Thursday, April 1, 2010

ಕುಸುಮಕೋಮಲೆ -೪


ದಿನಗಳು ಉರುಳಿದರೆ ಹಳೆಯದನ್ನು ಮರೆತು ಹೊಸತನ್ನು ಸ್ವೀಕರಿಸುವುದು ಮನುಷ್ಯನ ಲಕ್ಷಣ, ಅಂತೆಯೇ ಇಲ್ಲು ಸಹ ಹಾಗೆ ನೆಡೆಯಿತು ಮಗಳ ಸಾವಿನ ನೋವು ಮರೆಯಲು ಮೊಮ್ಮಗಳ ನಗು ಕಾರಣವಾಯಿತು. ಆ ಮುಗ್ಧ ಮಗು ಎಲ್ಲರನ್ನು ಅಷ್ಟು ಆಕರ್ಷಿಸಿತ್ತು. ಈ ಮಗುವಿಗೂ ಹಿಂದೂ ಹೆಸರಿಟ್ಟುಬಿಟ್ಟರು ಆ ಹೆಸರೆ ಕುತ್ತಾಗಿತ್ತೆಂದು ತಿಳಿದೂ ಮತ್ತೆ ಅದನ್ನೇ ಆರಿಸಿದ್ದರು. ನೆನಪು ಮಾಸದಿದ್ದರೂ ಇರುವವರಿಗಾಗಿ ಜೀವನ ಎಂಬಂತೆ ಅಪ್ಪ ಅಮ್ಮ ಜೀವಿಸುತ್ತಲಿದ್ದರು.

ಇತ್ತ ಕ್ಷಮ, ರಾಜೀವ್ ತಮ್ಮದೇ ಓದಿನಲ್ಲಿ ಮುಳುಗಿದ್ದರು, ಕ್ಷಮಳ ಜೀವನದಲ್ಲಿ ಇಷ್ಟೆಲ್ಲಾ ನೆಡೆದರೂ ತನ್ನ ಪ್ರೀತಿಗೆ ಯಾವ ಕೊರತೆ ಬಾರದಂತೆ ಸಾಗಿದಳು, ಸಂಕೇತ್ ತನ್ನ ಪ್ರೀತಿಯಲ್ಲಿ ಕೆಲಸದ ಕಡೆ ಗಮನವೂ ಕಡಿಮೆಯಾಯಿತು. ಪ್ರೀತಿ ಕುರುಡು ಮಾಡುತ್ತದೆಂಬುದು ಇದಕ್ಕೆ ಅನ್ನಿಸುತ್ತೆ. ಅವನು ಕೆಲಸ ಬಿಟ್ಟು ಇವಳಿಗಾಗಿ ಶಾಲಾ ಸಮಯದಲ್ಲಿ ಬಂದು ಶಾಲೆಯ ಮುಂದೆ ಟಿಕಾಣಿ ಹೂಡುತ್ತಲಿದ್ದ ಬರುವಾಗ ಹೋಗುವಾಗ ಜೊತೆಯಲ್ಲೇ ಓಡಾಡುತ್ತಲಿದ್ದ. ಇವರಿಬ್ಬರ ವಿಷಯ ಅವರಿದ್ದ ಅಕ್ಕಪಕ್ಕದವರೆಲ್ಲರಿಗೂ ತಿಳಿದು. ಗುಲ್ಲೆದಂತೆ ಒಬ್ಬರಿಂದೂಬ್ಬರಿಗೆ ಹರಡಿಬಿಟ್ಟಿತ್ತು. ಆಶ್ಚರ್ಯವೆಂದರೆ ಊರಿಗೆಲ್ಲ ತಿಳಿದರೂ, ಮನೆಯಲ್ಲಿ ಯಾರೊಬ್ಬರಿಗೂ ತಿಳಿದಿರಲಿಲ್ಲ. ಎಷ್ಟು ದಿನ ತಾನೆ ಮುಚ್ಚಿಡಲು ಸಾಧ್ಯ ಕೊನೆಗೊಂದು ದಿನ ಅವಳ ಅಣ್ಣನಿಗೆ ಯಾರೋ ಹೇಳಿಬಿಡುತ್ತಾರೆ. ಅವನಿಗೆ ಎಲ್ಲಿಲ್ಲದ ಕೋಪ ಮನೆಗೆ ಬಂದವನೇ ತಂಗಿಗೆ ಹಿಗ್ಗಾ ಮುಗ್ಗ ಬಾರಿಸಿಬಿಡುತ್ತಾನೆ. ಏಕೆಂದು ಅಮ್ಮ ಅಪ್ಪ ಎಷ್ಟು ಕೇಳಿದರು ಹೇಳದೆ ಫಿಲ್ಮಿ ಸೀನಿನಂತೆ ರೂಮಿನಲ್ಲಿ ಕೂಡಿ ಹಾಕಿ. ಕೊನೆಗೆ ಅಪ್ಪ ಅಮ್ಮನಿಗೆ ಇರುವ ವಿಷಯವನ್ನೇಳಿ ಇವಳಿಂದಲೇ ಅಕ್ಕ ಸತ್ತಿದ್ದು ಅಂತ ಎಲ್ಲಿಂದಲೋ ತಿಳಿದದ್ದನ್ನು ಅಮ್ಮ ಅಪ್ಪನ ಮುಂದೆ ಉಸುರುತ್ತಾನೆ. ಅಪ್ಪ ಅಮ್ಮನಿಗೂ ಎಲ್ಲಿಲ್ಲದ ಕೋಪ ಇವಳಿಗೆ ನಾವು ಕೊಟ್ಟ ಸದರ ಹೀಗೆ ಮಾಡಿದೆ ಎಂದು ಊಟ ತಿಂಡಿ ನೀಡದೆ ಮನೆಯಲ್ಲೇ ಇರಿಸುತ್ತಾರೆ. ಇದನ್ನು ತಿಳಿದ ಹಲವರು ಅಮ್ಮ ಅಪ್ಪ ಅಣ್ಣನನ್ನು ಸಮಾಧಾನಿಸಿ ಅವಳು ವಿದ್ಯಾವಂತೆ ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿ ಅವಳಿಗೆ ಸ್ವಾತಂತ್ರ್ಯದಿ ಓಡಾಡುವಂತೆ ಮಾಡುತ್ತಾರೆ. ಬೋನಿನಿಂದ ಹೊರ ಬಂದ ಗಿಳಿ ಎಷ್ಟು ದಿನ ಎಂದು ಹಾಗೆ ಇರುತ್ತೆ ಅವಳ ಪ್ರೇಮಾಂಕುರ ಅಂದು ತಿಳಿಯದೇ ಬೆಳೆದುಬಿಟ್ಟಿತ್ತು ಅದನ್ನ ಮತ್ತೆ ಜೀವ ತುಂಬಿಸಬಾರದೆಂದರೂ ಬಿಡದೆ ಅತ್ತಕಡೆ ಸೆಳೆದುಬಿಟ್ಟಿತ್ತು.

ಹಲವು ದಿನಗಳ ನಂತರ ತನ್ನ ಪ್ರಿಯತಮ ಸಂಕೇತ್ ನನ್ನು ನೋಡದ ಕ್ಷಮ ಅವನನ್ನು ಭೇಟಿ ಮಾಡಲು ಹೋಗುತ್ತಾಳೆ. ಅವನ ಆಫೀಸಿನತ್ತ ಹೆಜ್ಜೆಹಾಕುತ್ತಲಿದ್ದವಳಿಗೆ ಒಂದು ಆಘಾತ ಕಾದಿತ್ತು.... ಅವನ ಆಫೀಸ್ ಬೀಗ ಜಡಿದಿದ್ದ ಕಾರಣ ಅವನ ಸ್ನೇಹಿತನನ್ನು ವಿಚಾರಿಸಿದಾಗಲೇ ತಿಳಿದಿದ್ದು ಸಂಕೇತನ ಮದುವೆಯೆಂದು ಈ ವಿಷಯ ಅವಳ ಸುಕೋಮಲ ಮನಸಿಗೆ ದೊಡ್ಡ ಆಘಾತವನ್ನೇ ತಂದಿದ್ದಂತು ಸತ್ಯ.... ಮನೆಗೆ ಬಂದವಳೇ ಏನೋ ಕಳೆಗುಂದಿದಂತೆ ಮನಸಲ್ಲಿ ಸ್ಮಶಾನ ಮೌನ ಆವರಿಸಿತ್ತು. ಈ ಮೌನ ಗುರುತಿಸಿದ ಮನೆಯವರಿಗೆ ಆ ವಿಷಯ ತಿಳಿದಿದ್ದರು ಒಳ್ಳೆಯದಾಯಿತೆಂದು ಸುಮ್ಮನಿದ್ದು ಬಿಟ್ಟರು. ಆದರೆ ಈ ಕೋಮಲೆ ಅಷ್ಟು ಬೇಗ ಅವನನ್ನು ಮರೆಯಲು ಸಾಧ್ಯವಾಗಲಿಲ್ಲ. ನಿದ್ರಾಹಾರಗಳನ್ನೆಲ್ಲ ಬಿಟ್ಟಳಾದರೂ ಕೊನೆಗೆ ಹೊಟ್ಟೆಗೇನು ಗೊತ್ತು ಮನಸಿನ ತೊಳಲಾಟ ಒಂದಲ್ಲಾ ಒಂದು ದಿನ ತಿನ್ನುವಂತೆ ಹೊಟ್ಟೆ ಮಾಡಿಬಿಡುತ್ತದೆ.

ಪ್ರಾರಂಭ ಸುಕೋಮಲವಾಗಿತ್ತು ಬರಬರುತ್ತ ಎಲ್ಲವೂ ವಿಚಿತ್ರವೆನಿಸ ತೊಡಗಿತು. ಸಂಕೇತನ ಪ್ರೀತಿಯಲಿ ತೇಲಿಹೋಗಿದ್ದಳು, ಅವನ ಮದುವೆ ಎಂದು ತಿಳಿದರೂ ಅವಳ ಒಳ ಮನಸು ಅವನಿಗಾಗಿ ಆಲಾಪಿಸುತ್ತಿತ್ತು. ಇತ್ತ ಮನೆಯವರ ಮಾತಿಗೆ ಬಿದ್ದು ಸಂಕೇತ ದೂರದ ಊರಲ್ಲಿ ಮದುವೆ ಮಾಡಿಕೊಂಡು ಬಂದಿದ್ದಾನೆ ಆದರೆ ಅವನಿಗೂ ಕ್ಷಮಳನ್ನು ಮರೆಯುವಂತಾಗಲಿಲ್ಲ ಇತ್ತ ಕೈ ಹಿಡಿದವಳಿಗೂ ದ್ರೋಹ ಮಾಡಲು ಮನಸು ಒಪ್ಪಲಿಲ್ಲ. ಕ್ಷಮಳಿಗೆ ತನ್ನ ಮುಖ ತೋರಿಸಬಾರದೆಂದು ದೂರದ ಊರಲ್ಲಿ ತನ್ನ ಕೆಲಸ ಮಾಡುತ್ತಾನೆ...

ಮತ್ತೆ ಈ ಪ್ರೇಮಿಗಳು ಭೇಟಿಯಾಗುವರೆ ಕಾದುನೋಡಿ...........

