಆದ್ದರಿಂದ ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೆ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು ೭ ಗಂಟೆಗೆ ಪ್ರಾರಂಭವಾಗಿತ್ತು ಗಂಡಸರು ಹಾಗು ಹೆಂಗಸರಿಂದ ಸುಮಾರು ೨೦ ವಚನ ಗಾಯನ ನೆರೆವೇರಿತು..



ಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...