Tuesday, March 9, 2010

ಕೋಮಲ ಕುಸುಮ ಮಣ್ಣ ಸೇರಿತು

ಅಮ್ಮನ ಮನೆ ಕಡೆ ಹೆಜ್ಜೆ ಇಟ್ಟ ಕೂಡಲೆ ಕಹಿ ಘಟನೆಗಳೆಲ್ಲವನ್ನು ಮರೆತು, ಮನಸನ್ನು ಸ್ವಚ್ಚಂದದಿ ತೇಲಾಡಲು ಬಿಡುತ್ತಾಳೆ. ಅಮ್ಮ, ತಮ್ಮ,ತಂಗಿ, ಅಪ್ಪ ಎಲ್ಲರು ದೀಕ್ಷಳನ್ನು ಕಾಣುವುದೇ ತಡ ಮುಗಿಲೇ ಕೈಗೆಬಂದಂತೆ ಆಗುತ್ತದವರಿಗೆಲ್ಲ. ಹಲವು ದಿನಗಳ ನಂತರ ದೀಕ್ಷಳ ಆಗಮನ ಖುಷಿ ನೀಡಿತ್ತು, ದೀಕ್ಷಳಿಗೆ ಉಪಚಾರವೋ ಉಪಚಾರ ಅಮ್ಮನ ಕೈತುತ್ತು, ಅಪ್ಪನ ಹಾರೈಕೆ, ತಮ್ಮ ತಂಗಿಯ ಸೇವೆ ಎಲ್ಲದರಲ್ಲು ಮುಳುಗಿ ಹೋಗಿದ್ದಳು. ಅಪ್ಪ ಮಗಳಲ್ಲಿ ಏನೋ ಮಾತನಾಡಬೇಕೆಂದು ಕೊಳ್ಳುತ್ತಾರೆ. ಅವಳ ಮುಂದೆ ಬಂದು ನಿಂತು ಮಾತನಾಡಲು ತಡವರಿಸುತ್ತಲಿರುತ್ತಾರಾದರೂ ಸುಮ್ಮನಿರಲು ಪ್ರಯತ್ನಿಸುವುದನ್ನು ಮಗಳು ಗಮನಿಸಿ, ಅಪ್ಪ ನೀವೇನೋ ಹೇಳಲಿದ್ದೀರಿ ಹೇಳಿ ಎಂದಾಗ ಮಗು, ನಾ ಹೇಳುವ ಮಾತು ಗಂಭೀರವಾದದ್ದು ನಿನ್ನ ಜೀವನಕ್ಕೆ ಸಂಬಂಧಿಸಿದ್ದು ಎಂದು.... ಅಂದು ಅವರಪ್ಪ ಕದ್ದು ಕೇಳಿಸಿಕೊಂಡ ಚಿತ್ರಣವನ್ನೆಲ್ಲ ಅವಳೆದುರಿಡುತ್ತಾನೆ. ತದೇಕ ಚಿತ್ತಳಾಗಿ ಕೇಳುತ್ತಲಿದ್ದ ದೀಕ್ಷಳಿಗೆ ಮೈ ಒಮ್ಮೆಲೆ ಝುಮ್ ಎಂದುಬಿಡುತ್ತದೆ. ಎಷ್ಟೆ ಆಗಲಿ ಅಪ್ಪ ನನ್ನ ನೋವು ತಿಳಿದು ಅವರೆಷ್ಟು ನೊಂದು ಬಿಡುಟ್ಟಿದ್ದರು ಎಂದು ಅವಳ ಒಳ ಮನಸು ಹೇಳುತ್ತಲಿರುತ್ತೆ.

ಅತ್ತೆ ಮನೆಯಲ್ಲಿ ನೆಡೆಯೋ ಮುಸುಕಿನೊಳಗಿನ ಗುದ್ದಾಟದಲ್ಲಿ ನಲುಕಿರುವುದು ಅಪ್ಪ, ಮಗಳು ಮಾತ್ರ. ಬೇರಾರಿಗೂ ತಿಳಿದಿಲ್ಲ ಆದರೂ ಮಗಳು ಅಪ್ಪನನ್ನು ಸಮಾಧಾನಗೊಳಿಸಿ ನೀವೇನು ಚಿಂತಿಸಬೇಡಿ. ಹಲವು ವರ್ಷದ ಹಿಂದೆ ಮಾಡಿಕೊಂಡ ನಮ್ಮ ಜಾತಿ ಕಟ್ಟುಪಾಡಿಗೆ ನೀವು ಯಾರು ಜವಾಬ್ದಾರರಲ್ಲ ಹಾಗೆಂದು ಕ್ರಿಸ್ಟಿಯನ್ ಜನರಂತೆ ನಾವು ಪೂಜೆಯನ್ನು ಮಾಡುತ್ತಲಿದ್ದೇವೆ. ಕೇವಲ ಹೆಸರು ಬದಲಾವಣೆಯಲ್ಲೇನಿದೆ ಈ ಜನರಿಗೆ ಬುದ್ಧಿ ಬರುವುದಿಲ್ಲ. ನಾನು, ಅವೆಲ್ಲವನ್ನು ನಿಭಾಯಿಸುವೆ ಈ ಸಣ್ಣ ವಿಷಯ ದೊಡ್ಡ ಪ್ರಮಾದವಾಗಿದೆಯೆಂದು ಯಾರಲ್ಲೂ ಹೇಳುವುದುಬೇಡ. ನೆಮ್ಮದಿಯಾಗಿದ್ದು ಬಿಡಿ ಎಂದು ಅಪ್ಪನಲ್ಲಿ ಮೊರೆಯಿಡುತ್ತಾಳೆ. ಅಪ್ಪನು ಏನೋ ಧೈರ್ಯ ಮಾಡಿ ಸುಮ್ಮನಾಗುತ್ತಾರೆ.

ಇನ್ನೇನು ಅತ್ತೆ ಮನೆಗೆ ಹೊರಡಬೇಕೆನ್ನುತ್ತಲಿರುವಂತೆ ದೀಕ್ಷಳು ತಲೆ ಸುತ್ತಿ ಹಾಗೆ ಕುಸಿದು ಬೀಳುತ್ತಾಳೆ. ಇದ ಕಂಡ ಅಮ್ಮ ಡಾಕ್ಟರರಲ್ಲಿ ತೋರಿಸಿಕೊಂಡು ಹೋಗು ಇಂದು ಇಲ್ಲೇ ಇರೆಂದು ಹೇಳಲು, ಇಲ್ಲಮ್ಮ ನಾ ಹೊರಡುವೆ ನನಗೇನಾಗಿಲ್ಲವೆಂದು ಹೊರಟೆ ಬಿಡುವಳು.
----------
ಗಂಡನ ಮನೆಗೆ ಬರುತ್ತಲೇ ಕಾದಿತ್ತು ಮುಸುಕಿನ ಹಬ್ಬ ಎದುರು ಬಂದ ಅತ್ತೆ ಮಾವ, ಎಲ್ಲಿಗೆ ಹೋಗಿದ್ದೋ ಅಲ್ಲೇ ಇದ್ದು ಬಿಡು. ನಮ್ಮ ಮನೆಗೆ ಬರುವುದು ಬೇಕಿಲ್ಲವೆಂದು ಅತಿ ತಿರಸ್ಕಾರದಿಂದ ಹೇಳುವರು. ಅಷ್ಟರಲ್ಲಿ ಮಗ ಕೆಲಸದಿಂದ ಬರುತ್ತಾನೆ, ಬಾಗಿಲಲ್ಲೇ ನಿಲ್ಲಿಸಿದ್ದ ಹೆಂಡತಿಯನೊಮ್ಮೆ ನೋಡಿ ಒಳನೆಡೆದ. ಆಕೆಯೂ ಗಂಡನೊಟ್ಟಿಗೆ ನೆಡೆಯಲೆತ್ನಿಸುವಾಗ ಒಮ್ಮೆಲೇ ಅಲ್ಲೇ ನಿಲ್ಲು, ನನ್ನಪ್ಪ ಅಮ್ಮ ನಿಲ್ಲಿಸಿರುವುದೇಕೆ, ನಿನ್ನ ತಪ್ಪಿಗೆ ಶಿಕ್ಷೆ ಎಂದೇಳಿ ಒಳಗೋಗುತ್ತಾನೆ. ದೀಕ್ಷ ಮರುಮಾತಾಡದೆ ಅಪ್ಪನ ಮನೆಯಲ್ಲಿ ಕಳೆದ ಸಂತಸ ಕ್ಷಣವನ್ನು ನೆನೆದು ಅಲ್ಲೇ ಬಾಗಿಲಲ್ಲಿ ನಿಂತಿರುತ್ತಾಳೆ. ಇವಳು ಈ ಮೊದಲೇ ಮಾನಸಿಕವಾಗಿ ತಯಾರಾಗೇ ಬಂದಿದ್ದಳು. ಆಗುವುದೆಲ್ಲ ಆಗಲಿ ಭಗವಂತನ ದಯೆ ಇರಲೆಂದು, ಸುಮ್ಮನೆ ನೆಲ ನೋಡುತ್ತಲಿದ್ದಳು. ಆ ಕ್ಷಣ ಪಕ್ಕದ ಮನೆಯವರಲ್ಲೆ ಇವಳತ್ತ ನೋಡುತ್ತಿರುವುದು ಕಂಡು ಬೇಸರದಿಂದ ಅತ್ತೆ, ಮಾವ, ಗಂಡ ಎಲ್ಲರಿಗೂ ಸಮಾಧಾನದಿ ಹೇಳಿಕೊಳ್ಳುತ್ತಾಳೆ, ತಪ್ಪಾಯಿತು ಮತ್ತೊಮ್ಮೆ ಒಪ್ಪಿಗೆ ಇಲ್ಲದೆ ಹೋಗುವುದಿಲ್ಲ ಎಂದು ಗೋಗರೆದರಾರು ಬಗ್ಗಲಿಲ್ಲ. ನಿಂತಿದ್ದ ದೀಕ್ಷ ಒಮ್ಮೆಲೆ ಕುಸಿದು ಬಿದ್ದಾಗ ಅಕ್ಕಪಕ್ಕದವರು ಬಂದು ನೋಡುತ್ತಲಿದ್ದಂತೆ, ಬಾಗಿಲು ತೆರೆದ ಅತ್ತೆಮಾವ ಡಾಕ್ಟರರನ್ನು ಕರೆತರುತ್ತಾರೆ, ಭಯದಲ್ಲೇ ಸೊಸೆ ಡಾಕ್ಟರರಿಗೇನು ಹೇಳಿ ಬಿಡುವಳೋ ಎಂದು ಹೆದರಿ ಅವಳ ಸೇವೆ ಮಾಡುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ಡಾಕ್ಟರರು ಸಿಹಿಸುದ್ದಿ ನೀಡಿ ಬೂದಿ ಮುಚ್ಚಿದ ಕೆಂಡದಂತೆ ಅಲ್ಲಿನ ಕಹಿ ಘಟನೆಗೆ ತಾತ್ಕಾಲಿಕ ತಿಲಾಂಜಲಿಯಿಡುತ್ತಾರೆ. ಇನ್ನು ದೀಕ್ಷ ಮನೆಗೊಂದು ಮಗು ಕೊಡುವ ನಿಮಿತ್ತ ಸಂತಸದ ಅಲೆ ಸೃಷ್ಟಿಸುತ್ತಾಳೆ.

ಮನೆಗೆ ದೇವರು ಬರಲಿ, ಮಗು ಬರಲಿ, ನಾಯಿ ಬಾಲ ಡೊಂಕು ಎಂಬಂತೆ ೯ ತಿಂಗಳ ನಂತರ ಹೆಣ್ಣು ಮಗುವಿನ ಆಗಮನ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಹೀಯಾಳಿಸುವುದು ಮತ್ತಷ್ಟು ಅತಿಯಾಯಿತು. ಅಪ್ಪ ಅಮ್ಮನಿಗೂ ಸ್ವಲ್ಪ ಸ್ವಲ್ಪ ತಿಳಿದು ನ್ಯಾಯ ಪಂಚಾಯಿತಿ ಎಂದು ಹಿರಿಯರೆದುರು ಮಾತುಕತೆಗಳಾದವು, ಆದರು ಏಕೋ ಗಂಡ, ಅತ್ತೆ ಮಾವನನ್ನು ಸಮಾಧಾನಿಸಲಾಗಲಿಲ್ಲ ಆದರೂ ಜೀವನ ನೆಡೆಸುತ್ತಲಿದ್ದಳು.

ಇತ್ತ ತಂದೆ ತಾಯಿ ದಿನವೆಲ್ಲ ಅವಳ ಬಗ್ಗೆ ಕೊರಗುತ್ತಲಿದ್ದರು, ಇತ್ತ ಕ್ಷಮ (ದೀಕ್ಷಳ ತಂಗಿ) ತನ್ನ ಪ್ರೇಮದಲ್ಲಿ ತಲ್ಲೀನಳಾಗಿದ್ದಳು. ಅಕ್ಕನ ಬಗೆಗಿನ ದುಃಖವನ್ನು ಸಂಕೇತನಲ್ಲಿ ಹೇಳಿಕೊಂಡು ದುಃಖಿಸುತ್ತಲಿದ್ದಳು, ಆದರೇನು ಸಮಾಧಾನ ಪಡಿಸುವುದೊಂದೇ ಸೂತ್ರ ಅವನಿಗೆ. ಒಮ್ಮೆ ಸಂಕೇತ್ ಮತ್ತು ಕ್ಷಮ ಸಿನಿಮ ನೋಡಲು ಹೋಗಿರುತ್ತಾರೆ. ಅದು ಕ್ಷಮ ಹಿಂದೂ ಧರ್ಮದವರಂತೆ ಸೀರೆಯುಟ್ಟು ಹಣೆಗೆ ಕುಂಕುಮವನ್ನಿಟ್ಟು, ಹೂ ಮುಡಿದು, ಜೊತೆ ಜೊತೆಯಲ್ಲಿ ನೆಡೆಯುತ್ತಿರುವುದ ಕಂಡ ಬಾವ (ಅಕ್ಕನ ಗಂಡ) ಒಳಗೊಳಗೆ ಕುದಿಯುತ್ತ ಮರಳಿ ಮನೆಗೆ ಹೋಗಿ ತಂಗಿಯ ಬಗೆಗೆ ಹೇಳಿ ಹೆಂಡತಿಯತ್ತಿರ ಒಂದು ದೊಡ್ಡ ರಾಮಾಯಣವನ್ನೇ ಮಾಡಿಬಿಡುತ್ತಾನೆ. ಸಣ್ಣ ಮಾತು ಪ್ರಕೋಪಕ್ಕೆ ತಿರುಗಿ ದೀಕ್ಷಳ ಕೆನ್ನೆಗೆ ಹೊಡೆಯುವ ಮಟ್ಟಕ್ಕೆ ತಿರುಗುತ್ತದೆ, ಅದು ಅವಳ ಪ್ರಾಣಕ್ಕೆ ಕುತ್ತಾಗಿ ಬಿಡುತ್ತದೆ. ತಕ್ಷಣವೇ ಎಚ್ಚೆತ್ತ ಅವರ ಮನೆಯವರು ಯಾವುದೋ ನೆಪವೇಳಿ ಕಾಲು ಜಾರಿ ಬಿದ್ದು ಪ್ರಾಣಹೋಯಿತೆಂದು ಅವರ ಅಮ್ಮನ ಮನೆಯವರು ಬರುವ ಮೊದಲು ಡಾಕ್ಟರ್ ಸರ್ಟಿಫಿಕೇಟ್ ಮಾಡಿಸಿಬಿಡುತ್ತಾರೆ. ಪುಟ್ಟ ತಪ್ಪು ಅದು ಯಾರದೋ, ಅವಳಿಗೆ ಸಂಬಂಧಿಸಿದಲ್ಲ ಆದರೂ ಜಾಣೆ, ಸುಂದರೆ, ಧೈರ್ಯವಂತೆ ಎಲ್ಲವೂ ಆಗಿದ್ದ ಕುಸುಮಕೋಮಲೆ ಮಣ್ಣಾಗಿ ಬಿಟ್ಟಳು.


ಅಪ್ಪ, ಅಮ್ಮ ಮಗಳ ಸಾವಿನ ವಾರ್ತೆ ತಿಳಿಯುತ್ತಿದ್ದಂತೆ ಕಡಲ ಅಬ್ಬರವೇ ಒಡಲಿಗೆ ಬಂದೊಡೆದಂತೆ ಕುಸಿದು ಬೀಳುತ್ತಾರೆ. ಮನೆಯಲ್ಲಿ ಸಾವಿನ ಛಾಯೆ ಎದ್ದು ಕಾಣುತ್ತಲಿರುತ್ತೆ ಅವಳ ಸಾವು ಕೇವಲ ಹಿಂದೂ ವೇಷಭೂಷಣ ಅಥವ ಹೆಸರು ಬದಲಾವಣೆ ಇಷ್ಟೆ ಅವಳ ಸಾವಿಗೆ ಕಾರಣವೆಂದು ಯಾರಿಗೂ ತಿಳಿದಿರಲಿಲ್ಲ. ಅಪ್ಪನಿಗೆ ಅಲ್ಪ ಸ್ವಲ್ಪ ತಿಳಿದಿದ್ದರೂ ಅಳಿಯನಿಗೆ ಶಿಕ್ಷಿಸುವ ಮನಸೇ ಮಾಡಲಿಲ್ಲ. ಹೋದ ಮಗಳು ಮತ್ತೆ ಬರುವಳೆ ಎಂಬ ದುಃಖದ ದೈನ್ಯತೆಯಲ್ಲಿ ಮುಳುಗಿ ಹೋಗಿದ್ದರು. ಮಗಳ ಶವಸಂಸ್ಕಾರ ಮುಗಿಸಿ ಬರುವ ಹೊತ್ತಿನಲಿ ಅಲ್ಲೇ ಇದ್ದ ಆ ಹಸುಗೂಸನ್ನು ಯಾರು ಗಮನಿಸದೆ ಹೆಣ್ಣೆಂಬ ತಿರಸ್ಕಾರದಲ್ಲಿದ್ದ ಆ ಮನೆಯವರು ಆ ಮಗುವಿಗೆ ಆಸರೆ ನೀಡಲು ಒಪ್ಪಲೇ ಇಲ್ಲ. ಮೊದಲೇ ಯಾರು ಇಲ್ಲದ ದೀಕ್ಷಳನ್ನು ಸಾಕಿದ್ದ ಆ ಅಪ್ಪನಿಗೆ ಈ ಮಗುವನ್ನು ಬಿಡುವ ಮನಸಾದರು ಹೇಗೆ ಬರುತ್ತದೆ ಹೇಳಿ. ಒಂದು ಕುಸುಮ ಕೋಮಲೆಯನ್ನು ಕಳೆದುಕೊಂಡ ನೆನಪು ಮಾಸಲು ಮತ್ತೊಂದು ಹಸುಗೂಸು ಕೋಮಲೆಯನ್ನು ಕರೆತರುತ್ತಾರೆ.
--------
ಜೀವನದಲ್ಲಿ ಅಂದುಕೊಂಡಂತೆ ಏನು ನೆಡೆಯುವುದಿಲ್ಲ ಸಣ್ಣ ತಪ್ಪು ದೊಡ್ಡದಾಗಿ ಜೀವವನ್ನೆ ತೆಗೆದು ಬಿಡುತ್ತದೆ ಅಲ್ಲವೆ..?
ಒಂದು ಕುಸುಮದ ಜೀವನ ಕಮರಿಹೋಯ್ತು..... ಮತ್ತೊಂದು ಕುಸುಮಳ ಜೀವನ ಹೇಗೆ...? ಮುಂದಿನ ಭಾಗ...

Saturday, February 27, 2010

ದಾಸೋತ್ಸವದ ದೇಗುಲ

೨೬/೨೬/೨/೨೦೧೦ ರ ಶುಕ್ರವಾರದ ಮುಂಜಾನೆ ೭.೩೦ರ ಸಮಯ ಕುವೈತಿನ ಕಾರ್ಮಲ್ ಸ್ಕೂಲಿನ ಆಡಿಟೋರಿಯಂ ಆವರಣವನ್ನು ಪ್ರವೇಶಿಸುತ್ತಲಿದ್ದಂತೆ ಎಲ್ಲರ ಮನ ಸೆಳೆದದ್ದು ಸುಂದರವಾದ ದೇಗುಲ ದರ್ಶನ. ಅಲ್ಲೇ ಪಕ್ಕದಲ್ಲಿ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ ಪಠಿಸುತ್ತಲಿದ್ದ ಕನ್ನಡ ಕೂಟದ ಸದಸ್ಯರು ಎಲ್ಲರ ಮನಸಿಗೆ ಅಹ್ಲಾದವನ್ನು ನೀಡುತ್ತಲಿತ್ತು. ಸಹಸ್ರನಾಮ ಮುಗಿದ ಕೂಡಲೇ ಎಲ್ಲರೂ ತಮ್ಮ ಉಪಹಾರ ಮುಗಿಸಿ ಕೂಟದ ಮುಂದಿನ ಕಾರ್ಯಕ್ರಮಗಳತ್ತ ಮುಂದಾದರು. ಪ್ರಾರ್ಥನಾ ಗೀತೆಯ ನಂತರ ಅಧ್ಯಕ್ಷರಾದ ಶ್ರೀ ಹರ್ಷರಾವ್ ಹಾಗೂ ಪತ್ನಿ ಶ್ರೀಮತಿ ಕವನರಾವ್ ಅವರ ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವ ಮುಖೇನ ಕಾರ್ಯಕ್ರಮಗಳಿಗೆ ಜಾಲನೆ ನೀಡಿದರು. ಮೊದಲು ವಯೋಮಿತಿ ವಿಭಾಗಗಳಂತೆ ಪುಟ್ಟ ಮಕ್ಕಳ ವೇಷಭೂಷಣ ಸ್ಪರ್ಧೆ ನೆಡೆಯಿತು. ಆನಂತರ ಭಗವದ್ಗೀತೆಯಲ್ಲಿ ಕೃಷ್ಣಾರ್ಜುನರ ಆಯ್ದ ಸಂಭಾಷಣೆಯನ್ನು ಕಣ್ಣ ಮುಂದೆ ಚಿತ್ರಿಸಿದ್ದರು. ಮತ್ತಷ್ಟು ಮಕ್ಕಳು ನಗರ ಸಂಕೀರ್ತನೆಯಂತೆ ದಾಸರ ಹಾಡುಗಳನ್ನು ಹಾಡಿ ನೆರೆದಿದ್ದವರಿಗೆ ಸಂತಸಗೊಳಿಸಿದರು. ಇವೆಲ್ಲದರ ಮಧ್ಯೆ ಕಳೆದ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಭಿನಂದಿಸಿ ಗೌರವಿಸಲಾಯಿತು. ನಂತರದಿ ಸಂಗೀತ ಬಗೆಗಿನ ಪುಟ್ಟ ನಿರೂಪಣೆಯಿಂದ ಶ್ರೀಮತಿ ರಂಗಶ್ರೀ ಅವರು ಎಲ್ಲರಿಗು ಸಂಗೀತದ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಇವೆಲ್ಲದರೊಟ್ಟಿಗೆ ಹರಿಕಥಾ ಸ್ಪರ್ಧೆಯಲ್ಲಿ ದೊಡ್ಡವರೆಲ್ಲರು ಭಾಗವಹಿಸಿ ವಿಶಿಷ್ಟ ರೀತಿಯಲ್ಲಿ ಎಲ್ಲರ ಗಮನ ಸೆಳೆದರು.


ನಂತರ ಮರಳ ಮಲ್ಲಿಗೆಯ ಸಂಚಿಕೆ ಬಿಡುಗಡೆಯನ್ನು ನೆರೆವೇರಿಸಲಾಯಿತು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರದಿ ಹೆಂಗಳೆಯರು ಹಾಗೂ ಗಂಡಸರ ಭಜನಾವಳಿ ನಡೆಯುತ್ತಲೆ ದೇವಸ್ಥಾನದಲ್ಲಿ ಶಂಖನಾದ ಮೊಳಗಿತು. ನೆರೆದಿದ್ದ ಸದಸ್ಯರೆಲ್ಲ ಭಕ್ತಿಪರವಷರಾಗಿ ಘಂಟಾನಾದ ಮೊಳಗುತ್ತಿದ್ದೆಡೆಗೆ ಕರ ಮುಗಿದು ದೇವರನ್ನು ಧ್ಯಾನಿಸುತ್ತಲಿದ್ದರು. ಭಕ್ತಿ ಮಂಟಪವನ್ನು ತೊರೆಯಲು ಅಲ್ಲಿದ್ದ ಸದಸ್ಯರಾರಿಗೂ ಮನವಿಲ್ಲದಿದ್ದರೂ ಅಲ್ಲೇ ಇದ್ದ ಮೃಷ್ಟಾನ್ನಭೋಜನದ ಸವಿ ಸವಿಯಾದ ಊಟ ಎಲ್ಲರನ್ನತ್ತ ಸೆಳೆಯಿತು. ಹೋಳಿಗೆ ಊಟ ಸವಿದವರೆಲ್ಲ ಬೀಡವನ್ನು ಸವಿದು ಮನೆಗಳತ್ತ ಮುಖಮಾಡಿದರು.


ಪ್ರಶಾಂತ ದೇಗುಲವನ್ನು ಸೃಷ್ಟಿಸಿ ಭಕ್ತಿ ಮಂಟಪಕ್ಕೊಯ್ದ ಸಾಂಸ್ಕೃತಿಕ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಈ ಸುಂದರ ಭಕ್ತಿ ಪರಿಸರ ಸೃಷ್ಟಿಸಲು ಸಹಕರಿಸಿದ ಹಲವು ಕಾಣದ ಹಸ್ತಗಳಿಗೂ ನಮ್ಮ ಧನ್ಯವಾದಗಳು.
ಚಿತ್ರಗಳ ಕೃಪೆ: ಯೋಗೀಶ್
ಮತ್ತಷ್ಟು ಫೋಟೋಗಳಿಗೆ ಈ ಲಿಂಕಿಗೆ ಭೇಟಿ ನೀಡಿ.
http://picasaweb.google.com/yogee.tumkur/DAASOTSAVA?feat=directlink

Wednesday, February 17, 2010

ಮರುಭೂಮಿಯಲ್ಲಿ ಕೈಲಾಸೇಶ್ವರ


ಫೆ. ೧೬ ಶಿವರಾತ್ರಿ ಹಬ್ಬದ ಆಚರಣೆಯನ್ನು ಕುವೈತಿನಲ್ಲಿ ನಮ್ಮ ಸ್ನೇಹಿತರ ಮನೆಯಲ್ಲಿ ಅದ್ಧೂರಿಯಿಂದ ಆಚರಿಸಲಾಯಿತು. ಶಿವನ ಕೈಲಾಸವೇ ಕುವೈತಿಗೆ ಬಂದಿದಿರುವಂತಿತ್ತು. ಅಂದು ಸುಮಾರು ೧೦೦ರಕ್ಕೂ ಹೆಚ್ಚು ಜನರು ಅವರ ಮನೆಯಲ್ಲಿ ನೆರೆದಿದ್ದರು. ಗಂಡಸರು ಮತ್ತು ಹೆಂಗಸರು ಎಲ್ಲರು ಸೇರಿ ಹಲವು ಭಕ್ತಿ ಪೂರ್ವಕ ಹಾಡುಗಳನ್ನು ಹಾಡಿದರು.

ಇಂಪು,ತಂಪು,ಹೊಳಪು ಎಲ್ಲವೂ ಈ ಹಬ್ಬದ ಆಚರಣೆಯಲಿತ್ತು. ಎಲ್ಲಾ ಭಕ್ತವೃಂದ ಮನಸಾರೆ ಆನಂದಿಸಿ ದೇವರ ಪೂಜೆಗೆ ಬಿಲ್ವಾರ್ಚನೆ ಮಾಡಿ ಪುನೀತರಾದರು.

ನಾವು ಸಹ ಈ ಪೂಜೆಯಲ್ಲಿ ಭಾಗಿಗಳಾಗುವಂತೆ ಮಾಡಿದ ಸಂತೋಷ್ ಕುಲಕರ್ಣಿ ಮತ್ತು ಕುಟುಂಬಕ್ಕೆ ನಮ್ಮ ಧನ್ಯವಾದಗಳು.

ಈ ಕಾರ್ಯಕ್ರಮದ ಕೆಲವು ಪೋಟೋಗಳು:






Sunday, February 7, 2010

ಕುಸುಮ ಕೋಮಲೆ-೨


ಧೀಕ್ಷಳ ಮದುವೆಯಾಗಿದ್ದೆ ತಂದೆ ಮಹದೇವ್ ತನ್ನ ಕೆಲಸದಲ್ಲಿ ಏನೋ ಬಲ ಕಳೆದುಕೊಂಡಂತ ಭಾವನೆ, ಜಾಣೆ ಮಗಳು ತಮ್ಮ ಕೆಲಸಕ್ಕೆ ನೆರವಾಗುತ್ತಾಳೆಂದರೆ ಯಾರಿಗೆ ತಾನೆ ಖುಷಿಯಿಲ್ಲ ಹೇಳಿ. ಹಿರಿಯರೆಲ್ಲ ಒಪ್ಪಿ ಮಾಡಿದ ಮದುವೆ, ದೀಕ್ಷಳಿಗೆ ಹೊಸ ಮನೆ, ಹೊಸ ಜನ ಹೊಂದಿಕೊಳ್ಳುವುದು ಬಹಳ ಕಷ್ಟವೇ ಆಗಿತ್ತು ಆದರೂ ವಿದ್ಯಾವಂತೆಯಾದ ದೀಕ್ಷ ಎಲ್ಲವನ್ನು ನಿಭಾಯಿಸುವಷ್ಟು ಸಾಮರ್ಥ್ಯ ಹೊಂದಿದ್ದಳು.
----*-----

ಇನ್ನು ಇಲ್ಲಿ ಅಣ್ಣ-ತಂಗಿ (ಕ್ಷಮ-ರಾಜೀವ್) ಇಬ್ಬರು ತಮ್ಮ ವಿದ್ಯೆಯಲ್ಲಿ ಮುಳುಗಿ ತಮ್ಮದೇ ಜೀವನ ಶೈಲಿಯನ್ನು ರೂಡಿಸಿಕೊಳ್ಳುತ್ತಾರೆ. ೮ನೇ ತರಗತಿ ಮುಗಿಸಿ ೯ಕ್ಕೆ ಕಾಲಿಟ್ಟ ಕ್ಷಮ ತನ್ನ ತಂದೆತಾಯಿಯೊಟ್ಟಿಗೆ ಕಾಲ ಕಳೆದು ಅವರ ಪ್ರೀತಿ ಪಾತ್ರಳಾಗಿ ವಿದ್ಯೆಯಲ್ಲಿ ಎಲ್ಲದರಲ್ಲೂ ಮುಂದಿರುತ್ತಾಳೆ. ಕ್ಷಮಳ ಗುಣ,ರೂಪ,ವಿದ್ಯೆ ಎಲ್ಲದರಲ್ಲೂ ಹೆಚ್ಚು, ಅವಳ ರೂಪವೂ ಅಷ್ಟೆ ಎಲ್ಲರ ಕಣ್ಣು ಕುಕ್ಕುವಂತಹದು.

ಒಮ್ಮೆ ಅಪ್ಪನೊಟ್ಟಿಗೆ ಕೆಲಸ ಮಾಡುತ್ತಲಿದ್ದವನೊಟ್ಟಿಗೆ ಅವನ ಸ್ನೇಹಿತ ಸಂಕೇತ್ ಇವರ ಮನೆಗೆ ಬಂದಾಗ ಕ್ಷಮಳನ್ನು ಕಂಡು ಸಂಕೇತನಲ್ಲೇನೊ ಹೊಸ ಭಾವ, ಹೊಸ ಚೈತನ್ಯದಿ ಅವಳ ರೂಪಕ್ಕೆ ಮಾರುಹೋಗುತ್ತಾನೆ. ಹಲವು ದಿನಗಳ ನಂತರ ಅವಳಿಗೊಂದು ಪತ್ರ ಬರೆದು ಸ್ನೇಹಿತನೊಟ್ಟಿಗೆ ಕಳಿಸುತ್ತಾನೆ. ಆ ಪತ್ರವನ್ನು ಕ್ಷಮಳಿಗೆ ತಲುಪಿಸಿ ನಿನ್ನ ನಿರ್ಧಾರಕ್ಕಾಗಿ ಕಾಯುತ್ತಲಿರುತ್ತಾನೆಂದೇಳಿ ಹೊರಡುತ್ತಾನೆ. ಕ್ಷಮಳಿಗೆ ಮನದಲ್ಲೇ ಗೊಂದಲ ಸಂಕೇತ್ ಆಗಲೇ ಸ್ವಂತ ಬಿಸಿನೆಸ್ ಮಾಡುತ್ತಲಿರುತ್ತಾನೆ. ಅವನು ಹಿಂದೂ, ನಾನು ಕ್ರಿಸ್ಟಿಯನ್ ಎಂದು ನೂರೆಂಟು ಪ್ರಶ್ನೆಗಳನ್ನು ತನ್ನಲ್ಲೇ ಸೃಷ್ಟಿಸಿಕೊಳ್ಳುತ್ತಾಳೆ. ಆದರೂ ಕೊನೆಗೆ ಧೈರ್ಯ ಮಾಡಿ ಸಂಕೇತನನ್ನು ಭೇಟಿ ಮಾಡಲು ತೆರಳುತ್ತಾಳೆ, ಇವಳ ಬರುವಿಕೆ ಕಂಡ ಸಂಕೇತ್ ತನ್ನ ಮನಕ್ಕೆ ಪ್ರಶ್ನೆಗಳ ಸುರಿಮಳೆಗಯ್ಯುತ್ತಾನೆ. ನನ್ನ ಮೆಚ್ಚಿ ಬರುತಿಹಳೆ, ಬಯ್ಯಲೆ, ಮಾತನಾಡಲೆ ಅಥವಾ ಮನೆಯವರಿಗೆ ಎಂಬ ಗೊಂದಲದಿ ಮೂಡಿರುವಾಗಲೆ ಅವಳು ಅವನೆದುರು ಪ್ರತ್ಯಕ್ಷಳಾಗುತ್ತಾಳೆ.

ಎದುರುಬದುರಾದ ಕಣ್ಣುಗಳಿಗೆ ಅದೇನೊ ಸಲಿಗೆ, ಮಾತಿಲ್ಲ, ಮೌನದ ಮಳೆಗರೆದಿದೆ, ತುಟಿಗಳ ಕಂಪನವಿಲ್ಲ ಕಣ್ಣುಗಳು ಸೂಕ್ಷಮದಲ್ಲೆ ಉತ್ತರ, ಇಬ್ಬರಲ್ಲೂ ಯಾರು ತುಟಿ ಎರಡುಮಾಡಲಿಲ್ಲ. ಈ ಮೌನ ಮುರಿವವರು ಯಾರಿಲ್ಲ.....!! ತಡೆಯದೆ ಸಂಕೇತನೆ ಮೌನ ಮುರಿದು ಮಾತಿಗೆಳೆಯುತ್ತಾನೆ. ಇತ್ತ ಕ್ಷಮ ಅವನ ಪ್ರೇಮ ಪತ್ರಕ್ಕೆ ಕಣ್ಣಲ್ಲೆ ಉತ್ತರಿಸಿದಳಾದರೂ ಮತ್ತೆ ಸವಿದುಟಿಯ ಓರಣದಲ್ಲಿ ಪ್ರೀತಿಯ ಊರಣವನ್ನು ಅವನ ಕಿವಿಗೆ ಮುಟ್ಟಿಸುತ್ತಾಳೆ. ಅವಳ ಪ್ರೇಮದ ಸಹಿ ಚಿನ್ಹೆ ಮೂಡಿದೊಡನೆ ಸಂಕೇತನಿಗೆಲ್ಲಿಲ್ಲದ ಸಂತಸ. ಇವಳಿನ್ನು ೯ನೇ ತರಗತಿ ಅವನಾಗಲೇ ವಿದ್ಯೆಗೆ ತಿಲಾಂಜಲಿಯನಿಟ್ಟು ಯಾವುದೊ ಕೆಲಸದಲ್ಲಿ ತೊಡಗಿರುವನು ಆದರು ಯಾವುದೆ ಹಂಗಿಲ್ಲದೆ ಪ್ರೇಮಕ್ಕೆ ಬೀಳುತ್ತಾರೆ. ಮನಸಿನ ಸಲಿಗೆ ಇವರಿಬ್ಬರ ಒಲವಿಗೆ ಮಾರುಹೋಗುತ್ತಾರೆ ಕ್ಷಮಳಿನ್ನು ಎಸ್.ಎಸ್.ಎಲ್.ಸಿ ದಾಟಿರುವುದೆ ಇಲ್ಲ ಆ ವಯಸ್ಸಿಗಾಗಲೇ ಪ್ರೇಮ ಚಿಗುರಿ ರಾಗವಾಡುತ್ತಲಿರುತ್ತದೆ. ತಾನು ಮಾಡುವುದು ಸರಿಯೋ ತಪ್ಪೋ ಎಂಬ ಗ್ರಹಿಕೆ ಕೂಡ ಅವಳತ್ತ ಬರುವುದಿಲ್ಲ. ಒಲವಿನ ಹಸಿ ಚಿಗುರು ಪಳ ಪಳ ಹೊಳಪನ್ನೆ ನೀಡುತ್ತಲಿದೆ ಅವರಿಬ್ಬರು ಪ್ರೇಮದಲ್ಲಿ ತನ್ಮಯರಾಗಿದ್ದಾರೆ. ಕುಸುಮಕೋಮಲೆಯ ಪ್ರೇಮ ಜಗತ್ತು ಅರಿವಿಲ್ಲದೆ ಸಾಗಿದೆ.
----*----

ಅತ್ತ ಬರಬರುತ್ತ ಅಕ್ಕ ದೀಕ್ಷಳ ಅತ್ತೆ ಮನೆಯ ವಾತಾವರಣಕ್ಕೆ ಒಲಿದರೂ ಮನಸು ಏಕೋ ಕಸಿವಿಸಿಯಲ್ಲಿ ಮುಳಿಗಿತ್ತು, ಕಾರಣ ಸಾಕು ತಂದೆ ತಾಯಿಯವರ ಹೆಸರು ಬದಲಾವಣೆ ಆಚಾರ ವಿಚಾರಗಳ ನಡೆ ನುಡಿ, ಎಲ್ಲ ಹೊಸ ಸಂಬಂಧಗಳಿಗೆ ಬರೆ ಎಳೆದಂತಾಗಿತ್ತು. ಅತ್ತೆ ಮಾವ ಜೊತೆಗೆ ಗಂಡ ಕೂಡ ಮಾತು ಮಾತಿಗೂ ಮೂದಲಿಸುತ್ತಿದ್ದರು. ದೀಕ್ಷಳದು ಒಂದೇ ಮಾತು ಅವರಿಷ್ಟ ಬಂದಾಗೆ ಅವರಿರುತ್ತಾರೆ, ಅವರ್ಯಾರು ನಮ್ಮೊಟ್ಟಿಗೆ ಸಂಸಾರ ಮಾಡುತ್ತಿಲ್ಲ. ನಾನು ನಿಮ್ಮೊಟ್ಟಿಗಿರುವುದು ನನ್ನ ನಡೆ-ನುಡಿ, ಹಾವ-ಭಾವಗಳಲ್ಲೇನಾದರೂ ಕೊರತೆಯಿದ್ದರೆ ಅದನ್ನು ತಿದ್ದುಕೊಳ್ಳುವೆ. ಅನ್ಯತಾ ನನ್ನ ಅಪ್ಪ-ಅಮ್ಮ ಅವರ ಸಂಸಾರದ ಬಗ್ಗೆ ಯಾವ ತರ್ಕವೂ ಬೇಡವೆಂದು ವಾದಿಸುತ್ತಲಿದ್ದಳು. ಆದರೆ ಈ ಮಾತು ಇವರುಗಳಿಗಾರಿಗೂ ಹಿಡಿಸುತ್ತಲಿರಲಿಲ್ಲ. ತನ್ನ ಸ್ವಂತ ತಂದೆತಾಯಿ ಇಲ್ಲದ ಕಾರಣ ಸಾಕಿದ ತಂದೆ ತಾಯಿಯರೇ ನನಗೆಲ್ಲ ಎಂದು ಭಾವಿಸಿದ್ದಳು. ಅತ್ತೆ ಮನೆಯಲ್ಲಿ ನೆಡೆಯುವ ಮಾತುಕತೆ ಯಾವ ವಿಚಾರವನ್ನೂ ಯಾರ ಮುಂದಿಡುತ್ತಿರಲಿಲ್ಲ, ತಾಯಿ ಮನೆಗೆ ಹೊಸದರಲ್ಲಿ ಅದೇನೋ ಹೇಳುತ್ತಾರಲ್ಲ "ಹೊಸ ಬಿರೆದರಲ್ಲಿ ಅಗಸ ಎತ್ತಿ ಎತ್ತಿ ಸೆಣೆದ" ಎಂಬಂತೆ ಗಂಡ ಹೀಗೆಯೆ ನೋಡಿಕೊಳ್ಳುವನೇನೋ ಎಂಬಂತೆ ತಿಂಗಳಿಗೊಮ್ಮೆ ದೂರದೂರಿಂದ ತಂದೆತಾಯಿಯ ನೋಡಲು ಅವರೊಂದಿಗೆ ಬೆರೆಯಲು ಯಾವ ಕೊರೆತೆಯೂ ಬಾರದಂತೆ ಕರೆತರುತ್ತಲಿದ್ದ, ಇತ್ತ ತಂದೆತಾಯಿ ಕೂಡ ಅವರ ಭಾಂದವ್ಯ ನೋಡಿ ಖುಷಿ ಜೊತೆಗೆ ಯಾವ ಅನುಮಾನವೂ ಬಾರದಂತೆ ಮಗಳ ವರ್ತನೆ ಅವಳ ಒಳ ಮನಸಿನ ದುಗುಡ ಮೇಲ್ನೋಟಕೆ ಕಾಣಲೇ ಇಲ್ಲ. ಬರಬರುತ್ತ ದೀಕ್ಷ ತನ್ನ ಬೇಸರವನ್ನು ಕಳೆಯಲು ಕೆಲಸಕ್ಕೆ ಸೇರಬಯಸುತ್ತಾಳೆ ಇಷ್ಟೆಲ್ಲಾ ಓದಿ ವ್ಯರ್ಥವಾಗುತ್ತದೆಂದು ಭಾವಿಸಿ ಗಂಡ,ಅತ್ತೆಮಾವನ ಅಭಿಪ್ರಾಯ ಕೇಳುತ್ತಾಳಾದರೂ ಯಾರೂಬ್ಬರೂ ಒಪ್ಪದೆ ನೀ ಹೊರಗಿಂದ ತರುವ ದುಡ್ಡಿಗಾಗಿ ನಾವಾರು ಕಾದು ಕುಳಿತಿಲ್ಲ. ನೀನು ಮನೆಯನ್ನು ನಿಭಾಯಿಸಿದರೆ ಸಾಕೆಂದು ಹೇಳುತ್ತಾರೆ. ದೀಕ್ಷ ಅಷ್ಟೆಲ್ಲಾ ಓದಿ, ದೇಶ ಸುತ್ತಿ ಬಂದರೂ, ಹೊಸ ಮನೆಗೆ ಬಂದೊಡನೆ ತನ್ನ ಸ್ವಾತಂತ್ರವನ್ನೆ ಕಳೆದುಕೊಳ್ಳುತ್ತಾಳೆ. ಈ ಆಘಾತ ಬರಿಸಲಾಗದೆ ಮಾನಸಿಕವಾಗಿ ಕುಗ್ಗಿ ಬಿಡುತ್ತಾಳೆ.

ಇವೆಲ್ಲರ ಮಧ್ಯೆ ದೀಕ್ಷ ಅಮ್ಮನ ಮನೆಗೆ ಬರುವುದೇ ಕಡಿಮೆಯಾಗಿ ಬಿಡುತ್ತದೆ. ದೀಕ್ಷ ಏಕೋ ಇತ್ತೀಚೆಗೆ ಬೆಂಗಳೂರಿಗೆ ಬರುತ್ತಿಲ್ಲ, ಒಂದು ಫೋನ್ ಕರೆಯು ಇಲ್ಲ ಎಂಬ ತಳಮಳ ಮಹದೇವ್ ಅವರ ಮನದಲ್ಲಿ, ಒಮ್ಮೆ ನೋಡಿ ಬರೋಣವೆಂದು ಯಾರಿಗೂ ಹೇಳದೆ ಮಗಳ ಮನೆಯತ್ತ ಹೊರಡುತ್ತಾರೆ. ಅಂದು ಮುಸಂಜೆ ಮನೆಯಲ್ಲಿ ಎಲ್ಲರು ಇರುತ್ತಾರೆ ಇನ್ನೇನು ತಂದೆ ಮನೆಯ ಗೇಟ್ ತೆರೆಯಬೇಕು ಅಷ್ಟರಲ್ಲಿ ಏನೋ ಅಸ್ಪಸ್ಟ ಮಾತುಗಳು ಕೇಳುತ್ತದೆ. ಆ ಮಾತಲ್ಲಿ ಮಹದೇವರ ಹೆಸರೆ ಹೆಚ್ಚು ಕೇಳುತ್ತಲಿರುತ್ತದೆ. ಅದ ತಿಳಿದು ಮರೆಯಲ್ಲೆ ನಿಂತು ಅಲ್ಲಿ ನೆಡೆವ ಮಾತುಕತೆಗಳತ್ತ ಕಿವಿಮಾಡುತ್ತಾರೆ. ಒಳಗೆ ದೀಕ್ಷಳ ಮೂರ್ತಭಾವ ಒಂದೆಡೆ ಗಂಡ, ಮತ್ತೊಂದೆಡೆ ಅತ್ತೆ ಮಾವ ಮೂದಲಿಸುತ್ತಲಿರುತ್ತಾರೆ, ನಿನ್ನ ಸೊಸೆಯಾಗಿ ಮಾಡಿಕೊಳ್ಳ ಬಾರದಿತ್ತು. ಇರುವ ಜಾತಿ ಬಿಟ್ಟು ಬೇರೊಂದು ಜಾತಿಯ ಹೆಸರಿಟ್ಟುಕೊಂಡು ಬಾಳುವ ನಿಮ್ಮಪ್ಪನ ಮನೆಯಿಂದ ನಮಗೆ ಅಕ್ಕಪಕ್ಕದವರಿಂದ ಅವಮಾನ, ನೆಂಟರಿಷ್ಟರೆಲ್ಲರೂ ಕೇಳುತ್ತಾರೆ, ಎಂದಾಗ ನಿಮಗೇನು ನಾ ಮೊದಲೇ ಹೇಳಿದ್ದೇನೆ, ಅವರು ನಿಮ್ಮೊಟ್ಟಿಗಿಲ್ಲ ನಾನಿಮ್ಮವಳು ನನ್ನದೇನೆ ತಪ್ಪಿದ್ದರು ನನಗೇಳಿ ಅದು ಸರಿಪಡಿಸುವೆ ಬೇರೇನು ಹುಡುಕುವುದು ಬೇಡ ಮದುವೆ ಮುಂಚೆ ನಿಮ್ಮೆಲ್ಲರಿಗು ನನ್ನ ಅಪ್ಪ ಹೇಳೆ ಮದುವೆ ಮಾಡಿದ್ದು. ಈಗ ಇಲ್ಲದಿರುವ ತಪ್ಪನ್ನುಡುಕದೆ ಸಂಸಾರದಲ್ಲಿ ಕಹಿಯನ್ನು ಹಿಂಡಬೇಡಿ. ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಅಲ್ಲೇ ಇದ್ದ ಅಪ್ಪನಿಗೆ ಮಗಳ ಮೇಲೆ ಅತಿ ಗೌರವ, ಪ್ರೀತಿ ಹೆಚ್ಚಾಗುತ್ತದೆ. ಒಳಗೆ ಇದೇ ವಿಷಯಕ್ಕೆ ಗಂಡ, ಅಮ್ಮ-ಅಪ್ಪನಿಗೆ ತಿರುಗಿ ಮಾತನಾಡುತ್ತಾಳೆಂಬ ಕೋಪಕ್ಕೆ ಕಪ್ಪಾಳ ಮೋಕ್ಷವೂ ಆಗುತ್ತೆ, ಅದು ಸಹಿಸದ ಅಪ್ಪ ಒಳ ಹೋಗದೆ ಸದ್ದಿಲ್ಲದೆ ಮನೆಕಡೆ ಹೊರಡುತ್ತಾರೆ. ಅಲ್ಲಿ ನೆಡೆದ ಘಟನೆ ಯಾರಲ್ಲೂ ಬಾಯಿಬಿಡದೆ ಅಪ್ಪನ ಮನದಲ್ಲೇನೋ ತಳಮಳ ಮಗಳ ಬಾಳು ಸಣ್ಣ ಪುಟ್ಟ ವಿಷಯಕ್ಕಾಗಿ ಎಲ್ಲಿ ಎಲ್ಲೇ ಮೀರಿ ಸಾಗುವುದೋ ಎಂಬ ಭಯ ಕಾತ್ರಿಯಾಗಿ ಬಿಡುತ್ತದೆ.

ಒಮ್ಮೆ ಮಗಳಲ್ಲಿ ಫೋನಾಯಿಸಿ ಮಾತನಾಡಬೇಕೆಂದು ಅಪ್ಪ ಕರೆಯ ಮಾಡುತ್ತಾರೆ. ಅತ್ತ ಮಗಳು ದೀಕ್ಷಗಳ ಧನಿ ಹಲೋ ಎಂದ ಕೂಡಲೆ ಅದೇನೊ ಭಾವನೆ, ದುಗುಡ, ಮುದ್ದು ಮೊಗದ ಮಗಳ ನೆನಪು ಮಾತನಾಡಲಾಗದೆ, ಹಾಗೆ ಧನಿಯನ್ನೇ ಆಲಿಸುತ್ತಲಿರುತ್ತಾರೆ. ಆಕಡೆಯಿಂದ ಜೋರಾಗಿ ಯಾರೆಂದು ಕೂಗಿದಕೂಡಲೆ ಎಚ್ಚೆತ್ತ ಅಪ್ಪ. ಮಗಳೆ ದೀಕ್ಷು ನಾನು ನಿನ್ನಪ್ಪ, ಎಂದಾಗ ದೀಕ್ಷಳಿಗೆ ಅಪ್ಪಾಜಿ ನೀವಾ ಯಾಕೆ ಮಾತನಾಡಲು ಇಷ್ಟು ತಡಮಾಡಿದಿರಿ, ಇಲ್ಲ ಮಗಳೆ ಲೈನ್ ನಲ್ಲೇನೋ ತೊಂದರೆ ಇರಬೇಕು ನಾನು ಹಲೋ ಎನ್ನುತ್ತಲಿದ್ದೆ ನಿನಗೆ ಕೇಳಲಿಲ್ಲವೆನಿಸುತ್ತೆಂದು ಸುಳ್ಳು ಹೇಳಿದ. ಮಗಳೆ ಹೇಗಿದ್ದಿ ಯಾಕೆ ಬರಲಿಲ್ಲ, ಈ ಬಡಪಾಯಿ ಅಪ್ಪನ ನೆನಪಾಗಲಿಲ್ಲವೇ, ಎಂದದ್ದೇ ತಡ ಯಾಕಪ್ಪ ಹೀಗೇಳುತ್ತಿ ನಿನ್ನ ನೆನಪು ಸದಾ ನನ್ನಲಿಯೇ ಇರುತ್ತಪ್ಪ. ನನ್ನನ್ನು ಅಷ್ಟು ಕುಸುಮ ಕೋಮಲವಾಗಿ ಸಾಕಿ ಬೆಳೆಸಿದ ನಿನ್ನನ್ನು ನಾ ಮರೆಯಲು ಸಾಧ್ಯವಿಲ್ಲ, ಹೀಗೆ ಮನೆಯಲ್ಲಿ ಕೆಲಸದೊತ್ತಡದಲ್ಲಿ ಬರಲಾಗಲಿಲ್ಲ ಖಂಡಿತ ಬರುವೆನಪ್ಪ. ಮಗಳ ಈ ಮಾತು ಅಪ್ಪನ ಮನಸಿಗೆ ಕ್ಷಣ ಮಾತ್ರದಲ್ಲಿ ಸಂತಸ ತಂದಿತಾದರೂ ಒಳಗೊಳಗೆ ನೋವು ಇತ್ತು. ಕೇಳಬೇಕು ಅಂದು ನೆಡೆದ ವಿಚಾರವೆಂದುಕೊಂಡವರು ಧೈರ್ಯಮಾಡಲಿಲ್ಲ. ಮಗಳೇ ನಿನ್ನೊಟ್ಟಿಗೆ ಒಂದೆರಡು ದಿನ ಕಳೆಯುವಾಸೆ ಬರುವೆಯಾ ನಾನು ನಿಮ್ಮ ಮನೆಯಲ್ಲಿ ಮಾತನಾಡುವೆಯೆಂದು ಕೇಳುತ್ತಾರೆ. ಆಗಲಿ ಅಪ್ಪ ಬರುವೆ ನಾನೇ ಮನೆಯವರಿಗೇಳಿ ಬರುವೆ ನೀನೇನು ಕೇಳುವುದು ಬೇಡವೆಂದಳು.

ಅಪ್ಪನ ಕರೆ ಬಂದೊಡನೆ ಅತ್ತ ಮನಸು ಸದಾ ಎಳೆಯುತ್ತಲಿತ್ತು ಈ ವಿಷಯವೆತ್ತಿದರೆ ಮನೆಯಲ್ಲಿ ಮತ್ತಾವ ರಾಧಾಂತವಾಗುತ್ತೋ ಎಂಬ ಯೋಚನೆ, ಅವರು ಕರೆದಿಲ್ಲ ನಿನಗೇನು ಅಲ್ಲಿ ಹೋಗುವ ಹುಚ್ಚು ಎಂದರೆ, ಅವರೇನು ಕರೆಯುವುದು ಅದು ನಾ ಆಡಿಬೆಳೆದದ್ದು ನನಗೂ ನನ್ನದೆಂಬ ಆಸೆ ಇರುವುದಿಲ್ಲವೇ ಎಂಬ ಒಣ ಧೈರ್ಯ ಮಾಡಿ ಗಂಡನಲ್ಲಿ ಕೇಳಿಯೆ ಬಿಡುತ್ತಾಳೆ, ನಾನು ಬರುವ ಶನಿವಾರ ನಮ್ಮ ಅಪ್ಪನ ಮನೆಗೆ ಹೋಗಿ ಬರುವೆ ಎಂದ ಕೂಡಲೆ, ಅವಳ ಗಂಡ, ನಿಮ್ಮಪ್ಪನ ಮನೆಯಾವುದು ಇಲ್ಲ. ಇದೆ ಎಲ್ಲ ನಿನಗೆ ಅಲ್ಲಿ ಹೋಗುವುದು ಬೇಡ. ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾನೆ, ಅತ್ತೆಯಲ್ಲೊಮ್ಮೆ ಕೇಳಿದರೇನಾದರು ಉಪಯೋಗವೆಂದು ಅಲ್ಲಿಯೂ ಅದೇ ಉತ್ತರ ಬರುತ್ತದೆ ಮನಸು ತಾಳಲಾರದೆ ಇಲ್ಲ ನಾನು ಹೋಗಲೇ ಬೇಕೆಂದು ಹಟವಿಡಿಯುತ್ತಾಳೆ. ಜೊತೆಗೆ ಶನಿವಾರದಂದು ತಯಾರಾಗಿ ಕುಳಿತುಬಿಡುತ್ತಾಳೆ. ಇಷ್ಟು ಹಟವಾಗಿ ಹೊರಟಿರುವ ನೀನು ಹೋದರೆ ಅತ್ತಲೇ ಹೋಗು ಬರಕೂಡದೆಂದು ಕಟ್ಟುನಿಟ್ಟಾಗಿ ಹೇಳಿ ಕಳಿಸುತ್ತಾರೆ. ಏನೋ ಹೇಳಿದ್ದಾರೆ ಬಂದಮೇಲೆ ಸರಿಹೋಗುವುದೆಂದು ಮನಸಿನಲ್ಲೇ ಒಣ ಧೈರ್ಯ ಮಾಡಿ ಅಪ್ಪನ ಮನೆಗೆ ಹೊರಡುತ್ತಾಳೆ.
ಮುಂದುವರಿವುದು.....

Sunday, January 31, 2010

ಕುಸುಮ ಕೋಮಲೆ - ೧


ಬೆಂಗಳೂರಿನ ಒಂದು ಪುಟ್ಟ ಕುಟುಂಬ ಇವರು ಉತ್ತರ ಭಾರತದ ಮೂಲೆಯಿಂದ ಬಂದು ನೆಲೆಸಿ ಬೆಂಗಳೂರಿನವರೇ ಆಗಿಬಿಡುತ್ತಾರೆ. ತಂದೆ ತಾಯಿ ಇಬ್ಬರು ಮಕ್ಕಳು ಪುಟ್ಟ ಸಂಸಾರ. ಸುಂದರ ಸಂಸಾರವೂ ಹೌದು... ಬೆಂಗಳೂರಿಗೆ ಬಂದ ಕೂಡಲೆ ಇಲ್ಲಿ ಅಕ್ಕಪಕ್ಕದವರಿದ್ದವರೆಲ್ಲ ಹಿಂದೂ ಧರ್ಮದವರೇ ಆದ್ದರಿಂದ ಅವರುಗಳು ಅವರಂತೆ ಹಬ್ಬ ಹರಿದಿನ ಆಚರಿಸುವುದರ ಜೊತೆಗೆ, ತಮ್ಮ ಕ್ರೈಸ್ತಧರ್ಮದ ಹೆಸರನ್ನು ಹಿಂದೂ ಧರ್ಮಕ್ಕೆ ತಕ್ಕಂತೆ ಬದಲಿಸಿಕೊಂಡು ಬಿಡುತ್ತಾರೆ. ಅಂದರೆ ಆ ಕುಟುಂಬ ಅಷ್ಟರ ಮಟ್ಟಿಗೆ ಮಾರು ಹೋಗಿರುತ್ತಾರೆ. ಸುತ್ತಮುತ್ತಲ ಜನರ ಪೂಜೆ ಪುನಸ್ಕಾರ ಹಾಗು ಅವರ ಸಂಸಾರದ ಶಾಂತಿ ಎಲ್ಲವೂ ಪೂರಕವಾಗಿತ್ತು ಇವರ ಹೆಸರು ಬದಲಾವಣೆಗೆ.

ತಂದೆ ಮಹದೇವ್, ತಾಯಿ ಮಮತ, ಗಂಡುಮಗ ರಾಜೀವ್, ಮಗಳು ಕ್ಷಮ. ಮಹದೇವ್ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಲಿರುತ್ತಾರೆ. ಅವರಿಗೆ ಹುದ್ದೆಯಲ್ಲಿ ಉನ್ನತ ಸ್ಥಾನ ಹಾಗು ತಮ್ಮ ಕೈಕೆಳಗೆ ಕೆಲಸ ಮಾಡುವವರಲ್ಲಿ ಒಳ್ಳೆಯ ಭಾಂದವ್ಯವು ಸಹ ಏನೇ ಕೆಲಸ ಕಾರ್ಯಗಳು ನೆಡೆಯುವಾಗ ಮಹದೇವರ ಹಸ್ತ ಯಾವಾಗಲೂ ಮೀಸಲು. ಮಮತ ಕೂಡ ಅತ್ಯುತ್ತಮ ಗೃಹಿಣಿ ಈಕೆ ತನ್ನ ಗಂಡನ ಪ್ರತಿ ಹೆಜ್ಜೆಗೂ ಮತ್ತೊಂದು ಹೆಜ್ಜೆಯನ್ನಿಟ್ಟು ಅವರಿಗೆ ಸಾತ್ ನೀಡುವಂತಹ ಗುಣ. ಗಂಡನ ಕೆಲಸಗಾರರಿಗೆ ಪ್ರತಿ ವಾರಕೊಮ್ಮೆ ಊಟ ಉಪಚಾರ, ತೀರ ಬಡವರಾದ ಮಕ್ಕಳಿಗೆ ವಿದ್ಯಾಭ್ಯಾಸ ಎಲ್ಲವನ್ನು ಮಾಡುತ್ತಲಿದ್ದರು.

ಇಂತಹ ಪರೋಪಕಾರಿ ಕುಟುಂಬಕ್ಕೆ ಮುತ್ತಿನಂತ ಮಕ್ಕಳು ಮಹದೇವ್ ಅವರ ಮಗ ರಾಜೀವ್ ಇವನು ಸಹ ಅವರಿಗೆ ಹೇಳಿ ಮಾಡಿಸಿದಂತಾ ಮಗ, ಅವನಿನ್ನು ಹತ್ತನೇ ತರಗತಿ ಮುಗಿಸಿ ೧೧ ನೆ ತರಗತಿಯಲ್ಲಿ ಓದುತ್ತಲಿದ್ದಾನೆ, ತನ್ನ ವಿದ್ಯೆಯಲ್ಲೇನು ಕಡಿಮೆ ಇರದೆ ಅತಿ ಉತ್ಸಾಹದಿಂದ ಸಾಗುತ್ತಲಿದ್ದಾನೆ. ಇನ್ನು ಕ್ಷಮ ಬಹಳ ಚುರುಕು, ರೂಪವಂತೆ ಗುಣವಂತೆ ೮ನೇ ತರಗತಿಯಲ್ಲಿ ಓದುತ್ತಲಿದ್ದಾಳೆ ಕನ್ನಡ ಮೀಡಿಯಮ್ ನಲ್ಲೇ ವಿದ್ಯಾಭ್ಯಾಸ ಸಾಗುತ್ತಲಿದೆ, ಇವಳು ಶಾಲೆಗೆ ಮೊದಲು ಯಾರು ಇವಳನ್ನು ಸೋಲಿಸಲಾಗದು ಅಷ್ಟು ಬುದ್ಧಿವಂತೆ ವಿದ್ಯೆಯಲ್ಲಿ ಗುರುಗಳಿಗೆ ಅಷ್ಟೇ ಪ್ರಿಯಳು.

ಈ ಇಬ್ಬರು ಮಕ್ಕಳೊಟ್ಟಿಗೆ ಮಹದೇವ್ ಅವರ ಅಣ್ಣನ ಮಗಳನ್ನು ಸಹ ಸಾಕಿಕೊಂಡಿರುತ್ತಾರೆ ದೀಕ್ಷ ಪ್ರೀತಿ ಪಾತ್ರಳು ಮನೆಮಂದಿಗೆಲ್ಲ ಅವಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕೆಗೆ ಕಳಿಸುತ್ತಾರೆ ಅಂತೆಯೇ ಅವಳು, ಅವಳದೇ ಕ್ಷೇತ್ರವಾದ ಎಲೆಕ್ಟ್ರಾನಿಕ್ಸ್ ನಲ್ಲಿ ಮಾಸ್ಟರ್ಸ್ ಪಡೆದು ಬರುತ್ತಾಳೆ ತಂದೆಯ ಕಂಪನಿಯಲ್ಲಿಯೇ ಒಳ್ಳೆ ಕೆಲಸವನ್ನು ಗಿಟ್ಟಿಸುತ್ತಾಳೆ. ಇಂಜಿನಿಯರ್ ಆದ ಅವಳು ಕಂಪನಿಯ ಏಳಿಗೆಗೆ ತಂದೆಯೊಂದಿಗೆ ಕೈಜೋಡಿಸುತ್ತಾಳೆ.

ತಂದೆ ಮಗಳು ಕಚೇರಿಯಲ್ಲಿ ಒಳ್ಳೆ ಹೆಸರು ಮಾಡುತ್ತಾರೆ. ಕೆಲಸದ ಹೆಸರಲ್ಲಿ ಸಾಕು ಮಗಳ ಮದುವೆ ಮಾಡುವ ಹೊಣೆ ಮರೆಯಲಿಲ್ಲ, ಮಹದೇವ್ ಆ ಮುದ್ದು ಮೊಗಕೆ ಬೆಂಗಳೂರು ಬಿಟ್ಟು ದೂರದ ಊರಲ್ಲಿ ಗಂಡು ಹುಡುಕಿ ಮದುವೆಯನ್ನು ಅದ್ಧೂರಿಯಿಂದ ಮಾಡುತ್ತಾರೆ. ಇತ್ತ ಅತ್ತೆ ಮನೆ ಸೇರಿದ ದೀಕ್ಷ ತನ್ನದೇ ಜವಾಬ್ದಾರಿಯಲ್ಲಿ ಮುಳುಗುತ್ತಾಳೆ.


ಮುಂದುವರಿಯುವುದು.....
ಚಿತ್ರ (ಅಂತರ್ಜಾಲ)



Friday, January 15, 2010

ಬಾನಂಗಳ-ಕಂಕಣ


ಮಕರ ಸಂಕ್ರಮಣ ಮುಗಿಸಿ ತದನಂತರದಿ
ಬಂದಿದೆ ರವಿ-ಚಂದ್ರರ ಸಮಾಗಮ
ರವಿ-ಭುವಿಯ ನಡುವೆ ಶಶಿಯು ಹಾದು
ಮೂಡಿಸುವನು ಸೂರ್ಯಗ್ರಹಣ!!!!

ಸೂರ್ಯಗ್ರಹಣವು ಅಮಾವಾಸ್ಯೆಯಂದು
ಚಂದ್ರಗ್ರಹಣವು ಹುಣ್ಣಿಮೆಯಂದು
ನಿಗದಿತ ಸಮಯಕ್ಕೆ ಸರಿಯಾಗಿ
ಗೋಚರಿಸುವವು ನಿರ್ದಿಷ್ಟ ಸ್ಥಳಗಳಲ್ಲಿ
ಇದು ನಿಸರ್ಗ ಸೃಷ್ಟಿಸುವ ಪ್ರಕ್ರಿಯೆಯೇ ಗ್ರಹಣ !!!

ದಕ್ಷಿಣಆಫ್ರಿಕದಿ ಪ್ರಾರಂಭಿಸಿ
ಹಿಂದೂಮಹಸಾಗರ ದಾಟಿ
ಹಲವಾರು ವರುಷಗಳ ನಂತರದಿ
ದಕ್ಷಿಣ ಭಾರತದ ಆಗಸದಿ ಚಿತ್ತಾರ ಬಿಡಿಸಿ
ರವಿಚಂದ್ರರು ತಣಿಸುವರು ಕಣ್-ಮನ!!!!

ಚಂದಿರನ ಗಾತ್ರವು ನೆಸರನಿಗಿಂತ ಕಿರಿದು
ಗ್ರಹಣದಂದು ರವಿಯ ಮೇಲೆ ಶಶಿಯ ನೆರಳು
ಚಿತ್ರಿಸುವುದು ಬಳೆಯಾಕಾರದ ರಂಗೋಲಿ
ನೋಡಲಾನಂದ ಸುತ್ತಲೂ ಕೆಂಬಣ್ಣದ ಕಂಕಣ!!!

Monday, January 4, 2010

ಹೊಸ ಪ್ರಯತ್ನ-೨


ಹಮ್ಮು-ಬಿಮ್ಮು

ಕೇಕ್ ಕತ್ತರಿಸಿ ಹುಟ್ಟುಹಬ್ಬ
ಆಚರಣೆ ಬೇಡವೆನಿಸಿತು
ಕಾರಣ
ಅದು ನಮ್ಮ ಸಂಪ್ರದಾಯವಲ್ಲ
ಆದರೂ
ಕೇಕ್ ತಂದು ಕತ್ತರಿಸಿಬಿಟ್ಟೆವು
ಕಾರಣ
ಬೇರೆಯವರು ಆಚರಿಸುತ್ತಾರಲ್ಲ
ನಾನೇನು ಅವರಿಗಿಂತ ಕಮ್ಮಿಯಿಲ್ಲ
ಎಂಬ ಹಮ್ಮು-ಬಿಮ್ಮಿನ ವರಸೆ ತೋರಿಸಿಬಿಡಬೇಕಲ್ಲ.

______ ______

ಮಗು

ಮುದ್ದಾದ ಮಗು
ಬಲು ಚೆಂದ ಅದರ ನಗು
ಮಾತನಾಡಿಸಿಬಿಟ್ಟೆ...
ನಾಲಿಗೆ ತೋರಿತು
ಏನೆಂಬ ಆಶ್ಚರ್ಯ ಮೂಡಿತು
ತಾಯ ನೋಡಿದರೆ
ಅವಳ ಕಣ್ಣಲಿ
ಕಂಬನಿ ತುಂಬಿತ್ತು....
ಕಾರಣ
ಅದು ಮಾತು ಬಾರದ ಮೂಕ ಮಗು....

Tuesday, December 29, 2009

-ಸಂಗೀತಗಾರುಡಿಗ-ಸಾಹಸಸಿಂಹ-


ಸಂಗೀತಕೂ ಸಾಹಿತ್ಯಕೂ ಏನೋ ನಂಟು
ರಾಗಸುಧೆಯಿಂದ ಸಾಹಿತ್ಯಕೆ ಕಲಾ ಮೆರುಗುಂಟು
ಸಂಗೀತ-ಸಾಹಿತ್ಯಕೆ ಸಂಬಂಧರೂಢಿಸುವಲಿ
ಈ ಗಾನಗಾರುಡಿಗನ ಪಾತ್ರ ನೂರೆಂಟು

ನೀನಿಲ್ಲದ ಸಂಗೀತ ಸುಧೆ ಕರಾಳ ಮೌನದಿ
ಕನ್ನಡಿಗರ ಮನ-ಮನೆಗಳಲಿ ಕಾರ್ಮೋಡ ಕವಿಸಿದೆ

ಹುಟ್ಟೊಂದು ದಿನ, ಸಾವೊಂದು ದಿನವೆಂದು ಬರೆದನಾ ಬ್ರಹ್ಮ
ನಿನ್ನ ಹುಟ್ಟುಸಾವು ಎರಡೂ ಒಂದೇ ದಿನ ಏನಿದರ ಮರ್ಮ!!!!

ನಿನ್ನ ಅಗಲಿಕೆಯಿಂದ ಸಂಗೀತ ಸರಸ್ವತಿ ಕಳೆಗುಂದಿಹಳು
ಈ ನಿನ್ನ ಸ್ಥಾನವ ತುಂಬಲು ಹಾತೊರೆದು ನಿಂದಿಹಳು
ಓ ದೇವನೆ ಸಂಗೀತ-ಸಾಹಿತ್ಯ ಸರಸ್ವತಿಗೆ
ಎಂದೂ ಬೀಳದಿರಲಿ ದುಃಖದ ಕರಿನೆರಳು

ಓ ಗಾನ ಕೋಗಿಲೆಯೆ ಕೇಳಲೆಲ್ಲರು ಧ್ವನಿಸುರುಳಿಯಲಿ ನಿನ್ನ ಗಾಯನ
ನಿನ್ನ ಆ ಮಾಂತ್ರಿಕ ಧನಿಗೆ ಮನಸೂರೆಗೊಂಡು ಮಾಡಲೆಲ್ಲರು ನಿನ್ನ ಮನನ
ಓ ಸಂಗೀತ ಆರಾಧಕನೆ ನಿನಗಿದೋ ನಮ್ಮೆಲ್ಲರ ಹೃತ್ಪೂರ್ವಕ ನಮನ
ನಮ್ಮನಗಲಿದ ದೇಹ ಮತ್ತೊಮ್ಮೆ ಹುಟ್ಟಿ ಕರುನಾಡಿನಲಿ ಮೂಡಿಸಲಿ ಸಂಚಲನ


ನಾನು ಕಚೇರಿಯಿಂದ ಮನೆಗೆ ಹೋಗುವ ಹೊತ್ತಿಗೆ ಸರಿಯಾಗಿ ಟಿವಿಯಲ್ಲಿ ವಾರ್ತೆಗಳು ಬರುವ ಸಮಯ, ನನ್ನ ಮಗನ ನೆಚ್ಚಿನ ಗಾಯಕ ಸಿ. ಅಶ್ವಥ್ (ತಾತ) ಇವರ ಪಾರ್ಥೀವ ಶರೀರವನ್ನು ಟಿ.ವಿಯಲ್ಲಿ ತೋರಿಸುತ್ತಲಿದ್ದರು ತಕ್ಷಣ ಅಯ್ಯೋ ಆ ತಾತ ಸತ್ತುಹೋಗಿದ್ದಾರೆ ಅಮ್ಮ ಇವರ ಮೇಲೆ ಒಂದು ಕವನ ಬರಿ ಬ್ಲಾಗಿಗೆ ಹಾಕು ಪ್ಲೀಸ್ ಎಂದು ತುಂಬಾ ನೊಂದು ಹೇಳಿದನು. ನನ್ನ ಮಗನ ದುಃಖ ನೀಗಿಸಲು ಈ ಪುಟ್ಟ ಕವನ ಹಾಗೆಯೇ ಸಂಗೀತಗಾರುಡಿಗನಿಗೆ ನಮ್ಮ ಆಶ್ರುತರ್ಪಣ.

ಈಗಷ್ಟೆ ತಿಳಿದ ಆಘಾತಕಾರಿ ಸುದ್ದಿ ಕನ್ನಡ ಚಲಚಿತ್ರ ಕಂಡ ಮೇರು ನಟ ವಿಷ್ಣುವಿನ ಅಕಾಲಿಕ ಮರಣ ಕನ್ನಡ ಸಾಹಿತ್ಯ,ಸಂಗೀತ,ಕಲಾ ಸರಸ್ವತಿಗೆ ಮತ್ತೊಂದು ನಷ್ಟವನ್ನು ತಂದುಕೊಟ್ಟಿದೆ... ೨೦೦೯ರ ಕೊನೆದಿನಗಳು ಕನ್ನಡಿಗರಿಗೆ ದುಃಖದ ಹೊಳೆಯನ್ನರಿಸಿದೆ.

ಕನ್ನಡಿಗರನ್ನಗಲಿದ ಸಾಹಸಸಿಂಹ ವಿಷ್ಣು ಹಾಗು ಸಿ. ಅಶ್ವಥ್ ಅವರಿಗೆ ನಮ್ಮ ನಮನ

Tuesday, December 22, 2009

ಅವಳದೇ ನೆನಪು..!!! ನೈಜ ಕತೆ!!!

ಅವಳ ನೆನಪು ಕಾಡುತಿತ್ತು... ನನಗಲ್ಲ!!?.. ಮತ್ತ್ಯಾರಿಗೆ...? ಎಂದು ಪ್ರಶ್ನಿಸುತ್ತೀರಾ ಈ ಲೇಖನವನ್ನು ಓದಿ ನೀವೇ ಉತ್ತರಿಸಿ ಯಾರಿಗೆ ನೆನಪಿನ ಪುಟ ತೆರೆದಿದ್ದು ಎಂದು.


ಚಂದ್ರು ಮತ್ತು ಚಂದನ ಲಿಂಗನೂರಿ (ಹೆಸರು ಬದಲಿಸಲಾಗಿದೆ) ೧ ರಿಂದ ೭ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದುತ್ತಲಿರುತ್ತಾರೆ ಇಬ್ಬರು ಬಹಳ ಒಳ್ಳೆ ಸ್ನೇಹಿತರು ಇವರಿಬ್ಬರ ಸ್ನೇಹದಿಂದ ಇವರುಗಳ ತಾಯಂದಿರೂ ಸಹ ಒಳ್ಳೆ ಸ್ನೇಹಿತರಾಗುತ್ತಾರೆ. ೮ನೇ ತರಗತಿಗೆ ಇಬ್ಬರು ಬೇರೆ ಶಾಲೆಗೆ ಸೇರಿಕೊಳ್ಳುತ್ತಾರೆ, ಶಾಲಾ ಬದಲಾವಣೆಯಿಂದ ಇಬ್ಬರ ಭೇಟಿ ಕಡಿಮೆ ಆದರೂ ಶಾಲೆಗೆ ಹೋಗುವಾಗ ಬರುವಾಗ ಸಿಗುತ್ತಿದ್ದರು ಇಬ್ಬರು ಪರಸ್ಪರ ಮಾತನಾಡುತ್ತಲಿದ್ದರು, ಸ್ನೇಹಿತರ ಭೇಟಿಗೇನು ಕೊರತೆಯಾಗಲಿಲ್ಲ.

ಹೀಗಿದ್ದ ಸ್ನೇಹ ಇದ್ದಕ್ಕಿದ್ದ ಹಾಗೆ ಚಂದ್ರುಗೆ ಚಂದನಳ ಭೇಟಿ ಕಡಿಮೆಯಾಗುತ್ತ ಬರುತ್ತಲಿತ್ತು, ಹೀಗೆ ದಿನ ಕಳೆದಂತೆ ದೂರವಾದರು, ಚಂದ್ರುವು ತನ್ನ ವಿದ್ಯೆಯೆಡೆ ಗಮನ ಕೊಟ್ಟು ಎಸ್.ಎಸ್.ಎಲ್.ಸಿ ಮುಗಿಸಿ ಕಾಲೇಜಿಗೆ ಸೇರಿದ ನಂತರ ಅಲ್ಲಿ ೧ರಿಂದ ೭ರವರೆಗೆ ಓದುತ್ತಲಿದ್ದ ಮತ್ತೊಬ್ಬ ಸ್ನೇಹಿತ ರಾಜೇಶ್ ಎಂಬವ ಸಿಕ್ಕಿದ್ದೆ ಇವನಿಗೆ ಎಲ್ಲಿಲ್ಲದ ಖುಷಿ ಅವರಿಬ್ಬರೂ ಸಹ ಒಳ್ಳೆ ಸ್ನೇಹಿತರಾಗಿದ್ದರು. ಹೀಗೆ ಕೆಲವುದಿನಗಳು ಕಳೆದ ನಂತರ ಆ ಚಂದನ ಇರುತ್ತಿದ್ದ ಮನೆಯತ್ತಿರ ಹೋಗಿ ಅದೇ ರಸ್ತೆಯಲ್ಲಿ ೩,೪ ಬಾರಿ ಸುತ್ತಾಡಿ ಬರುತ್ತಾನೆ, ಆದರೆ ಆ ಮನೆಯ ಹತ್ತಿರ ಯಾರು ಕಾಣಲಿಲ್ಲ , ಇತ್ತ ಆ ಸ್ನೇಹಿತೆ ಚಂದನಳ ಬಗ್ಗೆ ರಾಜೇಶ್ ಹತ್ತಿರ ವಿಚಾರಿಸಿದ ಆದರೆ ರಾಜೇಶ್ಗ್ ಅವಳ ಬಗ್ಗೆ ಗೊತ್ತಿರಲಿಲ್ಲ ಅವರ ಮನೆ ಹತ್ತಿರ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದ, ಸರಿ ಎಂದು ಚಂದ್ರು ಮತ್ತೆರಡುದಿನ ಬಿಟ್ಟು ಅವಳ ಮನೆ ಹತ್ತಿರ ಹೋಗಿ ಅದೇ ಆ ಚಂದನಳಿದ್ದ ಮನೆಯ ಬಾಗಿಲನ್ನು ತಟ್ಟಿದ ಬಹಳ ಖುಷಿಯಿಂದ ಅಂದು ನಾನೇನೋ ರಸ್ತೆಯಲ್ಲಿ ನೋಡುತ್ತ ಹೋದೆ ಇಂದು ಇವರ ಮನೆಗೆ ಬಂದಿರುವೆ ಅವರ ಅಮ್ಮ ಅಥವಾ ಚಂದನ ಬರಬಹುದು ಎಂದು ಸಂತಸದಿಂದಿರುವಾಗ ಯಾವುದೋ ಒಂದು ವಯಸ್ಸಾದ ಅಜ್ಜಿ ಬಾಗಿಲು ತೆರೆದಾಗ ಬಹಳ ಬೇಸರವಾಯಿತು ಚಂದ್ರುವಿಗೆ, ನಂತರ ಆ ಸ್ನೇಹಿತೆಯ ಮನೆಯವರ ಬಗ್ಗೆ ವಿಚಾರಿಸಿದಾಗ ಅವರು ಇಲ್ಲಿಲ್ಲ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿದ ಕೂಡಲೇ ಈ ಚಂದ್ರುವಿಗೆ ಎಲ್ಲಿಲ್ಲದ ನೋವು ಹೃದಯಭಾರವಾದಂತೆ ಮನೆಯತ್ತ ಮುಖಮಾಡಿದ.

ನೆನಪುಗಳ ಮಾತು ಮಧುರಾ ಎಂಬಂತೆ....ಅವಳ ನೆನಪಲ್ಲೇ ತನ್ನ ಕಾಲೇಜ್ ಮುಗಿಸಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಂಡ ಆಗೊಮ್ಮೆ ಈಗೊಮ್ಮೆ ಚಂದನಳ ನೆನಪು ಮಾಡಿಕೊಳ್ಳುತ್ತಾ ತನ್ನ ವಿದ್ಯಾಭ್ಯಾಸ ಮುಗಿಸಿದ.

ವಿದ್ಯಾಭ್ಯಾಸ ಮುಗಿಸಿ ಕೆಲಸ ಎಲ್ಲವೂ ಸಿಕ್ಕಿತು, ತನ್ನ ಜೀವನ ಸಂಗಾತಿ ಹಾರಿಸಿಕೊಳ್ಳುವ ವೇಳೆ ಮನೆಮಂದಿಯೆಲ್ಲ ಒಪ್ಪಿ ಒಂದು ಮದುವೆ ಮಾಡಿಯೇಬಿಟ್ಟರು, ಮದುವೆಯಾದ ೫ವರ್ಷಗಳ ನಂತರ ವಿದೇಶಕ್ಕೆ ಪ್ರಯಾಣ ಬೆಳೆಸಿದ ಇಷ್ಟೆಲ್ಲಾ ತನ್ನ ಜೀವನದಲ್ಲಿ ನೆಡೆದರೂ ತನ್ನ ಸ್ನೇಹಿತೆಯನ್ನು ಮರೆಯಲಿಲ್ಲ. ಇಷ್ಟು ಜೀವನ ಸಾಗಿಸುವಷ್ಟರಲ್ಲಿ ಆರ್ಕೊಟ್ ಎಂಬ ಸ್ನೇಹ ಜಾಲ ಸಂಪರ್ಕದ ಮಹಾ ಮಾಯೆ ಬಂದುಬಿಟ್ಟಿತ್ತು ಇದೇ ಸಮಯದಲ್ಲಿ ಚಂದ್ರು ಆರ್ಕೂಟ್ ಮಾಯೆಗೆ ಹೆಜ್ಜೆ ಇಟ್ಟಿದ್ದ ಇದೇ ಜಾಲದಿಂದ ತನ್ನ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸೇರಿದನು, ಅಲ್ಲಿ ತನ್ನ ಸ್ನೇಹಿತೆಯ ಹೆಸರಿರಬಹುದೆಂದು ಹುಡುಕಿದ ಹುಡುಕಿದ ಆಗ ದಪ್ಪಗೆ ಒಳ್ಳೆ ಟಮೆಟೋ ಹಣ್ಣಿನಂತಿದ್ದಳು ಈಗ ಹೇಗಿರಬಹುದು ಹಾ!!! ಅವಳ ಅಣೆಯ ಮೇಲೊಂದು ಬಿದ್ದು ಗಾಯಮಾಡಿಕೊಂಡಿದ್ದ ಗುರುತಿತ್ತು ಎಂದು ಆ ಹಳೆ ವಿದ್ಯಾರ್ಥಿಗಳ ಕೂಟದಲ್ಲಿದ್ದ ಹೆಂಗಳೆಯರ ಫೋಟೋ ತಿರುಗಿಸಿ ಮರುಗಿಸಿ ನೋಡಿದ್ದೇ ನೋಡಿದ್ದು ಸಿಗಲೇ ಇಲ್ಲ..... ಆನಂತರ ಆರ್ಕೊಟಿನಲ್ಲಿನ ಹುಡುಕುವ ಪ್ರಪಂಚಕ್ಕೆ ಹೋಗಿ ಅಲ್ಲಿ ಆಕೆಯ ಹೆಸರು ಕೊಟ್ಟು ಹುಡುಕಿದನು ನಂತರ ಕುಟುಂಬದ ಹೆಸರಾದ ಲಿಂಗನೂರಿ ಎಂಬ ಹೆಸರನ್ನು ಕೊಟ್ಟು ಹುಡುಕಿ ಹುಡುಕಿ ಸುಸ್ತಾದನು.... ಇಷ್ಟೆಲ್ಲಾ ನೆಡೆಯಿತು ಪಾಪ ಫಲಕಾರಿಯಾಗಲಿಲ್ಲ....

ಇಷ್ಟುದಿನ ಸುಮ್ಮನಿದ್ದ ಈ ಚಂದ್ರು ನಂತರ ಬ್ಲಾಗ್ ಪ್ರಪಂಚಕ್ಕೆ ಹೆಜ್ಜೆಯಿಟ್ಟಾಗ ಆ ಪ್ರಪಂಚದಲ್ಲಿ ಹತ್ತು ಹಲವು ಜನರು ತಮ್ಮ ಜೀವನದ ಹೊಸ ಹಳೆ ಕಥೆಗಳನ್ನು ಬಿತ್ತರಿಸುವುದ ಕಂಡು, ಈತನಿಗೂ ಪ್ರೇರಣೆಯಾಯಿತೇನೋ ಮೊದಲು ಹೆಂಡತಿಯತ್ತಿರ ಬಂದು ಇಷ್ಟು ದಿನದ ಗುಟ್ಟನ್ನು ರಟ್ಟು ಮಾಡಿಬಿಟ್ಟ. ಇದು ಏಕೆ ರಟ್ಟು ಮಾಡಿದನೆಂದರೆ ಬ್ಲಾಗಿಗೆ ಹಾಕುವ ಮುನ್ನ ಹೆಂಡತಿಗೆ ಗೊತ್ತಿದ್ದರೆ ಚೆನ್ನ ಇಲ್ಲವಾದರೆ ಪ್ರಪಂಚಕ್ಕೆ ಗೊತ್ತಾದಮೇಲೆ ನನಗೇನು ನೀವು ಹೇಳುವುದು ಬೇಡವೆಂದು ಬಿಡುವಳೆಂದೋ ಏನೋ ಮೊದಲೇ ಹೇಳಿ ಸಂಕಷ್ಟದಿಂದ ಪಾರಾದನು ಹಹಹಹ.



ಶುಭದಿನ